ನಿರ್ಮಾಪಕ ಟಿ. ಜನಾರ್ದನ ಅವರು ಹಂಚಿಕೊಂಡಂತೆ, 'ಪರೋಪಕಾರಿ' ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ನಟಿ ವಿಜಯಲಲಿತಾ ಡಾ.ರಾಜ್‌ಕುಮಾರ್ ಅವರನ್ನು ಬಲವಾಗಿ ತಬ್ಬಿಕೊಂಡರು. ಇದರಿಂದ ರಾಜ್‌ಕುಮಾರ್ ಮುಜುಗರಕ್ಕೊಳಗಾದರು.  ಈ ಘಟನೆಯನ್ನು ನೆನಪಿಸಿದ್ದಾರೆ ಚಿತ್ರ ನಿರ್ಮಾಪಕ ಟಿ ಜನಾರ್ದನ. 

ಇಂಟಿಮೇಟ್​ ದೃಶ್ಯಗಳಲ್ಲಿ ನಾಯಕನಾದವ ನಾಯಕಿಯನ್ನು ಅಪ್ಪಿಕೊಂಡು ಕೆಟ್ಟದ್ದಾಗಿ ನಡೆಸಿಕೊಂಡ ಎಂದು ಎಷ್ಟೋ ಮಂದಿ ನಟಿಯರು ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡುತ್ತಾ ಹೇಳಿದ್ದಿದೆ. ಚುಂಬಿಸುವ ದೃಶ್ಯಗಳಲ್ಲಿ ಉದ್ದೇಶಪೂರ್ವಕವಾಗಿ ರೀಟೇಕ್​ ಪಡೆಯುತ್ತಿರುವ ನಾಯಕರೂ ಸಾಕಷ್ಟಿದ್ದಾರೆ. ಆದರೆ ಡಾ.ರಾಜ್​ಕುಮಾರ್​ ವಿಷಯದಲ್ಲಿ ಇದು ಉಲ್ಟಾ ಆಗಿತ್ತು! ನಟಿಯೊಬ್ಬರು ಡಾ.ರಾಜ್​ ಅವರನ್ನು ತಬ್ಬಿಕೊಂಡು ರಾಜ್​ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಬಿಟ್ಟಿದ್ದರಂತೆ. ಆ ನಾಯಕಿಯ ಹಿಡಿತದಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ನಟ, ಸುಸ್ತಾಗಿ ಹೋಗಿದ್ರಂತೆ. ಈ ಕುತೂಹಲದ ಘಟನೆಯನ್ನು ತೆರೆದಿಟ್ಟಿದ್ದಾರೆ. ನಿರ್ಮಾಪಕ ಟಿ.ಜನಾರ್ದನ ಅವರು. ಅಷ್ಟಕ್ಕೂ ಡಾ.ರಾಜ್​ ಅವರ ಗುಣದಂತೆಯೇ ಅವರ ಬಾಹ್ಯ ಸೌಂದರ್ಯವೂ ಅಷ್ಟೇ ಆಕರ್ಷಕವಾಗಿತ್ತು. ಇದು ಅಂದಿನ ಕಾಲದಲ್ಲಿ ನಟಿಯರನ್ನು ಸೆಳೆಯುತ್ತಿತ್ತು. ಡಾ.ರಾಜ್​ ಹಲವರ ಕ್ರಷ್​ ಕೂಡ ಆಗಿದ್ದರು.

ಟೋಟಲ್​ ಕನ್ನಡ ಯೂಟ್ಯೂಬ್​ ಚಾನೆಲ್​ನಲ್ಲಿ ಟಿ. ಜನಾರ್ದನ ಅವರು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪರೋಪಕಾರಿ ಚಿತ್ರದ ಹಾಡು ಜೋಕೆ ನಾನು ಬಳ್ಳಿಯ ಮಿಂಚು ಹಾಡಿನ ಸಮಯದಲ್ಲಿ ನಡೆದ ಸನ್ನಿವೇಶವನ್ನು ಜನಾರ್ದನ ಅವರು ನೆನಪಿಸಿಕೊಂಡಿದ್ದಾರೆ. 1973ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಆಗ ಡಾ.ರಾಜ್​ ಅವರು ಉತ್ತುಂಗದಲ್ಲಿ ಇದ್ದ ಕಾಲವದು. ಎಲ್ಲಾ ನಟಿಯರೂ ಒಮ್ಮೆಯಾದರೂ ರಾಜ್​ ಜೊತೆ ನಟಿಸುವ ಹಂಬಲ ವ್ಯಕ್ತಪಡಿಸುತ್ತಿದ್ದರು. ತನ್ನ ಶ್ರೀಮಂತ ತಂದೆಯೊಂದಿಗೆ ಪಂಥವನ್ನು ಗೆಲ್ಲುವ ಸ್ವಾಭಿಮಾನಿ ಯುವಕನ ಕಥೆಯ ಸುತ್ತ ಸುತ್ತುತ್ತದೆ. ಈ ಚಿತ್ರದ ನಾಯಕಿ ಜಯಂತಿ. ಇದೇ ಚಿತ್ರದಲ್ಲಿ ಸೈಡ್ ರೋಲ್​ ಆಗಿ ನಟಿಸಿದ್ದವರು ವಿಜಯಲಲಿತಾ. ಅವರೇ ಈ ರೀತಿ ಮಾಡಿದವರು ಎಂದು ಹೇಳಿದ್ದಾರೆ ಜನಾರ್ದನ.

