ಕೋಲಾರದಿಂದ ಸಿದ್ದುಗೆ ಟಿಕೆಟ್‌, ರಾಮನಗರದಿಂದ ಡಿಕೆಸು ಇಲ್ಲ?, ನಂಜನಗೂಡಿಂದ ಧ್ರುವ ಪುತ್ರ, ಶಿರಾದಲ್ಲಿ ಜಯಚಂದ್ರಗೆ ಮಣೆ?, 97 ಕ್ಷೇತ್ರಗಳ ಕಾಂಗ್ರೆಸ್‌ ಸಂಭಾವ್ಯರ ಪಟ್ಟಿ ‘ಕನ್ನಡಪ್ರಭ’ಕ್ಕೆ ಲಭ್ಯ.

ಬೆಂಗಳೂರು(ಮಾ.17): ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ಸಾಧ್ಯವಾದಷ್ಟು ಶೀಘ್ರ ಪ್ರಕಟಿಸುವಂತೆ ಮಾಡಲು ರಾಜ್ಯ ನಾಯಕತ್ವವು ತೀವ್ರ ಕಸರತ್ತು ನಡೆಸಿ ಸುಮಾರು 110 ರಿಂದ 120 ಕ್ಷೇತ್ರಗಳಿಗೆ ಒಂಟಿ ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ. ರಾಜ್ಯ ನಾಯಕತ್ವ ಶಿಫಾರಸು ಮಾಡಿರುವ ಈ ಪಟ್ಟಿಯ ಬಗ್ಗೆ ಶುಕ್ರವಾರ ನಡೆಸುವ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಚರ್ಚೆ ನಡೆಸಿ ಅಖೈರುಗೊಳಿಸಲಾಗುತ್ತದೆ. ಈ ರೀತಿ ಅಖೈರುಗೊಳ್ಳುವ ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಕೆಲ ಬದಲಾವಣೆಗಳಾಗುವ ಸಾಧ್ಯತೆಯಿದೆ.

ರಾಜ್ಯ ನಾಯಕತ್ವ ಶಿಫಾರಸು ಮಾಡಿರುವ ಒಂಟಿ ಹೆಸರಿರುವ ಕ್ಷೇತ್ರಗಳ ಪೈಕಿ 97 ಕ್ಷೇತ್ರಗಳ ಸಂಭಾವ್ಯರ ಪಟ್ಟಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಅದು ಈ ರೀತಿಯಿದೆ.

ಸತತ 4ನೇ ದಿನವೂ ಸಂಸತ್‌ ಕಲಾಪ ಬಲಿ, ಆರೋಪಗಳಿಗೆ ಸಂಸತ್ತಿನಲ್ಲೇ ಉತ್ತರ: ರಾಹುಲ್‌

ಕೋಲಾರ ಸಿದ್ದರಾಮಯ್ಯ
ಕನಕಪುರ ಡಿ.ಕೆ.ಶಿವಕುಮಾರ್‌
ಬಿಟಿಎಂ ಲೇಔಟ್‌ ರಾಮಲಿಂಗಾರೆಡ್ಡಿ
ಜಯನಗರ ಸೌಮ್ಯಾರೆಡ್ಡಿ
ಬ್ಯಾಟರಾಯನಪುರ ಕೃಷ್ಣಬೈರೇಗೌಡ
ಹೆಬ್ಬಾಳ ಬೈರತಿ ಸುರೇಶ್‌
ಗಾಂಧಿನಗರ ದಿನೇಶ್‌ ಗುಂಡೂರಾವ್‌
ಶಿರಾ ಟಿ.ಬಿ.ಜಯಚಂದ್ರ
ಹೆಗ್ಗಡದೇವನಕೋಟೆ ಅನಿಲ… ಚಿಕ್ಕಮಾದು
ಮಧುಗಿರಿ ಕೆ.ಎನ್‌.ರಾಜಣ್ಣ
ಚಿತ್ತಾಪುರ ಪ್ರಿಯಾಂಕ್‌ ಖರ್ಗೆ
