Asianet Suvarna News Asianet Suvarna News

ನಾನು ಯಾರನ್ನೂ ಸುಮ್ಮನೇ ಕೆಣಕಲ್ಲ : ಎಚ್‌ಡಿಕೆಗೆ ಉತ್ತರ ಕೊಟ್ಟ ಸಿದ್ದರಾಮಯ್ಯ

ನಾನು ಯಾರನ್ನೂ ಸುಮ್ಮ ಸುಮ್ಮನೆ ಕೆಣಕುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

Siddaramaiah Reacts Over HD Kumaraswamy Statement snr
Author
Bengaluru, First Published Oct 26, 2020, 1:39 PM IST

ಕಲಬುರಗಿ (ಅ.26):  ನಾನು ಯಾವತ್ತೂ ಹಿರೋ.... ವಿಲನ್ ಅಲ್ಲವೇ ಅಲ್ಲ.. ಹೀಗೆಂದು ಕಲಬುರಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಹಿಂದಿನ ಸರ್ಕಾರ ಬೀಳಿಸುವಲ್ಲಿ ಸಿದ್ರಾಮಯ್ಯ ಪಾತ್ರ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ನನ್ನನ್ನು ಸುಮ್ಮನೆ ಕೆಣಕಬೇಡಿ ಎಂಬ ಎಚ್ಡಿಕೆ ಎಚ್ಚರಿಕೆಗೆ ನಸುನಕ್ಕು ಸುಮ್ಮ ಸುಮ್ಮನೆ ನಾನು ಯಾರನ್ನೂ ಕೆಣಕುವುದಿಲ್ಲ ಎಂದು ಹೇಳಿದರು. 

ನನ್ನ ಮೇಲೆ ಟೀಕೆ ಮಾಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ಆ ಉತ್ತರದಿಂದ ಅವರಿಗೆ ಮುಜುಗರವಾಗುವದಾದರೆ ನಾನೇನು ಮಾಡಲಿ ? ಸರಕಾರ ಸಿದ್ರಾಮಯ್ಯ ಬೀಳಿಸಿದ್ದು ಅಂತಾರೆ. ಕುಣಿಯಲು ಬಾರದವರು ನೆಲ ಡೊಂಕು ಅಂದಂತಿದೆ ಈ ಮಾತು ಎಂದು ಸಿದ್ದರಾಮಯ್ಯ ಹೇಳಿದರು. 

ಇಳಿದ ಭೀಮೆಯ ಅಬ್ಬರ; ನಿರಾಳರಾಗುತ್ತಿರುವ ಸಂತ್ರಸ್ತರಿಗೆ ಮತ್ತೆ ಆತಂಕ ಶುರು ...

ಶಾಸಕರ ಕಷ್ಟ-ಸುಖ ಆಲಿಸಿ ಅವರ ವಿಶ್ವಾಸ ಗಳಿಸಬೇಕಿರುವುದು ಸಿಎಂ ಕೆಲಸ ಅಲ್ಲವೇ ? ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸಿದರೆ ಇದು ಸಾಧ್ಯವೇ ? ಇದನ್ನೇ ನಾನು ಹೇಳಿದ್ದಕ್ಕೆ ವಿಲನ್ ಅಂತಾರೆ. ನಾನು ಯಾವತ್ತಿಗೂ ವಿಲನ್ ಅಲ್ಲವೇ ಅಲ್ಲ. ನನ್ನದೇನಿದ್ದರೂ ಹೀರೋ ಪಾತ್ರ.. . ನನ್ನ ಬಗ್ಗೆ ಜನ ಏನಂತಾರೆ ನೀವೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದರು.

Follow Us:
Download App:
  • android
  • ios