Asianet Suvarna News Asianet Suvarna News

Pushkar Mallikarjunaiah: ಹೀರೋ ಆದ್ರು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ

ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಹೀರೋ ಆಗುತ್ತಿದ್ದಾರೆ. ಇವರ ನಟನೆಯ ಮೊದಲ ಚಿತ್ರಕ್ಕೆ ಭಾನುವಾರ ಫೆ.6ರಂದು ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ಆದಿತ್ಯ ಗುಣವಂತೆ ನಿರ್ದೇಶನ ಮಾಡುತ್ತಿದ್ದಾರೆ.

Producer Pushkar Mallikarjunaiah is now the Hero gvd
Author
Bangalore, First Published Feb 5, 2022, 8:31 AM IST

ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ (Pushkar Mallikarjunaiah) ಹೀರೋ ಆಗುತ್ತಿದ್ದಾರೆ. ಇವರ ನಟನೆಯ ಮೊದಲ ಚಿತ್ರಕ್ಕೆ ಭಾನುವಾರ ಫೆ.6ರಂದು ಮುಹೂರ್ತ (Muhurta) ನಡೆಯಲಿದೆ. ಈ ಚಿತ್ರವನ್ನು ಆದಿತ್ಯ ಗುಣವಂತೆ (Aditya Gunavante) ನಿರ್ದೇಶನ ಮಾಡುತ್ತಿದ್ದಾರೆ. ನಟ ಮತ್ತು ಅಸೋಸಿಯೇಟ್‌ ನಿರ್ದೇಶಕರಾಗಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದವರು ಆದಿತ್ಯ. ‘ಸ್ಟುಡೆಂಟ್‌ ಆಫ್‌ ದಿ ಇಯರ್‌’, ‘ಉಂಗ್ಲಿ’, ‘ಬದ್ರಿನಾಥ್‌ ಕಿ ದುಲಾನಿಯಾ’ ಮುಂತಾದ ಚಿತ್ರಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ. ಜತೆಗೆ ‘ಕಪೂರ್‌ ಆ್ಯಂಡ್‌ ಸನ್ಸ್‌’ ಹೆಸರಿನ ಚಿತ್ರದಲ್ಲಿ ನಟಿಸಿದ್ದಾರೆ. ಈಗ ನಿರ್ದೇಶಕರಾಗಿ ಕನ್ನಡಕ್ಕೆ ಬರುತ್ತಿದ್ದಾರೆ.

ಸಿನಿಮಾದ ಕುರಿತು ಪುಷ್ಕರ್‌ ಮಲ್ಲಿಕಾರ್ಜುನಯ್ಯ, ‘ಈ ಚಿತ್ರದಲ್ಲಿ ನಾನು ಸೂಪರ್‌ ಸ್ಟಾರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸೂಪರ್‌ ಸ್ಟಾರ್‌ ಒಬ್ಬನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಆತ ಲೈಮ್‌ಲೈಟ್‌ನಿಂದ ಆಚೆ ಹೋಗಬೇಕಾಗುತ್ತದೆ. ಆ ಪಾತ್ರಕ್ಕೆ ಎದುರಾಗುವ ಸಾವು- ಬದುಕಿನ ಸಮಸ್ಯೆ ಏನು ಎಂಬುದು ಚಿತ್ರದ ಕತೆ. ನನಗೇ ತುಂಬಾ ಸೂಕ್ತ ಎನಿಸುವ ಕತೆಯನ್ನು ಆದಿತ್ಯ ಹೇಳಿದ್ದಾರೆ. ಈ ಚಿತ್ರದಲ್ಲಿ ನಟಿಸಲು ನಾನು ಮಾಡಿಕೊಂಡ ಪೂರ್ವ ತಯಾರಿಯೇ ದೊಡ್ಡ ಸಿನಿಮಾ ಆಗುತ್ತದೆ’ ಎನ್ನುತ್ತಾರೆ.