ಹಿರಿಯೂರು ಸುಧಾಕರ್‌
ಬಳ್ಳಾರಿ ಗ್ರಾಮೀಣ ಬಿ. ನಾಗೇಂದ್ರ
ಕಂಪ್ಲಿ ಗಣೇಶ್‌
ಸಂಡೂರು ಇ.ತುಕಾರಾಂ
ಭದ್ರಾವತಿ ಬಿ.ಕೆ.ಸಂಗಮೇಶ್‌
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ
ದಾವಣಗೆರೆ ಉತ್ತರ ಎಸ್‌.ಎಸ್‌. ಮಲ್ಲಿಕಾರ್ಜುನ್‌
ಹೊಸದುರ್ಗ ಗೋವಿಂದಪ್ಪ
ಚಳ್ಳಕೆರೆ ಟಿ.ರಘುಮೂರ್ತಿ
ಬೆಳಗಾವಿ ಗ್ರಾಮೀಣ ಲಕ್ಷ್ಮೀ ಹೆಬ್ಬಾಳ್ಕರ್‌
ಖಾನಾಪುರ ಅಂಜಲಿ ನಿಂಬಾಳ್ಕರ್‌
ಯಮಕನಮರಡಿ ಸತೀಶ್‌ ಜಾರಕಿಹೊಳಿ
ಬಬಲೇಶ್ವರ ಎಂ.ಬಿ. ಪಾಟೀಲ್‌
ಬಸವನಬಾಗೇವಾಡಿ ಶಿವಾನಂದ ಪಾಟೀಲ್‌
ಕೊಪ್ಪಳ ರಾಘವೇಂದ್ರ ಹಿಟ್ನಾಳ್‌
ಹೂವಿನಹಡಗಲಿ ಪಿ.ಟಿ.ಪರಮೇಶ್ವರ್‌ ನಾಯ್ಕ
ಹಗರಿಬೊಮ್ಮನಹಳ್ಳಿ ಭೀಮಾನಾಯ್‌್ಕ
ಹೊಸಕೋಟೆ ಶರತ್‌ ಬಚ್ಚೇಗೌಡ
ವರುಣಾ ಯತೀಂದ್ರ ಸಿದ್ದರಾಮಯ್ಯ
ಹುಣಸೂರು ಎಚ್‌.ಪಿ. ಮಂಜುನಾಥ್‌
ಪಿರಿಯಾಪಟ್ಟಣ ವೆಂಕಟೇಶ್‌
ಕೆ.ಆರ್‌.ನಗರ ಟಿ.ರವಿಶಂಕರ್‌
ಚಾಮರಾಜನಗರ ಸಿ.ಪುಟ್ಟರಂಗ ಶೆಟ್ಟಿ
ಸರ್ವಜ್ಞನಗರ ಕೆ.ಜೆ. ಜಾರ್ಜ್‌
ಚಾಮರಾಜಪೇಟೆ ಜಮೀರ್‌ ಅಹಮದ್‌ ಖಾನ್‌
ಶಿವಾಜಿನಗರ ರಿಜ್ವಾನ್‌ ಅರ್ಷದ್‌
ವಿಜಯನಗರ ಎಂ.ಕೃಷ್ಣಪ್ಪ
ಹನೂರು ನರೇಂದ್ರ ಆರ್‌.
ನಂಜನಗೂಡು ದರ್ಶನ್‌ ಧ್ರುವನಾರಾಯಣ
ಟಿ.ನರಸೀಪುರ ಸುನೀಲ್‌ ಬೋಸ್‌
ಹುಬ್ಬಳ್ಳಿ- ಧಾರವಾಡ ಪೂರ್ವ ಪ್ರಸಾದ್‌ ಅಬ್ಬಯ್ಯ
ಕೆಜಿಎಫ್‌ ರೂಪಾ ಶಶಿಧರ್‌
ಸೊರಬ ಮಧು ಬಂಗಾರಪ್ಪ
ಚಿಕ್ಕನಾಯಕನಹಳ್ಳಿ ಕಿರಣ್‌ಕುಮಾರ್‌
ನಾಗಮಂಗಲ ಚೆಲುವರಾಯಸ್ವಾಮಿ
ಮಳವಳ್ಳಿ ನರೇಂದ್ರ ಸ್ವಾಮಿ
ಗುಂಡ್ಲುಪೇಟೆ ಗಣೇಶ್‌ ಪ್ರಸಾದ್‌
ರಾಮದುರ್ಗ ಅಶೋಕ್‌ ಪಟ್ಟಣ್‌
ಬಂಗಾರಪೇಟೆ ನಾರಾಯಣಸ್ವಾಮಿ
ಮಾಲೂರು ನಂಜೇಗೌಡ
ವಿರಾಜಪೇಟೆ ಎ.ಎಸ್‌. ಪೊನ್ನಣ್ಣ
ರಾಯಚೂರು ಗ್ರಾಮೀಣ ಬಸನಗೌಡ ದದ್ದಲ್‌
ಆನೇಕಲಲ್‌ ಶಿವಣ್ಣ
