03:28 PM (IST) May 13

ಮೊದಲ ಗೆಲವು ಸಂತೋಷ ತಂದಿದೆ: ವಿಜಯೇಂದ್ರ

ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಹೇಳಿಕೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಸಂತಸ ತಂದಿದೆ.ತಂದೆ ಮಾಜಿ ಸಿಎಂ ಬಿಎಸ್ ವೈ ಮಾರ್ಗದರ್ಶನ ಹಾಗೂ ಸಹೋದರ ಸಂಸದ ಬಿ ವೈ ರಾಘವೇಂದ್ರ ಹಾಗೂ ಕ್ಷೇತ್ರದ ಜನತೆಯ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದ ಹಿನ್ನೆಲೆಯಲ್ಲಿ ಸಮರ್ಥವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೆಲಸ ಮಾಡುತ್ತೇವೆ. ಕಡಿಮೆ ಅಂತರದ ಗೆಲುವಿನ ವಿಚಾರ ಮತಗಳು ಎಷ್ಟೇ ಬಂದರೂ ಗೆಲುವು ಗೆಲುವಾಗಿಯೇ ಇರುತ್ತದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿಲ್ಲ. ಕಾಂಗ್ರೆಸ್ನ ಸುಳ್ಳಿನ ಕಂತೆಗಳು ಹಾಗೂ ಗ್ಯಾರಂಟಿ ಕಾರ್ಡ್ ಗಳನ್ನು ಮತದಾರರನ್ನು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡೋಣ. 

03:25 PM (IST) May 13

ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಭರ್ಜರಿ ಜಯ.

ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಭರ್ಜರಿ ಜಯ. ಅಧಿಕೃತ ಗೆಲುವು ಘೋಷಿಸಿದ ಚುನಾವಣಾ ಅಧಿಕಾರಿಗಳು. 18,619 ಮತಗಳ ಅಂತರದಲ್ಲಿ ಭರ್ಜರಿ ಗೆಲುವು. ಗೆಲುವಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ.ಮಹದೇವಪ್ಪ. ಜನರ ಅಲೆ ಹೊರತು ಪಡಿಸಿ ಇನ್ಯಾವುದೇ ಅಲೆ ಕೆಲಸ ಮಾಡಿಲ್ಲ. ಹಿಂದೆ ನಾನು ಶಾಸಕನಾಗಿದ್ದಾಗ ಮಾಡಿದ್ದ ಕೆಲಸಗಳನ್ನು ಜನ ಮಚ್ಚಿ ಮತ ಹಾಕಿದ್ದಾರೆ.
ನನ್ನ ವೈಯಕ್ತಿಕ ಆಸೆ ಆಕಾಂಕ್ಷೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮೈಸೂರಿನಲ್ಲಿ ಡಾ.ಎಚ್.ಸಿ. ಮಹದೇವಪ್ಪ ಹೇಳಿಕೆ.

03:23 PM (IST) May 13

ಹೆಬ್ಬಾಳದಲ್ಲಿ ಕಟ್ಟಾ ಜಗದೀಶ್‌ಗೆ ಸೋಲು

ಬೆಂಗಳೂರಿನ ಹೆಬ್ಬಾಳದಲ್ಲಿ ಕಾಂಗ್ರೆಸ್‌ನ ಭೈರತ ಸುರೇಶ್, ಬಿಜೆಪಿಯ ಕಟ್ಟಾ ಜಗದೀಶ್ ಅವರನ್ನು ಸೋಲಿಸಿದ್ದಾರೆ. 

ಬಳ್ಳಾರಿ : ರಾಹುಲ್ ಗಾಂಧಿ ಐರನ್ ಲೆಗ್ ಅಲ್ಲ. ಗೋಲ್ಡನ್ ಲೆಗ್.. ಅವರು‌ ಬಳ್ಳಾರಿಗೆ ಬಂದ ಕಾರಣ ಗೆದ್ದಿರುವೆ. ಬಳ್ಳಾರಿ ನಗರ ಕ್ಷೇತ್ರದಿಂದ ಗೆದ್ದಿರೋ‌‌ ಭರತ್ ರೆಡ್ಡಿ ಹೇಳಿಕೆ. ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಬಂದ ಹಿನ್ನಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ ಎನ್ನುವ ವಿಶ್ವಾಸವಿದೆ. ತಂತ್ರಗಾರಿಕೆಯಿಂದ ಕುತಂತ್ರದಿಂದ ಸೋಲಿಸಲು ಯಾರೆಲ್ಲ ಪ್ರಯತ್ನ ಮಾಡಿದ್ರು ನಾನು ಗೆದ್ದೆ.

