ಮಯೂರ ಹೆಗಡೆ
ಹುಬ್ಬಳ್ಳಿ(ಆ.28): ತಾತ್ಕಾಲಿಕವಾಗಿ ಉಳಿದುಕೊಳ್ಳಲೆಂದು ಕಟ್ಟಿಕೊಟ್ಟ ತಗಡಿನ ಶೆಡ್ನಲ್ಲಿ ಮದುವೆಯೂ ನಡೆಯುತ್ತಿದೆ, ಹೆರಿಗೆಯೂ ಆಗುತ್ತಿದೆ. ಮಹಿಳೆಯರು ನಿತ್ಯ ಕರ್ಮಕ್ಕಾಗಿ ಪ್ರತಿನಿತ್ಯ ಅವಮಾನ ಎದುರಿಸುತ್ತಿದ್ದಾರೆ. ವೃದ್ಧರು, ಚಿಕ್ಕಮಕ್ಕಳು ಕಾಯಿಲೆ ಬಿದ್ದರೆ ಶುಶ್ರೂಷೆ ನಡೆಯುವುದೂ ಇಲ್ಲೆ. ಅತ್ತ 10 ತಿಂಗಳಲ್ಲಿ ನಿರ್ಮಾಣವಾಗಬೇಕಿದ್ದ ಮನೆ ಇನ್ನೂ ಪೂರ್ಣಗೊಂಡಿಲ್ಲ, ನಿರ್ಮಾಣ ಹಂತದಲ್ಲಿರುವ ಮನೆ ಬಳಿಯೆ ಮತ್ತೆ ಮಲೆಪ್ರಭೆ ಉಕ್ಕೇರಿ ಆತಂಕ ಹುಟ್ಟು ಹಾಕಿದ್ದಾಳೆ.
Karnataka Districts Aug 28, 2020, 2:29 PM IST
ಮನೆ ಕುಸಿದು ಒಂದು ವರ್ಷವಾದರೂ ಕೂಡ ಇನ್ನೂ ಪರಿಹಾರ ಮಾತ್ರ ಸಿಕ್ಕಿಲ್ಲ. ಹೌದು, ಇಂತಹ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಕಳೆದ ವರ್ಷ ಬಂದ ಭೀಕರ ಪ್ರವಾಹದಲ್ಲಿ ನಾಗವ್ವ ಎಂಬ ವೃದ್ಧೆಯ ಮನೆ ಕುಸಿದಿತ್ತು. ಆ ಸಂದರ್ಭದಲ್ಲಿ ಕೇವಲ 10 ಸಾವಿರ ರೂ. ನೀಡಿದ್ದರು.
Karnataka Districts Aug 27, 2020, 12:06 PM IST
ಕಂದಾಯ ಸಚಿವ ಆರ್. ಅಶೋಕ್ ಅವರು ಕೇವಲ ಕಾಟಾಚಾರಕ್ಕೆ ನೆರೆ ವೀಕ್ಷಣೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಚಿವ ಆರ್. ಅಶೋಕ ಕೇವಲ ಎರಡೇ ನಿಮಿಷದಲ್ಲಿ ನೆರೆ ಪ್ರದೇಶದ ವೀಕ್ಷಣೆಯನ್ನ ಮಾಡಿದ್ದಾರೆ.
Karnataka Districts Aug 27, 2020, 10:40 AM IST
ಕಳೆದ 3 ತಿಂಗಳಲ್ಲಿ ಸಾಕಷ್ಟು ದೇಶಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ಸುಂದರವಾಗಿದ್ದ ವಸುಂಧರೆ ಅನಾಹುತಗಳನ್ನು ಸೃಷ್ಟಿಸಿದ್ಧಾಳೆ. ಪ್ರಕೃತಿ ಅಂದರೆ ಹಾಗೆ. ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅದನ್ನು ಮನುಷ್ಯನಿಂದ ಊಹಿಸುವುದು ಕಷ್ಟವಾಗಿದೆ. ಪ್ರಳಯ, ಭೂಕಂಪ, ಸುನಾಮಿ, ಭಾರೀ ಮಳೆ, ಪ್ರವಾಹ ಹೀಗೆ ನಾನಾ ರೂಪದಲ್ಲಿ ಪ್ರಕೃತಿ ಮುನಿಸನ್ನು ತೋರಿಸಿ ಮಾನವ ಕುಲಕ್ಕೆ ಪಾಠ ಕಲಿಸುತ್ತದೆ.