ದೊಡ್ಡಬಳ್ಳಾಪುರ ವೆಂಕಟರಮಣಯ್ಯ
ನೆಲಮಂಗಲ ಶ್ರೀನಿವಾಸ್‌
ಸಕಲೇಶಪುರ ಮುರುಳಿ ಕೃಷ್ಣ
ನರಸಿಂಹರಾಜ ತನ್ವೀರ್‌ ಸೇಠ್‌
ಮಾಗಡಿ ಎಚ್‌.ಸಿ. ಬಾಲಕೃಷ್ಣ
ರಾಮನಗರ ಇಕ್ಬಾಲ್‌ ಹುಸೇನ್‌
ಶ್ರೀರಂಗಪಟ್ಟಣ ರಮೇಶ್‌ ಬಾಬು ಬಂಡಿಸಿದ್ದೇಗೌಡ
ತುರುವೇಕೆರೆ ಬೆಮೆಲ್‌ ಕಾಂತರಾಜು
ಗುಬ್ಬಿ ಶ್ರೀನಿವಾಸ್‌
ಬೆಂಗಳೂರು ದಕ್ಷಿಣ ಆರ್‌.ಕೆ. ರಮೇಶ್‌
ಬಸವನಗುಡಿ ಯು.ಬಿ. ವೆಂಕಟೇಶ್‌
ಯಲ್ಲಾಪುರ ವಿ.ಎಸ್‌. ಪಾಟೀಲ್‌
ಕಾರವಾರ ಸತೀಶ್‌ ಸೈಲ್‌
ಭಟ್ಕಳ ಮಾಂಕಾಳ್‌ ವೈದ್ಯ
ಕಾಪು ವಿನಯ್‌ ಕುಮಾರ್‌ ಸೊರಕೆ
ಬಂಟ್ವಾಳ ರಮಾನಾಥ್‌ ರೈ
ಕಾಗವಾಡ ರಾಜು ಕಾಗೆ
ರಾಜಾಜಿನಗರ ಪುಟ್ಟಣ್ಣ
ಮಹಾಲಕ್ಷ್ಮಿ ಲೇಔಟ್‌ ಕೇಶವ ಮೂರ್ತಿ
ರಾಜರಾಜೇಶ್ವರಿನಗರ ಕುಸುಮಾ ಹನುಮಂತರಾಯಪ್ಪ
ಬೆಳ್ತಂಗಡಿ ರಕ್ಷಿತ್‌ ಶಿವರಾಂ (ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ)
ಗೌರಿಬಿದನೂರು ಎನ್‌.ಎಚ್‌. ಶಿವಶಂಕರರೆಡ್ಡಿ
ತರೀಕೆರೆ ಶ್ರೀನಿವಾಸ್‌
ಹಳಿಯಾಳ ಆರ್‌.ವಿ. ದೇಶಪಾಂಡೆ
ಗದಗ ಎಚ್‌.ಕೆ. ಪಾಟೀಲ್‌
ಕುಣಿಗಲ್‌ ಎಚ್‌.ಟಿ. ರಂಗನಾಥ್‌
ಬಾಗೇಪಲ್ಲಿ ಸುಬ್ಬಾರೆಡ್ಡಿ
ಶಾಂತಿನಗರ ಎನ್‌.ಎ. ಹ್ಯಾರಿಸ್‌
ಮಂಗಳೂರು ಯು.ಟಿ. ಖಾದರ್‌
ಜೇವರ್ಗಿ ಡಾ. ಅಜಯ್‌ಸಿಂಗ್‌
ಕಲಬುರಗಿ ಉತ್ತರ ಫಾತಿಮಾ ಖಮರುಲ್‌ ಇಸ್ಲಾಂ
ಶ್ರೀನಿವಾಸಪುರ ಕೆ.ಆರ್‌. ರಮೇಶ್‌ಕುಮಾರ್‌
ಬೈಲಹೊಂಗಲ ಮಹಾಂತೇಶ್‌ ಕೌಜಲಗಿ
ಇಂಡಿ ಯಶವಂತರಾಯಗೌಡ ಪಾಟಿಲ್‌
ಶಹಾಪುರ ಶರಣಬಸಪ್ಪ ದರ್ಶನಾಪುರ
ಹುಮ್ನಾಬಾದ್‌ ರಾಜಶೇಖರ್‌ ಪಾಟೀಲ್‌
ಬೀದರ್‌ ರಹೀಮ್‌ ಖಾನ್‌
ಭಾಲ್ಕಿ ಈಶ್ವರ್‌ ಖಂಡ್ರೆ
ಕುಷ್ಟಗಿ ಅಮರೇಗೌಡ ಬಯ್ಯಾಪುರ
ಹಿರೇಕೆರೂರು ಯು.ಬಿ. ಬಣಕಾರ್‌
ಮೂಡಬಿದ್ರೆ ಮಿಥುನ್‌ ರೈ
ಬೈಂದೂರು ಗೋಪಾಲ್‌ ಪೂಜಾರಿ
ಚಿಂತಾಮಣಿ ಎಂ.ಸಿ.ಸುಧಾಕರ್‌