ಕೊರೋನಾ ಲಾಕ್ ಡೌನ್ ಸಂದರ್ಭದ ಅನುಭವ ಮತ್ತು ನಾವು ಇಂಥ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಸಂದರ್ಶನದಲ್ಲಿ ಹೇಳಿದ್ದಾರೆ.
India Jun 22, 2020, 2:41 PM IST
ಕೊರೊನಾ ವಿಚಾರದಲ್ಲಿ ಸಿಲಿಕಾನ್ ಸಿಟಿ ಜನರಿಗೆ ಶಾಕ್ ಮೇಲೆ ಶಾಕ್..! ಬೆಂಗಳೂರಿನಲ್ಲಿ ಕೋರೊನಾ ಆರ್ಭಟ ಹೆಚ್ಚಾಗುತ್ತಿದೆ. 7 ಏರಿಯಾಗಳು ಮತ್ತೆ ಸೀಲ್ ಡೌನ್ ಆಗುವ ಸಾಧ್ಯತೆಗಳಿವೆ. ಚಿಕ್ಕಪೇಟೆ, ಕೆ. ಆರ್ ಮಾರ್ಕೆಟ್, ವಿವಿಪುರಂ, ಕಲಾಸಿಪಾಳ್ಯ, ಸಿದ್ಧಾಪುರ, ಚಾಮರಾಜಪೇಟೆ ಸೀಲ್ಡೌನ್ ಆಗುವ ಸಾಧ್ಯತೆ ಇದೆ. ಪಾದರಾಯನಪುರ ಎಂದಿನಂತೆ ಸೀಲ್ಡೌನ್ ಆಗಿದೆ. ಸ್ವಯಂ ನಿರ್ಧಾರದಿಂದ ಚಿಕ್ಕಪೇಟೆ ಸಹ ಸೀಲ್ಡೌನ್ ಆಗಿದೆ. ಇಂದಿನ ಸಿಎಂ ಸಭೆಯಲ್ಲಿ ಸೀಲ್ಡೌನ್ ಬಗ್ಗೆ ನಿರ್ಧಾರವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 22, 2020, 12:37 PM IST
ಉದ್ಯಾನನಗರಿಯಲ್ಲಿ ಕೊರೊನಾ ಕೇಸ್ ದಿನ ದಿನಕ್ಕೂ ಕೈ ಮೀರಿ ಹೋಗುತ್ತಿದೆ. ನಗರಕ್ಕೆ SARI ಹಾಗೂ ILI ಸೋಂಕು ಕೇಸ್ಗಳು ಕಂಟಕಪ್ರಾಯವಾಗಿವೆ. ವಿಷಮಶೀತ ಜ್ವರದ ಸಮಸ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 194 ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ಕೊರೊನಾ ಕೂಪವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 22, 2020, 12:21 PM IST
ಸಿಲಿಕಾನ್ ಸಿಟಿಯಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಹೆಮ್ಮಾರಿ ಉಲ್ಭಣಿಸುತ್ತಲೇ ಇದೆ. ಮಹಾಮಾರಿ ಕಾಟಕ್ಕೆ ಕರುನಾಡು ಅಕ್ಷರಶಃ ನಡುಗಿದೆ. ಅನ್ಲಾಕ್ನಿಂದ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 20 ದಿನಗಳಲ್ಲಿ ಗ್ರೀನ್ಝೋನ್ಗಳೆಲ್ಲಾ ರೆಡ್ಜೋನ್ ಆಗಿ ಪರಿವರ್ತನೆ ಆಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಕೊರೋನಾ ಅಟ್ಟಹಾಸಕ್ಕೆ ಚಿಕ್ಕಪೇಟೆ ಲಾಕ್ಡೌನ್ ಹಂತ ತಲುಪಿದೆ. ಚಿಕ್ಕಪೇಟೆ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಲಾಕ್ಡೌನ್ಗೆ ಮುಂದಾಗಿದ್ದಾರೆ. ಒಂದು ವಾರವಿಡೀ ಲಾಕ್ಡೌನ್ ಆಗಲಿದೆ.
