Asianet Suvarna News Asianet Suvarna News

Para Badminton ಒಲಿಂಪಿಕ್ಸ್‌ ಪದಕ ಗೆಲ್ಲುವ ಅವಕಾಶ ಹೆಚ್ಚಳ, ಭಾರತದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭ!

  • ದ್ರೋಣಾಚಾರ್ಯ ಪ್ರಶಸ್ತಿ ವಿಜೇತಾ ಗೌರವ್ ಖನ್ನಾ ಸಹಯೋಗದಲ್ಲಿ ಅಕಾಡೆಮಿ
  • 2024ರ ಪ್ಯಾರಾಲಿಂಪಿಂಕ್ಸ್‌ನಲ್ಲಿ ಭಾರತದ ಪದಕ ಗೆಲ್ಲುವ ಅವಕಾಶ ಹೆಚ್ಚಳ
  • ಹೊಸ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ  ಕಾರ್ಯಕ್ರಮ
Dronacharya Awardee Gaurav Khanna and Ageas Federal Life Insurance launch India first Para Badminton Academy ckm
Author
Bengaluru, First Published Jan 18, 2022, 6:37 PM IST

ಲಖನೌ(ಜ.18): ಭಾರತದಲ್ಲಿ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿPara Badminton Academy) ಆರಂಭಗೊಂಡಿದೆ. ದ್ರೋಣಾಚಾರ್ಯ ಪ್ರಶಸ್ತಿ ವಿಜೇಯ  ಭಾರತೀಯ ಪ್ಯಾರಾ-ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಗೌರವ್ ಖನ್ನಾ ಹಾಗೂ ಹಾಗೂ ಏಜೆಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಸಹಯೋಗದೊಂದಿಗೆ ಅಕಾಡೆಮಿ ಆರಂಭಿಸಲಾಗಿದೆ.

ಸುಧಾರಿತ ಉಪಕರಣಗಳನ್ನೊಳಗೊಂಡ ಸ್ಟೇಟ್ ಆಫ್ ದಿ ಆರ್ಟ್, ಹೈ ಪರ್ಫಾಮೆನ್ಸ್ ಸೆಂಟರ್ ಉಳ್ಳ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಇದಾಗಿದ್ದು, ಇದು 2024ರ ಪ್ಯಾರಾಲಿಂಪಿಂಕ್ಸ್”ನಲ್ಲಿ(paralympics) ಭಾರತದ ಪದಕ ಗೆಲ್ಲುವ ಅವಕಾಶಗಳನ್ನು ಸುಧಾರಿಸಲಿದೆ. ಇದೇ ಸಂದರ್ಭದಲ್ಲಿ ದ್ರೋಣಾಚಾರ್ಯ ಪುರಸ್ಕೃತ ಗೌರವ್ ಖನ್ನಾ(Gaurav Khanna) ಏಜೀಸ್ ಫೆಡರಲ್ “ಫೆಸ್ಟ್ ಫಾರ್ ಫಿಯರ್ ಲೆಸ್ ಶಟ್ಲರ್ಸ್” ಕಾರ್ಯಕ್ರಮವನ್ನು ಅನಾವರಣಗೊಳಿಸಿದರು. 2028 ಮತ್ತು 2032ರ ಪ್ಯಾರಾಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡು ಹೊಸ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಕಾರ್ಯಕ್ರಮ ಇದಾಗಿದೆ. 

