ಬಜೆಟ್ ದಿನ ಸಂಸತ್ತಿನಲ್ಲಿ ಬಹಳ ವಿಶೇಷ. ದೇಶಕ್ಕೆ ದಿಕ್ಕು ತೋರಿಸುವ ವಿಚಾರವಾಗಿರುವ ಕಾರಣ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಬಹಳ ಎಚ್ಚರಿಕೆಯಿಂದ ಬಜೆಟ್ ಮಂಡನೆಯನ್ನು ಅಲಿಸುತ್ತವೆ. ಈ ಬಾರಿಯ ಬಜೆಟ್ ದಿನ ಕೂಡ ಸಾಕಷ್ಟು ಸ್ವಾರಸ್ಯಗಳಿಗೆ ಸಾಕ್ಷಿಯಾಯಿತು.
India Feb 2, 2023, 11:38 AM IST
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಇದರೊಳಗಿನ ರಾಜಕೀಯ ಸದ್ಯಕ್ಕೆ ಹೊತ್ತಿ ಉರಿಯುವ ಲಕ್ಷಣ ಕಾಣಿಸುತ್ತಿದೆ. ಪಶ್ಚಿಮ ಬಂಗಳಾದಲ್ಲಿ ರಾಜ್ಯಪಾಲರೇ ಬಿಜೆಪಿಗೆ ತಲೆನೋವಾಗಿದ್ದರೆ, ರಾಜಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಕಚ್ಚಾಟ ಜೋರಾಗಿದೆ. ಇಂದಿನ ಇಂಡಿಯಾ ಗೇಟ್ ಅಂಕಣದಲ್ಲಿ ಭಾರತದ ರಾಜಕೀಯ ಒಳಸುಳಿ ವಿವರ.
India Jan 29, 2023, 5:30 PM IST
ದಿನಾ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ತುಂಬಾ ಸ್ವಾರಸ್ಯಕರವಾಗಿರುತ್ತವೆ. ಆದರೂ, ಅನೇಕ ಬೆಳವಣಿಗೆಗಳು ವರದಿಯಾಗೋದೇ ಇಲ್ಲ. ಕೇವಲ ಬಾಯಿಮಾತಿನಲ್ಲಿ ಮಾತ್ರ ಕೇಳಿಬರುತ್ತಿರುತ್ತದೆ. ಅಂದರೆ, ಹೆಚ್ಚಾಗಿ ಗುಸುಗುಸು ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ ನೋಡಿ..
India Jan 23, 2023, 2:32 PM IST
ದೆಹಲಿ (ಜ.22): ಗಣರಾಜ್ಯೋತ್ಸವದ ವೇಳೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ಪ್ರದರ್ಶನಗೊಳ್ಳಿದೆ ಕರ್ನಾಟಕ ಟ್ಯಾಬ್ಲೋ. ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿ ಈ ಬಾರಿಯ ಟ್ಯಾಬ್ಲೋ ಸಿದ್ಧಗೊಂಡಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ತಬ್ದಚಿತರ ಪ್ರದರ್ಶನಕ್ಕೆ ಅನುಮತಿ ನೀಡುವ ಕುರಿತಾಗಿ ವಿವಾದ ಆರಂಭವಾಗಿತ್ತು. ನಂತರ ರಾಜ್ಯದ ಕೇಂದ್ರ ಸಚುವರು, ಸಂಸದರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರಂತರ ಒತ್ತಡದ ಫಲದಿಂದ ಸ್ತಬ್ದಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ದೊರೆತಿತ್ತು. ಈಗ ಸ್ತಬ್ದಚಿತ್ರವೂ ಸಿದ್ಧಗೊಂಡಿದ್ದು, ಅದರ ಅಪರೂಪದ ದೃಶ್ಯಗಳನ್ನು ನಾವು ಇಲ್ಲಿ ಕಣ್ತುಂಬಿಕೊಳ್ಳಬಹುದು.