state Jun 22, 2020, 12:06 PM IST
ಕನಕಪುರದಲ್ಲಿ ಸಾರಿಗೆ ವ್ಯವಸ್ಥೆ ಎಂದಿನಂತೆ ಮುಂದುವರೆಯಲಿದೆ. ಇನ್ನು ಮದ್ಯದಂಗಡಿ ವೇಳಾಪಟ್ಟಿ ನಿಗದಿ ಬಗ್ಗೆ ಅಬಕಾರಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜುಲೈ 01ರವರೆಗೆ ಕನಕಪುರ ಸ್ವಯಂ ಪ್ರೇರಿತವಾಗಿ ಬಂದ್ ಆಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Karnataka Districts Jun 22, 2020, 11:53 AM IST
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದೆ. ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಆದರೂ ಕೋವಿಡ್ 19 ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಬೇರೆ ರಾಜ್ಯಗಳ ರೀತಿ ಕರ್ನಾಟಕದಲ್ಲಿಯೂ ಲಾಕ್ಡೌನ್ ಅಗುತ್ತಾ? ತಮಿಳುನಾಡು, ಪಂಜಾಬ್ ಮಾದರಿಯಲ್ಲಿ ಲಾಕ್ಡೌನ್ ಆಗುತ್ತಾ? ತಮಿಳುನಾಡಿನ 4 ಜಿಲ್ಲೆಗೆ ಸಂಪೂರ್ಣ ಲಾಕ್ಡೌನ್ ಆಗಿವೆ. ಜೂನ್ ಅಂತ್ಯದವರೆಗೆ ಸಂಪೂರ್ಣ ಲಾಕ್ಡೌನ್ ಅಗಿವೆ. ಪಂಜಾಬ್ನ ಅಮೃತಸರದಲ್ಲಿಯೂ ವೀಕೆಂಡ್ ಲಾಕ್ಡೌನ್ ಆಗಿದೆ. ಇಂದಿನ ಸಭೆಯ ಬಳಿಕ ಹೊರಬೀಳಲಿದೆ ಮಹತ್ವದ ನಿರ್ಧಾರ. ಜನಸಂದಣಿ ಕಡಿಮೆ ಮಾಡಲು ಲಾಕ್ಡೌನ್ ಅನಿವಾರ್ಯವಾಗಿದೆ. 2 ದಿನ ಲಾಕ್ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
state Jun 22, 2020, 11:48 AM IST
ಬೆಂಗಳೂರಿನಲ್ಲಿ ಕೊರೋನಾ ಉಲ್ಬಣವಾಗಿದ್ದು ಸಿಎಂ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದು ಮತ್ತೆ ಲಾಕ್ ಡೌನ್ ಜಾರಿ ಮಾಡುವ ಕುರಿತು ಚಿಂತಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
Karnataka Districts Jun 21, 2020, 11:26 PM IST
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿಧಾನಸಭಾ ಕ್ಷೇತ್ರವಾದ ರಾಮನಗರ ಜಿಲ್ಲೆಯ ಕನಕಪುರವನ್ನು ಒಂದು ವಾರ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ.
Karnataka Districts Jun 21, 2020, 10:34 PM IST
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ನೀಡಿದ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್ಡೌನ್ ಸಡಿಲೆಕೆಯಾದರೂ ಕಂಪನಿಗಳ ಆರ್ಥಿಕತೆ ಸುಧಾರಿಸಿಲ್ಲ. ಇದೀಗ BMW ಕಂಪನಿ ಆರ್ಥಿಕ ನಷ್ಟ ಸರಿದೂಗಿಸಲು ಬರೋಬ್ಬರಿ 10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
Automobile Jun 21, 2020, 9:01 PM IST
ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಬಂದು ಅಜ್ಜಿಯನ್ನು ಕರೆದೊಯ್ಯುವಾಗ ಗ್ರಾಮಸ್ಥರೆಲ್ಲ ಪಂಚುಭಾಯಿ ಹೋಗುತ್ತಿರುವ ದಃಖದಲ್ಲಿ ಕಣ್ಣೀರಿಟ್ಟಿದ್ದಾರೆ. 40 ವರ್ಷದಿಂದ ಜೊತೆಗಿದ್ದ ಅಜ್ಜಿಯನ್ನು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.
