ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನಕ್ಕೆ ತಾವು ಕಾರಣ ಎಂಬ ಗಾಸಿಪ್‌ಗಳಿಂದ ನಟಿ ಸಂಜನಾ ಆನಂದ್​ ಬೇಸತ್ತು, ಸ್ಪಷ್ಟನೆ ನೀಡಿದ್ದಾರೆ. ಎಐ ನಿರ್ಮಿತ ನಕಲಿ ಮದುವೆ ಆಮಂತ್ರಣಗಳು ಹರಿದಾಡಿದ್ದರಿಂದ ತೀವ್ರ ತೊಂದರೆಯಾಯಿತೆಂದೂ, ಮದುವೆಯ ಬಗ್ಗೆ ನಂಬಿಕೆ ಕಳೆದುಹೋಗಿದೆಯೆಂದೂ ಅವರು ಹೇಳಿದ್ದಾರೆ. ಸದ್ಯಕ್ಕೆ ಸಿನಿಮಾ, ವೃತ್ತಿಜೀವನದ ಮೇಲೆ ಮಾತ್ರ ಗಮನ ಎಂದಿದ್ದಾರೆ.

ಕಳೆದ ವರ್ಷ ಸ್ಯಾಂಡಲ್​ವುಡ್​​ಗೆ ಬರಸಿಡಿಲಿನಂತೆ ಬಡಿದ ಸುದ್ದಿಗಳಲ್ಲಿ ಒಂದು ಗಾಯಕ ಚಂದನ್​ ಶೆಟ್ಟಿ ಮತ್ತು ಬಿಗ್​ಬಾಸ್​ ಖ್ಯಾತಿಯ ನಟಿ ನಿವೇದಿತಾ ಗೌಡ ಅವರ ಡಿವೋರ್ಸ್​ ವಿಷಯ. ಸದ್ದಿಲ್ಲದೇ, ಯಾವುದೇ ಗಲಾಟೆ ಮಾಡಿಕೊಳ್ಳದೇ ಕೋರ್ಟ್​ಗೆ ಹೋಗಿ ಈ ದಂಪತಿ ಡಿವೋರ್ಸ್​ ಪಡೆದು ಬಂದಿದ್ದು ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಈ ಸುದ್ದಿ ನಿಜವೋ, ಸುಳ್ಳೋ ಎಂದು ತಡಕಾಡುವಷ್ಟರಲ್ಲಿಯೇ ಇವರು ಡಿವೋರ್ಸ್​ ಪಡೆದಾಗಿತ್ತು. ವಿಚ್ಛೇದನ ಪಡೆದ ರೀತಿ ಮಾದರಿ ಎನ್ನಿಸಿದ್ದರೂ, ದಾಂಪತ್ಯ ಜೀವನವನ್ನು ಕೊನೆ ಮಾಡಿರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿಯೇ ಉಳಿಯಿತು. ಈ ಬಗ್ಗೆ ಜೋಡಿ ಕೂಡ ಸೈಲೆಂಟಾಗಿಯೇ ಇರುವ ಕಾರಣ, ಜನರ ಬಾಯಲ್ಲಿ ಇವರ ವಿಚ್ಛೇದನ ಸುದ್ದಿ ಆಹಾರವಾಗಿ ಹೋಯಿತು. ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆಗಳು ಶುರುವಾದವು.

ಆಗ ಚಂದನ್​ ಶೆಟ್ಟಿ ಜೊತೆ ಥಳಕು ಹಾಕಿಕೊಂಡಿದ್ದು ಸಲಗ ಚಿತ್ರದ ಖ್ಯಾತಿಯ ನಟಿ, ಸಂಜನಾ ಆನಂದ್​ ಅವರ ಹೆಸರು. ಈ ಡಿವೋರ್ಸ್​ಗೂ ಕಾರಣ ಸಂಜನಾ ಅವರೇ ಎನ್ನುವಷ್ಟರ ಮಟ್ಟಿಗೆ ಗಾಸಿಪ್​ ಹರಡಿತು. ಒಂದು ವಿಷಯ ಕಿಡಿ ಹೊತ್ತಿಕೊಂಡರೆ ಮುಗಿಯಿತಲ್ಲ, ಸುಳ್ಳೋ, ನಿಜನೋ ತಿಳಿಯದೇ ಒಂದಿಷ್ಟು ಸೋಷಿಯಲ್​ ಮೀಡಿಯಾಗಳ ಪುಟಗಳಲ್ಲಿ ಇದೇ ನಿಜ ಎನ್ನುವಂತೆ ಬಿಂಬಿಸಲಾಯಿತು. ಅದು ಎಷ್ಟರಮಟ್ಟಿಗೆ ಹೋಯಿತು ಎಂದರೆ, ಚಂದನ್​ ಶೆಟ್ಟಿ ಮತ್ತು ಸಂಜನಾ ಅವರ ಎಐ ಚಿತ್ರವನ್ನು ಸೃಷ್ಟಿಸಿ, ಇವರು ಮದುವೆಯಾಗಲಿದ್ದಾರೆ ಎನ್ನುವಂತೆ ಬಿಂಬಿಸಲಾಯಿತು. ಮಂಗಳೂರಿನಲ್ಲಿ ಮದುವೆ ಎಂಬಂತೆ ಆಮಂತ್ರಣ ಪತ್ರಿಕೆಯನ್ನೂ ಸೃಷ್ಟಿಸಿಬಿಟ್ಟರು. ಮದುವೆಯ ಮೆನು ಕೂಡ ಹಾಕಲಾಗಿತ್ತು! 

