ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯಭೇರಿ | ರಾಹುಲ್ ಆದ್ರೂ ಹೀರೋ | ಇವರೇ ಮುಂದಿನ ಪ್ರಧಾನಿ ಎನ್ನುತ್ತಿದೆ ಕಾಂಗ್ರೆಸ್ ಪಾಳಯ 

ನವದೆಹಲಿ (ಡಿ. 18): ಒಂದು ಕಡೆ ಸ್ಟಾಲಿನ್ ‘ರಾಹುಲ್ ಮುಂದಿನ ಪ್ರಧಾನಿ’ ಎಂದು ಹೇಳಿದ್ದಾರೆ. ಇದರಿಂದ ಮಮತಾ, ಮಾಯಾವತಿ ಸಿಟ್ಟಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಚರಾಜ್ಯ ಚುನಾವಣೆ ಸೋಲಿನ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ ಮೋದಿ-ಶಾ

ಮೂರು ಚುನಾವಣೆ ಗೆದ್ದುಕೊಂಡರೂ ರಾಹುಲ್‌ಗೆ ಒಂದು ನೆಪ ಮಾತ್ರದ ಅಭಿನಂದನೆ ಸಲ್ಲಿಸಲು ಈ ಇಬ್ಬರು ಗಟ್ಟಿಗಿತ್ತಿಯರಿಗೆ ಪುರುಸೊತ್ತಿಲ್ಲ. ಮಮತಾ, ಮಾಯಾವತಿ, ಕೆಸಿಆರ್, ನವೀನ್ ಪಟ್ನಾಯಕ್ ಮುಂದಿನ ದಿನಗಳಲ್ಲಿ ಒಟ್ಟಾಗಬಹುದಂತೆ. ಮಾಯಾವತಿ ಮತ್ತು ಮಮತಾ ಇಬ್ಬರೂ ರಾಜಕೀಯವಾಗಿ ಅತಿ ಚಂಚಲೆಯರು ಮತ್ತು ವೈಯಕ್ತಿಕವಾಗಿ ಸದಾ ಮೂಗಿನ ಮೇಲೆ ಸಿಟ್ಟಿನ ಸ್ವಭಾವದವರು. ಯಾವಾಗ ಏನು ಯೋಚಿಸುತ್ತಾರೋ, ಮಾತನಾಡುತ್ತಾರೋ, ನಿರ್ಣಯಿಸುತ್ತಾರೋ ಹೇಳಲು ಆಗದು. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