India Jun 21, 2020, 3:34 PM IST
ವಿದೇಶಿ ಪ್ರಜೆ ಕಾಸಿಲ್ಲದೇ, ವೀಸಾ ಅವಧಿ ಮುಗಿದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿಕ್ಕು ತೋಚದಂತಾಗಿ ಕುಳಿತಿದ್ದನು. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿದ್ದಾರೆ.
Karnataka Districts Jun 21, 2020, 9:13 AM IST
ಕೊರೋನಾ ಪರಿಸ್ಥಿಯಿಂದಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು 30 ಕೋಟಿ ರು.ಗಳಷ್ಟುಇಳಿಕೆಯಾಗಿದೆ. ಇದನ್ನು ಸರಿದೂರಿಸಲು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ಬೆಲೆ ಪ್ರತಿ ಲೀಟರಿಗೆ 1 ರು.ಗಳಷ್ಟುಕಡಿಮೆ ಮಾಡಲಾಗುತ್ತದೆ. ಹಾಲು ಉತ್ಪಾದಕರು ಸಹಕರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.
Karnataka Districts Jun 21, 2020, 7:53 AM IST
ಸಾಧು ಕೋಕಿಲ, ಚಿಕ್ಕಣ್ಣನ ಬಳಿಕ ಅಭಿಮಾನಿಗಳನ್ನು ಪಡೆಯುತ್ತಿರುವ ಹಾಸ್ಯನಟನಾಗಿ ಬೆಳೆಯುತ್ತಿರುವವರು ಧರ್ಮಣ್ಣ. ಕೈ ತುಂಬ ಚಿತ್ರಗಳನ್ನಿರಿಸಿಕೊಂಡು ಬ್ಯುಸಿಯಾಗಿರುವ ಹೊತ್ತಲ್ಲೇ ಈ ಲಾಕ್ಡೌನ್ ಸಂಭವಿಸಿತ್ತು. ಅದಾಗಲೇ ಚಿಕ್ಕಮಗಳೂರು ಸನಿಹದಲ್ಲಿರುವ ಕಡೂರಿನ ಮನೆ ಸೇರಿಕೊಂಡಿದ್ದ ಧರ್ಮಣ್ಣ ಇದುವರೆಗೂ ಅಲ್ಲಿಯೇ ಇದ್ದಾರೆ. ಅವರು ಮನೆಯಲ್ಲಿ ದಿನ ಕಳೆದ ರೀತಿಯೇ ವಿಭಿನ್ನ. ಅದರ ಬಗ್ಗೆ ಮತ್ತು ಮುಂದಿನ ಚಿತ್ರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.
Interviews Jun 20, 2020, 6:37 PM IST
ಲಾಕ್ಡೌನ್ ಆರಂಭವಾದಾಗಿನಿಂದ ಕಾರ್ಮಿಕರಿಗೆ, ಬಡ ಜನರಿಗೆ ಊರು ಸೇರಲು ವಿಶೇಷ ವಿಮಾನ, ಬಸ್ ವ್ಯವಸ್ಥೆ ಮಾಡಿ ರಿಯಲ್ ಹಿರೋ ಆದ ಖ್ಯಾತ ಖಳ ನಟ ಸೋನು ಇದೀಗ ಇನ್ನೊಂದು ಮಾನವೀಯ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.
Entertainment Jun 20, 2020, 2:59 PM IST
ಲಾಕ್ಡೌನ್ ಸಮಯದಲ್ಲಿ ನಷ್ಟ ಅನುಭವಿಸಿದ ತೋಟಗಾರಿಕಾ ಬೆಳೆ ಬೆಳೆದ ರೈತರಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಪಟ್ಟಿಯಲ್ಲಿ ತಮ್ಮ ಹೆಸರು ನಮೂದು ಮಾಡದಿರುವುದಕ್ಕೆ ತಾಲೂಕಿನ ಕೆಲ ರೈತರು ಆತಂಕದಲ್ಲಿ ಸಿಲುಕಿದ್ದಾರೆ.
Karnataka Districts Jun 20, 2020, 8:51 AM IST