Asianet Suvarna News Asianet Suvarna News

ರೇಣುಕಾಸ್ವಾಮಿದು ಘೋರ ಅಪರಾಧ, ಅವ್ನಿಗೆ ಶಿಕ್ಷೆ ಕೊಡೋಕ್ ಹೋಗಿ ಇವ್ರಿಗೆ ಆಗಬಾರದ್ದು ಆಯ್ತು: ಅಗ್ನಿ ಶ್ರೀಧರ್

ಅವ್ನು ಕಂತ್ರಿನೇ, ಕಜ್ಜಿ ನಾಯಿ. ಅವ್ನು ತನ್ನ ತಂದೆ-ತಾಯಿ ಮುಖ ನೋಡ್ಬೇಕಾಗಿತ್ತು, ಗರ್ಭಿಣಿ ಪತ್ನಿ ಮುಖ ನೋಡ್ಬೇಕಾಗಿತ್ತು. ಈಗ ಬಹಳಷ್ಸಾಟು ಕಡೆಯಿಂದ ಮಾಹಿತಿ ಬರ್ತಿದೆ, ಆ ರೇಣುಕಾಸ್ವಾಮಿ ಇನ್ನೂ ಹಲವರಿಗೆ ಈ ತರ ಮೆಸೇಜ್ ಕಳಿಸಿದ್ದ ಅಂತ..

senior writer agni shridhar talks about renukaswamy murder and actor darshan arrest case srb
Author
First Published Jun 29, 2024, 11:08 PM IST

ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸದ್ಯಕ್ಕೆ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಯಾಗಿದ್ದಾರೆ. ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ರೇಣುಕಾಸ್ವಾಮಿ ಮಾಡಿರೋದು ಅಕ್ಷಮ್ಯ ಅಪರಾಧ. ತನಗೆ ಪರಿಚಯನೇ ಇಲ್ಲದೇ ಇರುವ, ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ಹೆಣ್ಣುಮಗಳೊಬ್ಬಳಿಗೆ ಮೆಸೇಜ್ ಕಳುಹಿಸುವ ಖಯಾಲಿ ಬೆಳೆಸ್ಕೊಂಡಿದ್ದ ಆ ಹುಡುಗ. ಆ ಹೆಣ್ಣುಮಗಳು ಬ್ಲಾಕ್ ಮಾಡಿದ್ಮೇಲೆ ಕೂಡ ಬಿಡದೇ ಬೇರೆ ಬೇರೆ ದಾರಿಯಲ್ಲಿ ಆಕೆಗೆ ಅಶ್ಲೀಲ ಮೆಸೇಜ್ ಮಾಡಿದ್ದ. ಅವನ ಪೋಷಕರನ್ನು ನೋಡಿದರೆ ಒಳ್ಳೆಯ ಸಂಸ್ಕಾರವಂತರ ತರ, ಶರಣರ ಥರ ಕಾಣ್ತಾರೆ ಪಾಪ. ಆದ್ರೆ ಅವ್ರಿಗೆ ತಮ್ಮ ಮಗ ಈ ರೀತಿ ಮಾಡ್ತಾ ಇರೋದು ಗೊತ್ತೇ ಇರ್ಲಿಲ್ಲ. 

ಮಡಿಕೇರಿಗೆ ಶಿಫ್ಟ್ ಆದ್ರಾ ವಿಜಯಲಕ್ಷ್ಮಿ, ಮಗ ವಿನೀಶ್‌ ಜೊತೆ ಬೆಂಗಳೂರು ತೊರೆದ್ರಾ ದರ್ಶನ್ ಪತ್ನಿ!

ಮತ್ತೆ ಮತ್ತೆ ರೇಣುಕಾಸ್ವಾಮಿಯಿಂದ ಮೆಸೇಜ್ ಬಂದಾಗ ಆ ಹೆಣ್ಣುಮಗಳು ಅವರ ಮನೆ ಕೆಲಸದವನಿಗೆ 'ಚಿತ್ರದುರ್ಗದಲ್ಲಿ ಯಾರಿಗಾದ್ರೂ ಹೇಳಿ ಅವ್ನಿಗೆ ಮೆಸೇಜ್ ಮಾಡ್ಬೇಡ ಅಂತ ಹೇಳೋದಕ್ಕೆ ಹೇಳು' ಅಂತ ಹೇಳ್ತಾಳೆ. ಆದ್ರೆ ಆತ, ಸೀದಾ ದರ್ಶನ್‌ಗೇ ಹೇಳಿಬಿಡ್ತಾನೆ. ಅಲ್ಲಿ ಕಂಡ ಅಶ್ಲೀಲ ಫೋಟೋ, ಮೆಸೇಜ್, ವೀಡಿಯೋಸ್‌ನೆಲ್ಲಾ ನೋಡಿ ನಟ ದರ್ಶನ್‌ಗೆ ತಲೆ ಕೆಟ್ಟಿದೆ. ಕರೆಸ್ಕೊಂಡಿದಾನೆ, ಕ್ಷಮೆ ಕೇಳಿಸೋಕೆ, ತಾನೂ ಎರಡು ಕಪಾಳಕ್ಕೆ ಭಾರಿಸೋಕೆ. 