ಗಣರಾಜ್ಯೋತ್ಸವದ ವೇಳೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ಪ್ರದರ್ಶನಗೊಳ್ಳಿದೆ ಕರ್ನಾಟಕ ಟ್ಯಾಬ್ಲೋ. ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿ ಈ ಬಾರಿಯ ಟ್ಯಾಬ್ಲೋ ಸಿದ್ಧಗೊಂಡಿದೆ. ಪದ್ಮ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆಯರಾದ ಸಾಲುಮರದ ತಿಮ್ಮಕ್ಕ. ತುಳಸೀಗೌಡ ಹಾಲಕ್ಕಿ ಹಾಗೂ ಸೂಲಗಿತ್ತಿ ನರಸಮ್ಮ ಅವರ ಸ್ತಬ್ಧಚಿತ್ರ ಪ್ರದರ್ಶನ ಆಗುತ್ತಿದೆ. ಈ ಹಿರಿಯ ಮಹಿಳೆಯರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವೂ ಆಗಿದ್ದು, ಅವರು ನಾಡಿಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವಿಸುವ ಅಭೂತಪೂರ್ವ ಕ್ಷಣವಾಗಲಿದೆ.
Republic Day parade Tableau: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆಗೂ ಅನುಮತಿ
ಕೊನೆ ಕ್ಷಣದಲ್ಲಿ ಕರ್ನಾಟಕಕ್ಕೆ ದೊರೆತ ಅವಕಾಶ : ರಾಜ್ಯದ ಸ್ತಬ್ದ ಚಿತ್ರ ಪ್ರದರ್ಶನ ಮಾಡುವುದಕ್ಕೆ ಕೇಂದ್ರದ ಸಮಿತಿಯು ಒಪ್ಪಿಗೆ ನೀಡಿರಲಿಲ್ಲ. ಆದರೆ, ಸಮಿತಿ ನಿರೀಕ್ಷೆ ಮಾಡಿದ್ದ ಎಲ್ಲ ಮಾನದಂಡಗಳನ್ನು ಪೂರೈಸಿದ ಕರ್ನಾಟಕ ರಾಜ್ಯದ ಸ್ತಬ್ದಚಿತ್ರಕ್ಕೆ ಕೊನೇ ಕ್ಷಣದಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಅನುಮತಿ ದೊರೆತಿತ್ತು. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಕನ್ನಡಿಗರ ಆಕ್ರೋಶ ಕ್ಕೆ ಮಣಿದು ಟ್ಯಾಬ್ಲೋ ಗೆ ಅವಕಾಶ ನೀಡಿತ್ತು.
ಏಳು ದಿನದಲ್ಲಿ ಟ್ಯಾಬ್ಲೋ ಸಿದ್ಧ: ಕರ್ನಾಟಕದ ಪ್ರಸಿದ್ಧ ಈ ಟ್ಯಾಬ್ಲೋವನ್ನು ಕನ್ನಡದ ಪ್ರಸಿದ್ಧ ಕಲಾವಿದರು ಕೇವಲ ಏಳೇ ದಿನಗಳಲ್ಲಿ ಸಿದ್ದಪಡಿಸಿದ್ದಾರೆ. ಕಲಾವಿದ ಶಶಿಧರ್ ಅಡಪ ಅವರ ನೇತೃತ್ವದ ತಂಡದಲ್ಲಿ ವಿನ್ಯಾಸ ಮಾಡಲಾಗಿದೆ. ವಾರ್ತಾ ಇಲಾಖೆಯ ಆಯುಕ್ತ ಡಾ.ಹರ್ಷ ನೇತೃತ್ವದಲ್ಲಿ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಒಟ್ಟಾರೆ ರಾಜ್ಯದ ಟ್ಯಾಬ್ಲೋ ಗಣರಾಜ್ಯೋತ್ಸವದ ಪರೇಡ್ನಲ್ಲಿ ಪ್ರದರ್ಶನ ಮಾಡುತ್ತಿರುವುದಕ್ಕೆ ಭಾರಿ ಸಂತಸ ವ್ಯಕ್ತವಾಗಿದೆ.
state Jan 22, 2023, 10:37 PM IST
ದಿನಾ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಲ್ತಾರೆ ಅನ್ನೋದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು. ಈಗ ಅವರು ಕ್ಷೇತ್ರ ಆಯ್ಕೆ ಮಾಡಿಕೊಂಡ ಬಳಿಕ ನಾನಾ ವಿಶ್ಲೇಷಣೆಗಳು ಕೇಳಿಬರುತ್ತಿವೆ. ತಮಿಳುನಾಡಲ್ಲಿ ಡಿಎಂಕೆ ವರ್ಸಸ್ ಗವರ್ನರ್ ಜಗಳ, ಆಂಧ್ರ ರಾಜಕೀಯ ದೇಶದ ಕುತೂಹಲ ಕೆರಳಿಸುತ್ತಿದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ ನೋಡಿ..
