ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಎದುರು ಆಡಿತು. ಈ ಪಂದ್ಯ ಮುಕ್ತಾಯದ ಬಳಿಕ ಫ್ರಾಂಚೈಸಿಯು ತನ್ನ ತಂಡದ ಎಲ್ಲಾ ಆಟಗಾರರಿಗೆ ಸನ್ಮಾನಿಸುವುದರ ಜತೆಗೆ ಪದಕಗಳನ್ನು ಹಾಕಿ ಗೌರವಿಸಿತು. ಇನ್ನು ಧೋನಿ ಕೂಡಾ ಮೈದಾನದಲ್ಲಿದ್ದ ಸಿಎಸ್ಕೆ ಅಭಿಮಾನಿಗಳಿಗೆ ತಮ್ಮ ಸಹಿ ಇರುವ ಟೆನಿಸ್ ಬಾಲ್ಗಳನ್ನು ನೀಡುವ ಮೂಲಕ ಸ್ಮರಣೀಯ ಗಿಫ್ಟ್ ನೀಡಿದರು. ಇದೆಲ್ಲ ಗಮನಿಸಿದ ಬಳಿಕ ಇದು ಧೋನಿ ಪಾಲಿನ ಕೊನೆಯ ಐಪಿಎಲ್ ಎಂದೇ ಕ್ರಿಕೆಟ್ ಪಂಡಿತರು ಊಹಿಸಿಕೊಳ್ಳುತ್ತಿದ್ದಾರೆ.
Cricket May 14, 2024, 1:11 PM IST
ಭಾನುವಾರ ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಕನ್ನಡದಲ್ಲಿ 'ನಮಸ್ಕಾರ ಬೆಂಗಳೂರು, ಭೇಟಿಯಾಗೋಣ ಚಿನ್ನಸ್ವಾಮಿಯಲ್ಲಿ' ಎಂದು ಬರೆದಿತ್ತು.
Cricket May 14, 2024, 11:34 AM IST
ಡೆಲ್ಲಿ 13 ಪಂದ್ಯಗಳನ್ನಾಡಿದ್ದು. 12 ಅಂಕ ಸಂಪಾದಿಸಿದೆ. ತಂಡಕ್ಕಿದು ಕೊನೆ ಪಂದ್ಯ. ದೊಡ್ಡ ಅಂತರದಲ್ಲಿ ಗೆದ್ದು, ಚೆನ್ನೈ, ಹೈದರಾಬಾದ್ ಹಾಗೂ ಆರ್ಸಿಬಿ ತಂಡಗಳನ್ನು ನೆಟ್ ರನ್ರೇಟ್ನಲ್ಲಿ ಹಿಂದಿಕ್ಕಲು ಸಾಧ್ಯವಾದರೆ ಮಾತ್ರ ಪ್ಲೇ-ಆಫ್ರೇಸ್ನಲ್ಲಿ ಜೀವಂತವಾಗಿ ಉಳಿಯಲಿದೆ.
Cricket May 14, 2024, 11:13 AM IST
ಸದ್ಯ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಅವರ ಹೆಡ್ ಕೋಚ್ ಗುತ್ತಿಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಕೊನೆಯಾಗಲಿದೆ. ರಾಹುಲ್ ದ್ರಾವಿಡ್ 2021ರ ಡಿಸೆಂಬರ್ನಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದರು.
Cricket May 14, 2024, 10:13 AM IST
ಸೋಮವಾರ ಸಂಜೆಯಿಂದಲೇ ಸುರಿಯಲು ಆರಂಭಿಸಿದ ಧಾರಾಕಾರ ಮಳೆ ರಾತ್ರಿ 10 ಗಂಟೆ ವರೆಗೂ ನಿಲ್ಲಲಿಲ್ಲ. ಇದರಿಂದಾಗಿ ಟಾಸ್ ಕೂಡಾ ಸಾಧ್ಯವಾಗಲಿಲ್ಲ. ತಲಾ ಕನಿಷ್ಠ 5 ಓವರ್ ಪಂದ್ಯಕ್ಕೆ 10.56ರ ಗಡುವು ವಿಧಿಸಲಾಗಿತ್ತಾದರೂ, ಎಡೆಬಿಡದೆ ಸುರಿಯ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿತ್ತು. ಹೀಗಾಗಿ 10.45ರ ವೇಳೆ ರೆಫ್ರಿಗಳು ಪರಿಶೀಲನೆ ನಡೆಸಿ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.
Cricket May 14, 2024, 9:08 AM IST
ಐಪಿಎಲ್ನಲ್ಲಿ ರೋಹಿತ್ ಶರ್ಮಾ & ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಬಿಗ್ ಸ್ಟಾರ್ಸ್, ಆದ್ರೆ, ಇವರಿಬ್ಬರು ಮಧ್ಯೆ ಎಲ್ಲವೂ ಸರಿ ಇಲ್ಲ. ಹಾರ್ದಿಕ್ ತಂಡದ ನಾಯಕನಾದ ಮೇಲೆ ಇವರಿಬ್ಬರ ನಡುವೆ ಗ್ಯಾಪ್ ಏರ್ಪಟ್ಟಿದೆ. ಮುಂಬೈ ಟೀಮ್ ಎರಡು ಬಣಗಳಾಗಿದೆ. ಕೆಲ ಆಟಗಾರರು ಹಾರ್ದಿಕ್ ಮಾತು ಕೇಳ್ತಿಲ್ಲ. ಇದು ನಾಯಕ ಮತ್ತು ಮಾಜಿ ನಾಯಕರ ಆಟದ ಮೇಲೆ ಪರಿಣಾಮ ಬೀರಿದೆ. ಇದ್ರಿಂದ IPLನಲ್ಲಿ ಇಬ್ಬರು ಫ್ಲಾಪ್ ಶೋ ನೀಡ್ತಿದ್ದಾರೆ.