ಏನೋ ಉಪೇಂದ್ರ, ಬುದ್ದಿವಂತ ನೀನು, ಏನ್ ಮಾತಿದು; ಸಖತ್ ಕ್ಲಾಸ್ ತಗೊಂಡ್ರಾ ಅಗ್ನಿ ಶ್ರೀಧರ್!

ಆದ್ರೆ ಇವರ್ಯಾರೂ ಕೊಲೆ, ಹೆದರಿಸೋದ್ರಲ್ಲಿ ಪಳಗಿದವರಲ್ಲ, ಗೊತ್ತಿಲ್ಲದೇ ಮಿತಿ ಮೀರಿ ಹೊಡೆದಿದ್ದಾರೆ. ಆಯಕಟ್ಟಿನ ಜಾಗಕ್ಕೆ ಹೊಡೆತ ಬಿದ್ದಿದೆ. ಮಿತಿ ಮೀರಿದ ಏಟ್‌ ತಿಂದು ಆತ ಪ್ರಾಣ ಬಿಟ್ಟಿದಾನೆ. ಇದು ನಟ ದರ್ಶನ್ ಲೈಫ್‌ನಲ್ಲಿ ಆಗಬಾರದಿತ್ತು. ಆದರೆ, ಆ ರೇಣುಕಾಸ್ವಾಮಿನ ಏಕ್‌ದಂ ಹುತಾತ್ಮ ಮಾಡ್ಬಿಟ್ರು. ಅವ್ನು ಹುತಾತ್ಮ ಅಲ್ಲ, ಕಂತ್ರಿ ಅವ್ನು.

ಅಂತರ ಕಾಯ್ದುಕೊಂಡಿದ್ದ ದರ್ಶನ್ ಆಪ್ತರು ಈಗ ಜೈಲಿನ ಕಡೆ ಮುಖ ಮಾಡುತ್ತಿದ್ದಾರೆ, ಯಾಕೆ?

ಅವ್ನು ಕಂತ್ರಿನೇ, ಕಜ್ಜಿ ನಾಯಿ. ಅವ್ನು ತನ್ನ ತಂದೆ-ತಾಯಿ ಮುಖ ನೋಡ್ಬೇಕಾಗಿತ್ತು, ಗರ್ಭಿಣಿ ಪತ್ನಿ ಮುಖ ನೋಡ್ಬೇಕಾಗಿತ್ತು. ಈಗ ಸಾಕಷ್ಟು ಕಡೆಯಿಂದ ಮಾಹಿತಿ ಬರ್ತಿದೆ, ಆ ರೇಣುಕಾಸ್ವಾಮಿ ಇನ್ನೂ ಬಹಳಷ್ಟು ಜನರಿಗೆ ಈ ತರ ಮೆಸೇಜ್ ಕಳಿಸಿದ್ದ ಅಂತ. ಈ ವೀರಶೈವ ಸಮಾಜ ಇವ್ರೆಲ್ಲಾ ಮಾತಾಡ್ತಾ ಇದಾರೆ. ಆದ್ರೆ ಅವ್ರು ಮೊದ್ಲು ಅವ್ನು ಮಾಡಿದ್ದನ್ನು ಖಂಡಿಸಿ ಆಮೇಲೆ ದರ್ಶನ್‌ನ ಖಂಡಿಸಬೇಕಾಗಿತ್ತು. ಆಕ್ಷನ್‌ ಶುರುವಾಗಿದ್ದು ಅವ್ನಿಂದಾನೇ, ಅವ್ನನನ್ನ ಯಾಕೆ ಹುತಾತ್ಮ ಮಾಡ್ತೀರಿ? 

