ಅನೂಪ್ ಭಂಡಾರಿ ಹೇಳುತ್ತಾರೆ ದ್ರೋಣರ ಮಗ ಅಶ್ವತ್ಥಾಮನ ಕತೆ!
-ಹೀಗೊಂದು ಮಾಹಿತಿಗಳನ್ನು ಒಳಗೊಂಡ ಪೋಸ್ಟರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್. ಅನೂಪ್ ಭಂಡಾರಿ ನಿರ್ದೇಶನದ ‘ಅಶ್ವತ್ಥಾಮ’ ಚಿತ್ರದ ಪೋಸ್ಟರ್ ಅದು. ‘ಫ್ಯಾಂಟಮ್’ ಶೂಟಿಂಗ್ ಟೈಮಲ್ಲಿ ಅನೂಪ್ ಭಂಡಾರಿ ಹೇಳಿದ ಕತೆ ಕೇಳಿದ ಸುದೀಪ್ ಥ್ರಿಲ್ ಆಗಿ ಈ ಸಿನಿಮಾ ನಮ್ಮ ಬ್ಯಾನರ್ನಲ್ಲೇ ಮಾಡೋಣ ಎಂದು ಹೇಳಿ ಸಿನಿಮಾ ಹೆಸರು ಘೋಷಣೆ ಮಾಡಿಬಿಟ್ಟಿದ್ದಾರೆ. ಪೋಸ್ಟರ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದು
- ಫ್ಯಾಂಟಮ್ ಚಿತ್ರದ ಸೆಟ್ನಲ್ಲಿ ನಾನು ಸುದೀಪ್ ಅವರ ಜತೆ ಮಾತನಾಡುವಾಗ ಈ ಚಿತ್ರದ ಒಂದು ಸಾಲಿನ ಕತೆ ಹೇಳಿದೆ. ಕತೆ ಕೇಳಿದ ಅವರು ಪೂರ್ತಿ ಸ್ಕಿ್ರಪ್ಟ್ ರೆಡಿ ಮಾಡಿ. ಕಿಚ್ಚ ಬ್ಯಾನರ್ನಲ್ಲೇ ನಿರ್ಮಾಣ ಮಾಡೋಣ ಎಂದಿದ್ದಾರೆ.
'ಫ್ಯಾಂಟಮ್' ಹೊಸ ಪೋಸ್ಟರ್ ರಿಲೀಸ್; ಹೇಗಿದೆ ವಿಕ್ರಾಂತ್ ರೋಣ ಲುಕ್?
- ಅಶ್ವತ್ಥಾಮನಿಗೆ ಸಾವಿಲ್ಲ. ಮಹಾಭಾರತ ಮುಗಿದ ಮೇಲೆ ಆತ ಸತ್ತಿಲ್ಲ. ಆತ ಚಿರಂಜೀವಿ. ಒಂದು ವೇಳೆ ಅಶ್ವತ್ಥಾಮ ಇದ್ದರೆ ಈಗ ಎಲ್ಲಿರುತ್ತಾನೆ, ಹೇಗಿರುತ್ತಾನೆ, ಏನು ಮಾಡುತ್ತಿರುತ್ತಾನೆ ಎಂಬ ಯೋಚನೆಯೇ ಈ ಚಿತ್ರದ ಕತೆ.
- ಅಶ್ವತ್ಥಾಮ ಇದ್ದರೆ ಈಗಿನ ಪ್ರಪಂಚದಲ್ಲಿ ಇರಬೇಕು. ಇಲ್ಲದೆ ಹೋದರೆ ಆತನ ಪ್ರಪಂಚ ಯಾವುದು ಇರಲಿದೆ. ಕೆಲವರ ನಂಬಿಕೆಯಂತೆ ಅಶ್ವತ್ಥಾಮ ಇನ್ನೂ ಸತ್ತಿಲ್ಲ. ಅವನು ಈಗ ಏನೆಲ್ಲ ಮಾಡಲು ಸಾಧ್ಯ?
- ಯಾರು ಅಶ್ವತ್ಥಾಮನಾಗಲಿದ್ದಾರೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸ್ಕಿ್ರಪ್ಟ್ ಪೂರ್ತಿ ಆದ ಮೇಲೆ ಆ ಬಗ್ಗೆ ಮಾತುಕತೆ ಮಾಡುತ್ತೇವೆ. ಸದ್ಯಕ್ಕೆ ಯಾರನ್ನೂ ಅಂದುಕೊಂಡಿಲ್ಲ.
ಕಿಚ್ಚನ ಮುಂದೆ 5 ಚಿತ್ರಗಳು ಕಾಯುತ್ತಿವೆ;ಫ್ಯಾಂಟಮ್ ನಂತರ ಸುದೀಪ್ ಸಿನಿಮಾ ಯಾವುದು?
- ಸುದೀಪ್ ಸೋದರಳಿಯ ಸಂಚಿತ್ ಈ ಚಿತ್ರದ ಮೂಲಕ ಲಾಂಚ್ ಆಗುತ್ತಿದ್ದಾರೆ ಎಂಬುದು ಸುಳ್ಳು. ಆ ಬಗ್ಗೆ ಯಾವ ತೀರ್ಮಾನವೂ ತೆಗೆದುಕೊಂಡಿಲ್ಲ.
- ಬಿಲ್ಲಾ ರಂಗಾ ಭಾಷಾ ಸಿನಿಮಾ ಕೂಡ ಚಿತ್ರೀಕರಣ ಆಗಲಿದೆ. ಯಾವುದು ಮೊದಲು, ಯಾವುದು ನಂತರ ಅನ್ನುವುದು ನಿರ್ಧಾರವಾಗಿಲ್ಲ.