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಕೇಂದ್ರ ಸರ್ಕಾರ ಸನ್ಮಾನ

ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯ ಹೈ ಪರ್ಫಾಮೆನ್ಸ್ ಕೇಂದ್ರ ನಾಲ್ಕು ಕೋರ್ಟ್ ಗಳು, ಬಿಡಬ್ಲ್ಯೂಎಫ್ ಅನುಮೋದಿತ ಎರಡು ಸಿಂಥೆಟಿಕ್ ಮ್ಯಾಟ್ಸ್ ಮತ್ತು ವೀಲ್ಹ್ ಚೇರ್ ಅಥ್ಲೀಟ್”ಗಳಿಗಾಗಿ 2 ವುಡನ್ ಕೋರ್ಟ್ ಗಳನ್ನು ಒಳಗೊಂಡಿದೆ. ಈ ಅಕಾಡೆಮಿ ಸಂಪೂರ್ಣ ಸುಸಜ್ಜಿತ ಜಿಮ್, ಐಸ್ ಸ್ನಾನ, ಹಬೆ ಸ್ನಾನ, ಹೈಡ್ರೋಥೆರಪಿ ಸೇರಿದಂತೆ ಅಥ್ಲೀಟ್ ಗಳಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳ ಜೊತೆಗೆ, ಕ್ರೀಡಾಪಟುಗಳ(athletes) ವಾಸ್ತವ್ಯಕ್ಕೆ ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಗೌರವ್ ಖನ್ನಾ ಭಾರತವು ಹಲವಾರು ಪ್ಯಾರಾ ಚಾಂಪಿಯನ್‌ಗಳನ್ನು ನೀಡಿದೆ, ಆದರೆ ಅವರು ಎಂದಿಗೂ ವೃತ್ತಿಪರ ವ್ಯವಸ್ಥೆಯಲ್ಲಿ ಅವರಿಗೆ ತರಬೇತಿ ನೀಡಲು ಸಾಧ್ಯವಾಗಿಲಿಲ್ಲ. 2015 ರಿಂದ, ನಾನು ತಾತ್ಕಾಲಿಕ ಬಾಡಿಗೆ ಸ್ಥಳಗಳಲ್ಲಿ ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ವಿಷಾದಿಸಿದರು. ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಿಗೆ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್”ನ ಸಹಯೋಗದೊಂದಿಗೆ ನಾವು ವಿಶ್ವದರ್ಜೆಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದು, ಇದಕ್ಕಾಗಿ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್”ಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕ್ರೀಡಾಪಟುಗಳು ಇಲ್ಲಿ ತರಬೇತಿ ಪಡೆಯುವದಷ್ಟೇ ಅಲ್ಲದೆ, ಸುದೀರ್ಘ ಅವಧಿಗೆ ಇಲ್ಲೇ ವಾಸ್ತವ್ಯ ಹೂಡಿ, ಆಟದತ್ತ ಸಂಪೂರ್ಣ ಗಮನ ಕೇಂದ್ರೀಕರಿಸಬಹುದಾಗಿದೆ ಎಂದು ಗೌರವ್ ಖನ್ನಾ ಹೇಳಿದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಸಾಧಕರಿಗೆ ತವರಲ್ಲಿ ಅದ್ದೂರಿ ಸ್ವಾಗತ..!

ಈ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅರ್ಹ ತರಬೇತುದಾರರು(Coach), ಫಿಸಿಯೋಗಳು, ಫಿಸಿಕಲ್ ಟ್ರೈನರ್ಸ್, ನ್ಯೂಟ್ರಿಷಿಯನ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ ಎಲ್ಲರೂ ಒಂದೇ ಸೂರಿನಡಿಯಲ್ಲಿ ಕ್ರೀಡಾಪಟುಗಳಿಗೆ ಲಭ್ಯವಾಗಲಿದ್ದಾರೆ. ಹಲವಾರು ಮ್ಯಾರಥಾನ್‌ಗಳನ್ನು ಬೆಂಬಲಿಸುವುದನ್ನು ಹೊರತುಪಡಿಸಿ, ನಾವು ಬ್ಯಾಡ್ಮಿಂಟನ್’ಗೆ ತಳಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಾ ಬಂದಿದ್ದೇವೆ,” ಎಂದು ಏಜೀಸ್ ಫೆಡರಲ್ ಇನ್ಶೂರೆನ್ಸ್”ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ರಾಮನ್ ಹೇಳಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ಯಾರಾ-ಬ್ಯಾಡ್ಮಿಂಟನ್ ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ. ಈ ಕ್ರೀಡೆಯು ದೇಶದಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಲು ಮತ್ತು ಮುಂಬರುವ ಪ್ಯಾರಿಸ್ 2024 ಗೇಮ್‌ಗಳಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲುವ ನಿಟ್ಟಿನಲ್ಲಿ ಅಕಾಡೆಮಿಯ ಪ್ರಾರಂಭಕ್ಕಾಗಿ ಗೌರವ್ ಖನ್ನಾ ಅವರೊಂದಿಗೆ ಕೈಜೋಡಿಸುತ್ತಿರುವುದು ನಮಗೆ ಸಿಕ್ಕಿರುವ ದೊಡ್ಡ ಗೌರವ ಎಂದು ಭಾವಿಸುತ್ತೇನೆ. ಈ ಗುರಿ ತಲುಪುವುದಕ್ಕಾಗಿ ಫೆಸ್ಟ್ ಫಾರ್ ಫಿಯರ್ ಲೆಸ್ ಶಟ್ಲರ್ಸ್ ಅನ್ವೇಷಣೆ ನಮ್ಮ ಪ್ರಾಮಾಣಿಕ ಪ್ರಯತ್ನ  ಎಂದು ಕಾರ್ತಿಕ್ ರಾಮನ್ ತಿಳಿಸಿದರು.