ಯಾರೇ ಕಾಂಗ್ರೆಸ್ ಪಕ್ಷ ಬಿಟ್ಟು ಹೋದ್ರು ಅವರು ಜೀರೋ ಆಗ್ತಾರೆ. ಪರೋಕ್ಷವಾಗಿ ಅನಿಲ್ ಲಾಡ್ ದಿವಾಕರ ಬಾಬು ಟಾಂಗ್ ನೀಡಿದ ಭರತ್. ಕಾರ್ಯಕರ್ತರ ಮತ್ತು ಜನರ ಆಶೀರ್ವಾದ ದಿಂದ 37 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ.

03:16 PM (IST) May 13

ಮಾಧ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್

ಔರಾದ್ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಪ್ರಭು ಚೌಹಾಣ್. ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ದ ಅಸಮಾಧಾನ ಹೊರಹಾಕಿ‌ದ ಜೌಹಾಣ್. ನನಗೆ ಸೋಲಿಸಲು ಕೇಂದ್ರ ಸಚಿವ ಭಗವಂತ ಖುಬಾ ಕುತಂತ್ರ ಮಾಡಿದ್ದರು ಎಂದು ಕಣ್ಣೀರಾಕಿದ ಚೌಹಾಣ್. ಹೆತ್ತ ತಾಯಿಗೆ, ಮೋಸ ಮಾಡೊ‌ ಕೆಲಸವನ್ನ ಭಗವಂತ ಖುಬಾ ಮಾಡಿದ್ದಾರೆ. ಔರಾದ್‌ನಲ್ಲಿ 300 ಜನರನ್ನು ಬಿಟ್ಟು, ಸೋಲಿಸಲು ಕುತಂತ್ರ ಮಾಡಿದ್ರು. ಆದ್ರೆ ಔರಾದ್ ಜನ ನನ್ನ ಕೈ ಹಿಡಿದಿದ್ದಾರೆ.

ಹಿಂದೆ ಲೋಕಸಬಾ ಚುನಾವಣೆಯಲ್ಲಿ ನಾವೇ ನಿಂತು ಅವರ ಚುನಾವಣೆ ಮಾಡಿದ್ದೆವು. ಆದರೆ ಭಗವಂತ ಖೂಬಾ, ನನ್ನ ವಿರುದ್ದ ಯಾಕೇ ಷಡ್ಯಂತ್ರ ಮಾಡಿದ್ರು ಗೊತ್ತಿಲ್ಲ. ಪ್ರಭು ಚೌಹಾಣ್ ಸೋಲಿಸಬೇಕು ಎಂದು ಮನೆ ಮನೆಗೆ ಹೋಗಿ ಭಗವಂತ ಖುಬಾ ಮತ್ತು ಟೀಂ ಪ್ರಚಾರ ಮಾಡಿದ್ದಾರೆ. ಕೇಂದ್ರ ಸಚಿವ ಭಗವಂತ ಖುಬಾ ನನ್ನ ಸೋಲಿಸಬೇಕು ಅಂತಾ ಪ್ರಯತ್ನ ಮಾಡಿದ್ರು ಜನ ನನ್ನ ಕೈ ಬಿಟ್ಟಿಲ್ಲಾ. ನಾನು ಭಗವಂತ ಖುಬಾ ಏನೂ ಮೋಸ ಮಾಡದೇ ಇದ್ರೂ, ನನಗೆ ದೋಖಾ ಮಾಡಿದ್ರು.

ನಾನು ಸೋಲಬೇಕು ಅಂತಾ, ಭಗವಂತ ಖುಬಾ ಕಾಂಗ್ರೆಸ್‌ಗೆ ಫಂಡಿಂಗ್ ಮಾಡಿದ್ದಾರೆ. ನನಗೆ ಬಹಳ ನೋವಾಗಿದೆ ಎಂದು ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್. ನಮ್ಮ‌ ಕಾರ್ಯಕರ್ತರಿಗೆ ಭಗವಂತ ಖುಬಾ ಅವರೆ ಬೇರೆ ಪಕ್ಷದ ಅಭ್ಯರ್ಥಿಗೆ ಹಾಕಿ ಅಂತಾರೆ. ಅವರ ವಿರುದ್ದ ಮುಂದಿನ ಚುನಾವಣೆಯಲ್ಲಿ ನೋಡೊಣ ಎಂದ ಪ್ರಭು ಚೌಹಾಣ್ ಸವಾಲ್. 

