ತಿಲಕ್‌, ಆಸಿಯಾ ಫಿರ್ದೋಸಿ, ದಿನೇಶ್‌ ಮಂಗಳೂರು, ಶೋಭರಾಜ್‌, ಬಲರಾಜವಾಡಿ, ಅನಿತಾ ಭಟ್‌, ಶೋಧನ್ ನಟನೆಯ ದ್ವಂದ್ವ ರಿಲೀಸ್ ಆಗಿದೆ.... 

ಆರ್‌. ಕೇಶವಮೂರ್ತಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಕೀಯ ಚದುರಂಗದ ಆಟದಲ್ಲಿ ಒಬ್ಬ ಮುಗ್ಧ ಹುಡುಗಿ, ಮತ್ತೊಬ್ಬ ಸಿನಿಮಾ ನಟಿಯ ಹಾಡು-ಪಾಡುಗಳನ್ನು ಒಳಗೊಂಡ ಸೈಲೆಂಟ್‌ ಕಿಲ್ಲಿಂಗ್‌ ಕತೆಯನ್ನು ಹೇಳುವ ಸಿನಿಮಾ ‘ದ್ವಂದ್ವ’. ಇಲ್ಲಿ ಯಾರು ವಿಲನ್‌, ಯಾರು ಹೀರೋ ಎಂಬುದು ಸಿನಿಮಾ ಮುಗಿಯುವ ತನಕ ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ರಹಸ್ಯ ಕಾಪಾಡಿಕೊಂಡು ಹೋಗಿದ್ದಾರೆ ನಿರ್ದೇಶಕ ಎ ಭರತ್‌. ಅದಕ್ಕೆ ಈ ಸಿನಿಮಾ ಪೂರ್ತಿ ಸಸ್ಪೆನ್ಸ್‌, ಸಸ್ಪೆನ್ಸ್‌ ಮತ್ತೂ ಸಸ್ಪೆನ್ಸ್‌.

ತಾರಾಗಣ: ತಿಲಕ್‌, ಆಸಿಯಾ ಫಿರ್ದೋಸಿ, ದಿನೇಶ್‌ ಮಂಗಳೂರು, ಶೋಭರಾಜ್‌, ಬಲರಾಜವಾಡಿ, ಅನಿತಾ ಭಟ್‌, ಶೋಧನ್

ನಿರ್ದೇಶನ: ಎ. ಭರತ್‌

Olave Mandara 2 Review: ಸಂಬಂಧವೆಂಬ ಆಲದ ಮರದಡಿ ಪ್ರೀತಿ, ನೀತಿ ಇತ್ಯಾದಿ

ಮೂರು ಕತೆಗಳು ಒಟ್ಟಿಗೆ ಸಾಗುತ್ತವೆ. ಒಮ್ಮೆ ರಾಜಕೀಯ ಆಟ ತೆರೆದುಕೊಂಡರೆ, ಇದ್ದಕ್ಕಿದ್ದಂತೆ ನಾಯಕ ಮತ್ತು ನಾಯಕಿ ಕತೆ ಬರುತ್ತದೆ, ಮತ್ತೆಲ್ಲೋ ಸಿನಿಮಾ ನಟಿಯೊಬ್ಬಳು ಕಾರು ಡ್ರೈವರ್‌ ಜತೆಗೆ ಹೋಗಿರುವ ಘಟನೆ ದರ್ಶನವಾಗುತ್ತದೆ. ಈ ಮೂರಕ್ಕೂ ಇರುವ ಸೈಲೆಂಟ್‌ ಕಿಲ್ಲಿಂಗ್‌ ಕೊಂಡಿಯ ಹಿಂದೆ ಪೊಲೀಸ್‌ ಅಧಿಕಾರಿ ಹೊರಟಿದ್ದಾರೆ. ಹೀಗೆ ಏಕಾಕಲಕ್ಕೆ ಬೇರೆ ಬೇರೆ ಕತೆಗಳನ್ನು ಹೇಳುತ್ತಲೇ ಕೊನೆಗೂ ಚಿತ್ರದ ಹೆಸರಿಗೆ ತಕ್ಕಂತೆಯೇ ಸಿನಿಮಾ ಮುಗಿಸುತ್ತಾರೆ!

DIGVIJAYA REVIEW: ರೈತರ ಗೆಲುವಿಗೆ ಹಾತೊರೆಯುವ ಕತೆ

ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗಿಗೆ ಅಪಾರವಾದ ನೆನಪಿನ ಶಕ್ತಿ ಇರುತ್ತದೆ. ಹೈಪರ್‌ಟೈಮಿಸಿಯಾ ಸಮಸ್ಯೆ ಇರುವ ಹುಡುಗಿ. ಒಮ್ಮೆ ನೋಡಿದ್ದನ್ನು ಹತ್ತಿಪ್ಪತ್ತು ವರ್ಷಗಳ ಕಾಲ ನೆನಪಿನಲ್ಲೇ ಇಟ್ಟುಕೊಳ್ಳುವ ಹುಡುಗಿ. ಈಕೆಯ ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ರಾಜಕಾರಣಿ ತನ್ನ ಅಕ್ರಮ ಆಸ್ತಿಯ ವಿವರಣೆಗಳನ್ನು ದಾಖಲೆಗಳೇ ಇಲ್ಲದೆ ಈಕೆಯ ನೆನಪಿನಲ್ಲಿ ಅಡಗಿಸಿಟ್ಟಿರುತ್ತಾನೆ. ಈಗ ಈಕೆ ನಾಪತ್ತೆ ಆಗಿದ್ದಾಳೆ. ಮುಂದೆ ಏನಾಗುತ್ತದೆ ಎಂಬುದನ್ನು ತೆರೆ ಮೇಲೆ ನೋಡಬೇಕು.