ವಾಂಡರರ್ಸ್ ಮೈದಾನದಲ್ಲಿ 85 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಉತ್ತಮ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್ಗೆ ಈ ಜೋಡಿ ಸ್ಪೋಟಕ ಜತೆಯಾಟವಾಡುವ ಮೂಲಕ ಗಮನ ಸೆಳೆಯಿತು. ಈ ಜೋಡಿ ಮೂರನೇ ವಿಕೆಟ್ಗೆ 144 ಎಸೆತಗಳನ್ನು ಎದುರಿಸಿ 111 ರನ್ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಯಿತು.
Cricket Jan 5, 2022, 3:46 PM IST
Cricket Jan 4, 2022, 9:30 PM IST
ವಾಂಡರರ್ಸ್ ಮೈದಾನದಲ್ಲಿ ಮೊದಲ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಾಟವನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಆರಂಭಿಸಿತು. ಎರಡನೇ ವಿಕೆಟ್ಗೆ ಡೀನ್ ಎಲ್ಗಾರ್ ಹಾಗೂ ಕೀಗನ್ ಪೀಟರ್ಸನ್ ಜೋಡಿ 211 ಎಸೆತಗಳನ್ನು ಎದುರಿಸಿ 74 ರನ್ಗಳ ಜತೆಯಾಟ ನಿಭಾಯಿಸಿತು.
Cricket Jan 4, 2022, 4:05 PM IST
ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ದಾಳಿ ಎದುರು ಭಾರತ 63.1 ಓವರಲ್ಲಿ ಆಲೌಟ್ ಆಯಿತು. ಬಳಿಕ 18 ಓವರ್ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, ಭಾರತದ ತ್ರಿವಳಿ ವೇಗಿಗಳ ಮಾರಕ ದಾಳಿಯ ಎದುರು ಎದೆಯೊಡ್ಡಿ ನಿಂತು, ಕೇವಲ 1 ವಿಕೆಟ್ ಕಳೆದುಕೊಂಡಿತು. ಸತತ 3ನೇ ಇನ್ನಿಂಗ್ಸ್ನಲ್ಲಿ ಏಡನ್ ಮಾರ್ಕ್ರಮ್(07) ಮೊಹಮದ್ ಶಮಿಗೆ ಔಟಾದರು. ನಾಯಕ ಡೀನ್ ಎಲ್ಗರ್ ಹಾಗೂ ಕೀಗನ್ ಪೀಟರ್ಸನ್ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Cricket Jan 4, 2022, 7:50 AM IST
ಎರಡನೇ ಟೆಸ್ಟ್ ಪಂದ್ಯವು ಭಾರತದ ಪಾಲಿಗೆ ಸಾಕಷ್ಟು ಮಹತ್ವದ್ದಾಗಿದೆ. ಎರಡನೇ ಟೆಸ್ಟ್ ಪಂದ್ಯದಿಂದ ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ತಂಡದಿಂದ ಹೊರಬಿದ್ದಿದ್ದು, ಇದೇ ಮೊದಲ ಬಾರಿಗೆ ಕೆ.ಎಲ್. ರಾಹುಲ್ ಭಾರತ ಟೆಸ್ಟ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿದ್ದರಿಂದ ಹನುಮ ವಿಹಾರಿ ತಂಡ ಕೂಡಿಕೊಂಡಿದ್ದಾರೆ.
Cricket Jan 3, 2022, 1:14 PM IST
ವಾಂಡರರ್ಸ್ ಕ್ರೀಡಾಂಗಣ ಭಾರತದ ಭದ್ರಕೋಟೆ ಎನಿಸಿಕೊಂಡಿದ್ದು, ಇದುವರೆಗೂ ಈ ಅಂಗಳದಲ್ಲಿ ಸೋಲ ಅನುಭವಿಸಿಯೇ ಇಲ್ಲ. ವಾಂಡರರ್ಸ್ನಲ್ಲಿ 1992ರಿಂದ 2018ರ ವರೆಗೂ ಭಾರತ 5 ಟೆಸ್ಟ್ ಆಡಿದ್ದು, 3 ಡ್ರಾ, 2 ಗೆಲುವು ಕಂಡಿದೆ. 2006ರಲ್ಲಿ ನಡೆದಿದ್ದ ಟೆಸ್ಟ್ನಲ್ಲಿ 123 ರನ್ಗಳಿಂದ ಗೆದ್ದಿದ್ದ ಭಾರತ, 2018ರಲ್ಲಿ ನಡೆದಿದ್ದ ಪಂದ್ಯವನ್ನು 63 ರನ್ಗಳಿಂದ ಗೆದ್ದುಕೊಂಡಿತ್ತು.
