Asianet Suvarna News Asianet Suvarna News

Udupi Election Results 2023: ಸೋಲಿನ ಸಾಗರದಲ್ಲಿ ಬಿಜೆಪಿಗೆ ಉಡುಪಿ ಹ್ಯಾಪಿ

ಕಳೆದ ಬಾರಿಯಂತೆ ಈ ಬಾರಿ ಕೂಡ  ಜಿಲ್ಲೆಯ ಎಲ್ಲ 5 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡು, ಕಾಂಗ್ರೆಸ್ ಮುಕ್ತ ಉಡುಪಿ ಆಗಿದೆ.

karnataka-election-result-2023-bjp clean sweep Udupi-assembly-constituencies-winning-candidates gow
Author
First Published May 13, 2023, 7:13 PM IST

ಉಡುಪಿ (ಮೇ.13): ಕಳೆದೆರಡು ದಶಕಗಳಿಂದ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ  ಅರಳಿದ್ದು, ಕಳೆದ ಬಾರಿಯಂತೆ ಈ ಬಾರಿ ಕೂಡ  ಜಿಲ್ಲೆಯ ಎಲ್ಲ 5 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿದೆ.  ಈ ಬಾರಿ  ಉಡುಪಿ ಜಿಲ್ಲೆಯಲ್ಲಿ  5 ಕ್ಷೇತ್ರಗಳ ಪೈಕಿ 4ರಲ್ಲಿ ಹಾಲಿ ಶಾಸಕರನ್ನು ಬದಲಾಯಿಸಿ, ಹೊಸ ಮುಖಗಳನ್ನು ಸ್ಪರ್ಧೆಗಿಳಿಸಿತ್ತು. 5 ಕ್ಷೇತ್ರಗಳನ್ನು ಕೂಡ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.   

ಒಟ್ಟು ಮತದಾರರು : 1041672
ಪುರುಷ ಮತದಾರರು : 502836 
ಮಹಿಳಾ ಮತದಾರರು : 538823
ಇತರ: 13
ಶೇಕಡಾವಾರು ಮತದಾನ : 78.57%

ಉಡುಪಿ ವಿಧಾನಸಭಾ ಕ್ಷೇತ್ರ: ಗೋಕಳ್ಳಸಾಗಣೆ, ಹಿಜಾಬ್‌ ವಿರುದ್ಧದ ಹೋರಾಟದಿಂದ ಬೆಳಕಿಗೆ ಬಂದ ಹಿಂದೂ ಯುವನಾಯಕ ಯಶಪಾಲ್‌ ಸುವರ್ಣಗೆ ಬಿಜೆಪಿ ಟಿಕೆಟ್‌ ನೀಡಿ ಗೆಲ್ಲಿಸಿದೆ. ಈ ಮೂಲಕ ಯುವನಾಯಕ ಯಶಪಾಲ್‌ ಸುವರ್ಣ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಮೊದಲಬಾರಿಗೆ ಕಾಲಿಡುತ್ತಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 6 ಬಾರಿ ಗೆಲುವು ತಂದು ಕೊಟ್ಟ, ಮೊಗವೀರ ಸಮುದಾಯದ ಮಧ್ವರಾಜ್‌ ಕುಟುಂಬದ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಈಗ ಬಿಜೆಪಿ ಸೇರಿರುವುದರಿಂದ, ಕಾಂಗ್ರೆಸ್‌ ಅದೇ ಸಮುದಾಯದ ಹೊಸಮುಖ, ಉದ್ಯಮಿ ಪ್ರಸಾದ್‌ ರಾಜ್‌ ಕಾಂಚನ್‌ಗೆ ಟಿಕೆಟ್‌ ನೀಡಿತ್ತು. ಆದರೆ ಸೋಲಾಗಿದೆ.

  • ಬಿಜೆಪಿ: ಯುವನಾಯಕ ಯಶಪಾಲ್‌ ಸುವರ್ಣ - 96122 ಮತಗಳು (ಗೆಲುವಿನ ಅಂತರ 32,318)
  • ಕಾಂಗ್ರೆಸ್: ಪ್ರಸಾದ್‌ ರಾಜ್‌ ಕಾಂಚನ್‌ - 63804

ಕುಂದಾಪುರ  ವಿಧಾನಸಭಾ ಕ್ಷೇತ್ರ:  ಕಿರಣ್‌ ಕೊಡ್ಗಿಗೆ ಕುಂದಾಪುರದ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು, 56 ಸಾವಿರ ಮತಗಳ ಅಂತರದಲ್ಲಿ ಗೆದ್ದ ದಾಖಲೆ ಬರೆದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಸ್ವಯಂ ನಿವೃತ್ತಿ ಘೋಷಿಸಿ, ತಮ್ಮ ಶಿಷ್ಯ ಕಿರಣ್‌ ಕೊಡ್ಗಿಗೆ ಟಿಕೆಟ್‌ ಕೊಡಿಸಿದ್ದರು. ಇಲ್ಲಿಯೂ ಕಾಂಗ್ರೆಸ್‌, ಹೊಸಮುಖ ದಿನೇಶ್‌ ಹೆಗ್ಡೆ ಮೊಳಹಳ್ಳಿಗೆ ಟಿಕೆಟ್‌ ನೀಡಿತ್ತು.  ಆದರೆ ಗೆಲುವು ಕಂಡಿಲ್ಲ.
ಬಿಜೆಪಿ: ಕಿರಣ್‌ ಕೊಡ್ಗಿ  (ಹೊಸ ಮುಖ) - 101102 ಮತಗಳು (ಗೆಲುವಿನ ಅಂತರ  40930)
ಕಾಂಗ್ರೆಸ್:  ದಿನೇಶ್‌ ಹೆಗ್ಡೆ -  60172  ಮತಗಳು 

