Asianet Suvarna News Asianet Suvarna News

ದಸರಾ ಉದ್ಘಾಟಿಸಲು ಸುಧಾಮೂರ್ತಿಗೆ ಬಂತು ಅಧಿಕೃತ ಆಹ್ವಾನ

ವಿಶ್ವ ಪ್ರಸಿದ್ಧ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ. ದಸರಾ ಉತ್ಸವದ ಉದ್ಘಾಟಕರಿಗೆ ರೆಡ್ ಕಾರ್ಪೆಟ್ ಸಿದ್ಧವಾಗಿದೆ.

Government formally invites Infosys Foundation chairperson SudhaMurthy to inaugurate Mysuru Dasara
Author
Bengaluru, First Published Oct 3, 2018, 10:43 AM IST

ಬೆಂಗಳೂರು, [ಅ.03]: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನೆಗಾಗಿ ಇನ್ಫೋಸಿಸ್​ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.

ಇಂದು [ಬುಧವಾರ] ಮೈಸೂರು ಉಸ್ತುವಾರಿ ಸಚಿವ‌ ಜಿ.ಟಿ‌. ದೇವೇಗೌಡ ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‌ ಅವರು ಜಯನಗರದ ಇನ್ಫೋಸಿಸ್‌ ಫೌಂಡೇಶನ್‌ ಕಚೇರಿಗೆ ಆಗಮಿಸಿ ಆಮಂತ್ರಣ ನೀಡಿದ್ದಾರೆ. 

"

ದಸರಾ ಉದ್ಘಾಟನೆಗೆ ಸುಧಾ ಮೂರ್ತಿ: ಅಪಸ್ವರ ಎತ್ತಿದ ಚಿಂತಕಿಗೆ ಟಾಂಗ್

ಈ ವೇಳೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್​ ಹಾಗೂ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಸಾಥ್​ ನೀಡಿದರು. ಸರಳ ಸಜ್ಜನಿಕೆಗೆ ಹೆಸರಾದ ಸುಧಾಮೂರ್ತಿ ಅವರು ಸಾಮಾಜಿಕ ಕಾರ್ಯಗಳಗಳಲ್ಲಿ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Follow Us:
Download App:
  • android
  • ios