Asianet Suvarna News Asianet Suvarna News

ಕಾಂಗ್ರೆಸ್‌ನ ಬಸ​ನ​ಗೌ​ಡ​ರಿಗೆ ತಿರು​ಗೇಟು ​ನೀ​ಡು​ವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ

ಕ್ಷೇತ್ರ ​ಪು​ನರ್‌ ವಿಂಗ​ಡ​ಣೆ​ ಬಳಿಕ ಹೊಸ​ದಾಗಿ ಉದ​ಯಿ​ಸಿದ ಮಸ್ಕಿ, ಪರಿ​ಶಿಷ್ಟ ಪಂಗ​ಡಕ್ಕೆ ಮೀಸಲಾದ ಕ್ಷೇತ್ರ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಮಾವ ಮಹಾದೇವಪ್ಪ ಗೌಡರನ್ನು ಮನವೊಲಿಸಿ ಸ್ಪರ್ಧಿಸದಂತೆ ಮಾಡು​ವಲ್ಲಿ ಯಶಸ್ವಿಯಾಗಿದ್ದ ಪ್ರತಾಪಗೌಡರು.

Karnataka Election 2023 BJP is giving revenge to Basana Gowda of Congress at Raichur gvd
Author
First Published Mar 25, 2023, 10:41 AM IST

ರಾಮ​ಕೃಷ್ಣ ದಾಸರಿ

ರಾಯ​ಚೂರು (ಮಾ.25): ಎರಡು ವರ್ಷ​ಗಳ ಹಿಂದೆ, 2019ರಲ್ಲಿ ನಡೆ​ದಿದ್ದ ಉಪ​ಚು​ನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌​ನಿಂದ ಸ್ಪರ್ಧಿಸಿ ಗೆದ್ದು ಮೊದಲ ಸಲ ಶಾಸ​ಕ​ರಾ​ಗಿ ಆಯ್ಕೆ​ಯಾ​ಗಿ​ರುವ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಅವ​ರನ್ನು ಸಾರ್ವ​ತ್ರಿಕ ಚುನಾ​ವ​ಣೆ​ಯಲ್ಲಿ ಮಣಿಸಿ ತಿರು​ಗೇಟು ನೀಡ​ಲು ಬಿಜೆಪಿ ಪಣ​ತೊ​ಟ್ಟಿದ್ದು, ಆ ನಿಟ್ಟಿ​ನಲ್ಲಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಪ್ರತಾ​ಪ​ಗೌಡ ಪಾಟೀಲ್‌ ರಣ​ತಂತ್ರ ರೂಪಿ​ಸು​ತ್ತಿ​ದ್ದಾ​ರೆ.

ಕ್ಷೇತ್ರ ​ಪು​ನರ್‌ ವಿಂಗ​ಡ​ಣೆ​ ಬಳಿಕ ಹೊಸ​ದಾಗಿ ಉದ​ಯಿ​ಸಿದ ಮಸ್ಕಿ, ಪರಿ​ಶಿಷ್ಟ ಪಂಗ​ಡಕ್ಕೆ ಮೀಸಲಾದ ಕ್ಷೇತ್ರ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಮಾವ ಮಹಾದೇವಪ್ಪ ಗೌಡರನ್ನು ಮನವೊಲಿಸಿ ಸ್ಪರ್ಧಿಸದಂತೆ ಮಾಡು​ವಲ್ಲಿ ಯಶಸ್ವಿಯಾಗಿದ್ದ ಪ್ರತಾಪಗೌಡರು, ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 2013ರಲ್ಲಿ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಆಗ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾವ ಮಹಾ​ದೇ​ವಪ್ಪ ಗೌಡರನ್ನು 19,147 ಮತ​ಗಳ ಅಂತ​ರ​ದಿಂದ ಸೋಲಿಸಿ, ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಧ್ರುವನಾರಾಯಣ ಪುತ್ರಗೆ ಅನುಕಂಪ ‘ಕಾಂಗ್ರೆಸ್‌’ ಹಿಡಿಯುವುದೇ?: ಬಿಜೆಪಿಯಿಂದ ಹರ್ಷವರ್ಧನ್‌ ಸ್ಪರ್ಧೆ

2018ರಲ್ಲಿ ನಡೆದ ಚುನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌​ನಿಂದ ಗೆದ್ದು ಹ್ಯಾಟ್ರಿಕ್‌ ಬಾರಿ​ಸಿದ್ದ ಪ್ರತಾ​ಪ​ಗೌ​ಡ ಪಾಟೀಲ್‌, ಬಳಿಕ, ಮುಂಬೈ ತಂಡ​ದಲ್ಲಿ ಗುರು​ತಿ​ಸಿ​ಕೊಂಡು ‘ಆಪ​ರೇ​ಷನ್‌ ಕಮ​ಲ’​ಕ್ಕೆ ಒಳಗಾಗಿ 2019ರಲ್ಲಿ ನಡೆದ ಉಪ​ಚು​ನಾ​ವ​ಣೆ​ಯಲ್ಲಿ ಬಿಜೆ​ಪಿ​ಯಿಂದ ಸ್ಪರ್ಧಿಸಿ ಸೋಲು ಕಂಡರು. 2018ರಲ್ಲಿ ನಡೆದ ಸಾರ್ವ​ತ್ರಿಕ ಚುನಾ​ವ​ಣೆ​ಯಲ್ಲಿ ಬಿಜೆ​ಪಿ​ಯಿಂದ ಸ್ಪರ್ಧಿಸಿ, ಕೇವಲ 213 ಮತ​ಗಳ ಅಂತ​ರ​ದಲ್ಲಿ ಪರಾ​ಭ​ವ​ಗೊಂಡಿದ್ದ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ, 2019ರಲ್ಲಿ ನಡೆದ ಉಪ​ಚು​ನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌​ನಿಂದ ಸ್ಪರ್ಧಿಸಿ, ಪ್ರತಾಪಗೌಡರ ವಿರುದ್ಧ ಸುಮಾರು 30 ಸಾವಿ​ರಕ್ಕೂ ಹೆಚ್ಚು ಮತಗಳ ಅಂತ​ರ​ದಿಂದ ಗೆದ್ದು ಮೊದಲ ಸಲ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ದ್ದಾರೆ.

