Asianet Suvarna News Asianet Suvarna News

Rakshit Shetty: 'ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ' ಎಂದು ರಕ್ಷಿತ್​ ಶೆಟ್ಟಿ ಹೇಳಿದ್ಯಾಕೆ?

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಹಾಗೂ 'ರಿಚರ್ಡ್​ ಆಂಟನಿ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, '777 ಚಾರ್ಲಿ' ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ರಕ್ಷಿತ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕುತೂಹಲಕಾರಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Kannada Actor Rakshit Shetty Shared an Interesting Tweets gvd
Author
Bangalore, First Published Feb 13, 2022, 8:53 PM IST

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಕನ್ನಡ ಚಿತ್ರರಂಗಕ್ಕೆ 'ನಮ್ ಏರಿಯಾಲ್ ಒಂದಿನ' ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದರು. ಅನಂತರ 'ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ', 'ಉಳಿದವರು ಕಂಡಂತೆ', 'ಕಿರಿಕ್​ ಪಾರ್ಟಿ',' ರಿಕ್ಕಿ', 'ಅವನೇ ಶ್ರೀಮನ್ನಾರಾಯಣ' ಅಂತಹ ಹಿಟ್​ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಸದ್ಯ 'ಸಪ್ತ ಸಾಗರದಾಚೆ ಎಲ್ಲೋ' ಹಾಗೂ 'ರಿಚರ್ಡ್​ ಆಂಟನಿ' ಸಿನಿಮಾಗಳು ರಕ್ಷಿತ್ ಶೆಟ್ಟಿ ಕೈಯಲಿದ್ದು, '777 ಚಾರ್ಲಿ' (777 Charlie) ಚಿತ್ರ ಬಿಡುಗಡೆಗಾಗಿ ರಕ್ಷಿತ್ ಕಾಯುತ್ತಿದ್ದಾರೆ. ಈ ನಡುವೆ ರಕ್ಷಿತ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕುತೂಹಲಕಾರಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಹೌದು! ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ (Twitter) ಖಾತೆಯಲ್ಲಿ 'ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ. ಎದ್ದಾಗ ಹೊಗಳದಿರಿ, ಬಿದ್ದಾಗ ತೆಗಳದಿರಿ. ಆಗು ಹೋಗುಗಳಲಿ ನನ್ನ ಅರಿಯುವ ಯತ್ನ ಮಾಡದಿರಿ. ಆಡದಿರಿ ಕಾಡದಿರಿ, ಅಂಥ್ಯವ ನಾ ಕಂಡಿಲ್ಲ. ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ'. ಹಾಗೂ ಮುಂದುವರೆದು 'ಬದುಕೆಂಬ ಚೌಕಟ್ಟಲಿ ಅದ ಇದರ ಆಯಿಕೆ. ಅದ ಹೆಕ್ಕಿ ಇದ ತ್ಯಜಿಸಿ ನಾ ನಾನೆಂಬ ಹೇಳಿಕೆ. ಇಷ್ಟ ನಷ್ಟಗಳಲಿ ಬೇಕೆ ಪರರ ಅನುಕಂಪ? ಆಯ್ದ ರೂಪವ ಕಳೆದರೆ ಶಿವನೆ ಪ್ರತಿಬಿಂಬ If You Empty What You Think of as Yourself, Shiva is...'ಎಂದು ಬರೆದುಕೊಂಡಿದ್ದು, ಈ ಸಂದರ್ಭದಲ್ಲಿ ಯಾವ ಕಾರಣಕ್ಕೆ ಕುತೂಹಲಕಾರಿ ಬರವಣಿಗೆಯನ್ನು ಹಂಚಿಕೊಂಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಮಾತ್ರವಲ್ಲದೇ ಈ ಟ್ವೀಟ್‌ಗಳು (Tweet) ಇದೀಗ ಸಖತ್ ಚರ್ಚೆಗೆ ಕಾರಣವಾಗಿದೆ. ಇನ್ನು ಈ ಟ್ವೀಟ್‌ಗೆ ನೆಟ್ಟಿಗರು ಕೂಡಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
 


'ಕಂಡವರ ಅಂತ್ಯ ಬಯಸೋ ಮನಸು ಮಾಡುವರಿಲ್ಲಿ, ಜೊತೆಗಿದ್ದವರ ಮನಸು ನೋಯಿಸೋ ಭರದಲ್ಲಿ, ತನ್ನತನವ ಮರೆತು ಮೆರೆವರಿಲ್ಲಿ, ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ'.

'ಹಾಡುವೆನು ಮಂಗಳವಾ! ಕಥೆಯನ್ನು ನಡೆಸಲು! ಮನಗೆದ್ದಾಗ ಹೊಗಳುವೆನು! ಮನನೋಯಿಸಿದರೆ ತೆಗಳುವೆನು! ಸದಾ ನಿನ್ನರಿಯುವ ಯತ್ನ ಮಾಡುವೆನು! ಆಡುವೆನು ಕಾಡುವೆನು! ಅಂತ್ಯ ನಾನೂ ಕಂಡಿಲ್ಲ! ಮಾತಾಡಿದರೆ ವೈದ್ಯನಾಗುವೆನು! ಇಲ್ಲವಾದರೆ ವೈರಿಯಂತೆ ಬಾಸವಾಗುವೆನು! ಯಾವ ಮನುಷ್ಯನಿಗೂ ನೀವು ಹೇಳಿದಂತೆ ಇರಲಾಗಲ್ಲ! FaceItDirectly'.

