ನನ್ನ ತಾಲೂಕಿನ ಆಶಾ ಕಾರ್ಯಕರ್ತೆಯರು, ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಅಂತವರ ಕೈ-ಕಾಲು ಮುರಿಯಿಸಿ, ಒದ್ದು ಒಳಗೆ ಹಾಕಿ ಎಂದು ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.
Karnataka Districts Apr 22, 2020, 12:35 PM IST
ಜೀವ ರಕ್ಷಿಸಲು ಹೋದ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರ ಮೇಲೆ ಅಲ್ಲಿನ ಜನ ದಾಳಿ ನಡೆಸಿ, ದಾಂಧಲೆ ಎಬ್ಬಿಸಿದ್ದು ಈಗ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ. 'ಕ್ವಾರಂಟೈನ್ಗೆ ಬನ್ನಿ ಎಂದು ಕರೆಯಲು ಹೋದ ಆರೋಗ್ಯ ಸಿಬ್ಬಂದಿ ಮೇಲೆ ಪ್ರಾಣಿಗಳ ರೀತಿ ಎರಗಿದ್ದು ನಿಜಕ್ಕೂ ಅಸಹನೀಯ. ಪಾದರಾಯನಪುರ ಪುಂಡರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಷ್ಟಕ್ಕೂ ಅಂದು ನಡೆದಿದ್ದೇನು? ಇಲ್ಲಿದೆ ಗಲಭೆಯ ಕಂಪ್ಲೀಟ್ ಡಿಟೇಲ್ಸ್!
state Apr 21, 2020, 5:38 PM IST
ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸರ ಮೇಲೆ ಅಲ್ಲಿನ ಸ್ಥಳೀಯರು ಗೂಂಡಾಗಿರಿ ನಡೆಸಿದ್ದು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗೂಂಡಾಗಿರಿ ನಡೆಸಿದವ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಘಟನೆ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸುವರ್ಣನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ.
state Apr 20, 2020, 12:47 PM IST
ಕೊರೋನಾ ವೈರಸ್ ಸೋಂಕಿನ ಭೀತಿಯ ನಡುವೆಯೂ ಸೇವೆಯಲ್ಲಿ ತೊಡಗಿರುವ 2338 ಮಂದಿ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನವಾಗಿ ತಲಾ 3 ಸಾವಿರ ನೀಡಲು ಬಮೂಲ್ ಆಡಳಿತ ಮಂಡಳಿ ನಿರ್ಧರಿಸಿದೆ.
Karnataka Districts Apr 19, 2020, 3:21 PM IST
‘ನಾವು ಕೊರೋನಾ ವೈರಸ್ ಕುರಿತು ಸರ್ವೇ ಕಾರ್ಯ ಮುಗಿಸಿ ಮನೆಗೆ ಹಿಂದಿರುಗುವಾಗ ಅಕ್ಕಪಕ್ಕದವರು ನೀವು ಊರೆಲ್ಲ ತಿರುಗಿ ರೋಗಿಗಳನ್ನು ಭೇಟಿ ಮಾಡಿ ಬರುತ್ತೀರಿ. ಪುಟ್ಟ ಮಕ್ಕಳು, ವಯಸ್ಸಾದವರು ಇರುತ್ತಾರೆ. ಬರುವಾಗಲೇ ಏನಾದರೂ ಸ್ಪ್ರೇ ಮಾಡಿಕೊಂಡು ಬನ್ನಿ ಅಂತಾರೆ. ಆದರೆ ನಾವೇ ಮಕ್ಕಳಿಂದ ದೂರ ಇರುತ್ತಿದ್ದೇವೆ. ಮನೆಗೆ ಬಂದೊಡನೆ ಹತ್ತಿರ ಬರುವ ಮಕ್ಕಳನ್ನು ಗದರಿಸಿ ದೂರ ಉಳಿಯುತ್ತಿದ್ದೇವೆ. ಮಕ್ಕಳನ್ನು ಬೇರೆಡೆ ಮಲಗಿಸಿ, ನಾವು ಮನೆಯ ಮೂಲೆಯೊಂದರಲ್ಲಿ ಮಲಗುತ್ತಿದ್ದೇವೆ’
Karnataka Districts Apr 17, 2020, 8:24 AM IST
ಬಳ್ಳಾರಿ(ಏ.10): ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದ ಜನರು ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎತನ್ಮಧ್ಯೆ ರೋಗಿ ನಂಬರ್ 151 ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿ ನೂರಾರು ಜನರು ಓಡಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ರೋಗಿಯ ಮೊಬೈಲ್ ಟ್ರ್ಯಾಕ್ ಮಾಡಿದಾಗ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿದೆ.
Karnataka Districts Apr 10, 2020, 10:25 AM IST
ಕೊರೋನಾ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲು ತೆರಳಿದ್ದ ಆಶಾ ಕಾರ್ಯಕರ್ತೆಯರೊಂದಿಗೆ ಇಲ್ಲಿನ ಸಾಯಿ ನಗರದ ಎರಡು ಕುಟುಂಬಗಳ ಸದಸ್ಯರು ಕ್ಯಾತೆ ತೆಗೆದ ಬೇಸರದ ಘಟನೆ ಮಂಗಳವಾರ ನಡೆದಿದೆ.