ಈ ಬಾರಿ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಅವರು ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿ. ಪ್ರತಾ​ಪ​ಗೌಡ ಪಾಟೀಲ್‌ ಅವರು ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿ. ಬಹುಶ: ಇವರಿಗೇ ಆಯಾ ಪಕ್ಷಗಳ ಟಿಕೆಟ್‌ ಬಹುತೇಕ ಗ್ಯಾರಂಟಿ. ಜೆಡಿ​ಎಸ್‌, ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಇನ್ನು, ಗಾಲಿ ಜನಾ​ರ್ಧನ ​ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ​ದಿಂದ ದಿ.ಶೇ​ಖ​ರಪ್ಪ ತಳವ ಅವರ ಧರ್ಮ​ಪತ್ನಿ, ಶರ​ಣಮ್ಮ ಅವರು ಸ್ಪರ್ಧಿ​ಸುವ ಸಾಧ್ಯ​ತೆ​ಗ​ಳಿವೆ. ಗಾಲಿ ಜನಾ​ರ್ಧ​ನ ​ರೆಡ್ಡಿಗೆ ಈ ಭಾಗ​ದಲ್ಲಿ ಹೆಚ್ಚಿನ ಬೆಂಬ​ಲಿ​ಗ​ರು, ಅಭಿ​ಮಾ​ನಿಗಳು ಇರುವುದರಿಂದ ಮತ​ಗಳ ವಿಭ​ಜ​ನೆಯ ಭೀತಿ ರಾಷ್ಟ್ರೀಯ ಪಕ್ಷ​ಗ​ಳಿಗೆ ಎದುರಾಗಿದೆ.

ಕ್ಷೇತ್ರದ ಹಿನ್ನೆ​ಲೆ: 2008ರಿಂದೀಚೆಗೆ ಇಲ್ಲಿ 1 ಉಪ​ಚು​ನಾ​ವಣೆ ಸೇರಿ ಒಟ್ಟು 4 ಚುನಾ​ವ​ಣೆ​ಗ​ಳು ನಡೆ​ದಿವೆ. ಅದ​ರಲ್ಲಿ ಮೂರು ಸಲ ಪ್ರತಾ​ಪ​ಗೌಡ ಪಾಟೀಲ್‌, ಒಂದು ಸಲ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ದ್ದಾರೆ. 2008ರಲ್ಲಿ ಬಿಜೆ​ಪಿ​ಯಿಂದ ಹಾಗೂ 2013 ಮತ್ತು 2018ರಲ್ಲಿ ಕಾಂಗ್ರೆ​ಸ್‌​ನಿಂದ ಪ್ರತಾ​ಪ​ಗೌಡ ಪಾಟೀಲ್‌ ಶಾಸ​ಕ​ರಾಗಿ ಆಯ್ಕೆ​ಯಾ​ಗಿದ್ದು, 2019ರ ಉಪ​ ಚು​ನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌​ನ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಮೊದಲ ಬಾರಿ ವಿಜಯದ ನಗೆ ಬೀರಿದ್ದಾರೆ.

ಸ್ಪರ್ಧೆ ಹೆಸರಲ್ಲಿ ಸಿದ್ದರಾಮಯ್ಯ ಪ್ರಚಾರ ಪಡೆಯುತ್ತಿದ್ದಾರೆ: ಬಿ.ಎಸ್‌.ಯಡಿಯೂರಪ್ಪ

ಜಾತಿ ಲೆಕ್ಕಾ​ಚಾ​ರ: ಮಸ್ಕಿ ಕ್ಷೇತ್ರ​ದಲ್ಲಿ 2,70, 515 ಮತ​ದಾ​ರ​ರಿದ್ದು, ಈ ಪೈಕಿ, 28 ಸಾವಿರ ಲಿಂಗಾ​ಯ​ತರು, 36 ಸಾವಿರ ಪರಿ​ಶಿಷ್ಟ ಜಾತಿ, 48 ಸಾವಿರ ಪರಿ​ಶಿಷ್ಟ ಪಂಗಡ, 26 ಸಾವಿರ ಕುರು​ಬರು, 21 ಸಾವಿರ ಅಲ್ಪ​ಸಂಖ್ಯಾ​ತರು ಇದ್ದಾ​ರೆ. ಹೀಗಾಗಿ, ಇಲ್ಲಿ ಅಹಿಂದ ಮತಗಳೇ ನಿರ್ಣಾಯಕ.

Follow Us:
Download App:
  • android
  • ios