ಹೀರೋ ಮಕ್ಕಳ ವಿರುದ್ಧ ವಿಲನ್ ಮಕ್ಕಳು ತೊಡೆ ತಟ್ಟಿದ್ರಾ? ದರ್ಶನ್ 'ನವಗ್ರಹ' ಬಂದಿದ್ದು ಹೀಗಾ?!

'ನವಗ್ರಹ' ಅಂದಕೂಡ್ಲೆ ಇಡೀ ಕನ್ನಡ ಸಿನಿಜಗತ್ತಿನ ಕಣ್ಣು-ಕಿವಿ ಅರಳಿ ಬಿಡುತ್ತೆ! ಯಾಕಂದ್ರೆ, ಈ ಸಿನಿಮಾ ದರ್ಶನ್​​ರನ್ನ ಚಿತ್ರರಂಗದ ವಿರುದ್ಧ ಸಿಟ್ಟಿಗೇಳಿಸಿದ್ದ ಚಿತ್ರ. ಅಂದು ತನ್ನ ಚಿತ್ರರಂಗದ ವಿರುದ್ಧ ತಾನೇ ಸಮರ ಸಾರಿದ್ದರು ನಟ ದರ್ಶನ್!

Darshan lead Dinakar Thoogudeepa movie Navagraha to Re Release srb

ನಟ ದರ್ಶನ್​ (Darshan) ಬಗ್ಗೆ ಮತ್ತೊಂದು ಎಕ್ಸ್​ಕ್ಲ್ಯೂಸೀವ್ ವಿಷಯ ಸಿಕ್ಕಿದೆ. ಇದನ್ನ ಕೇಳಿದ್ರೆ ದರ್ಶನ್ ಫ್ಯಾನ್ಸ್ ಗೆ ಖುಷಿ ಆಗಬಹುದು.  ಆಶ್ಚರ್ಯನೂ ಪಡಬಹುದು. ನಮ್ ಬಾಸ್ ಹೀಗೆ ಮಾಡಬಾರದಿತ್ತು ಅಂತಾನೂ ಅನ್ನಿಸಬಹುದು. ಹಾಗಾದ್ರೆ ಏನದು ದರ್ಶನ್​​ರ ಆ ಕಹಾನಿ ಅಂತೀರಾ..? ಈ ಎಕ್ಸ್​ಕ್ಲ್ಯೂಸೀವ್ ಡೀಟೇಲ್ಸ್‌ ಈ ಇಲ್ಲಿದೆ ನೋಡಿ.. 

ನಟ ದರ್ಶನ್​ ಚಿತ್ರರಂಗಕ್ಕೆ ಬಂದು ಭರ್ತಿ 25 ವರ್ಷ ತುಂಬಿದೆ. ಈ 25 ವರ್ಷದಲ್ಲಿ ದರ್ಶನ್​ ಸಾಧನೆ ದೊಡ್ಡದ್ದೇ ಇದೆ. ಕಾಂಟ್ರವರ್ಸಿಯಲ್ಲೂ ದರ್ಶನ್ ಕಿಂಗ್ ಅನ್ನೋದು ಗೊತ್ತಿರೋ ಕಥೆಯೇ.. ಒಂದ್​ ಕಡೆ ಕೊಲೆ ಆರೋಪದಲ್ಲಿ ಜೈಲು ವಾಸದಲ್ಲಿರೋ ದರ್ಶನ್​​​​, ಮತ್ತೊಂದ್ ಕಡೆ ದರ್ಶನ್ ಜೈಲಿಂದ ಹೊರ ಬರಲಿ ಅಂತ ಕನವರಿಸುತ್ತಿರೋ ಫ್ಯಾನ್ಸ್​.. ಈ ನೋವಿನ ಮಧ್ಯೆ ನಲಿವಿನ ವಿಚಾರ ಅಂದ್ರೆ ದರ್ಶನ್ ಡ್ರೀಮ್ ಪ್ರಾಜೆಕ್ಟ್​ ಒಂದು ಮತ್ತೆ ತೆರೆ ಮೇಲೆ ರೀ ರಿಲೀಸ್ ಆಗುತ್ತಿದೆ. ಅದೇ ನವಗ್ರಹ ಸಿನಿಮಾ..