ಗುಡ್​ನ್ಯೂಸ್​ ಕೊಟ್ಟ ಚಂದನ್​ ಶೆಟ್ಟಿ-ಸುಷ್ಮಾಗೆ ಎದುರಾಯ್ತು ಸಂಕಷ್ಟ: ಕೇಸ್​ನ​ ಭಯದಲ್ಲಿದ್ರೂ ಭರ್ಜರಿ ಡಾನ್ಸ್​

ಇಂಥ ವಿಷಯಗಳು ಅದೆಷ್ಟು ಸೂಕ್ಷ್ಮವಾಗಿರುತ್ತದೆ ಎಂದು ಅರಿಯದ ಮನಸ್ಸುಗಳು ಹೀಗೆ ಮಾಡಿದಾಗ, ಅದು ಸಹಜವಾಗಿ ಹೆಣ್ಣುಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅದೂ ಸೆಲೆಬ್ರಿಟಿಗಳಾಗಿದ್ದರಂತೂ ಮುಗಿದೇ ಹೋಯ್ತು. ಅದೇ ರೀತಿಯ ನೋವು ಅನುಭವಿಸಿದವರು ನಟಿ ಸಂಜನಾ ಆನಂದ್​. ಇದೀಗ ಆ ವಿಷಯದ ಬಗ್ಗೆ ಖಾಸಗಿ ಯೂಟ್ಯೂಬ್​ ಚಾನೆಲ್​ ಒಂದರ ಜೊತೆ ಮಾತನಾಡುವಾಗ ಹೇಳಿದ್ದಾರೆ. ಚಂದನ್​ ಮತ್ತು ನಿವೇದಿತಾ ಡಿವೋರ್ಸ್​ಗೆ ನಾನೇ ಕಾರಣ ಅನ್ನುವಂತೆ ಬಿಂಬಿಸಿಬಿಟ್ಟರು. ಅದು ಎಷ್ಟು ದೊಡ್ಡದಾಯಿತು ಎಂದರೆ, ನನಗೆ ಗೊತ್ತಿಲ್ಲದೇ ಆ ಸುದ್ದಿ ಎಲ್ಲೆಲ್ಲೋ ಹೋಗಿಬಿಟ್ಟಿತು ಎಂದಿದ್ದಾರೆ ಸಂಜನಾ. ನನ್ನ ಸಂಬಂಧಿಕರೂ, ಸ್ನೇಹಿತರು ಕರೆ ಮಾಡಿ, ಏನೇ ಮದುವೆಯಂತೆ, ನಮಗೆ ಕರೆಯಲೇ ಇಲ್ಲಾ ಎಂದಾಗ ಶಾಕ್​ ಅಗಿದ್ದಂತೂ ನಿಜ ಎಂದಿದ್ದಾರೆ. 

ಆ ಸುದ್ದಿ ಅಲ್ಲಿಗೇ ಮುಗಿಯತ್ತೆ ಅಂದುಕೊಂಡಾಗ ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ ಮೂಲಕ ಮದುವೆ, ಆಮಂತ್ರಣ ಪತ್ರಿಕೆ, ಊಟದ ಮೆನು ಎಲ್ಲಾ ಮಾಡಿಬಿಟ್ಟಾಗ ಫೋನ್​ ಬರುವುದು ಹೆಚ್ಚಾಯಿತು. ಎಲ್ಲರಿಗೂ ಕ್ಲಾರಿಫಿಕೇಷನ್​ ಕೊಡಬೇಕಾಯಿತು ಎಂದಿದ್ದಾರೆ. ಯಾರಾದರೂ ಫೋನ್​ ಮಾಡಿದಾಗ ಟೆನ್ಷನ್​ ಆಗಿದ್ದು ನಿಜ. ಆದರೆ ಕೊನೆಕೊನೆಗೆ ಇದು ಮ್ಯಾಟರೇ ಆಗಲಿಲ್ಲ. ಈ ರೀತಿ ಮಾಡುವವರ ಮನಸ್ಥಿತಿಯನ್ನು ಅದು ತೋರಿಸುತ್ತದೆ ಎಂದು ಸುಮ್ಮನಾದೆ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಕ್ಲಾರಿಫಿಕೇಷ್​ ಕೊಡಲೇಬೇಕಿತ್ತು, ಕೊಟ್ಟೆ ಅಷ್ಟೇ. ಇದನ್ನೆಲ್ಲಾ ಸೀರಿಯಸ್​ ಆಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ. ಸದ್ಯ ಮದುವೆಯ ಬಗ್ಗೆ ಯೋಚಿಸಿಲ್ಲ. ಏನಿದ್ದರೂ ಸಿನಿಮಾ, ನನ್ನಕರಿಯರ್ ಮೇಲಷ್ಟೇ ಚಿಂತೆ. ನಿಜ ಹೇಳಬೇಕು ಎಂದರೆ ಮದುವೆಯೆನ್ನುವ ಕಾನ್ಸೆಪ್ಟ್​ ಮೇಲೆ ನಂಬಿಕೆ ಇಲ್ಲ. ನನ್ನ ಸ್ನೇಹಿತೆಯರನ್ನೆಲ್ಲಾ ನೋಡುತ್ತಿದ್ದೇನಲ್ಲ, ಯಾಕಾದ್ರೂ ಮದುವೆ ಆಗಿದ್ದಾರೋ ಎನ್ನಿಸತ್ತೆ. ಮುಂದೆ ಏನು ಅಂತ ನೋಡೋಣ, ಸದ್ಯ ಅದರ ಬಗ್ಗೆ ಯೋಚನೆ ಇಲ್ಲ ಎಂದಿದ್ದಾರೆ ಸಂಜನಾ.

ಮಂಚದಲ್ಲಿನ ನಿವೇದಿತಾ ಗೌಡ ಹಾಟ್​ ವಿಡಿಯೋ ವೈರಲ್​: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?