ವರ್ಗಾವಣೆಯಲ್ಲಿ ನನ್ನದೇನೋ ಪಾತ್ರವಿಲ್ಲ: ರೇವಣ್ಣ
ಲೋಕೋಪಯೋಗಿ ಇಲಾಖೆಯಲ್ಲಿ ರೇವಣ್ಣ ದರ್ಬಾರ್ | ಅಧಿಕಾರಿಗಳ ವರ್ಗಾವಣೆಗೆ ರೇವಣ್ಣ ಸ್ಪಷ್ಟನೆ | ನಿವೃತ್ತಿ ನಂತರ ತೆರವಾಗಿರುವ ಜಾಗಕ್ಕೆ ವರ್ಗ ಮಾಡದಿದ್ದರೆ ಕೆಲಸ ಹೇಗೆ ಆಗುತ್ತೆ? ಎಂದ ರೇವಣ್ಣ
ಹಾಸನ (ಅ. 01): ಲೋಕೋಪಯೋಗಿ ಇಲಾಖೆಯಲ್ಲಿ 700 ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಲೋಕೋಪಯೋಗಿ ಇಲಾಖೆ ಸಚಿವ ಹೆಚ್,ಡಿ,ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ರೇವಣ್ಣ ಇದೇನಣ್ಣಾ? ಮುಂದುವರೆದಿದೆ ಸೂಪರ್ ಸಿಎಂ ದರ್ಬಾರ್!ವರ್ಗಾವಣೆಯಲ್ಲಿ ನನ್ನದೇನೋ ಪಾತ್ರವಿಲ್ಲ. ಖಾಲಿ ಇರುವ ಜಾಗಕ್ಕೆ ಹುದ್ದೆ ನೀಡಲೇಬೇಕು. ನಿವೃತ್ತಿ ನಂತರ ತೆರವಾಗಿರುವ ಜಾಗಕ್ಕೆ ವರ್ಗ ಮಾಡದಿದ್ದರೆ ಕೆಲಸ ಹೇಗೆ ಆಗುತ್ತೆ? ವರ್ಗಾವಣೆಯಲ್ಲಿ ಯಾವುದೇ ದಂಧೆ ಇಲ್ಲ ಎಂದಿದ್ದಾರೆ. ಎಲ್ಲಾ ಇಲಾಖೆಗೂ ಕೆಲವು ಇಂಜಿನಿಯರ್ ಗಳನ್ನ ವರ್ಗಾವಣೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಭೂಕಂಪ, ಸುನಾಮಿ : 800ಕ್ಕೂ ಅಧಿಕ ಸಾವುಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂಬ ಬಿಜೆಪಿ ಆರೋಪ ಉತ್ತರ ನೀಡುತ್ತಾ, ಯಾರಿಗೆ ಬೇಕಾದರೂ ದಾಖಲೆ ನೀಡುತ್ತೇನೆ ಪರಿಶೀಲನೆ ಮಾಡಲಿ. ಬಿಜೆಪಿ ಮಾತು ಕೇಳಿದ್ರೆ ಮಣ್ಣು ಹಾಕಬೇಕಾಗುತ್ತದೆ ಎಂದು ಕಿಡಿ ಕಾರಿದ್ದಾರೆ.