ಬರಲಿದೆ ಮತ್ತೊಂದು ಮಹಾ ಪ್ಯಾನ್ ಇಂಡಿಯಾ ಸಿನಿಮಾ ಅಮೀರ್​-ಸೂರ್ಯ ಜೋಡಿಯ 'ಘಜನಿ-2'!

 ವಿಪರೀತ ಬೆನ್ನು ನೋವು ನಟ ದರ್ಶನ್​ರನ್ನ ಆಸ್ಪತ್ರೆಗೆ ತಂದಿದೆ. ಬಳ್ಳಾರಿ ಜೈಲು ವಾಸದಲ್ಲಿರೋ ದಾಸ, ಅಲ್ಲೇ ಕೂತುಕೊಂಡು ಫ್ಯಾನ್ಸ್​ಗಾಗಿ ತನ್ನ ಕನಸಿನ ಸಿನಿಮಾ ನವಗ್ರಹವನ್ನ ಇದೇ ನವೆಂಬರ್​ 8ನೇ ತಾರೀಖು ಮರು ಬಿಡುಗಡೆ ಮಾಡುತ್ತಿದ್ದಾರೆ. ಈ ವಿಷಯವನ್ನ ದರ್ಶನ್ ತಮ್ಮ ದಿನಕರ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.
 
ನವಗ್ರಹ ಅಂದ ಕೂಡ್ಲೆ ಇಡೀ ಕನ್ನಡ ಸಿನಿ ಜಗತ್ತಿನ ಕಣ್ಣು ಕಿವಿ ಅರಳಿ ಬಿಡುತ್ತೆ. ಯಾಕಂದ್ರೆ ಈ ಸಿನಿಮಾ ದರ್ಶನ್​​ರನ್ನ ಚಿತ್ರರಂಗದ ವಿರುದ್ಧ ಸಿಟ್ಟಿಗೇಳಿಸಿದ್ದ ಚಿತ್ರ. ತನ್ನ ಚಿತ್ರರಂಗದ ವಿರುದ್ಧ ತಾನೇ ಸಮರ ಸಾರುವಂತೆ ಮಾಡಿದ್ದ ಸಿನಿಮಾ..
 
2008ರಲ್ಲಿ ನವಗ್ರಹ (Navagraha) ಸಿನಿಮಾ ಬಂದಿತ್ತು. ಆ ಟೈಂನಲ್ಲಿ ಸ್ಯಾಂಡಲ್​ವುಡ್​ ತುಂಬಾ ನೆಪೊಟಿಸಂ ಬೆಂಕಿ ಹೊತ್ತಿತ್ತು. ಕನ್ನಡದಲ್ಲಿ ಹೀರೋಗಳು ಮಕ್ಕಳೇ ಹೀರೋಗಳಾಗುತ್ತಾ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಅಂತ ದೊಡ್ಡ ಟಾಕ್ ಆಗುತ್ತಿತ್ತು. ಕನ್ನಡದಲ್ಲಿ ದೊಡ್ಡ ದೊಡ್ಡ ವಿಲನ್​ಗಳಿದ್ರೂ ಅವರ ಮಕ್ಕಳಿಗೆ ಹೀರೋ ಪಟ್ಟ ಕಟ್ಟೋಕೆ ಯಾವ ನಿರ್ದೇಶಕನೂ ಮನಸ್ಸು ಮಾಡುತ್ತಿಲ್ಲ ಅಂತ ಗಾಂಧಿನಗರ ಪಡಸಾಲೆಯಲ್ಲಿ ಭಾರಿ ಚರ್ಚೆ ಆಗುತ್ತಿತ್ತು. ಆಗ ಆ ಹೀರೋಗಳ ಮಕ್ಕಳ ವಿರುದ್ಧ ವಿಲನ್ಸ್​ ಮಕ್ಕಳನ್ನ ಹೀರೋಗಳಾಗಿ ನಿಲ್ಲಿಸಿದ್ದೇ ನಟ ದರ್ಶನ್. 