Cricket Jan 3, 2022, 8:10 AM IST
ಭಾರತ ವಿರುದ್ಧ ಸರಣಿಗೆ 17 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ
ಟೆಂಬಾ ಬವುಮಾ ತಂಡಕ್ಕೆ ನಾಯಕ, ಕೇಶವ್ ಮಹಾರಾಜ್ ಉಪನಾಯಕ
ಮಾರ್ಕೋ ಜಾನ್ಸೆನ್ ಏಕದಿನ ತಂಡದ ಹೊಸಮುಖ
Cricket Jan 2, 2022, 11:35 PM IST
ನಾಳೆಯಿಂದ ದಕ್ಷಿಣ ಆಫ್ರಿಕಾ-ಭಾರತ 2ನೇ ಟೆಸ್ಟ್
ವಾಂಡರರ್ಸ್ ನಲ್ಲಿ ಐತಿಹಾಸಿಕ ದಾಖಲೆಗೆ ಸಿದ್ಧವಾಗಿದೆ ಟೀಮ್ ಇಂಡಿಯಾ
ಜೊಹಾನ್ಸ್ ಬರ್ಗ್ ನಲ್ಲಿ ಭಾರತ ಟೆಸ್ಟ್ ಪಂದ್ಯ ಸೋತ ದಾಖಲೆ ಇಲ್ಲ
Cricket Jan 2, 2022, 9:48 PM IST
ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಹಾಗೂ ಟೀಂ ಇಂಡಿಯಾ ಸಹ ಆಟಗಾರರ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಕೂ ಆ್ಯಪ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಹೊಸ ವರ್ಷ ನಮ್ಮೆಲ್ಲರಿಗೂ ಖುಷಿ-ಸಂತೋಷವನ್ನು ತಂದುಕೊಡಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ನನ್ನ ಪ್ರೀತಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
Cricket Jan 1, 2022, 4:23 PM IST
ಸೆಂಚೂರಿಯನ್ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಾಡಲಿದ್ದು, ಸೆಂಚೂರಿಯನ್ನ ಸೂಪರ್ ಸ್ಪೋರ್ಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು 113 ರನ್ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2021-22ನೇ ಸಾಲಿನ ಫ್ರೀಡಂ ಟ್ರೋಫಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
Cricket Jan 1, 2022, 9:46 AM IST
3 ಪಂದ್ಯಗಳ ಸರಣಿಗೆ 18 ಸದಸ್ಯರ ತಂಡ ಪ್ರಕಟಿಸಿದ ಆಯ್ಕೆ ಸಮಿತಿ
ಗಾಯಾಳು ರೋಹಿತ್ ಶರ್ಮ ಔಟ್, ದಕ್ಷಿಣ ಆಫ್ರಿಕಾದಲ್ಲಿ ತಂಡ ಮುನ್ನಡೆಸಲಿರುವ ಕೆಎಲ್ ರಾಹುಲ್
ಏಕದಿನ ಸರಣಿಗೆ ಜಸ್ ಪ್ರೀತ್ ಬುಮ್ರಾ ಉಪನಾಯಕ
Cricket Dec 31, 2021, 10:49 PM IST
ಇಲ್ಲಿನ ಸೂಪರ್ ಸ್ಪೋರ್ಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಹರಿಣಗಳ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ 113 ರನ್ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸೆಂಚೂರಿಯನ್ನಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಏಷ್ಯಾದ ಮೊದಲ ತಂಡ ಎನ್ನುವ ದಾಖಲೆ ಟೀಂ ಇಂಡಿಯಾ ಪಾಲಾಗಿದೆ.
Cricket Dec 31, 2021, 12:34 PM IST
ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ಟೀಂ ಇಂಡಿಯಾ (Team India) 113 ರನ್ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ 1-0 ಮುನ್ನಡೆ ಸಾಧಿಸಿದೆ. ಇದರ ಜತೆಗೆ ಸೆಂಚೂರಿಯನ್ನಲ್ಲಿ (Centurion) ಟೆಸ್ಟ್ ಗೆದ್ದ ಏಷ್ಯಾದ ಮೊದಲ ತಂಡ ಎನ್ನುವ ಕೀರ್ತಿಗೂ ಭಾರತ ಪಾತ್ರವಾಗಿದೆ. ಸೆಂಚೂರಿಯನ್ನಲ್ಲಿ ಇನ್ನೂ ಹಲವು ದಾಖಲೆಗಳು ಟೀಂ ಇಂಡಿಯಾ ಪಾಲಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Dec 31, 2021, 9:44 AM IST
ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ (Quinton de Kock) ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್ಗೆ ವಿದಾಯ (Retirement) ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕುಟುಂಬದೊಟ್ಟಿಗೆ ಹೆಚ್ಚು ಸಮಯಾವಕಾಶ ಕಳೆಯುವ ಉದ್ದೇಶದಿಂದ ಡಿ ಕಾಕ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Dec 31, 2021, 8:26 AM IST
ಭಾರತದಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಕೆಲವೇ ದಿನಗಳಲ್ಲಿ ಭಾರತದಲ್ಲಿ 3ನೇ ಅಲೆ ವಕ್ಕರಿಸಲಿದೆ ಎಂದು ಕೇಂಬ್ರಿಜ್ ತಜ್ಞ ಭವಿಷ್ಯ ನುಡಿದಿದ್ದಾರೆ. ಆದರೆ ಜನರು ಲಸಿಕೆ ಹಾಕಲು ಹಿಂದೇಟು ಹಾಕುತ್ತಿದ್ದು ಮರವೇರಿ ಕುಳಿತುಕೊಂಡ ಘಟನೆ ನಡೆದಿದೆ. ಅಭಿಮಾನಿಗಳಿಗೆ ರಚಿತಾ ವಿಶೇಷ ಸಂದೇಶ ರವಾನಿಸಿದ್ದಾರೆ. ಉದ್ಯಮಿ ರತನ್ ಟಾಟಾ ಸರಳ ಹುಟ್ಟು ಹಬ್ಪ ಆಚರಣೆ, ಭಾರತ ಸೌತ್ ಆಫ್ರಿಕಾ ಟೆಸ್ಟ್ ಸೇರಿದಂತೆ ಡಿಸೆಂಬರ್ 31ರ ಟಾಪ್ 10 ಸುದ್ದಿ!
India Dec 30, 2021, 4:51 PM IST