03:14 PM (IST) May 13

ಹೊಸದುರ್ಗದಲ್ಲಿ ಕಾಂಗ್ರೆಸ್‌ಗೆ ಗೆಲವು

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮತ‌ ಎಣಿಕೆ ಮುಕ್ತಾಯ ( FINAL RESULT) 

ಕಾಂಗ್ರೆಸ್ ಅಭ್ಯರ್ಥಿ ಬಿಜಿ ಗೋವಿಂದಪ್ಪ ಪಡೆದ ಮತಗಳು 81050

ಬಿಜೆಪಿ ಅಭ್ಯರ್ಥಿ ಎಸ್.ಲಿಂಗಮೂರ್ತಿ ಪಡೆದ ಮತಗಳು -48234

ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ ಗೋವಿಂದಪ್ಪ 32816 ಮತಗಳ ಅಂತರದಿಂದ ಗೆಲುವು

03:06 PM (IST) May 13

Karnataka Election Results:ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ: ಸಿದ್ದರಾಮಯ್ಯ

ಯಾವುದೇ ಪಕ್ಷಕ್ಕೂ ಬಹುಮತ ಸಿಗೋಲ್ಲ ಎಂದುಕೊಂಡಿದ್ದ ರಾಜಕೀಯ ವಿಶ್ಲೇಷಕರ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಸುಮಾರು 140 ಸೀಟ್ಸ್ ಗೆಲ್ಲುವ ಸೂಚನೆ ಇದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

02:48 PM (IST) May 13

ಕಲಬುರಗಿ ಜಿಲ್ಲೆಯಲ್ಲಿ ಖರ್ಗೆ ಕಮಾಲ್

ಮತ್ತೊಮ್ಮೆ ಕಾಂಗ್ರೆಸ್ ನ ಭದ್ರಕೋಟೆಯಾದ ಕಲಬುರಗಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಭಾರಿ ಬೆಂಬಲ. ಕಲಬುರಗಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಗೆಲುವು

ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು

1. ಚಿತ್ತಾಪುರ - ಪ್ರಿಯಾಂಕ್ ಖರ್ಗೆ

2. ಸೇಡಂ - ಡಾ ಶರಣಪ್ರಕಾಶ್ ಪಾಟೀಲ್

3. ಅಫಜಲಪುರ- ಎಮ್‌ವೈ ಪಾಟೀಲ್

4. ಆಳಂದ - ಬಿಆರ್ ಪಾಟೀಲ್

5. ಕಲಬುರಗಿ ಉತ್ತರ - ಖನೀಜ್ ಫಾತೀಮಾ

6. ಕಲಬುರಗಿ ದಕ್ಷಿಣ - ಅಲ್ಲಮಪ್ರಭು ಪಾಟೀಲ್

7. ಜೇವರ್ಗಿ - ಡಾ. ಅಜಯಸಿಂಗ್ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಸವರಾಜ್ ಮತ್ತಿಮಡು ಮತ್ತು ಚಿಂಚೋಳಿ ಮತಕ್ಷೇತ್ರದಲ್ಲಿ ಬಿಜೆಪಿಯ ಅವಿನಾಶ ಜಾಧವ್ ಗೆಲುವು

9 ರಲ್ಲಿ 7 ಕ್ಷೇತ್ರ ಬಾಚಿಕೊಂಡ ಕಾಂಗ್ರೆಸ್ ಎರಡು ಕ್ಷೇತ್ರ ಮಾತ್ರ ಉಳಿಸಿಕೊಂಡ ಬಿಜೆಪಿ

02:47 PM (IST) May 13

ಸೋಲಿನ ಹೊಣೆ ನನ್ನದೇ: ಬಸವರಾಜ ಬೊಮ್ಮಾಯಿ

ಹಾವೇರಿ: ಜನರ ಈ ತೀರ್ಪನ್ನು ಅತ್ಯಂತ ಗೌರವ ಪೂರ್ವಕವಾಗಿ ನಾನು ಒಪ್ಪಿಕೊಳ್ಳುತ್ತೇನೆ. ಬಿಜೆಪಿಯ ಈ ಸೋಲಿನ‌ ಜವಾಬ್ದಾರಿಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನಾನೇ ಹೊರುತ್ತೇನೆ. ಇದನ್ನು ಯಾರ ಹೆಗಲಿಗೂ ಹಾಕುವುದಿಲ್ಲ ಎಂದು‌ ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ‌ ಹೇಳಿದರು. ಹಾವೇರಿ ದೇವಗಿರಿಯ ಮತ ಎಣಿಕೆ‌ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಈ ಸೋಲಿನ ಬಗ್ಗೆ ಸಂಪೂರ್ಣವಾದ ಪರಾಮರ್ಶೆ ಮಾಡುವ ಅವಶ್ಯಕತೆ ಇದೆ. ಇದಕ್ಕೆ ಹಲಾವರು ಕಾರಣಗಳಿವೆ. ಇದನ್ನು ಪಕ್ಷದಲ್ಲಿ ಆಂತರಿಕ ವಾಗಿ ಆತ್ಮಾವಲೋಕನ ಮಾಡುತ್ತೇವೆ. 