India Jan 18, 2023, 11:09 AM IST
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮುಗಿದ ನಂತರ ಬಜೆಟ್ ಅಧಿವೇಶನದ ಮೊದಲು ಪ್ರಧಾನಿ ಮೋದಿ ಸಂಪುಟ ಸರ್ಜರಿಗೆ ಕೈಹಾಕಲಿದ್ದು, ಜನವರಿ 20ರ ಆಸುಪಾಸು ಕೆಲ ಸಣ್ಣಪುಟ್ಟ ಬದಲಾವಣೆಗಳು ಆಗಲಿವೆ ಎಂದು ದಿಲ್ಲಿ ಬಿಜೆಪಿ ಮೂಲಗಳು ಹೇಳುತ್ತಿವೆ.
India Jan 14, 2023, 11:44 AM IST
ಪಶ್ಚಿಮ ಬಂಗಾಳ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟದ ಸಮಯ ಅಂತ್ಯಗೊಂಡಿದ್ದು, ಹೊಸ ವಸಂತಕಾಲ ಆರಂಭಗೊಂಡಿದೆ. ಇತ್ತ ಕೇರಳದಲ್ಲೂ ಆರಿಫ್ ಮೊಹಮ್ಮದ್ ಖಾನ್ ಹಾಗೂ ಪಿಣರಾಯಿ ಸರ್ಕಾರದ ನಡುವಿನ ಹಗ್ಗಜಗ್ಗಾಟ ತಿಳಿಯಾಗುವ ಸೂಚನೆ ಸಿಕ್ಕಿದೆ. ಇದರ ನಡುವೆ ಉತ್ತರ ಪ್ರದೇಶದಲ್ಲಿ ರಾಜಕೀಯ ಘರ್ವಾಪ್ಸಿ ಸದ್ದು ಮಾಡುತ್ತಿದೆ. ದೇಶದ ಪ್ರಮುಖ ಘಟನೆಗಳ ಕುತೂಹಲಕ ವಿಚಾರ ಇಂದಿನ ಇಂಡಿಯಾ ಗೇಟ್ ಅಂಕಣದಲ್ಲಿ.
India Jan 10, 2023, 7:12 PM IST
ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾದಂತೆ ದೊಡ್ಡ ಗೌಡರ ಕುಟುಂಬ ಸಕ್ರಿಯವಾಗಿದೆ. ಮಗ, ಸೊಸೆ, ಮೊಮ್ಮಗ, ಬೀಗ ಸೇರಿದಂತೆ ಕುಟುಂಬದ ಬಹುತೇಕರು ಕಣದಲ್ಲಿದ್ದಾರೆ. ಸೊಸೆಯರ ಪೈಪೋಟಿ ಇದೀಗ ದೇವೇಗೌಡರಿಗೆ ತಲೆನೋವಾಗಿದೆ. ಇತ್ತ ಅಶೋಕ್ ಗೆಹ್ಲೋಟ್ ಸಿಎಂ ಸ್ಥಾನಕ್ಕೆ ಹಾಕಿದ ಟವೆಲ್ಗೆ ಹೈಕಮಾಂಡ್ ಸುಸ್ತಾಗಿದ್ರೆ, ರಾಜಸ್ಥಾನ ಬಿಜೆಪಿಯಲ್ಲೂ ತಣ್ಣನೆ ಹಾಳಿ ಬಿರುಗಾಳಿಯಾಗುವ ಸಾಧ್ಯತೆ ಇದೆ. ಈ ಎಲ್ಲಾ ಕುತೂಹಲ ಬೆಳವಣಿಗೆ ಇಂದಿನ ಇಂಡಿಯಾ ಗೇಟ್ ಅಂಕಣದಲ್ಲಿ.
India Jan 6, 2023, 3:09 PM IST
ದೇಶದ ಹಲವು ಭಾಗದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದೆ. ರಾಜಕೀಯ ನಾಯಕರ ಹೇಳಿಕೆಗಳು ಹಲವರಿಗೆ ಬಿಸಿ ತುಪ್ಪವಾಗುತ್ತಿದೆ. ಇದರ ನಡುವೆ ಅಧಿಕಾರಕ್ಕಾಗಿ ಯಾತ್ರೆ, ಅಭಿಯಾನ, ದೊಂಬರಾಟವೂ ಜೋರಾಗಿದೆ. ದೇಶದಲ್ಲಿ ನಡೆಯುತ್ತಿರುವ ಮಹತ್ವದ ಬೆಳೆವಣಿಗೆಗಳ ಕಿರುನೋಟ ಇಲ್ಲಿದೆ.