ಆ್ಯಕ್ಷನ್​​ ಜೊತೆ ಲವ್​​​​ನಲ್ಲೂ ಬಘೀರ ಹವಾ​; ಮೋಡಿ ಮಾಡುತ್ತಾ ರುಕ್ಮಿಣಿ-ಶ್ರೀಮುರಳಿ ಜೋಡಿ?

ಹೀಗಾಗೆ ನವಗ್ರಹದಲ್ಲಿ ಕನ್ನಡದ ಟಾಪ್ ಮೋಸ್ಟ್ ವಿಲನ್ಸ್​ ಮಕ್ಕಳು ಹೀರೋಗಳಾಗಿ ಬಂದಿದ್ರು..ಯೆಸ್, ಕನ್ನಡದ ಟಾಪ್ ಮೋಸ್ಟ್ ವಿಲನ್​ಗಳಾದ ಸುಧೀರ್​ ಮಗ ತರುಣ್​ ಸುಧೀರ್, ಕೀರ್ತಿರಾಜ್ ಮಗ ಧರ್ಮಕೀರ್ತಿ ರಾಜ್, ಪ್ರಭಾಕರ್ ಮಗ ವಿನೋದ್ ಪ್ರಭಾಕರ್​, ಲೋಕೇಶ್ ಮಗ ಸೃಜನ್ ಲೋಕೇಶ್, ತೂಗುದೀಪ್​ ಶ್ರೀನಿವಾಸ್ ಮಗ ದರ್ಶನ್, ದಿನೇಶ್​​​ ಮಗ ಗಿರಿ ದಿನೇಶ್,  ಸುಂದರ್​ ಕೃಷ್ಣ ಅರಸ್ ಮಗ ನಾಗೇಂದ್ರ ಅರಸ್​ ನವಗ್ರಹದಲ್ಲಿ ಹೀರೋಗಳಾಗಿ ಮಿಂಚಿದ್ರು.. 

ಚಿತ್ರರಂಗದಲ್ಲಿ ಹೀರೋಗಳ ಮಕ್ಕಳೇ ಬೆಳಿತಾರೆ ಅಂತ ಸಿಡಿದೆದ್ದಿದ್ದ ದರ್ಶನ್​ ತನ್ನ ತಮ್ಮ ದಿನಕರ್​​​ರಿಂದಲೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿಸಿದ್ರು. ಈ ಸಿನಿಮಾ ಬಂದ ಮೇಲೆ ನಟ ದರ್ಶನ್ ಚಿತ್ರರಂಗದ ಬೇರೆ ಹೀರೋಗಳ ಜೊತೆ ಅಷ್ಟಾಗಿ ಬೆರೆಯದೇ ತನ್ನ ಸುತ್ತ ಹೊಸ ಗ್ಯಾಂಗ್ ಕಟ್ಟಿಕೊಂಡಿದ್ರು. ಸಪರೇಟ್ ಆಗಿ ಒಬ್ಬೊಂಟಿಯಾಗಿ ಇರೋ ಪ್ರಯತ್ನ ಮಾಡುತ್ತಿದ್ರು. ಅಷ್ಟರಲ್ಲೇ ದರ್ಶನ್​ಗೆ ನಟ ಸುದೀಪ್​ ಜೊತೆ ಸ್ನೇಹ ಬೆಳೆದಿತ್ತು.

ಕೆಜಿಎಫ್ ಹೆಸರು ಹೇಳಿ ಪ್ರಚಾರ ಮಾಡ್ತಿದ್ಯಾ ಪುಷ್ಪ-2 ತಂಡ: ಯಶ್ ಮೇಲೆ ಹೊಟ್ಟೆ ಉರಿನಾ?
 
