ಅಂಬಾನಿ ಹಣದಿಂದ ಮುಂಬೈ ಗೆದ್ದಿದೆ- ಬಾಲಿವುಡ್ ನಟನ ವಿವಾದಿತ ಟ್ವೀಟ್!
ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದಿರೋದು ಅಂಬಾನಿ ಹಣದಿಂದ. ಭಾರತದಲ್ಲಿ ಅಂಬಾನಿ ಹಣದಿಂದ ಏನು ಬೇಕಾದರು ಮಾಡುತ್ತಾರೆ ಎಂದು ಬಾಲಿವುಡ್ ಹಿರಿಯ ನಟ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.
ಮುಂಬೈ(ಮೇ.13): 12ನೇ ಆವೃತ್ತಿ ಐಪಿಎಲ್ ಟೂರ್ನಿ ಫೈನಲ್ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊನೆಯ ಎಸೆತದಲ್ಲಿ ಎರಡೂ ತಂಡಕ್ಕೂ ಗೆಲುವಿನ ಅವಕಾಶವಿತ್ತು. ಲಸಿತ್ ಮಲಿಂಗ್ ಅದ್ಬುತ ಬೌಲಿಂಗ್ನಿಂದ ಮುಂಬೈ ಇಂಡಿಯನ್ಸ್ 1 ರನ್ ರೋಚಕ ಗೆಲುವು ಸಾಧಿಸಿತು. ಆದರೆ ಈ ಪಂದ್ಯದ ಕುರಿತು ಬಾಲಿವುಡ್ ಹಿರಿಯ ನಟ ಕಮಲ್ ರಶೀದ್ ಖಾನ್ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿ- ಯುವಿ,ರೋಹಿತ್ ಡ್ಯಾನ್ಸ್ ವೈರಲ್!
ಸದಾ ವಿವಾದಿತ ಟ್ವೀಟ್ ಹಾಗೂ ಹೇಳಿಕೆಗಳಿಂದ ಸುದ್ದಿಯಾಗೋ ಕಮಲ್ ರಶೀದ್ ಖಾನ್ ಇದೀಗ ಐಪಿಎಲ್ ಫೈನಲ್ ಕುರಿತು ಟ್ವೀಟ್ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅಂಬಾನಿ ಹಣದಿಂದಲೇ ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿ ಗೆದ್ದಿದೆ ಎಂದು KRK ಟ್ವೀಟ್ ಮಾಡಿದ್ದಾರೆ.
Dhoni, Raina, Rayudu’s forcefully getting out and then Shane Watson’s unnecessary run out in the last over is proof that Ambani can do anything in India and money can do anything in this world.🙏. #IPL2019Final #MIvsCSK
— KRK (@kamaalrkhan) May 12, 2019
ಇದನ್ನೂ ಓದಿ: ರೋಹಿತ್ ಶರ್ಮಾಗೆ ಟೀಂ ಇಂಡಿಯಾ ನಾಯಕ ಪಟ್ಟ ನೀಡಿ- ಟ್ವಿಟರಿಗರ ಆಗ್ರಹ!
ಧೋನಿ, ರೈನಾ, ರಾಯುಡು ಒತ್ತಾಯ ಪೂರ್ವಕ ಔಟ್ ಹಾಗೂ ಅಂತಿಮ ಓವರ್ನಲ್ಲಿ ಶೇನ್ ವ್ಯಾಟ್ಸನ್ ಅನಗತ್ಯ ರನೌಟ್ ಸ್ಪಷ್ಟವಾಗಿ ಹೇಳುತ್ತಿದೆ, ಭಾರತದಲ್ಲಿ ಅಂಬಾನಿ ಏನು ಬೇಕಾದರು ಮಾಡಬಹುದು, ಈ ಜಗತ್ತಿನಲ್ಲಿ ಹಣದಲ್ಲಿ ಏನೂ ಬೇಕಾದರೂ ಮಾಡಬುಹುದು ಎಂದು ಟ್ವೀಟ್ ಮಾಡಿದ್ದಾರೆ.