Asianet Suvarna News Asianet Suvarna News

ರಾಹುಲ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದ ‘ಪದ್ಮಾವತಿ’

ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಟ್ವೀಟ್  ಮಾಡುತ್ತ ಸುದ್ದಿ ಮಾಡುತ್ತಿದ್ದ ರಮ್ಯಾ ಪ್ರತ್ಯಕ್ಷವಾಗಿದ್ದಾರೆ!

Congress Social Media Head ramya-makes-appearance-during-rahul-gandhi program Bengaluru
Author
Bengaluru, First Published Mar 18, 2019, 8:50 PM IST

ಬೆಂಗಳೂರು[ಮಾ. 18]  ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾಜಿ ಸಂಸದೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಇದೀಗ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. 

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನವೋದ್ಯಮಿಗಳ ಜತೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು ಇಲ್ಲಿ 'ಪದ್ಮಾವತಿ' ಕಾಣಿಸಿಕೊಂಡಿದ್ದಾರೆ.

ರಮ್ಯಾ ಮಾಡಿಕೊಂಡ ಎಡವಟ್ಟು!

ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಮೃತಪಟ್ಟ ಸಮಯದಲ್ಲೂ ರಾಜ್ಯಕ್ಕೆ ರಮ್ಯಾ ಬಂದಿರಲಿಲ್ಲ.  ಮಂಡ್ಯದಿಂದ ಮನೆ ಖಾಲಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ರಾಹುಲ್ ಗಾಂಧಿ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಬಂದಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಪ್ರತಿಕ್ರಿಯೆ ಬಂದಿದೆ.

"

Follow Us:
Download App:
  • android
  • ios