ಪ್ರತಿಯೊಂದು ಕ್ಷೇತ್ರದ ಕುರಿತು ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಏನೆಲ್ಲ ಕೊರತೆಗಳು ಆಗಿವೆ. ಅವುಗಳನ್ನು ನೀಗಿಸಿ ಮತ್ತೊಮ್ಮೆ ಸಂಘಟಿತರಾಗಿ ಮತ್ತೆ ಪುಟಿದು ಏಳುವ ಪಕ್ಷ ಬಿಜೆಪಿ. 

ಬರುವಂಥ ಸಂಸತ್ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಎಲ್ಲ ಸಂಘಟನಾತ್ಮಕ ಬಲದಿಂದ ತಪ್ಪುಗಳನ್ನು ಸರಿ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇವೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. 

ಮೋದಿ, ಅಮಿತ್ ಷಾ ಪ್ರಚಾರ ಕೈ ಹಿಡಿಯಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸೋಲಿಗೆ ಹಲವಾರು ಕಾರಣಗಳಿವೆ. ಅದನ್ನು ಅವಲೋಕನ ಮಾಡಿದಾಗ ಗೊತ್ತಾಗುತ್ತದೆ. ಈ ಬಗ್ಗೆ ಈಗಲೇ ಹೇಳುವುದು ಸರಿಯಲ್ಲ ಎಂದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲುವು ಕುರಿತು ಮಾತನಾಡಿದ ‌ಸಿಎಂ, ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಕೈಹಿಡಿದಿವೆ. ಬೆಂಬಲಿಸಿದ್ದಾರೆ. ನಿರಂತರವಾಗಿ ನಾಲ್ಕನೇ ಬಾರಿಗೆ ಬೆಂಬಲ‌ ಕೊಟ್ಟಿದ್ದಾರೆ. ನಾನು ಇನ್ನಷ್ಟು ಜವಾಬ್ದಾರಿಯಿಂದ ಕೆಲಸ‌ಮಾಡುತ್ತೇನೆ. 

ಕಾಂಗ್ರೆಸ್ ಗೆಲುವಿಗೆ ಕಾರಣ ಅವರು ಹೇಳಬೇಕು. ಅವರು‌ ನಮಗಿಂತ ವ್ಯವಸ್ಥಿತವಾಗಿ ಚುನಾವಣೆ ಮಾಡಿದ್ದಾರೆ ಎನಿಸುತ್ತದೆ‌ ಎಂದರು.

02:46 PM (IST) May 13

ರಾಯಚೂರಿನ ಮಾನ್ವಿಯಲ್ಲಿ ಗೆಲ್ಲಲ್ಲಿಲ್ಲ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಬಿ.ವಿ.ನಾಯಕ್

