ಗುಲಾಂ ನಬಿ ಅಜಾದ್ ಜೊತೆ ದೇವೇಗೌಡರಿಗೆ ಮತ್ತು ಕುಮಾರ ಸ್ವಾಮಿಗೆ ಒಂದು ಹಂತದ ಕಂಫರ್ಟ್ ಇದೆ.ಶನಿವಾರ ಸಂಜೆ ಒಂದು ಹಂತದಲ್ಲಿ ಹಣಕಾಸು ಇಲಾಖೆ ಬಗ್ಗೆ ಕಾಂಗ್ರೆಸ್ ಜೆ ಡಿ ಎಸ್ ನಡುವೆ ಒಮ್ಮತ ಮೂಡದೇ ಇದ್ದಾಗ ಮಾತುಕತೆ ಮುಗಿದೇ ಹೊಯ್ತೇನು ಎನ್ನುವ ಸ್ಥಿತಿಯಲ್ಲಿದ್ದಾಗ ಸೋಮವಾರ ಬೆಳಿಗ್ಗೆ ಗುಲಾಂ ನಬಿ ಅಜಾದ್ ಜೊತೆ ಕುಮಾರಸ್ವಾಮಿ ಮಾತುಕತೆ ನಡೆದ ನಂತರ ಮತ್ತೆ ಇಬ್ಬರ ನಡುವೆ ಮಾತುಕತೆ ಮುಂದುವರೆದಿದ್ದು ಜೆಡಿಎಸ್ ತನ್ನ ಷರತ್ತು ಗಳನ್ನು ನೇರವಾಗಿ ಮುಂದಿಟ್ಟಿದೆ.
May 29, 2018, 1:25 PM IST
ಮಮತಾ, ಚಂದ್ರಶೇಖರ್, ಮಾಯಾವತಿ 15 ರ ಫಲಿತಾಂಶ ದಿನದ ಮುಂಚೆಯೇ 14 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರು ದೇವೇಗೌಡರಿಗೆ ಫೋನ್ ಮಾಡಿ ಅತಂತ್ರ ವಿಧಾನಸಭೆ ಬಂದರೆ ಕಾಂಗ್ರೆಸ್ ಜೊತೆ ಹೋಗಿ. ಈ ಬಗ್ಗೆ ಕುಮಾರಸ್ವಾಮಿಗೆ ಮೊದಲೇ ತಿಳಿಸಿ ಹೇಳಿ ಎಂದು ಹೇಳಿದ್ದರಂತೆ.
May 22, 2018, 6:00 PM IST
2009 ರಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಮುನ್ನಾ ದಿನ ರಾತ್ರಿ 10 ಜನಪಥ್ನ ಎದುರು ಸಹಜವಾಗಿ ಪತ್ರಕರ್ತರು ಕ್ಯಾಮೆರಾ ಹಿಡಿದುಕೊಂಡು ಕಾಯುತ್ತಿದ್ದಾಗ ಒಂದು ಕಾರು ಬಂತು. ಅದರಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬರು ಕ್ಯಾಮೆರಾ ಕಂಡೊಡನೆ ರುಮಾಲು ಹಾಕಿಕೊಂಡರು.
May 22, 2018, 5:48 PM IST
ಬಿಜೆಪಿಗೆ 104 ಸ್ಥಾನಗಳು ಬಂದು ಯಡಿಯೂರಪ್ಪ ಸರ್ಕಾರ ರಚನೆಗೆ ಮುಂದಾದಾಗ ಆರ್ಎಸ್ಎಸ್ ಮಾತ್ರ ಯಾವುದೇ ಕಾರಣಕ್ಕೂ ಬೇಡ, ಕುದುರೆ ವ್ಯಾಪಾರದ ಕಳಂಕ ದೇಶದ ತುಂಬೆಲ್ಲ ಚರ್ಚೆ ಆಗುತ್ತದೆ ಎಂದು ಅಮಿತ್ ಶಾಗೆ ಹೇಳಿತಂತೆ.
May 22, 2018, 5:16 PM IST
ಚುನಾವಣೆಯಲ್ಲಿ ಯಾವುದೇ ಮಂತ್ರಿ ತನು-ಮನ-ಧನ ಸಹಾಯ ಮಾಡಲಿಲ್ಲ, ಹೀಗಾಗಿ ಸೋತೆವು ಎಂದು ಸಿದ್ದರಾಮಯ್ಯ ದಿಲ್ಲಿ ನಾಯಕರ ಎದುರು ಹೇಳಿಕೊಂಡಿದ್ದಾರಂತೆ. ಎಂ.ಬಿ. ಪಾಟೀಲ್ ಹಾಗೂ ದೇಶಪಾಂಡೆ ಹೊರತುಪಡಿಸಿ ಹೆಚ್ಚಿನ ಮಂತ್ರಿಗಳು ತಮ್ಮ ಜಿಲ್ಲೆಗಳಲ್ಲಿಯೇ ಮುತುವರ್ಜಿಯಿಂದ ಓಡಾಡಲಿಲ್ಲ ಎಂದೂ ಹೇಳಿದ್ದಾರೆ ಎನ್ನಲಾಗಿದೆ.
May 22, 2018, 4:44 PM IST
ಕರ್ನಾಟಕದಲ್ಲಿ ಕಾಂಗ್ರೆಸ್ ಸೀಟುಗಳು ಕಡಿಮೆ ಆಗಲು ಸಿದ್ದರಾಮಯ್ಯ ವಿರುದ್ಧದ ಜನರ ಸಿಟ್ಟು ಮುಖ್ಯ ಕಾರಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ವರದಿ ನೀಡಿದ್ದಾರಂತೆ. ಆದರೆ, ಚುನಾವಣೆ ಘೋಷಣೆ ಆಗುವವರೆಗೆ ಸಿದ್ದು ವಿರುದ್ಧದ ಸಿಟ್ಟು ಇದೆ ಎಂಬುದೇ ಗೊತ್ತಾಗಲಿಲ್ಲ.