ನವಗ್ರಹ ಸಿನಿಮಾ ನಟ ದರ್ಶನ್​ರ ಮತ್ತೊಂದು ಮುಖವನ್ನ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡಿತ್ತು. ತನ್ನ ಸುತ್ತಲು ಹೊಸ ಹುಡುಗರ ಗ್ಯಾಂಗ್ ಕಟ್ಟಿದ್ದ ದರ್ಶನ್ ಸುದೀಪ್ ಜೊತೆಗಿನ ಸ್ನೇಹ ಗಟ್ಟಿ ಮಾಡಿಕೊಂಡಿದ್ರು. ಇದರ ಜೊತೆ ವಿಲನ್​ಗಳ ಮಕ್ಕಳು ಫ್ರೆಂಡ್ಸ್​ ಅಂತ ಸುದೀರ್ ಮಕ್ಕಳಾದ ತರುಣ್ ಲೋಕೇಶ್ ಪುತ್ರ ಸೃಜನ್ ಲೋಕೇಶ್ ಜೊತೆ ಫ್ರೆಂಡ್​ಶಿಪ್​ ಸ್ಟ್ರಾಂಗ್ ಆಗಿತ್ತು.

ಆದ್ರೆ ದರ್ಶನ್​ ನಡವಳಿಕೆ ಸುದೀಪ್ ಜೊತೆಗಿನ ಸ್ನೇಹ ಮಾತ್ರವಲ್ಲ, ಗಜ ಸೃಜ ಅಂತ ಫೇಮಸ್ ಆಗಿದ್ದ ಜೋಡಿ ಸೃಜನ್​ ಹಾಗು ದರ್ಶನ್ ಮಧ್ಯೆಯೂ ಬಿರುಕು ತಂದಿತ್ತು.. ನಟ ದರ್ಶನ್​ರ ಮುಂಗೋಪ ಇಂದು ಜೈಲು ವಾಸಕ್ಕೆ ತಂದು ನಿಲ್ಲಿಸಿದೆ. ಇದೇ ಮುಂಗೋಪ ಸ್ವಂತ ತಮ್ಮ ದಿನಕರ್​ ಜೊತೆಗೂ ಕಿತ್ತಾಡಿಕೊಂಡು ಅಣ್ತಮ್ಮಂದಿರು ದೂರ ಆಗೋ ಹಾಗೆ ಮಾಡಿತ್ತು.

'ಕಲಾಸಿಪಾಳ್ಯ' ಡೈರೆಕ್ಟರ್‌ ಹೀಗಂದ್ರು: ಎಲ್ಲರ ಮನೆ ದೋಸೆನೂ ತೂತೇರಿ, ಯಾಕೆ ಇದೆಲ್ಲಾ ಬೇಕು?

ಇದು ನವಗ್ರಹ2 ಸಿನಿಮಾ ಮಾಡೋ ಪ್ಲ್ಯಾನ್ ನಲ್ಲಿದ್ದ ದಿನಕರ್​​ ಕನಸಿಗೆ ​ಬ್ರೇಕ್ ಹಾಕಿತ್ತು. ಈಗ ಅಣ್ಣ ದರ್ಶನ್ ನ ಜೈಲಿನಿಂದ ಬಿಡಿಸಲು ದಿನಕರ್​ ಮತ್ತೆ ಬಂದಿದ್ದಾರೆ. ಇದೇ ಟೈಮ್​ನಲ್ಲಿ ಈ ಅಣ್ತಮ್ಮಂದಿರ ನವಗ್ರಹ ಸಿನಿಮಾವನ್ನ ರೀ ರಿಲೀಸ್ ಮಾಡೋಕೆ ಜೈಲಿನಲ್ಲೇ ಕೂತು ದರ್ಶನ್ ಸ್ಕೆಚ್ ಹಾಕಿದ್ದಾರೆ. ಇದು ನವಗ್ರಹ2 ಸಿನಿಮಾಗೆ ನಾಂದಿ ಹಾಡುತ್ತಾ ಅಂತ ಕಾದು ನೋಡ್ಬೇಕಿದೆ.

Latest Videos
Follow Us:
Download App:
  • android
  • ios