Coronavirus Karnataka Apr 8, 2020, 8:47 AM IST
ಯಾದಗಿರಿ(ಏ.05): ಒಂದ್ಕಡೆ ಕೊರೋನಾ ಸೋಂಕಿತರ ಪತ್ತೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದರೆ ಮತ್ತೊಂದು ಕಡೆ ಗ್ರಾಮಕ್ಕೆ ಆಗಮಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸುರಿಸಿ ಗೌರವ ಸಲ್ಲಿಸಿದ ಘಟನೆ ಬೆಳಗೇರಾ ಗ್ರಾಮದಲ್ಲಿ ನಡೆದಿದೆ.
Coronavirus Karnataka Apr 5, 2020, 1:13 PM IST
ಸಿಎಂ ಮನವಿಗೆ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೊತೆಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
Coronavirus Karnataka Apr 3, 2020, 6:48 PM IST
'ನನ್ನ ಕ್ಷೇತ್ರದಲ್ಲಿ ನಾನೇ ಸಾಕಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದೆನೆ. ಎಲ್ಲರ ವರದಿ ನೆಗೆಟಿವ್ ಬಂದಿದೆ. ಪರೀಕ್ಷೆ ಮಾಡಿಸುವುದು ತಪ್ಪಲ್ಲ' ಎಂದು ಸಿಎಂ ಸಭೆ ಬಳಿಕ ಶಾಸಕ ಜಮೀರ್ ಖಾನ್ ಹೇಳಿದ್ದಾರೆ.
Coronavirus Karnataka Apr 3, 2020, 4:43 PM IST
ಆಶಾ ಕಾರ್ಯಕರ್ತೆ ಕೃಷ್ಣವೇಣಿ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಹಲ್ಲೆಕೋರರಿಗೆ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಶಾ ಕಾರ್ಯಕತ್ರು, ಡಾಕ್ಟರ್ಗಳ ಮೇಲೆ ಹಲ್ಲೆ ಮಾಡಿದ್ರೆ ಸುಮ್ಮನಿರಲ್ಲ. ಹಲ್ಲೆ ಮಾಡುವ ಬೆಂಬಲಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜಾಮೀನು ರಹಿತ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Coronavirus Karnataka Apr 3, 2020, 2:07 PM IST
ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಶಾಕ್ ನೀಡಿದೆ. ಗುಲಾಬಿ ಟೀಂಗೆ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದೆ. ಪ್ರತಿಭಟನೆಗಾಗಿ ಬೆಂಗಳೂರಲ್ಲಿ ಜಮಾಯಿಸಿದ್ದಾಗ ಕೆಲಸಕ್ಕೆ ಹಾಜರಾಗದವರ ವಿರುದ್ಧ ಸರ್ಕಾರ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಪ್ರತಿಭಟನೆ ಮುಂದುವರೆಸುವವರ ಗೌರವ ಧನಕ್ಕೆ ಕತ್ತರಿ ಹಾಕಲು ಮುಂದಾಗಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ!
state Jan 6, 2020, 5:08 PM IST
ವಿವಿದ ಬೇಡಿಕೆ ಈಡೇರಿಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತರ ಬೃಹತ್ ಪ್ರತಿಭಟನೆ ನೆಡಸಿದರು. ಇದರಿಂದ ಉದ್ಯಾನ ನಗರಿ ಪಿಂಕ್ ಸಿಟಿಯಾಗಿ ಮಾರ್ಪಟ್ಟಿತು. ಸಾವರ್ಕರ್ ಹಾಗೂ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಮಧ್ಯೆ ದೈಹಿಕ ಸಂಬಂಧ ಕುರಿತ ಕಾಂಗ್ರೆಸ್ ಕೈಪಿಡಿ ಭಾರಿ ವಿವಾದ ಸೃಷ್ಟಿಸಿದೆ. ಮಗಳ ಹುಟ್ಟ ಹಬ್ಬಕ್ಕೆ ಕೇಕ್ನಲ್ಲಿ ಇತಿಹಾಸ ರಚಿಸಲು ಯಶ್ ಸಜ್ಜಾಗಿದ್ದಾರೆ. ಜನವರಿ 3ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.
India Jan 3, 2020, 4:26 PM IST
ಬೆಂಗಳೂರಿನಲ್ಲಿ 30 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ಸ್ಪಷ್ಟ ಹೇಳಿಕೆ ನೀಡಲಿಲ್ಲ. ಸರ್ಕಾರದ ಜೊತೆ ಚರ್ಚಿಸಿ ಪ್ರಯತ್ನಿಸುವುದಾಗಿ ಹೇಳುವ ಮೂಲಕ ಕಿವಿ ಮೇಲೆ ಹೂ ಇಡುವ ಯತ್ನ ಮಾಡಿದ್ದಾರೆ.
state Jan 3, 2020, 3:48 PM IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾಸಿಕ ವೇತನ 12 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಭಟನೆ ನಡೆಸುತ್ತಿದ್ದು, ಪ್ರೀಡಂ ಪಾರ್ಕಿಗೆ ಜಾಥಾ ನಡೆಸಿದ್ದಾರೆ.
ರಾಜ್ಯದ ವಿವಿಧ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಇದರಿಂದ ಬೆಂಗಳೂರಿನ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಆಗಿದೆ.
state Jan 3, 2020, 1:30 PM IST