India Jan 2, 2023, 7:32 PM IST
ಭಾರತದಲ್ಲಿ ಇದೀಗ ರಾಜಕೀಯ ಚಟುವಟಿಕೆ ಚುರುಕಾಗಿದೆ. ಒಂದೊಂದೆ ರಾಜ್ಯಗಳು ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ಅಧಿಕಾರಕ್ಕಾಗಿ ರಾಜಕೀಯ ನಾಯಕರು ಕಸರತ್ತು ನಡೆಸುತ್ತಿದೆ. ಇದರ ನಡುವೆ ಬಂಡಾಯ, ಅಸಾಧಾನಗಳು ಹೆಚ್ಚಾಗುತ್ತಿದೆ. ಇದು ಕಾಂಗ್ರೆಸ್ ತಲೆನೋವಾಗಿ ಕಾರಣವಾಗಿದೆ. ಇತ್ತ ಕೇರಳದ ಸಿಎಂ ಪಿಣರಾಯಿ ಪ್ರತಿ ಬಾರಿ ಸಂಕಷ್ಟಕ್ಕೆ ಸಿಲುಕಿದಾಗ ಅವರ ಕೈಹಿಡಿದಿದ್ದು ಹವಾಮಾನ ಅನ್ನೋ ಕುತೂಹಲ ಮಾಹಿತಿ ಇಲ್ಲಿದೆ.
Politics Dec 29, 2022, 4:46 PM IST
ಅಧಿಕಾರ ಹಿಡಿಯಲು ರಾಜಕೀಯ ನಾಯಕರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ರೀತಿ, ಹಿಂಬಾಗಿಲಿನಲ್ಲಿ, ಅಂದರೆ ಜನ ಸಾಮಾನ್ಯರ ಅರಿವಿಗೆ ಬರದೆ ನಾನಾ ಘಟನೆಗಳು ನಡೆಯುತ್ತವೆ. ರಾಜಕೀಯದಲ್ಲಿ ಅಭಿಪ್ರಾಯಗಳು, ಪಿತೂರಿಗಳು, ಅಧಿಕಾರದ ಆಟಗಳು ಹಾಗೂ ಆಂತರಿಕ ಜಗಳಗಳ ಮಹಾಪೂರವೇ ನಡೆಯುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ.
Politics Dec 26, 2022, 12:32 PM IST
ಮುಂದಿನ ವಾರ ದಿಲ್ಲಿಯಲ್ಲಿ ಅಮಿತ್ ಶಾ ಕರ್ನಾಟಕದ ರಾಜಕೀಯಕ್ಕೆ ಸಂಬಂಧಪಟ್ಟಂತೆ ಎಲ್ಲ ವಿಷಯಗಳನ್ನು ಚರ್ಚಿಸಲು ಒಂದು ಮಹತ್ವದ ಸಭೆ ನಡೆಸುವ ಸಾಧ್ಯತೆಗಳಿವೆ. ಮೀಸಲಾತಿ ನಿರ್ಧಾರ, ಸಂಪುಟ ವಿಸ್ತರಣೆ, ಜಾತಿ ಸಮೀಕರಣಗಳು, ಚುನಾವಣೆ ತಯಾರಿ ಏನು ಹೇಗೆ ಎಂಬೆಲ್ಲ ವಿಷಯಗಳು ಚರ್ಚೆಗೆ ಬರಬಹುದು. ಮೂಲಗಳ ಪ್ರಕಾರ ರಾಜ್ಯದ ಚುನಾವಣೆಗೆ ಒಬ್ಬ ಖಡಕ್ ನಾಯಕನನ್ನು ಬಿಜೆಪಿ ಪ್ರಭಾರಿಯನ್ನಾಗಿ ನೇಮಿಸುವ ತೀರ್ಮಾನ ಶೀಘ್ರ ಆಗಲಿದೆ.