'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್​ ನೋಡ್ಲೇ ಇಲ್ಲ- ಡಬ್​ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್​

ಈ ಹಾಡಿನಲ್ಲಿ ವಿಜಯಲಲಿತಾ ಅವರು, ಡಾ.ರಾಜ್​ ಅವರನ್ನು ಸುಮ್ಮನೇ ಟಚ್​ ಮಾಡಿ ಬರಬೇಕಿತ್ತು. ಆದರೆ ರಾಜ್​ಕುಮಾರ್​ ಅವರನ್ನು ನೋಡುತ್ತಿದ್ದಂತೆಯೇ ಆ ನಟಿಗೆ ಅದೇನಾಯಿತೋ ಗೊತ್ತಿಲ್ಲ. ಜೋರಾಗಿ ಬಿಗಿದಪ್ಪಿಕೊಂಡುಬಿಟ್ಟರು. ಬಿಡಮ್ಮಾ ಎಂದರೂ ಕೇಳಲಿಲ್ಲ. ಆಕೆಯಿಂದ ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ರಾಜ್​ಕುಮಾರ್​ ಅವರಿಗೆ ಸುಸ್ತಾಗಿ ಹೋಯಿತು. ಕೊನೆಗೆ ಹಾಗೂ ಹೀಗೂ ತಪ್ಪಿಸಿಕೊಂಡು ಹೋದರು ಎಂದು ಹೇಳಿದ್ದಾರೆ. 

ಮೊನ್ನೆಯಷ್ಟೇ ಡಾ.ರಾಜ್​ ಅವರ ಅಭಿನಯದ ಬಗ್ಗೆ ನಟಿ ಸುಧಾರಾಣಿ ಮಾತನಾಡಿದ್ದರು. ದೇವತಾ ಮನುಷ್ಯ ಚಿತ್ರದ ಹಾಲಲ್ಲಾದರೂ ಹಾಕು ಶೂಟಿಂಗ್​ ಸಮಯದಲ್ಲಿ ನಡೆದ ಈ ಘಟನೆಯ ಬಗ್ಗೆ ವಿವರಿಸಿರುವ ನಟಿ, ಈ ಹಾಡಿನ ಸಮಯದಲ್ಲಿಯೂ ನಾನು ತುಂಬಾ ಭಯ ಪಟ್ಟಿದ್ದೆ. ಆದರೆ ನಾನು ಹೊರಗಡೆಯಿಂದ ಒಳಗೆ ಬರುವಾಗ ಅಪ್ಪಾಜಿ ಒಂದು ಲುಕ್​ ಕೊಡುತ್ತಾರೆ ಅದನ್ನು ನೀವು ನೋಡಿರಬಹುದು... ಎನ್ನುತ್ತಲೇ ಆ ನೋಟವನ್ನು ಬೀರಿದಾಗ ತಮಗೆ ಆದ ರೋಮಾಂಚನ ಅನುಭವವನ್ನು ನಟಿ ಹೇಳಿಕೊಂಡಿದ್ದರು. ಅಪ್ಪಾಜಿ ಆ ನೋಟ ನೋಡಿದಾಗ ನನಗೆ ಅಲ್ಲಿ ಅಪ್ಪಾಜಿಯೂ ಕಾಣಿಸಲಿಲ್ಲ, ಡಾ.ರಾಜ್​ಕುಮಾರ್​ ಅವರೂ ಕಾಣಿಸಲಿಲ್ಲ... ಬದಲಿಗೆ ಸಾಕ್ಷಾತ್​ ರಾಘವೇಂದ್ರ ಅವರೇ ಪ್ರತ್ಯಕ್ಷರಾಗಿ ನನಗೆ ಅಭಯ ನೀಡುತ್ತಾರೆ ಎನ್ನಿಸಿಬಿಟ್ಟಿತು. ಆ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಅಂದು ನಡೆದ ಆ ಘಟನೆಯಿಂದಲೇ ನಾನು ಸಲೀಸಾಗಿ ಅವರ ಜೊತೆ ಮಗಳಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದರು. 

'ಹಾಲಲ್ಲಾದರೂ ಹಾಕು' ಶೂಟಿಂಗ್​ನಲ್ಲಿ ರಾಜ್​ ಆ ನೋಟ ಬೀರಿದಾಗ ನಡೆದಿತ್ತು ಪವಾಡ: ಸುಧಾರಾಣಿ ಅನುಭವ ಕೇಳಿ...

YouTube video player