ರಣಜಿ ಟ್ರೋಫಿ: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ 176 ರನ್ ಭರ್ಜರಿ ಗೆಲುವು!
ಕರ್ನಾಟಕ ಹಾಗೂ ರೈಲ್ವೇಸ್ ನಡುವಿನ ರೋಚಕ ರಣಜಿ ಪಂದ್ಯದಲ್ಲಿ ಮನೀಶ್ ಪಾಂಡೆ ಗೆಲುವಿನ ನಗೆ ಬೀರಿದೆ. ಅಂತಿಮ ದಿನ ಕೆ ಗೌತಮ್ ಮಾಡಿದ ಮೋಡಿಯಿಂದ ಕರ್ನಾಟಕ ಗೆಲುವು ಸಾಧಿಸಿದೆ. ಇಲ್ಲಿದೆ ಹೈಲೈಟ್ಸ್
ಶಿವಮೊಗ್ಗ(ಡಿ.25): ರೈಲ್ವೇಸ್ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ 176 ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕರ್ನಾಟಕ ಪ್ರಸಕ್ತ ರಣಜಿ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸೋ ಮೂಲಕ 21 ಅಂಕ ಸಂಪಾದಿಸಿದೆ. ಈ ಮೂಲಕ ಕರ್ನಾಟಕ ಕ್ವಾರ್ಟರ್ ಫೈನಲ್ ಆಸೆ ಜೀವಂತವಾಗಿದೆ.
ಇದನ್ನೂ ಓದಿ: ಇಂಡೋ-ಆಸಿಸ್ ಟೆಸ್ಟ್: ಕನ್ನಡಿಗ ಮಯಾಂಕ್ ಕೋಚ್ ಜೊತೆ Exclusive ಸಂದರ್ಶನ
ಗೆಲುವಿಗೆ 362 ರನ್ ಚೇಸ್ ಮಾಡುತ್ತಿದ್ದ ರೈಲ್ವೇಸ್ ತಂಡಕ್ಕೆ ಕೃಷ್ಣಪ್ಪ ಗೌತಮ್ ಬ್ರೇಕ್ ಹಾಕಿದರು. 159ನೇ ರನ್ಗೆ 4ನೇ ವಿಕೆಟ್ ಕಳೆದುಕೊಂಡ ರೈಲ್ವೇಸ್ ತಂಡ, ದಿಢೀರ್ ಕುಸಿತ ಕಂಡಿತು. ಕೆ.ಗೌತಮ್ ಬರೋಬ್ಬರಿ 6 ವಿಕೆಟ್ ಕಬಳಿಸೋ ಮೂಲಕ ರೈಲ್ವೇಸ್ ತಂಡವನ್ನ 185 ರನ್ ಗಳಿಗೆ ಆಲೌಟ್ ಮಾಡಿದರು.
ಇದನ್ನೂ ಓದಿ: ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ!
ದ್ವಿತೀಯ ಇನ್ನಿಂಗ್ಸ್ನಲ್ಲಿ ರೈಲ್ವೇಸ್ ತಂಡದ ನಾಲ್ವರು ಕ್ರಿಕೆಟಿಗರು ಶೂನ್ಯ ಸುತ್ತಿದರು. ಕೆ ಗೌತಮ್ ಜೊತೆಗೆ ಶ್ರೇಯಸ್ ಗೋಪಾಲ್ 2 ಹಾಗೂ ಪ್ರಸಿದ್ ಕೃಷ್ಣ 1 ವಿಕೆಟ್ ಕಬಳಿಸಿದರು. ಈ ಮೂಲಕ ಕರ್ನಾಟಕ ಭರ್ಜರಿ 176ರನ್ ಗೆಲುವು ಸಾಧಿಸಿತು.
ಇದನ್ನೂ ಓದಿ: ಇಂಡೋ-ಆಸಿಸ್ ಬಾಕ್ಸಿಂಗ್ ಡೇ ಟೆಸ್ಟ್- ಏನಿದರ ವಿಶೇಷತೆ?