Asianet Suvarna News Asianet Suvarna News

ಡಾ.ಕೆ.ಸುಧಾಕರ್‌ಗೆ ಹೆಚ್ಚು ಜನ ಬೆಂಬಲ, ಜನಪ್ರಿಯತೆಯಿದ್ದು ಗೆಲುವು ನಿಶ್ಚಿತ: ಅರುಣ್‌ ಸಿಂಗ್‌

ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರಿಗೆ ಹೆಚ್ಚು ಜನ ಬೆಂಬಲ ಹಾಗೂ ಜನಪ್ರಿಯತೆಯಿದ್ದು, ಅವರು ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಮತಗಳಿಂದ ವಿಜಯ ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಹೇಳಿದರು.

Dr K Sudhakar has more peoples support and popularity and victory is certain Says Arun Singh gvd
Author
First Published Apr 7, 2024, 8:03 AM IST

ಚಿಕ್ಕಬಳ್ಳಾಪುರ (ಏ.07): ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರಿಗೆ ಹೆಚ್ಚು ಜನ ಬೆಂಬಲ ಹಾಗೂ ಜನಪ್ರಿಯತೆಯಿದ್ದು, ಅವರು ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಮತಗಳಿಂದ ವಿಜಯ ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಹೇಳಿದರು. ದೇವನಹಳ್ಳಿಯಲ್ಲಿ ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಖಜಾಂಚಿ ನಾಗೇಶ್ ಅವರ ನಿವಾಸದಲ್ಲಿ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಹಾಗೂ ಅರುಣ್‌ ಸಿಂಗ್‌ ಅವರು ಪಕ್ಷದ ಬಾವುಟ ಹಾರಿಸುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಿದರು. ನಂತರ ತಮ್ಮ ಹುಟ್ಟೂರು ಚಿಕ್ಕಬಳ್ಳಾಪುರದ ಪೇರೆಸಂದ್ರ ಗ್ರಾಮದ ನಿವಾಸದಲ್ಲಿ ಭಾರತಾಂಬೆಗೆ, ಪಕ್ಷದ ಸಂಸ್ಥಾಪಕರಿಗೆ ಹಾಗೂ ಪಕ್ಷದ ಧ್ವಜಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕರ್ತರೊಂದಿಗೆ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್‌ ಸಿಂಗ್‌, ಚಿಕ್ಕಬಳ್ಳಾಪುರದಲ್ಲಿ ಡಾ। ಕೆ.ಸುಧಾಕರ್‌ ಅವರ ಜನಪ್ರಿಯತೆಯನ್ನು ನಾನು ಖುದ್ದಾಗಿ ನೋಡಿದ್ದು, ಅವರು ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ. ಅವರು ಖಂಡಿತವಾಗಿಯೂ ಸಂಸದರಾಗಲಿದ್ದಾರೆ. ಎಲ್ಲ ಕಾರ್ಯಕರ್ತರು ಪೂರ್ತಿ ಶಕ್ತಿಯಿಂದ ಡಾ। ಕೆ.ಸುಧಾಕರ್‌ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು. ಈ ಬಾರಿಯೂ ಮೋದಿಜಿ ಪ್ರಧಾನಿಯಾಗಲಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಮನೆಯ ಮಕ್ಕಳಿಗೆ ಕೇಳಿದರೂ ಇದನ್ನೇ ಹೇಳುತ್ತಾರೆ. ಕರ್ನಾಟಕದ ಎಲ್ಲ ಸಂಸದ ಸ್ಥಾನಗಳು ಮೋದಿಜಿಯವರಿಗೆ ಸಿಗಲಿದೆ. 