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ಆದ್ರೆ, ಅವ್ನು ಮಾಡಿದ್ದು ಅಕ್ಷಮ್ಯ ಅಪರಾಧ ಆಗಿದ್ರೂ ಅದಕ್ಕೆ ಇವ್ರು ಹೀಗೆ ಮಾಡ್ಬೇಕಿತ್ತಾ ಅಂದ್ರೆ, ಇವ್ರಿಗೆ ಪರಿಸ್ಥಿತಿನ ನಿಯಂತ್ರಿಸೋಕೆ ಆಗ್ಲಿಲ್ಲ. ಆ ಪರಿಸ್ಥಿತಿಯಲ್ಲಿ ಏನ್ ಮಾಡ್ಬೇಕು ಅಂತ ಗೊತ್ತಾಗಿಲ್ಲ, ತಮ್ಮನ್ನ ತಾವು ನಿಯಂತ್ರಣ ಮಾಡ್ಕೊಳ್ಳಲಿಲ್ಲ. ದರ್ಶನ್ ಹಾಗೂ ಅವ್ನ ಸಹಚರರು ಅವ್ರನ್ನ ಅವ್ರು ನಿಯಂತ್ರಣ ಮಾಡ್ಕೋಬೇಕಿತ್ತು. ಅವ್ನಿಗೆ ಶಿಕ್ಷೆ ಕೋಡೋಕೆ ಹೋಗಿ ಇವ್ರಿಗೆ ಆಗಬಾರದ್ದು ಆಯ್ತು' ಎಂದಿದ್ದಾರೆ ಅಗ್ನಿ ಶ್ರೀಧರ್. 

ಕೊಲೆಗಿಂತ ಮೊದ್ಲೇ ಮಹಾ ಅಪರಾಧ ಮಾಡಿ ಮುಗಿಸಿತ್ತಾ ದರ್ಶನ್ & ಗ್ಯಾಂಗ್? ಅಗ್ನಿ ಶ್ರೀಧರ್ ಹೇಳಿದ್ದೇನು?

'ನಟ ದರ್ಶನ್‌ ಸಹವಾಸ ದೋಷ ಹಾಗೂ ಕುಡಿತ ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ' ಎಂದು ಕೂಡ ಅಗ್ನಿ ಶ್ರೀಧರ್ ಹೇಳಿದ್ದಾರೆ. ಮುಂದುವರೆದ ಅವರು, 'ನನ್ನ ಅನಿಸಿಕೆ ಏನೆಂದರೆ, ಈ ವಿಷ್ಯದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಅಚಾತುರ್ಯದಿಂದ ಆಗಿದ್ದು ಎಂಬುದನ್ನು ನಾನು ಖಂಡಿತ ಹೇಳಬಯಸುತ್ತೇನೆ' ಎಂದಿದ್ದಾರೆ. ಜತೆಗೆ, 'ಜೈಲು ಸೇರಿರುವ ನಟ ದರ್ಶನ್ ಸ್ವಲ್ಪ ಕಾಲದಲ್ಲೇ ನಿರಪರಾಧಿ ಎನಿಸಿ ಹೊರಗೆ ಬರುತ್ತಾನೆ. ಆದರೆ, ಮುಂದೆ ಆತ ಹೊಸ ಮನುಷ್ಯನಾಗುವತ್ತ ಗಮನ ಹರಿಸಬೇಕು' ಎಂದಿದ್ದಾರೆ. 

ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್‌ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?

ಇದೀಗ ಅಚ್ಚರಿ ಬೆಳವಣಿಗೆ ಎಂಬಂತೆ ಪರಪ್ಪನ ಅಗ್ರಹಾರ ಜೈಲಿನ ಬಳಿ, ನಟ ದರ್ಶನ್ ಅವರನ್ನು ನೋಡಲು ಚಿತ್ರರಂಗದಿಂದ ನಿಧಾನವಾಗಿ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಚಿತ್ರೋದ್ಯಮದ ಗಣ್ಯರು, ನಟನಟಿಯರು, ಪ್ರಮುಖರು ನಿಧಾನವಾಗಿ ಮಾತನಾಡಲಾರಂಭಿಸಿದ್ದಾರೆ. ಕೊಲೆ ಪ್ರಕರಣ ಆಗಿರುವ ಹಿನ್ನೆಲೆ ಕೆಲವು ದಿನಗಳಿಂದ ಅಂತರ ಕಾಯ್ದುಕೊಂಡಿದ್ದ ಆಪ್ತರು, ಈಗ ಬರುತ್ತಿರುವುದು ಹೊಸ ಬೆಳವಣಿಗೆ ಎನ್ನಲೇಬೇಕು, ಮುಂದೆ ನಟ ದರ್ಶನ್ ಅವರನ್ನು ಯಾರೆಲ್ಲ ಭೇಟಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಷ್ಟೇ!

ಜೈಲಿಂದ ವಾಪಸ್ ಆದ್ಮೇಲೆ ಮತ್ತೆಂದೂ 'ಅದನ್ನು' ಮಾಡ್ಬೇಡ; ನಟ ದರ್ಶನ್‌ಗೆ ಅಗ್ನಿ ಶ್ರೀಧರ್ ಸಲಹೆ!

Latest Videos
Follow Us:
Download App:
  • android
  • ios