ರಾಯಚೂರು: 
ದೇವದುರ್ಗದಲ್ಲಿ ಜೆಡಿಎಸ್ ಗೆ ಭರ್ಜರಿ ಗೆಲುವು 
ಜೆಡಿಎಸ್ ನ ಕರೆಮ್ಮರಿಗೆ ವೀರೋಚಿತ ಗೆಲುವು 
ಬಿಜೆಪಿಯ ಕೆ.ಶಿವನಗೌಡ ನಾಯಕರಿಗೆ ಹೀನಾಯ ಸೋಲು 
-------------------------
* ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲವು
ಸತತ ಮೂರನೇ ಗೆಲುವು ಸಾಧಿಸಿದ ಡಾ.ಶಿವರಾಜ್ ಪಾಟೀಲ್ 
ಕಾಂಗ್ರೆಸ್ ಅಭ್ಯರ್ಥಿ ಮಹ್ಮದ್ ಶಾಲಂಗೆ ಸೋಲು
--------------- 
*ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು 
ದದ್ದಲ್ ಬಸನಗೌಡ 2ನೇ ಬಾರಿ ಗೆಲುವು 
ಬಿಜೆಪಿಯ ತಿಪ್ಪರಾಜ್ ಹವಲ್ದಾರ್ ಗೆ ಸೋಲು 
-------------- 
* ಮಾನ್ವಿಯಲ್ಲಿ 
ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕರಿಗೆ ಭಾರೀ ಗೆಲುವು 12137
ಬಿಜೆಪಿಯ ಬಿ.ವಿ.ನಾಯಕರಿಗೆ ಸೋಲು 
ಮೂರನೇ ಸ್ಥಾನಕ್ಕಿಳಿದ ಜೆಡಿಎಸ್ 
--------------- 
*ಲಿಂಗಸೂಗುರಲ್ಲಿ ಬಿಜೆಪಿಗೆ ಗೆಲುವು 
ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆಲುವು
ಕೇವಲ 2758 ಮತಗಳಿಂದ ಸೋಲುಂಡ ಕಾಂಗ್ರೆಸ್ 
ಜೆಡಿಎಸ್ ನ ಸಿದ್ದು ಬಂಡಿಗೆ ಮೂರನೇ ಬಾರಿಯೂ ಸೋಲು
--------------- 
*ಸಿಂಧನೂರಿನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್
ಐದನೇ ಬಾರಿ ಶಾಸಕನಾದ ಹಂಪನಗೌಡ ಬಾದರ್ಲಿ
2ನೇ ಸ್ಥಾನಕ್ಕಿಳಿದ ಬಿಜೆಪಿ ಅಭ್ಯರ್ಥಿ ಕರಿಯಪ್ಪ 
ಮೂರನೇ ಸ್ಥಾನಕ್ಕಿಳಿದ ಜೆಡಿಎಸ್ ಶಾಸಕ ನಾಡಗೌಡ 
---------------------- 
* ಮಸ್ಕಿಯಲ್ಲಿ ಮತ್ತೆ ಗೆಲುವು ದಾಖಲಿಸಿದ ಕಾಂಗ್ರೆಸ್ 
ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳಗೆ ಗೆಲುವು 
ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್ ಗೆ ಹೀನಾಯ ಸೋಲು 
ಸತತ ಎರಡನೇ ಗೆಲುವು ದಾಖಲಿಸಿದ ಇತರ ತುರ್ವಿಹಾಳ

02:42 PM (IST) May 13

ಅಖಂಡ ಶ್ರೀನಿವಾಸ್‌ಗೆ ಸೋಲು

ಕಾಂಗ್ರೆಸ್ ಟಿಕೆಟ್ ವಂಚಿತ ಅಖಂಡ ಶ್ರೀನಿವಾಸ್ ಪುಲಕೇಶಿ ನಗರದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಕಳೆದ ಸಲ 70 ಸಾವರಗಳ ಭರ್ಜರಿ ಮತಗಳ ಅಂತರದಿಂದ ಗೆದ್ದಿದ್ದ ಇವರು, ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್ ವಿರುದ್ಧ ಸೋಲುಂಡಿದ್ದಾರೆ. 

02:23 PM (IST) May 13

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಗೂ ಸೋಲು

ಬಹುತೇಕ ಎಲ್ಲ ಘಟಾನುಘಟಿ ಸಚಿವರೂ ಸೋಲಿನ ರುಚಿ ಕಂಡಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಹ ಸೋತಿದ್ದಾರೆ. ತರೀಕೆರೆಯ ಕಾಂಗ್ರೆಸ್‌ನ ಶ್ರೀನಿವಾಸ್‌ಗೆ ಗೆಲವು. 

02:20 PM (IST) May 13

ಗಾಂಧಿ ನಗರ ಕ್ಷೇತ್ರದಲ್ಲಿ ಮರು ಎಣಿಕೆ, 103 ಮತಗಳಿಂದ ಗೆದ್ದ ದಿನೇಶ್ ಗಂಡೂರಾವ್

ಕೇವಲ 113 ಮತಗಳಿಂದ ಗೆದ್ದಿದ್ದ ಕಾಂಗ್ರೆಸ್ ಗುಂಡೂರಾವ್. ಗಾಂಧಿನಗರದಲ್ಲಿ ಬಿಜೆಪಿಯ ಸಪ್ತಗಿರಿ ಗೌಡರಿಗೆ ಸೋಲಾಗಿತ್ತು. ಇದೀಗ ಮರು ಎಣಿಕೆ ನಡೆಯುತ್ತಿದೆ. 
ವಿಜಯನಗರದಲ್ಲಿ ಕೃಷ್ಣಪ್ಪ ಹಾಗೂ ಗೋವಿಂದರಾಜನಗರದಲ್ಲಿ ಪ್ರಯಕೃಷ್ಣ ಗೆದ್ದಿದ್ದು, ಅಪ್ಪ-ಮಗ ಇಬ್ಬರೂ ಗೆದ್ದು ಬೀಗಿದ್ದಾರೆ. 
ಬೆಂಗಳೂರು ದಕ್ಷಿಣದಲ್ಲಿ ಎಂ ಕೃಷ್ಣಪ್ಪ ಹಾಗೂ ರಾಜರಾಜೇಶ್ವರ ನಗರದಲ್ಲಿ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಗೆಲವು ಸಾಧಿಸಿದ್ದಾರೆ. 
ಯಲಹಂಕದಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಗೆಲವು ಸಾಧಿಸಿದ್ದಾರೆ. 