ಕುಡಿಯುವ ನೀರಿನ ಸಮಸ್ಯೆ: ಸರ್ಕಾರದ ವಿರುದ್ಧ ನಿರ್ಮಲಾ ಸೀತಾರಾಮನ್‌ ಟೀಕೆ

ದೇಶದ ಗೌರವಕ್ಕಾಗಿ ಅವರು ಕೆಲಸ ಮಾಡುತ್ತಿದ್ದು, ದೇಶದ ನಾಯಕತ್ವವನ್ನು ಮೋದಿಜಿಯವರೇ ವಹಿಸಿಕೊಳ್ಳಬೇಕು ಎಂದು ಎಲ್ಲರಿಗೂ ಅನ್ನಿಸಿದೆ. ಸಿಎಂ ಸಿದ್ದರಾಮಯ್ಯ ಅವರಿಗೂ ಮನಸ್ಸಿನೊಳಗೆ ಅದೇ ಭಾವನೆ ಇದೆ ಎಂದರು. ದಲಿತರು ಹಾಗೂ ಹಿಂದುಳಿದ ವರ್ಗಗಳ ಸಶಕ್ತೀಕರಣಕ್ಕೆ ಪ್ರಧಾನಿ ಮೋದಿ ಅವರು ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಬಲಹೀನ ವರ್ಗದವರಿಗೆ ಹೆಚ್ಚು ಅನುಕೂಲ ಕಲ್ಪಿಸಕೊಡಲಾಗಿದೆ. ಯಾವುದೇ ಗ್ಯಾರಂಟಿ ಇಲ್ಲದೆ ₹10-15 ಲಕ್ಷ ಸಾಲ ನೀಡುತ್ತಿದ್ದು, ಇದು ಸಬಲೀಕರಣದಲ್ಲಿ ವಿಭಿನ್ನವಾದ ಪ್ರಯತ್ನವಾಗಿದೆ ಎಂದು ತಿಳಿಸಿದರು. 

ಡಾ। ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಪಂಚ ತೀರ್ಥ ಎಂದು ಪ್ರಧಾನಿ ಮೋದಿ ಅಭಿವೃದ್ಧಿಪಡಿಸಿದ್ದಾರೆ. ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡಲಾರಂಭಿಸಿದ್ದು ಕೂಡ ಅವರಿಗೆ ನೀಡಿರುವ ಗೌರವ ಎಂದು ಹೇಳಿದರು. ಬಿಜೆಪಿ ಸ್ಥಾಪನೆಯಾಗಿ 45 ವರ್ಷ ಕಳೆದಿದೆ. ಎರಡು ಸ್ಥಾನಗಳಿಂದ ಆರಂಭವಾದ ಹೋರಾಟ, ಕಾರ್ಯಕರ್ತರ ಶಕ್ತಿ, ಸಂಘಟನೆಯಿಂದ 400 ತನಕ ಬರುವ ವಿಶ್ವಾಸವಿದೆ. ಪಕ್ಷದ ಆಶಯ, ರಾಷ್ಟ್ರೀಯತೆ, ಸಮಗ್ರತೆ, ದೇಶವನ್ನು ಇಡೀ ವಿಶ್ವದಲ್ಲಿ ಎತ್ತರಕ್ಕೆ ಕೊಂಡೊಯ್ಯಬೇಕೆಂಬ ತತ್ವ, ಸಿದ್ಧಾಂತದಿಂದಾಗಿ ಪಕ್ಷ ಈ ಮಟ್ಟಿಗೆ ಬೆಳೆದಿದೆ. ಬೇರೆಲ್ಲ ಪಕ್ಷಕ್ಕಿಂತಲೂ ಬಿಜೆಪಿ ಭಿನ್ನವಾಗಿದೆ. 

ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್‌ ಪ್ರಣಾಳಿಕೆ ರೀತಿ ಇದೆ: ಪ್ರಧಾನಿ ಮೋದಿ

ಇದು ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಶ್ಯಾಮಾ ಪ್ರಸಾದ್‌ ಮುಖರ್ಜಿ, ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ಹಲವು ನಾಯಕರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಅಲ್ಲದೆ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ಪಕ್ಷಕ್ಕೆ ಹೆಚ್ಚು ಶಕ್ತಿ ಹಾಗೂ ಜನಪ್ರಿಯತೆ ಬಂದಿದೆ ಎಂದು ತಿಳಿಸಿದರು.ಮನೆ ಮನೆ ಪ್ರಚಾರ ಆರಂಭ: ಕ್ಷೇತ್ರದಾದ್ಯಂತ ಮನೆ ಮನೆ ಪ್ರಚಾರಕ್ಕೆ ಚಾಲನೆ ದೊರೆತಿದ್ದು, ಡಾ। ಸುಧಾಕರ್ ಅವರ ಸಾಧನೆ ಮತ್ತು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಮಾಹಿತಿ ಉಳ್ಳ ಕರಪತ್ರ ಹಂಚುವ ಮೂಲಕ ಕಾರ್ಯಕರ್ತರು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.

Follow Us:
Download App:
  • android
  • ios