May 22, 2018, 4:21 PM IST
ಬಾದಾಮಿ ವಿಷಯ ಪ್ರಸ್ತಾಪ ಆದಾಗ ಅಮಿತ್ ಶಾ ಮಾತ್ರ ಸಿದ್ದರಾಮಯ್ಯ ಬಾದಾಮಿಗೆ ಹೋಗಿಯೇ ಹೋಗುತ್ತಾರೆ ಎಂದು ಹೇಳಿದರಂತೆ. ಕೊನೆಗೆ ಬಾದಾಮಿ ಬಗ್ಗೆ ಚರ್ಚೆ ಆದಾಗ ಸಿದ್ದು ನಿಂತರೆ ಎದುರು ಲಿಂಗಾಯತ ಅಭ್ಯರ್ಥಿ ಹಾಕೋದು ಬೇಡ. ಹಿಂದುಳಿದ ಸಮುದಾಯದಿಂದಲೇ ಅಭ್ಯರ್ಥಿ ಹಾಕಬೇಕು ಎಂದು ಆವತ್ತೇ ನಿರ್ಧಾರ ಆಗಿತ್ತಂತೆ.
Apr 24, 2018, 5:11 PM IST
Apr 24, 2018, 4:58 PM IST
ಟಿಕೆಟ್ ಪಡೆದಿದ್ದ ಸಿದ್ದರಾಮಯ್ಯ ಮೈಸೂರಿಗೆ ಹೋಗಿ ಕುಳಿತು ಫೋನಾಯಿಸಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ಗೆ. ಬಿಜೆಪಿ, ಜೆಡಿಎಸ್ ಒಳ ಒಪ್ಪಂದದ ಪರಿಣಾಮವಾಗಿ, ಚಾಮುಂಡೇಶ್ವರಿಯನ್ನೇ ಗೆಲ್ಲಲು ನಾನು ಪ್ರಯತ್ನಿಸುತ್ತಾ ಕುಳಿತರೆ ಪೂರ್ತಿ ರಾಜ್ಯ ಸುತ್ತುವುದಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದರಂತೆ.
Apr 24, 2018, 2:19 PM IST
ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್ ಶಾ ಹೇಳಿದ ಕೆಲ ದಿನಗಳಲ್ಲಿಯೇ ರಾಮುಲು ನಾಮಪತ್ರ ಸಲ್ಲಿಸುವಾಗ ಯಡಿಯೂರಪ್ಪ ಮತ್ತು ರೆಡ್ಡಿ ಜೊತೆಜೊತೆಗೆ ವೇದಿಕೆ ಹತ್ತಿದ್ದು ಅಮಿತ್ ಶಾ ಟೀಮ್ಗೆ ತುಸು ಕಸಿವಿಸಿ ಉಂಟು ಮಾಡಿದ್ದು ನಿಜವಂತೆ. ಆದರೆ, ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಏನೋ ಸ್ಥಳೀಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಸಿ ತುಪ್ಪವನ್ನು ನುಂಗಿಕೊಂಡರಂತೆ.
Apr 24, 2018, 1:59 PM IST
ಒಂದು ತಿಂಗಳ ಹಿಂದೆ ವಿಜಯೇಂದ್ರ ಮೈಸೂರು ಸುತ್ತಮುತ್ತ ಓಡಾಡಲು ಆರಂಭಿಸಿದಾಗ ಪಿಯೂಷ್ ಗೋಯಲ್ ಯಡಿಯೂರಪ್ಪನವರಿಗೆ, ‘ಬಿಜೆಪಿಯಲ್ಲಿ ತಂದೆ ಮತ್ತು ಪುತ್ರನಿಗೆ ಟಿಕೆಟ್ ಕೊಡುವುದು ಕಷ್ಟ. ಮೋದಿ ಮತ್ತು ಶಾ ಇಬ್ಬರಿಗೂ ಇದು ಇಷ್ಟವಿಲ್ಲ’ ಎಂದು ಸೂಚ್ಯವಾಗಿ ಹೇಳಿದ್ದರಂತೆ. ಅಷ್ಟೇ ಅಲ್ಲ ದೆಹಲಿಗೆ ಪಟ್ಟಿ ಅಂತಿಮಗೊಳಿಸಲು ಯಡಿಯೂರಪ್ಪ ಬಂದಾಗಲೂ ಸ್ವತಃ ಅಮಿತ್ ಶಾ, ‘ಯಡಿಯೂರಪ್ಪನವರೇ, ಯಾವುದೇ ರಾಜ್ಯದಲ್ಲಿ ಅಪ್ಪ-ಮಕ್ಕಳಿಗೆ ಟಿಕೆಟ್ ಕೊಟ್ಟಿಲ್ಲ. ಮೋದಿ ಸಾಹೇಬರು ಒಪ್ಪೋದಿಲ್ಲ. ನೀವು ಬೇರೆ ಹೆಸರು ಸೂಚಿಸುವುದು ಒಳಿತು ಎಂದು ಹೇಳಿದ್ದರಂತೆ.
Apr 24, 2018, 1:04 PM IST
Apr 3, 2018, 5:26 PM IST
Apr 3, 2018, 3:56 PM IST
Mar 27, 2018, 3:51 PM IST
Mar 27, 2018, 1:30 PM IST