Asianet Suvarna News Asianet Suvarna News

ಹುಣಸೂರು ದ್ವಾರಕೀಶ್ ಚುನಾವಣಾ ನಂಟು

ವಿಜಯ ಸಂಕೇಶ್ವರ್‌ ಅವರು 2004 ರಲ್ಲಿ ಕನ್ನಡನಾಡು ಪಕ್ಷ ಕಟ್ಟಿ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದರಂತೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಹಲವಾರು ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಹುಣಸೂರಿನಿಂದ ದ್ವಾರಕೀಶ್‌ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿದ್ದರು.

Dwarkish Contested from Hunsur Assembly Constituency in 2004 from Kannada Nadu Party grg
Author
First Published Apr 17, 2024, 10:31 AM IST

ಅಂಶಿ ಪ್ರಸನ್ನಕುಮಾರ್‌

ಮೈಸೂರು(ಏ.17):  ದ್ವಾರಕೀಶ್ ಮೈಸೂರು ಜಿಲ್ಲೆಯ ಹುಣಸೂರಿನವರು. 2004 ರಲ್ಲಿ ಕನ್ನಡನಾಡು ಪಕ್ಷದಿಂದ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಿಜಯ ಸಂಕೇಶ್ವರ್‌ ಅವರು 2004 ರಲ್ಲಿ ಕನ್ನಡನಾಡು ಪಕ್ಷ ಕಟ್ಟಿ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದರಂತೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಹಲವಾರು ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಹುಣಸೂರಿನಿಂದ ದ್ವಾರಕೀಶ್‌ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿದ್ದರು.

1,36,054 ಸ್ವೀಕೃತ ಮತಗಳ ಪೈಕಿ 60,258 ಮತಗಳನ್ನು ಪಡೆದ ಜೆಡಿಎಸ್ಸಿನ ಜಿ.ಟಿ. ದೇವೇಗೌಡರು ಜಯ ಗಳಿಸಿದರು. ಕಾಂಗ್ರೆಸ್ಸಿನ ಎಸ್‌. ಚಿಕ್ಕಮಾದು- 46,126, ಬಿಜೆಪಿಯ ಬಿ.ಎಸ್. ಮರಿಲಿಂಗಯ್ಯ- 19,967, ಪಕ್ಷೇತರರಾದ ಹೊಸೂರು ಕುಮಾರ್- 4,272, ಕನ್ನಡನಾಡು ಪಕ್ಷದ ಬಿ.ಎಸ್‌. ದ್ವಾರಕೀಶ್‌- 2,265, ಜನತಾಪಕ್ಷದ ಪಿ. ಮಹದೇವ- 1,876, ಅರಸು ಸಂಯುಕ್ತ ಪಕ್ಷದ ವಿ. ಪಾಪಣ್ಣ- 651 (ಕಣದಿಂದ ನಿವೃತ್ತರಾಗಿದ್ದರು), ಕನ್ನಡ ಚಳವಳಿ ವಾಟಾಳ್‌ ಪಕ್ಷದ ರಾಜೇಗೌಡ- 639 ಮತ ಗಳಿಸಿದ್ದರು.

ನಟನೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ಗೆದ್ದು ಬೀಗಿದ ಪ್ರಚಂಡ ಕುಳ್ಳ

ದ್ವಾರಕೀಶ್‌ ಅವರು ಐದನೇ ಸ್ಥಾನಕ್ಕೆ ಹೋಗಿ, ಠೇವಣಿ ನಷ್ಟವಾಗಿದ್ದರಿಂದ ಮತ್ತೆಂದು ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.
 

Follow Us:
Download App:
  • android
  • ios