ಬೈಂದೂರು ವಿಧಾನಸಭಾ ಕ್ಷೇತ್ರ: ಆರ್‌ಎಸ್‌ಎಸ್‌ನಲ್ಲಿ ಪಳಗಿದ, ಬರಿಗಾಲಲ್ಲಿ ಓಡಾಡುವ ಸರಳ ವ್ಯಕ್ತಿತ್ವದ ಗುರುರಾಜ್‌ ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ರಾಜಕೀಯ ಜೀವನದಲ್ಲಿ 4 ಬಾರಿಗೆ ಗೆದ್ದಿದ್ದ  ಹೋಟೆಲ್‌ ಉದ್ಯಮಿ ಗೋಪಾಲ ಪೂಜಾರಿ ಈ ಬಾರಿಯೂ ಸೋತಿದ್ದು, ಜಿಲ್ಲೆಯಲ್ಲಿ 2 ಬಾರಿ ಸೋಲು ಕಂಡತಾಗಿದೆ.
ಬಿಜೆಪಿ: ಗುರುರಾಜ ಶೆಟ್ಟಿಗಂಟಿಹೊಳೆ (ಹೊಸ ಮುಖ) - 97447ಮತಗಳು (ಗೆಲುವಿನ ಅಂತರ 15,929)
ಕಾಂಗ್ರೆಸ್: ಗೋಪಾಲ ಪೂಜಾರಿ - 81518 ಮತಗಳು

KODAGU ELECTION RESULT 2023: ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್

ಕಾಪು ವಿಧಾನ ಸಭಾ ಕ್ಷೇತ್ರ: ಬಿಜೆಪಿ ಹೊಸಮುಖ ಬಂಟ ಸಮುದಾಯದ ಸುರೇಶ್‌ ಶೆಟ್ಟಿಗುರ್ಮೆ ಗೆಲುವು ಸಾಧಿಸಿದ್ದು,  ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಕಾಂಗ್ರೆಸ್‌ ನ ಬಿಲ್ಲವ ಸಮುದಾಯದ ಮಾಜಿ ಸಚಿವ ವಿನಯಕುಮಾರ್‌ ಸೊರಕೆಗೆ ಇಲ್ಲಿ ಸೋಲಾಗಿದೆ. ಇಲ್ಲಿ ಮೊಗವೀರರೇ ಅಧಿಕ ಸಂಖ್ಯೆಯಲ್ಲಿರುವುದು.
ಬಿಜೆಪಿ: ಸುರೇಶ್‌ ಶೆಟ್ಟಿಗುರ್ಮೆ (ಹೊಸ ಮುಖ) - 75118 ಮತಗಳು (ಗೆಲುವಿನ ಅಂತರ 11261)
ಕಾಂಗ್ರೆಸ್: ವಿನಯಕುಮಾರ್‌ ಸೊರಕೆ - 63857 ಮತಗಳು

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!
 
ಕಾರ್ಕಳ ವಿಧಾನಸಭಾ ಕ್ಷೇತ್ರ:  ಹಿಂದುತ್ವದ ಫೈರ್‌ ಬ್ರ್ಯಾಂಡ್‌, 3 ಬಾರಿ ಗೆದ್ದು ಸಚಿವರಾಗಿರುವ ಸುನಿಲ್‌ ಕುಮಾರ್‌ ಈಗ 4ನೇ ಬಾರಿಗೆ ಗೆಲುವು ಕಂಡಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗುತ್ತಿಗೆದಾರ ಮುನಿಯಾಲು ಉದಯಕುಮಾರ್‌ ಶೆಟ್ಟಿ ತೀವ್ರ ಪೈಪೋಟಿ ನೀಡಿ ಸೋಲು ಕಂಡಿದ್ದಾರೆ. ಪ್ರಖರ ಹಿಂದುತ್ವವಾದಿ ಶ್ರೀರಾಮಸೇನೆಯ ಪ್ರಮೋದ್‌ ಮುತಾಲಿಕ್‌ ಸೋಲು ಕಂಡಿದ್ದಾರೆ. 
ಬಿಜೆಪಿ: ಸುನಿಲ್‌ ಕುಮಾರ್‌ - 76019 ಮತಗಳು (ಗೆಲುವಿನ ಅಂತರ 4404)
ಕಾಂಗ್ರೆಸ್:  ಮುನಿಯಾಲು ಉದಯಕುಮಾರ್‌ ಶೆಟ್ಟಿ - 71615 
ಪಕ್ಷೇತರ: ಪ್ರಮೋದ್‌ ಮುತಾಲಿಕ್‌  - 4432 

Follow Us:
Download App:
  • android
  • ios