Asianet Suvarna News Asianet Suvarna News

'ಕರಟಕ ದಮನಕ' ನೋಡಲು ಇಲ್ಲಿದೆ ಐದು ಕಾರಣ: ಶಿವಣ್ಣ-ಪ್ರಭುದೇವ ಜುಗಲ್ಬಂಧಿ ಮೇಲೆ ಎಲ್ಲರ ಕಣ್ಣು!

ಒಂದು ವರ್ಷದ ಹಿಂದೆ ಮಳೆ ಡೈರೆಕ್ಟರ್​ ಯೋಗರಾಜ್ ಭಟ್ರು ಭರ್ಜರಿ ಸುದ್ದಿ ಕೊಟ್ಟಿದ್ರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಪ್ರಭುದೇವ ಕಾಂಬಿನೇಷನ್​​ನಲ್ಲಿ ಕರಟಕ ದಮನಕ ಸಿನಿಮಾ ಮಾಡುತ್ತೇನೆ ಅಂತ ಅನೌನ್ಸ್ ಮಾಡಿದ್ರು. 

Here Are Five Reasons To Watch Shivarajkumar Prabhudeva Starrer Karataka Damanaka gvd
Author
First Published Mar 8, 2024, 12:57 PM IST

ಒಂದು ವರ್ಷದ ಹಿಂದೆ ಮಳೆ ಡೈರೆಕ್ಟರ್​ ಯೋಗರಾಜ್ ಭಟ್ರು ಭರ್ಜರಿ ಸುದ್ದಿ ಕೊಟ್ಟಿದ್ರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಪ್ರಭುದೇವ ಕಾಂಬಿನೇಷನ್​​ನಲ್ಲಿ ಕರಟಕ ದಮನಕ ಸಿನಿಮಾ ಮಾಡುತ್ತೇನೆ ಅಂತ ಅನೌನ್ಸ್ ಮಾಡಿದ್ರು. ಈ ಸ್ವೀಟ್ ಸುದ್ದಿ ಕೇಳಿ ಶಿವಣ್ಣ ಪ್ರಭುದೇವ ಫ್ಯಾನ್ಸ್​ಗೆ ಆದ ಸಂಭ್ರಮ ಅಷ್ಟಿಸ್ಟಲ್ಲ. ಈಗ ಶಿವಣ್ಣ-ಪ್ರಭುದೇವ ಫ್ಯಾನ್ಸ್​​ ಗೆ ಭರ್ಜರಿ ಬಾಡೂಟ ರೆಡಿಯಾಗಿದೆ. ಈ ವಾರ ಅಂದ್ರೆ ನಾಳೆ ಬೆಳ್ಳಿತೆರೆ ಮೇಳೆ ಕರಟಕ ದಮನಕ ಸಿನಿಮಾ ದರ್ಶನ ಆಗುತ್ತಿದೆ. ಕರಟಕ ದಮನಕ ಸಿನಿಮಾ ಸ್ಯಾಂಪಲ್ಸ್​ಗಳು ಸೌಂಡ್ ಮಾಡಿದೆ. ಹಾಡುಗಳು ಹಿಟ್ ಆಗಿವೆ. ಒಂದ್ ಸಿನಿಮಾ ನೋಡೋಕೆ ಆಹ್ವಾನ ಪತ್ರಿಕೆಯೇ ಸಿನಿಮಾದ ಸಾಂಗ್ಸ್ ಹಾಗು ಟ್ರೈಲರ್​. 

ಅದನ್ನೆಲ್ಲಾ ನೋಡಿರೋ ಸಿನಿ ಪ್ರೇಕ್ಷಕರು ಕರಟಕ ದಮನಕ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ನೋಡೋಕೆ ಮೈನ್ ರೀಸನ್ ಶಿವಣ್ಣ ಹಾಗು ಪ್ರಭುದೇವ. ಫಸ್ಟ್ ದಿ ಫಸ್ಟ್ ಟೈಂ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಈ ಜೋಡಿ. ಕರಟಕ ದಮನಕ ಸಿನಿಮಾದಲ್ಲಿ ಶಿವಣ್ಣ ಪ್ರಭುದೇವ ಜುಗಲ್ಬಂದಿ ಮೇಲೆ ಎಲ್ಲರ ಕಣ್ಣಿದೆ. ಯಾಕಂದ್ರೆ ಇಡೀ ಸಿನಿಮಾ ಪೂರ್ತಿ ಇಬ್ಬರು ಒಟ್ಟೊಟ್ಟಿಗೆ ಇರ್ತಾರೆ. ಇಬ್ಬರ ಕ್ಯಾರೆಕ್ಟರ್​ ತೂಕ ಒಂದೇ ಇದೆಯಂತೆ. ಇನ್ನು ಇಬ್ಬರು ಬಿಗ್ ಸ್ಟಾರ್ಸ್ ಒಂದೇ ಸಿನಿಮಾದಲ್ಲಿದ್ದಾರೆ ಅಂದ್ಮೇಲೆ ಆ ಸಿನಿಮಾ ನೋಡೋಕೆ ರೀಸನ್ ಕಂಡಿತ ಬೇಕಾಗಿಲ್ಲ. ನಿರ್ದೇಶಕ ಯೋಗರಾಜ್ ಭಟ್ ‘ಕರಟಕ ದಮನಕ’ ಸಿನಿಮಾ ಶುರುಮಾಡಿದಾಗಿನಿಂದ ಈ ಸಿನಿಮಾದ ಸ್ಟೋರಿ ಹೇಗಿರುತ್ತೆ.? 

