Asianet Suvarna News Asianet Suvarna News

ಲವ್‌ ಯು ರಚ್ಚು’ ಕಲಾವಿದ ಸಾವು : ರಚಿತಾ ರಾಮ್‌ ವಿಚಾರಣೆ

  • ಲವ್‌ ಯು ರಚ್ಚು ಚಿತ್ರೀಕರಣ ವೇಳೆ ಸಹಾ​ಯಕ ಫೈಟರ್‌ ವಿವೇಕ್‌ ಸಾವಿನ ಪ್ರಕ​ರ​ಣ
  • ನ​ಟಿ​ ರಚಿತಾ ರಾಮ್‌ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್‌ ಠಾಣೆಯಲ್ಲಿ ವಿಚಾ​ರ​ಣೆ
Actress Rachita Ram visited Bidadi police station to face inquiry  snr
Author
Bengaluru, First Published Aug 25, 2021, 10:54 AM IST

  ರಾಮನಗರ (ಆ.25):  ಲವ್‌ ಯು ರಚ್ಚು ಚಿತ್ರೀಕರಣ ವೇಳೆ ಸಹಾ​ಯಕ ಫೈಟರ್‌ ವಿವೇಕ್‌ ಸಾವಿನ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ನ​ಟಿ​ ರಚಿತಾ ರಾಮ್‌ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್‌ ಠಾಣೆಯಲ್ಲಿ ವಿಚಾ​ರ​ಣೆಗೆ ಹಾಜ​ರಾ​ದರು. ನೋಟಿಸ್‌ ನೀಡಿದ್ದರಿಂದ ನಟಿ ರಚಿತಾ ರಾಮ್‌ ಮಂಗ​ಳ​ವಾರ ಸಂಜೆ ಠಾಣೆಗೆ ಹಾಜರಾದರು. ಡಿವೈ​ಎಸ್ಪಿ ಮೋಹನ್‌ ಕುಮಾರ್‌ ದುರಂತದ ಬಗ್ಗೆ ಮಾಹಿತಿ ಪಡೆ​ದು​ಕೊಂಡರು.

ಇದೇ ವೇಳೆ ಲವ್‌ ಯು ರಚ್ಚು ಚಿತ್ರೀ​ಕ​ರ​ಣದ ವೇಳೆ ಸಹಾ​ಯಕ ಫೈಟರ್‌ ವಿವೇಕ್‌ ಮೃತ​ಪಟ್ಟಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮೂವರ ಆರೋ​ಪಿ​ಗಳ ನ್ಯಾಯಾಂಗ ಬಂಧ​ನ​ವನ್ನು ರಾಮನಗರ ​ಸಿ​ಜೆಎಂ ನ್ಯಾಯಾ​ಲಯ ಸೆಪ್ಟೆಂಬರ್‌ 7ರವ​ರೆಗೆ ವಿಸ್ತ​ರಿ​ಸಿ​ದೆ.

ಆ ದುರ್ಘಟನೆ ನಡೆದಾಗ ನಾನು ಸೆಟ್‌ನಲ್ಲಿಇರಲಿಲ್ಲ: ನಟಿ ರಚಿತಾ ರಾಮ್

ಕಳೆದ ಆಗಸ್ಟ್‌ 9ರಂದು ಬಿಡ​ದಿ ಹೋಬಳಿ ಜೋಗ​ನ​ಪಾ​ಳ್ಯ​ದಲ್ಲಿ ಲವ್‌ ಯು ರಚ್ಚು ಚಲನಚಿತ್ರದ ಚಿತ್ರೀ​ಕ​ರ​ಣದ ವೇಳೆ ವಿದ್ಯುತ್‌ ಅವಘಡ ಸಂಭ​ವಿ​ಸಿ ಸಾಹಸ ಕಲಾ​ವಿ​ದ​ ವಿವೇಕ್‌ ಮೃತ​ಪಟ್ಟು ಮತ್ತೊಬ್ಬ ಕಲಾ​ವಿದ ತೀವ್ರ​ವಾಗಿ ಗಾಯ​ಗೊಂಡಿದ್ದ. ಈ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ನಿರ್ದೇ​ಶಕ ಶಂಕರ ರಾಜ್‌, ಸಾಹಸ ನಿರ್ದೇ​ಶಕ ವಿನೋದ್‌ ಕುಮಾರ್‌, ಕ್ರೇನ್‌ ಚಾಲಕ ಮಹ​ದೇವ ವಿರುದ್ಧ ಬಿಡದಿ ಪೊಲೀ​ಸರು ಪ್ರಕ​ರಣ ದಾಖ​ಲಿ​ಸಿ​ಕೊಂಡಿದ್ದರು. ಸಿಜೆಎಂ ನ್ಯಾಯಾ​ಲಯ ಆರೋ​ಪಿ​ಗ​ಳಿಗೆ 14 ದಿನ​ಗಳ ನ್ಯಾಯಾಂಗ ಬಂಧ​ನದ ಆದೇಶ ನೀಡಿತ್ತು. ರಾಮ​ನ​ಗರ ಜಿಲ್ಲಾ ಕಾರಾ​ಗೃ​ಹ​ದಲ್ಲಿ ಆರೋ​ಪಿ​ಗ​ಳಿದ್ದು, ವಿಡಿಯೋ ಕಾನ್ಪ​ರೆನ್ಸ್‌ ಮೂಲಕ ನ್ಯಾಯಾ​ಧೀ​ಶರು ವಿಚಾ​ರಣೆ ನಡೆ​ಸಿ​ದರು.

Follow Us:
Download App:
  • android
  • ios