777 Charlie: ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ನಿರೀಕ್ಷೆಯಲ್ಲಿದ್ದೇವು: ಕಿರಣ್‌ರಾಜ್

'ಅಂಗಿಸಬೇಡಿ, ನಗಬೇಡಿ ಇವನು ಬಿದ್ದಿರುವನೆಂದು, ಮತ್ತೆ ಮತ್ತೆ ಎದ್ದು ನಿಲ್ಲುವ ಇವನು ಎಂದೆಂದೂ. ಕಡೆಗಣಿಸಿ ಹೂಳಬೇಡಿ ಕಾಲ್ಕೆದುರಿ ಬೀಜ ಇವನು, ಆಲದ ಮರವಾಗಿ ಬೆಳೆದು ನಿಲ್ಲುವ ನಿಮ್ಮೆದರಲಿ'.

'ಕನಸುಗಳಲ್ಲೇ ಕಥೆಯು ಗರಿಗೆದರಿ ನಿಲ್ಲುವ, ನೆನಪುಗಳ ನೇವರಿಸಿ, ಉಯಿಲುಗಳ ಆಲಂಗಿಸಿ; ಚೂರೂ ವಿಷಾದ ವ್ಯಕ್ತವಾಗದ ಭಾವವ ಆಡದಿರಿ ಕಾಡದಿರಿ, ಅಂತ್ಯವ ನಾ ಕಂಡಿಲ್ಲ'! ಅಂತೆಲ್ಲಾ ನೆಟ್ಟಿಗರು ತರೇಹವಾರಿ ಕಾಮೆಂಟನ್ನು ಮಾಡಿದ್ದಾರೆ. ಸದ್ಯ ರಕ್ಷಿತ್‌ ಶೆಟ್ಟಿ ತಮ್ಮ ಪರಂವಾಃ ಸ್ಪಾಟ್‌ಲೈಟ್‌ ಸಂಸ್ಥೆಯ (Paramvah Spotlight Production) ಮೂಲಕ ‘ಸ್ಟ್ರಾಬೆರಿ’ (Strawberry) ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅರ್ಜುನ್‌ ಲೂಯಿಸ್‌ (Arjun Lewis) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರುತಿ ಹರಿಹರನ್‌ (Sruthi Hariharan) ನಟಿಸುತ್ತಿದ್ದಾರೆ. 
 


ಇನ್ನು ರಕ್ಷಿತ್‌ ಶೆಟ್ಟಿ ಅಭಿನಯದ '777 ಚಾರ್ಲಿ' ದೊಡ್ಡಮಟ್ಟದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್​, ಪೋಸ್ಟರ್, ಸಾಂಗ್​​​ಗಳಿಂದ ಅಭಿಮಾನಿಗಳಿಗೆ ಕೌತುಕ ಹೆಚ್ಚಿತ್ತು. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ (Censor Board) ಯು/ಎ ಪ್ರಮಾಣಪತ್ರ (U/A Certificate) ಸಿಕ್ಕಿದೆ. ಎಲ್ಲವೂ ಅಂದಕೊಂಡಂತೆ ಹಾಗಿದ್ದರೇ '777 ಚಾರ್ಲಿ' ಡಿಸೆಂಬರ್ 31ರಂದು ರಿಲೀಸ್ ಆಗಬೇಕಿತ್ತು, ಆದರೆ ಚಿತ್ರದ ಕೆಲಸಗಳು ವಿಳಂಬವಾಗಿರುವುದರಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು.

ಸಪ್ತ ಸಾಗರದಾಚೆ ಎಲ್ಲೋ: Rakshit Shetty - Rukmini ರೊಮ್ಯಾಂಟಿಕ್ ಫೋಟೋ ವೈರಲ್!

'777 ಚಾರ್ಲಿ' ಚಿತ್ರವು ದಾರಿ ತಪ್ಪಿದ ಶ್ವಾನ ಚಾರ್ಲಿ ಮತ್ತು ಅವನ ಸಹಚರ ಧರ್ಮ (ರಕ್ಷಿತ್ ಶೆಟ್ಟಿ ಪಾತ್ರ)ದ ಸುತ್ತದ ಕಥೆಯನ್ನು ಅನುಸರಿಸುತ್ತದೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆಗೆ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಶ್ವಾನ ಪಾತ್ರದ ಚಿತ್ರೀಕರಣಕ್ಕಾಗಿಯೇ ಚಿತ್ರತಂಡ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ಯುವ ನಿರ್ದೇಶಕ ಕಿರಣ್‌ ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್‌ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದೆ. ರಕ್ಷಿತ್ ಶೆಟ್ಟಿಗೆ ಸಂಗೀತಾ ಶೃಂಗೇರಿ (Sangeetha Sringeri ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Follow Us:
Download App:
  • android
  • ios