ಜನಮೆಚ್ಚಿದ ಬಳೆಪೇಟೆ ಟೀಸರ್: ಭೂಗತ ಜಗತ್ತಿನ ಕಥೆ
ಮೆಜೆಸ್ಟಿಕ್ ಪಕ್ಕದ ಬಳೆಪೇಟೆಯನ್ನೇ ಟೈಟಲ್ಲಾಗಿಟ್ಟುಕೊಂಡು ರೌಡಿಸಂ ಕತೆ | ಟೀಸರ್ಗೆ ಭಾರೀ ಮೆಚ್ಚುಗೆ
ಮೆಜೆಸ್ಟಿಕ್ ಪಕ್ಕದ ಬಳೆಪೇಟೆಯನ್ನೇ ಟೈಟಲ್ಲಾಗಿಟ್ಟುಕೊಂಡು ರೌಡಿಸಂ ಕತೆ ಹೇಳಲು ಹೊರಟಿದೆ ರಿಷಿಕೇಶ್ ಆ್ಯಂಡ್ ಟೀಮ್. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಲಾಂಚ್ ಆಗಿದ್ದು, ಈಗ ಸುಮಾರು 2 ಲಕ್ಷ ವೀಕ್ಷಣೆ ದಾಖಲಿಸಿದೆ.
‘ಒಂದು ದೊಡ್ಡ ಊರು. ಆ ಊರಿನ ತುಂಬ ಕತ್ತಲಿತ್ತು. ಆ ಕತ್ತಲಲ್ಲಿ ಒಬ್ಬ ರಾಜ ಬೆಳಕನ್ನು ಹುಡ್ಕೊಂಡು ಹೋಗ್ತಿದ್ದ..’ ಅನ್ನೋ ಇಂಟರೆಸ್ಟಿಂಗ್ ಸಾಲಿನ ಮೂಲಕ ಶುರುವಾಗೋ ಟ್ರೇಲರ್ ರೌಡಿಸಂ ಕತೆಯನ್ನು ಹೊಸದಾಗಿ ನಿರೂಪಿಸೋ ಹಾಗೆ ಕಾಣುತ್ತೆ.
ಸ್ಯಾಂಡಲ್ವುಡ್ ಒತ್ತಡಕ್ಕೆ ಮಣಿದ ಸರ್ಕಾರ: ಥಿಯೇಟರ್ ಹೌಸ್ ಫುಲ್ಗೆ ಅನುಮತಿ
‘ಸಿನಿಮಾದ ಪೂರ್ತಿ ಸ್ಕಿ್ರಪ್ಟ್ ರೆಡಿಯಾಗ್ತಿದ್ದದ್ದೇ ಸೆಟ್ನಲ್ಲಿ. ಹಾಗಾಗಿ ಇದು ಸಿದ್ಧ ಮಾದರಿಯ ಸಿನಿಮಾ ಅಲ್ಲ. ಬದಲಿಗೆ ಕ್ರಾಫ್ಟ್ವರ್ಕ್ ಥರ ಇಡೀ ಸಿನಿಮಾವನ್ನು ಹೆಣೆದಿದ್ದೇವೆ. ಡಾರ್ಕ್ ಕಾಮಿಡಿಯಲ್ಲಿ ರೌಡಿಸಂ ಕತೆ ಹೇಳ್ತೇವೆ’ ಅಂದರು ರಿಷಿಕೇಶ್.
ಅವರು ಈ ಸಿನಿಮಾದ ನಿರ್ದೇಶಕ ಕಮ್ ಸಿನಿಮಟೋಗ್ರಾಫರ್. ಕತೆ, ಚಿತ್ರಕತೆಯೂ ಇವರದೇ. ತಮ್ಮ ಕಲಾಕೃತಿಗಾಗಿ ರಾಷ್ಟ್ರಮಟ್ಟದ ಬಹುಮಾನ ಪಡೆದ ಕಲಾವಿದನೂ ಹೌದು. ಆ ಕಾರಣಕ್ಕೋ ಏನೋ ಟ್ರೇಲರ್ ಕೆಲವೆಡೆ ಅಸಂಗತ ಆರ್ಟ್ಪೀಸ್ ಥರ ಕಾಣುತ್ತೆ.
ರೊಚ್ಚಿಗೆದ್ದ ಹೆಣ್ಣಿನ ಪಾತ್ರದಲ್ಲಿ ಅನನ್ಯಾ ಭಟ್
ನ್ಯೂಸ್ ರೀಡರ್ ಆಗಿದ್ದ ಪ್ರಮೋದ್ ಬೋಪಣ್ಣ ಈ ಸಿನಿಮಾದ ಹೀರೋ. ಅನಿತಾ ಭಟ್ ಲೀಡ್ ಪಾತ್ರದಲ್ಲಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಮೇಕಪ್ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಮಯೂರ್ ಪಟೇಲ್ ಸೂಪರ್ ಕಾಪ್ ಆಗಿದ್ದಾರೆ. ಉಮೇಶ್ ಬಣಕಾರ್ ಮುಖ್ಯ ಪಾತ್ರದಲ್ಲಿದ್ದಾರೆ. ಆರ್ವಿಎಸ್ ಪ್ರೊಡಕ್ಷನ್ನಲ್ಲಿ ಬನಾನಾ ಶಿವರಾಮ್ ಚಿತ್ರ ನಿರ್ಮಿಸಿದ್ದಾರೆ.