ಕಿವಿ ಹರ್ಕೊಂಡು ಒಂದು ಕೊಂಬು ಮುರ್ಕೊಂಡಿರೋ ಕಾಡಾನೆ ಭೀಮಾ: ಕಾಫಿ ತೋಟದ ಬೇಲಿಗಳೆಲ್ಲಾ ಪುಡಿ ಪುಡಿ
Wild elephant Bhima: ಚಿಕ್ಕಮಗಳೂರು: ಕಾಫಿತೋಟದಲ್ಲಿ ಕಾಡಾನೆ ಭೀಮನ ಹಾವಳಿ ಜೋರಾಗಿದ್ದು, ನಾನು ನಡೆದದ್ದೇ ದಾರಿ ಅಂತ ಕಾಫಿತೋಟದಲ್ಲಿ ಬಿಂದಾಸ್ ಆಗಿ ಓಡಾಡ್ತಿರುವ ಭೀಮನ ಫೋಟೊ ವೀಡಿಯೋಗಳು ವೈರಲ್ ಆಗಿವೆ.

ಕಾಫಿತೋಟದಲ್ಲಿ ಭೀಮನ ಗಜ ಗಾಂಭೀರ್ಯ ನಡೆ
ಚಿಕ್ಕಮಗಳೂರು :ಕಾಫಿನಾಡ ಕಾಫಿತೋಟದಲ್ಲಿ ಭೀಮನ ಗಜ ಗಾಂಭೀರ್ಯ ನಡೆ... ಕಿವಿ ಹರ್ಕೊಂಡು, ಒಂದು ಕೊಂಬು ಮುರ್ಕೊಂಡಿರೋ ಸೈಲೆಂಟ್ ಎಲಿಫೆಂಟ್...!
ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಬಿಂದಾಸ್ ಓಡಾಟ
ನಾನು ನಡೆದದ್ದೇ ದಾರಿ ಅಂತ ಕಾಫಿತೋಟದಲ್ಲಿ ಬಿಂದಾಸ್ ಆಗಿ ಓಡಾಡ್ತಿರುವ ಭೀಮನ ಫೋಟೊ ವೀಡಿಯೋಗಳು ವೈರಲ್.
ನಡುಕ ಹುಟ್ಟಿಸೋ ಭೀಮನ ಅಟ್ಯಾಕಿಂಗ್ ನೋಟ
ನೋಡ್ದೋರಿಗೆ ಎದೆಯಲ್ಲಿ ನಡುಕ ಹುಟ್ಟಿಸೋ ಭೀಮನ ಅಟ್ಯಾಕಿಂಗ್ ನೋಟಕ್ಕೆ ಜನ ಗಾಬರಿಯಾಗಿದ್ದಾರೆ. ಭೀಮನ ದಾರಿಯಲ್ಲಿ ಅಡ್ಡ ಸಿಕ್ಕ ತೋಟದ ಬೇಲಿಗಳೆಲ್ಲಾ ಪುಡಿ ಪುಡಿ.
ಗೋಣಿಬೀಡು ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆ ಭೀಮ ತನ್ನ ಹಿಂಡಿನೊಂದಿಗೆ ತೋಟದಲ್ಲೆಲ್ಲಾ ಅಡ್ಡಾಡುತ್ತಿದೆ.
ಇದನ್ನೂ ಓದಿ: ಮಾಲೀಕ ಆಸ್ಪತ್ರೆಯಲ್ಲಿದ್ದಾಗ ಕುರಿ ಶೆಡ್ಗೆ ಬೆಂಕಿ: 30ಕ್ಕೂ ಹೆಚ್ಚು ಕುರಿಗಳು ಸಜೀವ ದಹನ
ಆನೆಗಳ ಕಾಡಿಗೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಹರಸಾಹಸ
ಆನೆಗಳನ್ನ ಕಾಡಿಗೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಅರಣ್ಯ ಇಲಾಖೆ ಕಾರ್ಯಚರಣೆಗೆ ಆನೆಗಳ ಹಿಂಡು ಡೋಂಟ್ ಕೇರ್ ಎಂದಿದ್ದು, ಗ್ರಾಮದಲ್ಲಿ ಆತಂಕ ಉಂಟಾಗಿದೆ.
ಇದನ್ನೂ ಓದಿ: ಸೋಮವಾರಪೇಟೆ: ಮನೆಯಲ್ಲಿ ಆಕಸ್ಮಿಕ ಬೆಂಕಿ: ಒಂದು ಕಾಲು ಕಳೆದುಕೊಂಡಿದ್ದ ಯೋಧ ಹೊರ ಬಾರಲಾಗದೇ ಸಜೀವ ದಹನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