Politics Dec 23, 2022, 7:06 AM IST
ಒಂದೆಡೆ ಚಳಿಗಾಳದ ಅಧಿವೇಶವನ್ನು ಬಹುಬೇಗನೆ ಅಂತ್ಯಗೊಳಿಸಲಾಗುತ್ತಿದೆ, ಇತ್ತ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷಕ್ಕೆ ಸೂರ್ಯೋದವಾಗಿದೆ. ಚುನಾವಣೆಯಲ್ಲಿ ಅಧಿಕಾರ ಕೈತಪ್ಪದಂತೆ ನೋಡಿಕೊಳ್ಳಲು ಹೊಸ ತಂತ್ರ ಹೆಣೆಯಲಾಗಿದೆ. ತೆಲಂಗಾಣದಲ್ಲಿ ಪಕ್ಷಾಂತರ ಪರ್ವದ ಮುನ್ಸೂಚನೆ ಸಿಗುತ್ತಿದೆ. ಇತ್ತ ಬಿಸಿಸಿಐ ಅಧಿಕಾರಿಗಳಿಗೂ ಫಿಫಾ ಜ್ವರ ಅಂಟಿಕೊಂಡಿತ್ತು. ಈ ಕುರಿತ ಸಂಪೂರ್ಣ ಮಾಹಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ.
India Dec 22, 2022, 4:14 PM IST
ಅಧಿಕಾರದ ಕಾರಿಡಾರ್ಗಳಲ್ಲಿ, ರಾಜಕೀಯದ ತೆರೆಮೆರೆಯಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತದೆ. ಅಭಿಪ್ರಾಯಗಳು, ಎದುರಾಳಿಯ ಸೋಲಿಸುವ ತಂತ್ರಗಳು, ಅಧಿಕಾರದ ಆಟಗಳು ಹಾಗೂ ಆಂತರಿಕ ಜಗಳಗಳು ರಾಜಕೀಯದಲ್ಲಿ ಬಹಳವೇ ಮಾಮೂಲು. ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಬೃಹತ್ ಮಾಧ್ಯಮ ಜಾಲ. ದೇಶದ ಇಂಚಿಂಚಿನಲ್ಲೂ ಇದರ ಉಪಸ್ಥಿತಿ ಇದೆ. ದೇಶದಲ್ಲಿನ ರಾಜಕೀಯ ಹಾಗೂ ಅಧಿಕಾರಶಾಹಿಗಳ ನಾಡಿಮಿಡಿತವನ್ನು ಬಹಳ ಸ್ಪಷ್ಟವಾಗಿ ಜನರಿಗೆ ಮುಟ್ಟಿಸುತ್ತದೆ. ಆ ಕಾರಣಕ್ಕಾಗಿಯೇ 'ಫ್ರಮ್ ದಿ ಇಂಡಿಯಾ ಗೇಟ್' ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಮೊದಲ ಸಂಚಿಕೆಯಲ್ಲಿ ಎರಡು ಚಾನೆಲ್ಗಳ ನಡುವಿನ ಪೈಪೋಟಿ, ದೇವೆಗೌಡರೊಂದಿಗಿನ ಮೋದಿ ಭೇಟಿಯ ಸ್ವಾರಸ್ಯಗಳು ಇಲ್ಲಿವೆ.
Politics Dec 18, 2022, 5:17 PM IST
ಈಗ ಒಂದು ವೇಳೆ ಕರ್ನಾಟಕ ಸರ್ಕಾರ ಒಳ ಮೀಸಲಾತಿ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿದರೂ ಕೂಡ ಒಂದೋ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸಂವಿಧಾನದ ಆರ್ಟಿಕಲ್ 341ಕ್ಕೆ ತಿದ್ದುಪಡಿ ತರಬೇಕು, ಅಥವಾ ಸುಪ್ರೀಂಕೋರ್ಟ್ನ 9 ನ್ಯಾಯಮೂರ್ತಿಗಳ ಪೀಠ ಈ ಬಗ್ಗೆ ಅಂತಿಮ ತೀರ್ಪು ನೀಡುವವರೆಗೆ ಕಾಯಬೇಕು. ಏನೇ ಆದರೂ ಅಲ್ಲಿಯವರೆಗೆ ಕರ್ನಾಟಕದ ಚುನಾವಣೆಗಳು ಮುಗಿದುಹೋಗಿರುತ್ತವೆ.
Politics Dec 16, 2022, 6:22 AM IST