ಬಿಗ್ ಬಜೆಟ್ ಚಿತ್ರಕ್ಕೆ ಮಾತ್ರ ಜನ ಬರ್ತಾರೆ ಎನ್ನುವುದನ್ನು ಸುಳ್ಳಾಗಿಸಿದ ರಿಷಬ್; ಕಾಂತಾರ ನೋಡಿ RGV ಸರಣಿ ಟ್ವೀಟ್
ಕಾಂತಾರ ಸಿನಿಮಾ ಬಗ್ಗೆ ವಿವದಾತ್ಮಕ ನಿರ್ದೇಶಕ ಅಂತನೆ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ಕನ್ನಡದ ಕಾಂತಾರ ವೀಕ್ಷಿಸಿದ ರಾಮ್ ಗೋಪಾಲ್ ವರ್ಮಾ ಬಳಿಕ ಸರಣಿ ಟ್ವೀಟ್ ಮಾಡಿದ್ದಾರೆ.
ಎಲ್ಲಿ ನೋಡಿದ್ರೂ ಕಾಂತಾರ ಸಿನಿಮಾದೆ ಸುದ್ದು ಸುದ್ದಿ. ಈಗಾಗಲೇ 100 ಕೋಟಿ ಕ್ಲಬ್ ಸೇರಿರುವ ಕಾಂತಾರ ಹಿಂದಿಯಲ್ಲಿ ಅಬ್ಬರಿಸುತ್ತಿದೆ. ರಿಷಬ್ ಅಬ್ಬರಕ್ಕೆ ಬಾಲಿವುಡ್ ದಂಗಾಗಿದೆ. ಅಂದಹಾಗೆ ಎಲ್ಲಾ ಭಾಷೆಗಳಿಂದನೂ ಕಾಂತಾರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಇದೀಗ ಕಾಂತಾರ ಸಿನಿಮಾ ಬಗ್ಗೆ ವಿವದಾತ್ಮಕ ನಿರ್ದೇಶಕ ಅಂತನೆ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ಕನ್ನಡದ ಕಾಂತಾರ ವೀಕ್ಷಿಸಿದ ರಾಮ್ ಗೋಪಾಲ್ ವರ್ಮಾ ಬಳಿಕ ಸರಣಿ ಟ್ವೀಟ್ ಮಾಡಿದ್ದಾರೆ.
ಕೇವಲ ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಜನ ಬರ್ತಾರೆ ಎನ್ನುವುದನ್ನು ರಿಷಬ್ ಶೆಟ್ಟಿ ಅವರು ನಾಶಮಾಡಿದ್ದಾರೆ. ಮುಂದಿನ ದಶಕದ ವರೆಗೂ ಕಾಂತಾರ ಸಿನಿಮಾ ದೊಡ್ಡ ಪಾಠವಾಗಿದೆ ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ರಾಮ್ ಗೋಪಾಲ್ ವರ್ಮಾ, 'ಚಿತ್ರರಂಗದಲ್ಲಿ ಈಗ ರಿಷಬ್ ಶೆಟ್ಟಿ ಶಿವ. ಕಾಂತಾರ ಕಲೆಕ್ಷನ್ ನಿಂದ ವಿಲನ್ ಗಳಾದ 300, 400, 500 ಕೋಟಿ ಸಿನಿಮಾ ಮೇಕರ್ಸ್ಗೆ ಹೃದಯಾಘಾತವಾಗಿದೆ' ಎಂದು ಬರೆದುಕೊಂಡಿದ್ದಾರೆ.