02:12 PM (IST) May 13

ಜಯನಗರದಲ್ಲಿ ಸೌಮ್ಯಾ ರೆಡ್ಡಿಗೆ ಗೆಲವು

ಬಿಟಿಎಂ ಲೇ ಔಟ್‌ನಲ್ಲಿ ರಾಮಲಿಂಗಾ ರೆಡ್ಡಿ ಗೆದ್ದರೆ, ಮಗಳು ಸೌಮ್ಯಾ ರೆಡ್ಡಿ ಜಯನಗರದಲ್ಲಿ ಗೆಲುವಿನ ನಗೆ ಬಿದ್ದಿದ್ದಾರೆ. ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ, ಸಿ.ಪಿ.ಯೋಗೇಶ್ವರ್ ಸೋತಿದ್ದಾರೆ. ರಾಮನಗರದಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. 

02:07 PM (IST) May 13

ಸಿಎಂ ತವರು ಹಾವೇರಿ ಹಸ್ತಮಯ

ಹಾವೇರಿ ಜಿಲ್ಲೆಯಲ್ಲಿ ಹಸ್ತಮಯ ಮಾಡಿದ ಕೈ ಕ್ಯಾಂಡಿಡೆಟ್ಸ್. ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ರಲ್ಲಿ ಕೈ ಕೇಕೆ. ಒಂದಕ್ಕೆ ತೃಪ್ತಿಯಾದ ಬಿಜೆಪಿ ಪಾಳಯ. ಶಿಗ್ಗಾವಿಯಲ್ಲಿ ಮಾತ್ರ ಬಸವರಾಜ್ ಬೊಮ್ಮಾಯಿ ಗೆಲವು. ಉಳಿದ ಕ್ಷೇತ್ರಗಳಾದ ರಾಣೇಬೆನ್ನೂರು,ಬ್ಯಾಡಗಿ, ಹಾನಗಲ್, ಹಿರೆಕೇರೂರು ಹಾಗೂ ಹಾವೇರಿಯಲ್ಲಿ ಕಾಂಗ್ರೆಸ್ ಗೆಲವು. ಭಾರಿ ಅಂತರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು. ರಾಣೇಬೆನ್ನೂರಲ್ಲಿ ಅಭ್ಯರ್ಥಿ ಪ್ರಕಾಶ್ ಕೋಳಿವಾಡ ಗೆಲವು.ಹಿರೆಕೇರೂರಿನಲ್ಲಿ ಯು ಬಿ ಬಣಕಾರ ಗೆಲವು. ಬ್ಯಾಡಗಿಯಲ್ಲಿ ಬಸವರಾಜ್ ಶಿವಣ್ಣನವರ ಗೆಲವು.
ಹಾವೇರಿಯಲ್ಲಿ ರುದ್ರಪ್ಪ ಲಮಾಣಿ ಗೆಲವು. ಹಾನಗಲ್ ನಲ್ಲಿ ಶ್ರೀನಿವಾಸ್ ಮಾನೆ ಗೆಲವು.

02:06 PM (IST) May 13

ಶಿವಮೊಗ್ಗದಲ್ಲಿ ಕಮಲ ಅರಳಿದ್ದು ಅಷ್ಟಕ್ಕಷ್ಟೇ!

ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಜೆಪಿಯ ವಿಜಯೇಂದ್ರ, ಸಾಗರ ಹಾಗೂ ಸೊರಬದಲ್ಲಿ ಕಾಂಗ್ರೆಸ್‌ನ ಗೋಪಾಲಕೃಷ್ಣ ಬೇಳೂರು ಹಾಗೂ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮೀಣದಲ್ಲಿ ಶಾರದಾ ಪೂರ್ಯಾ ನಾಯ್ಕ್, ಶಿವಮೊಗ್ಗ ನಗರದಲ್ಲಿ ಚನ್ನಬಸಪ್ಪ ಗೆದ್ದಿದ್ದಾರೆ.