ಶಿವಣ್ಣ ಪ್ರಭುದೇವ ಕ್ಯಾರೆಕ್ಟರ್​ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈ ಸಿನಿಮಾದ ಕತೆ ಎರಡು ಕುತಂತ್ರಿ ನರಿಗಳ ಕಥಯಂತಿರುತ್ತಂತೆ. ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಮಾನವ ರೂಪ ತಾಳಿದ್ರೆ ಏನೆಲ್ಲಾ ಅಗುತ್ತೆ ಅನ್ನೋದೆ ಈ ಸಿನಿಮಾದ ಸ್ಟೋರಿ. ಕರಟಕ ದಮನಕ ಸಿನಿಮಾ ನೋಡೋಕೆ ಇನ್ನೊಂದು ರೀಷನ್ ಕೊಡೋದಾದ್ರೆ ಇದು ರಾಕ್​ಲೈನ್ ಬ್ಯಾನರ್​ನಲ್ಲಿ ಸಿದ್ಧವಾಗಿರೋ ಸಿನಿಮಾ. ರಾಕ್​ಲೈನ್ ಪ್ರೊಡಕ್ಷನ್ ಅಂದ್ರೆ ಹಿಟ್​ ಸಿನಿಮಾಗಳನ್ನ ಕೊಡೋ ನಿರ್ಮಾಣ ಸಂಸ್ಥೆ. 

ಅಯೋಧ್ಯೆಯಲ್ಲಿ ಸ್ಯಾಂಡಲ್‌ವುಡ್ ಶ್ರೀಮನ್ನಾರಾಯಣ: ರಾಮನ ಕಣ್ಣೇ ಮಹಾದ್ಭುತ ಎಂದ ರಕ್ಷಿತ್ ಶೆಟ್ಟಿ!

ಯಾವ್ದೇ ಕಾಂಪ್ರಮೈಸ್ ಇಲ್ಲದೇ ಸಿನಿಮಾಗೆ ಬಂಡವಾಳ ಹೂಡೋ ರಾಕ್​ಲೈನ್ ವೆಂಕಟೇಶ್​ ಈ ಸಿನಿಮಾಗೂ ಎಷ್ಟು ಬೇಕೋ ಅಷ್ಟು ಇನ್ವೆಸ್ಟ್ ಮಾಡಿದ್ದಾರೆ. ಇದರ ಜತೆಗೆ ನಿರ್ದೇಶಕ ಯೋಗರಾಜ್ ಭಟ್. ಇವ್ರ ಸಿನಿಮಾಗಳಿಗೆ ಚಿತ್ರರಂಗದಲ್ಲಿ ಬೇರೆಯದ್ದೇ ಮಾರ್ಕೆಟ್ ಇದೆ. ಯೋಗರಾಜ್ ಭಟ್​ ಸಿನಿಮಾಗನ್ನ ನಂಬಿಕೆ ಇಟ್ಟು ಚಿತ್ರಮಂದಿರಕ್ಕೆ ಹೋಗಿ ನೋಡಬಹುದು. ಹೀಗಾಗಿ ಕರಟಕ ದಮನಕ ಈಗ ಸ್ಪೆಷಲ್ ಎನಿಸಿಕೊಳ್ಳುತ್ತಿದೆ. ನಟಿ ಪ್ರಿಯಾ ಆನಂದ್​, ನಿಶ್ವಿಕಾ ನಾಯ್ಡು, ರಾಕ್​ಲೈನ್ ವೆಂಕಟೇಶ್​ ಸೇರಿ ದೊಡ್ಡ ತಾರಾಗಣ ಸಿನಿಮಾದಲ್ಲಿದೆ. ಒಟ್ಟಿನಲ್ಲಿ ಈ ಶುಭ ಶುಕ್ರವಾರ ಕನ್ನಡ ಸಿನಿ ಪ್ರೇಕ್ಷಕರಿಗಂತು ಕರಟಕ ದಮನಕ ಫುಲ್ ಮಿಲ್ಸ್ ಆಗೋದ್ರಲ್ಲಿ ನೋ ಡೌಟ್.

Follow Us:
Download App:
  • android
  • ios