Cricket May 13, 2024, 5:33 PM IST
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಅದರಲ್ಲೂ ಗೆಳೆಯ ಹಾಗೂ ಎದುರಾಳಿ ತಂಡದ ವೇಗಿ ಇಶಾಂತ್ ಶರ್ಮಾ ಅವರ ಬೌಲಿಂಗ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಚಚ್ಚಿದರು. ಹೌದು, ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ನ ಹಿರಿಯ ಆಟಗಾರರು, ಆಪ್ತ ಸ್ನೇಹಿತರಾದ ವಿರಾಟ್ ಕೊಹ್ಲಿ ಹಾಗೂ ಇಶಾಂತ್ ಶರ್ಮಾ ನಡುವೆ ‘ನಾನಾ... ನೀನಾ...?’ ಎನ್ನುವ ಸ್ಪರ್ಧೆ ಏರ್ಪಟ್ಟಿತ್ತು.
Cricket May 13, 2024, 4:26 PM IST
ಈ ಬಾರಿಯ IPLನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡ್ತಿರೋ ತಂಡ ಅಂದ್ರೆ, ಅದು ಕೋಲ್ಕತ್ತಾ ನೈಟ್ ರೈಡರ್ಸ್. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ KKR ಅಬ್ಬರಿಸ್ತಿದೆ. ಈವರೆಗೂ ಆಡಿರೋ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ಬೀಗಿದೆ. 18 ಪಾಯಿಂಟ್ಗಳೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಈ ಸಲ ಕಪ್ ನಮ್ದೇ ಅಂತಿದೆ.
Cricket May 13, 2024, 3:11 PM IST
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ 5ನೇ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಆಸೆಯನ್ನು ಮತ್ತಷ್ಟು ಜೀವಂತವಾಗಿರಿಸಿಕೊಂಡಿದೆ. ಇದೀಗ ಆರ್ಸಿಬಿ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ನೋಡೋಣ ಬನ್ನಿ.
Cricket May 13, 2024, 1:17 PM IST
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 62 ಪಂದ್ಯಗಳು ಮುಕ್ತಾಯವಾಗಿದ್ದರೂ ಕೇವಲ ಒಂದು ತಂಡ ಮಾತ್ರ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನುಳಿದ 7 ತಂಡಗಳ ನಡುವೆ ಮೂರು ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಯಾವ ತಂಡಗಳು ಪ್ಲೇ ಆಫ್ ರೇಸ್ನಲ್ಲಿವೆ ಎನ್ನುವುದನ್ನು ನೋಡೋಣ ಬನ್ನಿ.
Cricket May 13, 2024, 12:20 PM IST
ಗುಜರಾತ್ 12 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್ರೇಟ್(-1.063) ಕಳಪೆಯಾಗಿರುವುದರಿಂದ ಪ್ಲೇ-ಆಫ್ಗೇರುವುದು ಕಷ್ಟ. ಆದರೂ ಕೊನೆ 2 ಪಂದ್ಯಗಳಲ್ಲಿ ಬೃಹತ್ ಅಂತರದಲ್ಲಿ ಗೆದ್ದು, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ತಂಡಕ್ಕೆ ಪ್ಲೇ-ಆಫ್ ಅದೃಷ್ಟ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
Cricket May 13, 2024, 10:09 AM IST
ಗೆಲ್ಲಲು 188 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 140 ರನ್ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನೊಂದಿಗೆ ಆರ್ಸಿಬಿ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆರ್ಸಿಬಿಗೆ ಅದೃಷ್ಟ ಕೈಹಿಡಿದರೆ, ಇನ್ನೊಂದು ಗೆಲುವು ತಂಡವನ್ನು ಪ್ಲೇ ಆಫ್ಗೆ ಕೊಂಡೊಯ್ಯಲಿದೆ.
Cricket May 12, 2024, 11:11 PM IST
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 6 ರನ್ ಗಳಿಸಿ ಮುಕೇಶ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.
Cricket May 12, 2024, 9:15 PM IST
ಗೆಲ್ಲಲು ಕೇವಲ 142 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ರಚಿನ್ ರವೀಂದ್ರ 18 ಎಸೆತಗಳಲ್ಲಿ 27 ರನ್ ಬಾರಿಸಿ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಡೇರಲ್ ಮಿಚೆಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಮಿಚೆಲ್ ಕೇವಲ 13 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 22 ರನ್ ಬಾರಿಸಿ ಚಹಲ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
Cricket May 12, 2024, 7:11 PM IST
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಲೀಗ್ ಹಂತದ ಕೊನೆಯ ಐಪಿಎಲ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ಫ್ರಾಂಚೈಸಿಯು, "ನಮ್ಮ ಬೆಂಬಲಿಗರು ಪಂದ್ಯ ಮುಗಿದ ಬಳಿಕ ಮೈದಾನದಲ್ಲೇ ಇರಿ. ಏನೋ ಒಂದು ವಿಶೇಷತೆ ನಿಮಗಾಗಿ ಕಾದಿದೆ" ಎಂದು ಪೋಸ್ಟ್ ಮಾಡಿದೆ.
Cricket May 12, 2024, 6:43 PM IST