01:49 PM (IST) May 13

ಹೊಸಕೋಟೆ: ಎಂಟಿಬಿ ನಾಗರಾಜ್‌ಗೆ ಸೋಲು

ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು, ಮರು ಚುನಾವಣೆಯಲ್ಲಿಯೂ ಸೋತರೂ, ಎಂಎಲ್‌ಸಿಯಾಗಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ಎಂಟಿಬಿ ನಾಗರಾಜ್‌ಗೂ ಮಂದಿ ಸೋಲಿನ ರುಚಿ ತೋರಿಸಿದ್ದಾರೆ. ರಾಜ್ಯದ ಪ್ರಮುಖ ಸಿರಿವಂತ ಅಭ್ಯರ್ಥಿಗಳಲ್ಲಿ ಒಬ್ಬರಾದ ನಾಜರಾಜ್ ಅವರನ್ನು ಬಿಜೆಪಿಯ ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಮಗ ಶರತ್ ಬಚ್ಚೆಗೌಡ (ಕಾಂಗ್ರೆಸ್) ಸುಮಾರು 5 ಸಾವಿರ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

01:44 PM (IST) May 13

ಹಾಸನ: 4 ಕ್ಷೇತ್ರಗಳಲ್ಲಿ ಗೆದ್ದ ಜೆಡಿಎಸ್, ಇನ್ನರೆಡರಲ್ಲಿ ಬಿಜೆಪಿ, ಅರಸೀಕರೆಯಲ್ಲಿ ಕಾಂಗ್ರೆಸ್ ಗೆಲವು

ಹಾಸನ: ಹೊಳೆನರಸೀಪುರ, ಹಾಸನ, ಅರಕಲಗೂಡು, ಶ್ರವಣಬೆಳಗೊಳದಲ್ಲಿ ಜೆಡಿಎಸ್ ಗೆಲುವು. ಬೇಲೂರು, ಸಕಲೇಶಪುರದಲ್ಲಿ ಬಿಜೆಪಿ ಗೆಲುವು. ಅರಸೀಕೆರೆಯಲ್ಲಿ ಕಾಂಗ್ರೆಸ್ ಗೆಲುವು. 

ಬೆಳಗಾವಿ: ಶಶಿಕಲಾ ಜೋಲ್ಲೆ ಹ್ಯಾಟ್ರಿಕ್ ಗೆಲುವು, ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೋಲ್ಲೆ ಗೆಲುವು, ಬಿಜೆಪಿ ಅಭ್ಯರ್ಥಿ 71684, ಎನ್‌ಸಿಪಿ 64690, 22ನೇ ಸುತ್ತಿನಲ್ಲಿ 6994 ಮತಗಳ ಮುನ್ನಡೆ.

01:37 PM (IST) May 13

ಯಾದಗಿರಿಯೆ ಮೂರು ಕಡೆ ಕಾಂಗ್ರೆಸ್, ಒಂದೆಡೆ ಜೆಡಿಎಸ್ ಮುನ್ನಡೆ

ಯಾದಗಿರಿ ಜಿಲ್ಲೆಯ 4 ಮತಕ್ಷೇತ್ರಗಳ ಪೈಕಿ 3 ಮತಕ್ಷೇತ್ರಗಳಲ್ಲಿ (ಯಾದಗಿರಿ, ಶಹಾಪುರ ಹಾಗೂ ಸುರಪುರ) ಕಾಂಗ್ರೆಸ್ ಮುನ್ನೆಡೆ. ಒಂದು ಕಡೆ (ಗುರುಮಠಕಲ್) ಜೆಡಿಎಸ್ ಮುನ್ನಡೆ. 
ಮಾಜಿ ಸಚಿವರುಗಳಾದ ಬಾಬುರಾವ್ ಚಿಂಚನಸೂರ, ರಾಜುಗೌಡ, ಡಾ. ಮಾಲಕರೆಡ್ಡಿ ಹಿನ್ನೆಡೆ. ಯಾದಗಿರಿ ಹಾಲಿ ಶಾಸಕ, ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ, ಸುರಪುರದ ಹಾಲಿ ಶಾಸಕ ಬಿಜೆಪಿಯ ರಾಜುಗೌಡ, ಶಹಾಪುರದ ಮಾಜಿ ಶಾಸಕ ಗುರು ಪಾಟೀಲ್ ಗೆ ಹಿನ್ನೆಡೆ. 