International Aug 26, 2020, 5:29 PM IST
ರಾಜ್ಯದಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಸರಿಪಡಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ 2 ಕಂತಿನಲ್ಲಿ ಹಣ ಬಿಡುಗಡೆ ಮಾಡಿದ್ದು, ಒಟ್ಟು 527 ಕೋಟಿ ಹಣ ಕೇಂದ್ರದ ಎನ್ಡಿಆರ್ಎಫ್ನಿಂದ ಬಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
Karnataka Districts Aug 26, 2020, 3:28 PM IST
ಬೆಳಗಾವಿಗೂ ಬಂದ್ರೂ ರಾಮದುರ್ಗಕ್ಕೆ ಬರದ ಸಿಎಂ. ಇಲ್ಲಿನ ನೆರೆ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮನ್ನು ಈ ರೀತಿ ಬೀದಿಯಲ್ಲಿ ಕೂರಿಸಿದ ಸರ್ಕಾರಕ್ಕೆ ಧಿಕ್ಕಾರ' ಎಂದು ರಾಮದುರ್ಗಾ ಮಿನಿ ವಿಧಾನಸೌಧದ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
state Aug 26, 2020, 2:43 PM IST
ರಾಜ್ಯದಿಂದ ಅಯ್ಕೆಯಾದ 25 ಬಿಜೆಪಿ ಸಂಸದರು ದೆಹಲಿ ಚಾಂದಿನಿಚೌಕ್ನಲ್ಲಿ ಚಾಟ್ ತಿನ್ನೋಕೆ ಇದ್ದಾರೆ ಅಷ್ಟೇ, ರಾಜ್ಯದಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿದ್ದಾಗಲೂ ಬಿಜೆಪಿ ಸಂಸದರು ಪರಿಹಾರ ಕೇಳೋಕೆ ಹೋಗ್ತಿಲ್ಲ, ಇಂತಹ ಸಂಸದರು ರಾಜ್ಯಕ್ಕೆ ಬೇಕಾ? ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಶಾಸಕ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.
Karnataka Districts Aug 26, 2020, 2:00 PM IST
ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಬೆಳಗಾವಿ, ಧಾರವಾಡ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ವೈಮಾನಿಕ ಸಮೀಕ್ಷೆ ಬಳಿಕ ಬೆಂಗಳೂರಿನಲ್ಲಿಯೂ ಚರ್ಚಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
state Aug 25, 2020, 5:16 PM IST
ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕದ 4 ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿವೆ. ಪ್ರವಾಹದಿಂದ ಸಾಕಷ್ಟು ಹಾನಿಯುಂಟಾಗಿದೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆರ್ ಅಶೋಕ್, ಬೊಮ್ಮಾಯಿ, ಜಾರಕಿಹೊಳಿ ಸಿಎಂಗೆ ಸಾಥ್ ನೀಡಿದ್ದಾರೆ.
state Aug 25, 2020, 4:27 PM IST
ಸಿಎಂ ಯಡಿಯೂರಪ್ಪ ಈಗ ತಾನೇ ಕೋವಿಡ್ನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ಧಾರೆ. ಕೊರೊನಾ ಮರುಕಳಿಸುವ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದರೂ ರಾಜಾಹುಲಿ ಮಾತ್ರ ಕ್ಯಾರೇ ಎಂದಿಲ್ಲ. ಪ್ರವಾಹದಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಯ ಜನರ ನೆರವಿಗೆ ಧಾವಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
state Aug 25, 2020, 3:08 PM IST
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆನ್ನು ನೋವು, ಜ್ವರ ಕಾಣಿಸಿಕೊಂಡಿದ್ದು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳಗಾವಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಆದರೆ ಅನಾರೋಗ್ಯ ನಿಮಿತ್ತ ಭೇಟಿಯನ್ನು ಮುಂದೂಡಿದ್ದಾರೆ.
