Asianet Suvarna News Asianet Suvarna News

ನನ್ನನ್ನು ರಾಜಕೀಯವಾಗಿ ಮುಗಿಸ್ತೇನೆ ಅನ್ನೋದು ಮೂರ್ಖತನ: ಎಚ್‌ಡಿಕೆ, ಬಿಎಸ್‌ವೈಗೆ ಸಿದ್ದು ಟಾಂಗ್‌

ಹಿಂದೆಂದೂ ಸಣ್ಣ ತಪ್ಪು ಮಾಡದವ ಇಂದು ತಪ್ಪು ಮಾಡಲು ಸಾಧ್ಯವೇ? ನಾನು ಹಿಂದೆಯೂ ತಪ್ಪು ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳಿ ವಿಪಕ್ಷಗಳು ತಮ್ಮ ವಿರುದ್ದ ಮಾಡುತ್ತಿರುವ ಆರೋಪಗಳ ವಿರುದ್ಧ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

It is foolish to think that I will be finished politically Says CM Siddaramaiah grg
Author
First Published Sep 17, 2024, 5:30 AM IST | Last Updated Sep 17, 2024, 5:30 AM IST

ಕಲಬುರಗಿ(ಸೆ.17): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನನ್ನು ರಾಜಕೀಯವಾಗಿ ಮುಗಿಸು ತೇನೆ ಎಂದು ಅಂದುಕೊಂಡಿ ದರೆ ಅದು ಅವರ ಮೂರ್ಖತನ. ನನ್ನನ್ನು ಅಷ್ಟು ಸುಲಭ ಅಂದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ. 

ಕಲಬುರಗಿ ತಾಲೂಕಿನ ಕವಲಗಿ (ಕೆ) ಗ್ರಾಮದಲ್ಲಿ ಸೋಮವಾರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಹಾಗೂ ರಾಯಣ್ಣನಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಬದುಕು ತೆರೆದ ಪುಸ್ತಕ ಎಂದು ಬಣ್ಣಿಸಿದರು. ಜತೆಗೆ, ಹಿಂದೆಂದೂ ಸಣ್ಣ ತಪ್ಪು ಮಾಡದವ ಇಂದು ತಪ್ಪು ಮಾಡಲು ಸಾಧ್ಯವೇ? ನಾನು ಹಿಂದೆಯೂ ತಪ್ಪು ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳಿ ವಿಪಕ್ಷಗಳು ತಮ್ಮ ವಿರುದ್ದ ಮಾಡುತ್ತಿರುವ ಆರೋಪಗಳ ವಿರುದ್ಧ ತಿರುಗೇಟು ನೀಡಿದರು. 

ವಿಚ್ಛಿದ್ರಕಾರಿ ಶಕ್ತಿಗಳ ದಮನ ಮಾಡಲು ಎದ್ದು ನಿಲ್ಲಿ: ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಿಎಂ ಕರೆ

ಮುಡಾ ಪ್ರಕರಣದಲ್ಲಿ ಏನೇನೂ ಇಲ್ಲ. ಆದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದಿಲ್ಲಿಯಿಂದ ರಾಜಭವನ ದವರೆಗೂ ನನ್ನ ವಿರುದ್ಧ ಪಿತೂರಿ ಹೆಣೆಯುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿ ಆಗಲು ಬಿಡಬಾರದು. ಸಂಗೊಳ್ಳಿ ರಾಯಣ್ಣನ ಹೋರಾಟದ ನಮ್ಮೊಳಗಿದೆ ಕಿಚ್ಚು ಎಂದು ಆರೋಪ ಮಾಡುವವರು ಮೊದಲು ಅರಿತುಕೊಳ್ಳಲಿ ಎಂದು ಎಚ್ಚರಿಸಿದರು. ಬ್ರಿಟಿಷರ ಜೊತೆ ನಮ್ಮವರು ಕೈಜೋಡಿ ಸಿದ್ದರಿಂದಲೇ 200 ವರ್ಷ ಗುಲಾಮಗಿರಿ ಅನುಭವಿಸಿ ದೆವು. ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ನಮ್ಮ ಮನೆಮುರುಕರೇ ಹಿಡಿದುಕೊಟ್ಟರು. ನಮ್ಮ ಸಮಾಜದಲ್ಲೇ ಇಂಥ ಮನೆ ಮುರುಕರು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

Latest Videos
Follow Us:
Download App:
  • android
  • ios