Asianet Suvarna News Asianet Suvarna News

ಚೆನ್ನೈ ಹೋಟೆಲ್‌ಗಳಲ್ಲಿ ಈಗ ಬಾಳೆ ಎಲೆ ಊಟ!

ಚೆನ್ನೈನಲ್ಲಿ ಜಲಕ್ಷಾಮ ಮಿತಿಮೀರಿದ್ದು, ಚೆನ್ನೈನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈಗ ವೈವಿಧ್ಯಮಯ ಪ್ಲೇಟ್‌ಗಳನ್ನು ಬಳಕೆ ಮಾಡುವ ಬದಲು ಬಾಳೆ ಎಲೆಯನ್ನು ಬಳಸಲು ಶುರು ಮಾಡಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

Water Crisis  Banana leaves replace plates at Chennai
Author
Chennai, First Published Jun 30, 2019, 12:45 PM IST

ಚೆನ್ನೈ(ಜೂ.30): ಜಲಕ್ಷಾಮಕ್ಕೆ ತತ್ತರಿಸಿರುವ ಚೆನ್ನೈನಲ್ಲಿ ಈಗ ಹೋಟೆಲ್‌ ಉದ್ಯಮಿಗಳು ನೀರು ಉಳಿಸಲು ಬೇರೆ ಬೇರೆ ಮಾರ್ಗೋಪಾಯ ಹುಡುಕಿಕೊಳ್ಳಲು ಆರಂಭಿಸಿದ್ದಾರೆ.

ನೀರಿನ ಕೊರತೆ: ಚೆನ್ನೈಗೆ ಬೇರೆ ಜಿಲ್ಲೆಗಳಿಂದ ರೈಲಿನಲ್ಲಿ ನೀರು

ನೀರು ಬಳಕೆ ಕಡಿಮೆ ಮಾಡುವುದೊಂದೇ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿರುವ ಚೆನ್ನೈನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈಗ ವೈವಿಧ್ಯಮಯ ಪ್ಲೇಟ್‌ಗಳನ್ನು ಬಳಕೆ ಮಾಡುವ ಬದಲು ಬಾಳೆ ಎಲೆಯನ್ನು ಬಳಸಲು ಶುರು ಮಾಡಿವೆ. ದರ್ಶಿನಿಗಳಂಥ ಸಣ್ಣ-ಪುಟ್ಟಹೋಟೆಲ್‌ಗಳಿಂದ ಸ್ಟಾರ್‌ ಹೋಟೆಲ್‌ಗಳಲ್ಲೂ ಬಾಲೆ ಎಲೆಯನ್ನೇ ಬಳಸುತ್ತಿವೆ. ಗ್ರಾಹಕರ ಮನವೊಲಿಸಲು ಹೋಟೆಲ್‌ ಮಾಲೀಕರು, ಆಡಳಿತ ಮಂಡಳಿ ‘ನೀರು ಉಳಿತಾಯಕ್ಕಾಗಿ ಬಾಳೆ ಎಲೆ ಬಳಕೆ ಮಾಡಲಾಗುತ್ತಿದೆ, ಗ್ರಾಹಕರು ಸಹಕರಿಸಬೇಕು’ ಎಂದು ಫಲಕಗಳನ್ನು ಹಾಕಿದ್ದಾರೆ.

ನೀರಿನ ಸಮಸ್ಯೆ: Work From Homeಗೆ ಸೂಚಿಸಿದ ಕಂಪನಿಗಳು

ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಬಾಳೆ ಎಲೆ ಊಟ ಸಂಪ್ರದಾಯವಾಗಿದ್ದು, ಅದೇ ಮಾದರಿಯಲ್ಲಿ ಸೇವೆ ಒದಗಿಸಲಾಗುತ್ತಿದೆ ಎಂದು ಹೋಟೆಲ್‌ ಉದ್ಯಮಿಗಳು ಹೇಳಿಕೊಂಡಿದ್ದಾರೆ.
 

Follow Us:
Download App:
  • android
  • ios