'ರಿಷಬ್ ಶೆಟ್ಟಿಗೆ ಧನ್ಯವಾದಗಳು. ಶಿವ ಹೇಗೆ ದೈವದ ಗೂಳಿಗೆ ಎಚ್ಚೆತ್ತುಕೊಳ್ಳುತ್ತಿದ್ದನೋ ಹಾಗೆ ಈಗ ಕಾಂತಾರ ಕಲೆಕ್ಷನ್ನಿಂದ ಎಲ್ಲಾ ದೊಡ್ಡ ದೊಡ್ಡ ಬಜೆಟ್ ಚಿತ್ರದ ತಯಾರಕರು ಹಠಾತ್ತನೆ ರಾತ್ರಿಯಲ್ಲಿ ಎಚ್ಚರಗೊಳ್ಳುತ್ತಿದ್ದಾರೆ' ಎಂದು ಬಿಗ್ ಬಜೆಟ್ ಸಿನಿಮಾ ಮೇಕರ್ಸ್ಗೆ ಟಾಂಗ್ ನೀಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ರಿಷಬ್ ಶೆಟ್ಟಿ ಅವರ ಸಂದರ್ಶನ ಶೇರ್ ಮಾಡಿ, 'ಈ ಸಂದರ್ಶನ ನೋಡಲೇ ಬೇಕು. ಕಾಂತಾರ ಸಿನಿಮಾ ಮೂಡಿಬಂದಿದ್ದು ಸರಳತೆ ಮತ್ತು ಮುಗ್ದತೆಯಿಂದನೇ ಹೊರತು ಅತಿಯಾದ ಯೋಚನೆಯಿಂದ ಅಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ಸಾಬೀತು ಪಡಿಸಿದ್ದಾರೆ' ಎಂದು ಹೇಳಿದ್ದಾರೆ.
3 ಕೋಟಿಗೆ Kantara ತೆಲುಗು ವಿತರಣೆ ಹಕ್ಕು ಖರೀದಿಸಿದ ಅಲ್ಲು ಅರ್ಜುನ್ ತಂದೆ ಅರವಿಂದ್?
ಅಂದಹಾಗೆ ರಾಮ್ ಗೋಪಾಲ್ ವರ್ಮಾ ಕನ್ನಡ ಸಿನಿಮಾಗಳನ್ನು ಹೊಳುತ್ತಿರುತ್ತಾರೆ. ಈ ಮೊದಲು ಕೆಜಿಎಫ್ -2 ಮತ್ತು ವಿಕ್ರಾಂತ್ ರೋಣ ಸಿನಿಮಾವನ್ನು ಹಾಡಿ ಹೊಗಳಿದ್ದರು. ಇದೀಗ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ.
ಕುತೂಹಲ ಹೆಚ್ಚಾಗ್ತಿದೆ, ಕಾಂತಾರ ನೋಡಲು ಕಾಯುತ್ತಿದ್ದೇನೆ; ನಟಿ ಕಂಗನಾ ರಣಾವತ್
ಇನ್ನು ಕಾಂತಾರ ನೋಡಿ ಅನೇಕ ಸ್ಟಾರ್ ಕಲಾವಿದರು ಹಾಡಿಹೊಗಳಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಕಾಂತಾರ ನೋಡಿ ಮತ್ತೆ ನನ್ನ ಊರಿಗೆ ಹೋದಂತೆ ಆಯ್ತು ಎಂದಿದ್ದಾರೆ. ಕ್ಲೈಮ್ಯಾಕ್ಸ್ ನೋಡಿ ಗೂಸ್ ಬಂಪ್ಸ್ ಬಂತು ಎಂದಿದ್ದಾರೆ. ಇನ್ನು ನಟಿ ಕಂಗನಾ ರಣಾವತ್ ಕಾಂತಾರ ನೋಡಲು ಕಾಯುತ್ತಿದ್ದೀನಿ ಎಂದು ಹೇಳಿದರು. ತೆಲುಗು ಮತ್ತು ತಮಿಳು ಸ್ಟಾರ್ ಕಲಾವಿದರಾದ ಪ್ರಭಾಸ್, ಅನುಷ್ಕಾ ಶೆಟ್ಟಿ, ಧನುಷ್, ಕಾರ್ತಿ ಸೇರಿದಂತೆ ಅನೇಕರು ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮಾ ಅವರು ಸಹ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.