01:27 PM (IST) May 13

ಶೆಟ್ಟರ್ ಸೋತಿದ್ದಕ್ಕೆ ಆಶ್ಚರ್ಯವಾಗಿದೆ: ಸಂತೋಷ್ ಲಾಡ್

ಧಾರವಾಡ : ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿಸಿ ಮತದಾರರು ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಕಲಘಟಗಿ ಕ್ಷೇತ್ರದಿಂದ ಆಯ್ಕೆಯಾದ ಸಂತೋಷ‌ ಲಾಡ್ ಪ್ರತಿಕ್ರಿಯಿಸಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತದ ಅಭಿವೃದ್ಧಿ ಕುಂಠಿತಗೊಂಡಿತ್ತು. ಬಿಜೆಪಿಯ ಆಡಳಿತದಿಂದ‌ ಬೇಸತ್ತು ಜನ ತಮಗೆ ಬೆಂಬಲ ನೀಡಿದ್ದಾರೆ.

ಹೀಗಾಗಿ ತಮಗೆ ಅಶೀರ್ವಾದಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಪಕ್ಕದ‌ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರು‌ ಗೆಲುವು ಸಾಧಿಸಿದ್ದು‌ ಸಂತಸ ತಂದಿದೆ. ಅವರು ಕ್ಷೇತ್ರದಲ್ಲಿ ಇರದಿದ್ದರೂ ಜನರು ಅವರನ್ನು ಗೆಲ್ಲಿಸಿದ್ದು ಅವರ ಮೇಲೆ‌ ಜನರು ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ. ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಿದ ಆ ಕ್ಷೇತ್ರದ ಜನರಿಗೂ‌ ಕೃತಜ್ಞತೆ ಸಲ್ಲಿಸುತ್ತೆನೆ‌ ಎಂದರು.

ಮಾಜಿ ಮುಖ್ಯಮಂತ್ರಿ ‌ಜಗದೀಶ ಶೆಟ್ಟರ್ ಅವರ ಸೋಲು ಆಶ್ಚರ್ಯ ತರಿಸಿದೆ ಎಂದರು. ಶಾಸಕಾಂಗ ಪಕ್ಷದ‌ ಸಭೆಗೆ ಬರುವಂತೆ ಈಗಾಗಲೇ ತಮಗೆ ಸೂಚನೆ ಬಂದಿದೆ. ಹೀಗಾಗಿ ಇಂದು ರಾತ್ರಿ ‌ಬೆಂಗಳೂರಗೆ ತೆರಳುತ್ತಿದ್ದೆನೆ. ತಮಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಪ್ರಶ್ನೆಯೊಂಧಕ್ಕೆ ಉತ್ತರಿಸಿದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಮಾತಿನಿಂದ ಯಾರದಾದರು‌ ಮನಸ್ಸಿಗೆ ನೋವಾಗಿದ್ದರೆ ಅವರಲ್ಲಿ‌ ಕ್ಷಮೆ ಕೇಳುವುದಾಗಿ ಹೇಳಿದರು.

01:19 PM (IST) May 13

ಗಂಗಾವತಿಯಲ್ಲಿ ಗೆದ್ದ ಜನಾರ್ದನ ರೆಡ್ಡಿ

ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸಿದ ಜನಾದ್ರನ ರೆಡ್ಡಿ ಗಂಗಾವತಿಯಲ್ಲಿ ಗೆಲವು ಸಾಧಿಸಿದ್ದು, ಬಳ್ಳಾರಿಯಲ್ಲಿ ಪತ್ನಿ ಅರುಣಾ ಲಕ್ಷ್ಮಿ ಹಿನ್ನಡೆ ಸಾಧಿಸಿದ್ದಾರೆ. 
ಬಬಲೇಶ್ವರದಲ್ಲಿ ಗೆಲುವಿನತ್ತ ಎಂ ಬಿ ಪಾಟೀಲ್. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್. 18 ರೌಂಡ್‌ಗಳಲ್ಲಿ 15 ರೌಂಡ್ ಮುಕ್ತಾಯವಾಗಿದೆ. 13,899 ಮತಗಳ ಮುನ್ನಡೆ ಸಾಧಿಸಿದ್ದಾರೆ.ಇನ್ನು ಮೂರು ರೌಂಡ್ ಮಾತ್ರ ಭಾಕಿ. ಎಂ ಬಿ ಪಾಟೀಲ ನಿವಾಸದಲ್ಲಿ ಅಭಿಮಾನಿಗಳ ಸಂಭ್ರಮ.

ಬಾಗಲಕೋಟೆಯ ಬೀಳಗಿಯಲ್ಲಿ ಮುರುಗೇಶ್ ನಿರಾಣಿ ಸೋತಿದ್ದು, ಮೇಲುಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ರೈತ ಸಂಘ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆದ್ದಿದ್ದಾರೆ.