ಪ್ಯಾರಾಒಲಿಂಪಿಕ್ಸ್‌ ಪದಕ: ನೆಚ್ಚಿನ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್‌‌ ಅಭಿನಂದಿಸಿದ ಯೋಗಿ ಆದಿತ್ಯನಾಥ್

ಕೋವಿಡ್-19 ನಿರ್ಬಂಧಗಳ ಕಾರಣ ನಾಲ್ಕು ಗೋಡೆಗಳ ಮಧ್ಯೆ ನಡೆದ ಉದ್ಘಾಟನಾ ಸಮಾರಂಭದಲ್ಲಿ 2024ರ ಪ್ಯಾರಿಸ್ ಪ್ಯಾರಾಲಿಂಪಿಂಕ್ಸ್ ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಖ್ಯಾತ ಶಟ್ಲರ್’ಗಳಾದ ಪ್ರಮೋದ್ ಭಗತ್, ಮನೋಜ್ ಸರ್ಕಾರ್, ನಿತೇಶ್ ಕುಮಾರ್, ಕೃಷ್ಣಸಾಗರ್, ನಿತ್ಯಾಶ್ರೀ ಮತ್ತು ಪಾಲಕ್ ಕೊಹ್ಲಿ ಪಾಲ್ಗೊಂಡಿದ್ದರು.  ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಪ್ರಮೋದ್ ಭಗತ್ ಮತ್ತು ಕೃಷ್ಣಸಾಗರ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಸುಹಾಸ್ ಯತಿರಾಜ್ ಮತ್ತು ಮನೋಜ್ ಸರ್ಕಾರ್ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಗೆದ್ದಿದ್ದರು. ಇವರೆಲ್ಲರ ಜೊತೆ ಹತ್ತಿರ ಹತ್ತಿರ 50 ಕ್ರೀಡಾಪಟುಗಳು ಇನ್ನು ಮುಂದೆ ಈ ಅಕಾಡೆಮಿಯಲ್ಲಿ ಅಭ್ಯಾಸ ಮತ್ತು ತರಬೇತಿ ನಡೆಸಲಿದ್ದಾರೆ.

ಇತರ ಕೋಚ್‌ಗಳು ಪ್ಯಾರಾ-ಬ್ಯಾಡ್ಮಿಂಟನ್‌ನ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ, ನಾನು ಉತ್ಕೃಷ್ಟ ತರಬೇತುದಾರರ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೇನೆ. ನಾನು ಕರಡು ಪಠ್ಯಕ್ರಮವನ್ನು ಸಿದ್ಧಪಡಿಸುತ್ತಿದ್ದು, ದೇಶದಲ್ಲಿ ಹಲವಾರು ತರಬೇತುದಾರರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದ್ದೇನೆ. ಇದರಿಂದ ನಾವು ಕ್ರೀಡೆಯಲ್ಲಿ ಪ್ರಮುಖ ಶಕ್ತಿಯಾಗಲಿದ್ದೇವೆ, ಎಂದು ಗೌರವ್ ಖನ್ನಾ ಹೇಳಿದರು.

Follow Us:
Download App:
  • android
  • ios