Politics Aug 24, 2020, 6:00 PM IST
ಮಳೆ ಬರದಿದ್ದರೆ ಒಂದು ಸಮಸ್ಯೆ. ಬಂದರೆ ಇನ್ನೊಂದು ರೀತಿ ಸಮಸ್ಯೆ. ಅತಿವೃಷ್ಟಿ, ಅನಾವೃಷ್ಟಿ ಎರಡೂ ಕೂಡಾ ಸಮಸ್ಯೆಯನ್ನು ತಂದಿಡುತ್ತದೆ. ಈ ಬಾರಿ ಮೊದಲು ಮಳೆಯ ಅಬ್ಬರ ಇಲ್ಲದಿದ್ದರೂ ಆಗಸ್ಟ್ ತಿಂಗಳಲ್ಲಿ ಅಬ್ಬರ ಜೋರಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹದಿಂದ ಜನ ಕಂಗಾಲಾಗಿದ್ದಾರೆ. ಬೆಳೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಮನೆ ಇಲ್ಲ, ಜಮೀನಿಲ್ಲ ಮುಂದೇನು ಗತಿ ಎಂದು ಚಿಂತಾಕ್ರಾಂತರಾಗಿದ್ದಾರೆ. ಇಂತದ್ದೊಂದು ದಯನೀಯ ಸ್ಥಿತಿಯನ್ನು ಸೃಷ್ಟಿಸಿದೆ ಮಹಾಮಳೆ.
India Aug 24, 2020, 3:27 PM IST
ಪ್ರವಾಹದ ವೇಳೆ ಪ್ಲಾಸ್ಟಿಕ್ ಬ್ಯಾರಲ್ ಬಳಸಿ ಸಾಗುತ್ತಿದ್ದ ಜನರ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಂದಿಸಿದ್ದು, ಬೋಟ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ.
Karnataka Districts Aug 24, 2020, 10:13 AM IST
ಅಥಣಿಯ ಹುಲಗಬಾಳಿ ಗ್ರಾಮಸ್ಥರ ಸಂಕಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಇಲ್ಲಿನ ಜನರು ಪ್ರವಾಹದಲ್ಲಿ ಬೋಟ್ ಇಲ್ಲದೇ ಪ್ಲಾಸ್ಟಿಕ್ ಬ್ಯಾರೆಲ್ ಮೇಲೆ ಪ್ರಯಾಣ ಮಾಡುತ್ತಿದ್ದರು. ಇದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಯನ್ನು ನೋಡಿದ ಸಿಎಮ ಬೋಟ್ ಒದಗಿಸುವಂತೆ ಡಿಸಿಗೆ ಸೂಚಿಸಿದ್ರು. ಡಿಸಿ ಸ್ಥಳಕ್ಕೆ ಬಂದು ಬೋಟ್ ಹಸ್ತಾಂತರಿಸಿದ್ದಾರೆ. ಇದರಿಂದಾಗಿ ಅಥಣಿ ಜನರ ಸಂಕಷ್ಟಕ್ಕೆ ಮುಕ್ತಿ ಸಿಕ್ಕಂತಾಗಿದೆ. ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್ ಇದು..!
state Aug 23, 2020, 5:10 PM IST
ನಮಗಷ್ಟ ಅಲ್ರಿ ದನಕ್ಕೂ ಹಾಕಲು ಮೇವಿಲ್ಲ ಎಂದು ರೈತ ಮಹಿಳೆಯೊಬ್ಬಳು ಅಳಲು ತೋಡಿಕೊಂಡ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಮೆಳವಂಕಿ ಪರಿಹಾರ ಕೇಂದ್ರದಲ್ಲಿ ನಡೆದಿದೆ.
Karnataka Districts Aug 23, 2020, 3:22 PM IST