ಕನ್ನಡಕ್ಕೆ ಬರ್ತಿದ್ದಾನೆ ರಾಬಿನ್ ಹುಡ್;ಪುಷ್ಕರ್-ಸುನಿ ಹೊಸ ಸಿನಿಮಾ!

ಇನ್ನು ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ 'ಅವತಾರ ಪುರುಷ' (Avatar Purusha) ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಸಿಂಪಲ್ ಸುನಿ (Simple Suni) ನಿರ್ದೇಶನದ ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಅಭಿನಯದಲ್ಲಿ ಈ ಚಿತ್ರವು ಮೂಡಿಬರುತ್ತಿದೆ. ಚಿತ್ರದ ಟೀಸರ್‌ ಹಾಗೂ ಟ್ರೇಲರ್‌ನಿಂದ ಈಗಾಗಲೇ ಸಾಕಷ್ಟುಗಮನ ಸೆಳೆದಿರುವ ಚಿತ್ರ ಇದಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ (Black Maagic) ಚಿತ್ರಕಥೆ ಈ ಚಿತ್ರದಲ್ಲಿದೆ.

‘ನನ್ನ ಪ್ರಕಾರ ಆಪ್ತಮಿತ್ರ ನಂತರ ಕನ್ನಡದಲ್ಲಿ ಆ ರೀತಿಯ ಫ್ಲೇವರ್‌ ಸಿನಿಮಾ ಬರುತ್ತಿರುವುದು 'ಅವತಾರ ಪುರುಷ'. ಕಳೆದ ಹತ್ತು- ಹದಿನೈದು ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ. ಸಿನಿಮಾ ತುಂಬಾ ಚೆನ್ನಾಗಿದೆ. 'ಅವತಾರ ಪುರುಷ' 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪಾರ್ಟ್‌ 1 ಬಿಡುಗಡೆ ಆದ ನೂರನೇ ದಿನಕ್ಕೆ ಪಾರ್ಟ್‌ 2 ಬಿಡುಗಡೆ ಆಗಲಿದೆ’ ಎಂದು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ. ಈ ಕತೆ ಮಾಡಿಕೊಂಡಿದ್ದು ವೆಬ್‌ ಸರಣಿ ಮಾಡಲು. ಕತೆ ಕೇಳಿದ ಮೇಲೆ ಪುಷ್ಕರ್‌ ವೆಬ್‌ ಸರಣಿ ಬೇಡ, ಇದನ್ನು ಸಿನಿಮಾ ಮಾಡೋಣ ಎಂದು ಹೇಳಿದ ಮೇಲೆ ‘ಅವತಾರ ಪುರುಷ’ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಬರುತ್ತಿದೆ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಹೇಳಿದ್ದಾರೆ.

ವಿಭಿನ್ನ ಬರ್ತಡೇ ಗಿಫ್ಟ್‌ ಸ್ವೀಕರಿಸಿದ ಆರೋಹಿ ನಾರಾಯಣ್; ಇಷ್ಟೊಂದು ರೊಮ್ಯಾಂಟಿಕ್ಕಾ?

ಚಿತ್ರದಲ್ಲಿ ಶರಣ್‌ಗೆ ಜೋಡಿಯಾಗಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, 'ರಂಗಿತರಂಗ' ಚಿತ್ರದ ನಂತರ ಮತ್ತೊಂದು ಆಸಕ್ತಿಕರ ಪಾತ್ರದಲ್ಲಿ ಸಾಯಿಕುಮಾರ್‌, ರಾಮಾಜೋಯಿಸರಾಗಿ ಅಭಿನಯಿಸಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಸೇರಿದಂತೆ ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ'  ಚಿತ್ರ ಮೂಡಿ ಬಂದಿದೆ. ಎರಡು ಭಾಗಗಳಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.

Follow Us:
Download App:
  • android
  • ios