Asianet Suvarna News Asianet Suvarna News

Prajwal Devaraj Abbara Film Review: ವಿಭಿನ್ನ ತಿರುವುಗಳ ಕುತೂಹಲಕರ ಅಬ್ಬರ

ರಾಮ್‌ನಾರಾಯಣ್‌ ಬರೆದಿರೋ ಅಬ್ಬರದ ಕತೆ. ರಾವಣಸುರನಂತೆ ವೈರಮುಡಿ ತನ್ನ ಮಗಳಿಂದ ಪ್ರಾಣ ರಕ್ಷಿಸಿಕೊಳ್ಳಲು ಏನೆಲ್ಲ ತಂತ್ರ-ಪ್ರತಿತಂತ್ರಗಳನ್ನು ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ತುಂಬಾ ರೋಚಕವಾಗಿಯೇ ಕಟ್ಟಿಕೊಡುತ್ತಾರೆ.

Prajwal Devaraj Lekha Chandra Rajshri Ponnappa Nimika Ratnakar Starrer Abbara Movie Review gvd
Author
First Published Nov 19, 2022, 1:24 PM IST

ಆರ್‌ ಕೇಶವಮೂರ್ತಿ

ಒಬ್ಬ ತನ್ನ ಹೆತ್ತ ಮಗನಿಂದಲೇ ಸಾಯುತ್ತಾನೆ. ಮತ್ತೊಬ್ಬ ತನ್ನ ಮಗಳಿಂದಲೇ ಸಾಯುತ್ತಾನೆ. ಈ ಇಬ್ಬರ ಸಾವುಗಳ ನಡುವೆ ಇರುವ ಲಿಂಕು ಏನೂ ಎಂಬುದೇ ‘ಅಬ್ಬರ’ ಚಿತ್ರದ ಕತೆ. ಇದರ ನಡುವೆ ‘ಒಳ್ಳೆಯವರಿಗೆ ಒಳ್ಳೆಯದಾಗಬೇಕು ಅಂದ್ರೆ ಕೆಟ್ಟವರಿಗೆ ಕೆಟ್ಟದಾಗಲೇ ಬೇಕು’ಎನ್ನುವ ತತ್ವಾದರ್ಶವನ್ನು ನಿರ್ದೇಶಕ ರಾಮ್‌ನಾರಾಯಣ್‌ ಚಿತ್ರದ ನಾಯಕನಿಗೆ ವೆಪನ್‌ನಂತೆ ಕೊಟ್ಟಿರುತ್ತಾರೆ. ಆ ಎರಡು ಸಾವುಗಳ ಹಿನ್ನೆಲೆ, ಈ ತತ್ವಾದರ್ಶನದ ವ್ಯಾಪ್ತಿಯ ಒಳಗೆ ಹಾಡು, ಫೈಟು, ಡ್ಯಾನ್ಸು, ಹಣದ ಲೂಟಿ, ಪ್ರೀತಿ- ಪ್ರೇಮ ಹಾಗೂ ಒಂಚೂರು ತಮಾಷೆ, ಜತೆಗೊಂದಿಷ್ಟು ತಿರುವುಗಳು... 

ಹೀಗೆ ಒಂದು ಕಮರ್ಷಿಯಲ್‌ ಚಿತ್ರಕ್ಕೆ ಏನೆಲ್ಲ ಬೇಕೋ ಅಷ್ಟನ್ನೂ ನಿರ್ದೇಶಕರು ಪ್ಯಾಕ್‌ ಮಾಡಿ ತೆರೆ ಮೇಲೆ ತೆರೆದಿಟ್ಟಿದ್ದಾರೆ. ನಿರ್ದೇಶಕರ ಈ ವಿಭಿನ್ನ ತಿರುವುಗಳ ಕತೆಯನ್ನು ನಟ ಪ್ರಜ್ವಲ್‌ ದೇವರಾಜ್‌ ತಮ್ಮ ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಈ ಬಾರಿ ಅವರು ಏಕಕಾಲದಲ್ಲಿ ಮೂರು ರೀತಿಯ ಪಾತ್ರಗಳಲ್ಲಿ ನಟಿಸಿರುವುದು ವಿಶೇಷ. ಆತನ ಹೆಸರು ವೈರಮುಡಿ. ಹತ್ತಾರು ಕ್ರೈಮ್‌ ಮಾಡಿ ಜೈಲಿಗೆ ಹೋಗಿ ಬರುತ್ತಾನೆ. ಈಗ ಪೊಲಿಟಿಕಲ್‌ ಲೀಡರ್‌ ಆಗಲು ಹೊರಟಿದ್ದಾನೆ. ಅವನಿಗೆ ಒಬ್ಬ ಮಾಸ್ಕ್‌ ಮ್ಯಾನ್‌ ಅಡ್ಡಿಯಾಗುತ್ತಾನೆ. ಈ ಮಾಸ್ಕ್‌ ಮ್ಯಾನ್‌ಗೂ ವೈರಮುಡಿಯ ಹಳೆಯ ಕತೆಗೂ ಏನಾದರೂ ನಂಟು ಉಂಟೇ ಎಂಬುದನ್ನು ಚಿತ್ರದಲ್ಲಿ ನೋಡಬೇಕು. 

ಚಿತ್ರ: ಅಬ್ಬರ

ತಾರಾಗಣ: ಪ್ರಜ್ವಲ್‌ ದೇವರಾಜ್‌, ರಾಜಶ್ರೀ ಪೊನ್ನಪ್ಪ, ಲೇಖಾಚಂದ್ರ, ನಿಮಿಕಾ ರತ್ನಕರ್‌, ರವಿಶಂಕರ್‌, ಶೋಭರಾಜ್‌, ವಿಕ್ಟರಿ ವಾಸು, ಶಂಕರ್‌ ಅಶ್ವತ್‌್ಥ, ಕೋಟೆ ಪ್ರಭಾಕರ್‌, ಅರಸು

ನಿರ್ದೇಶನ: ರಾಮ್‌ನಾರಾಯಣ್‌

ರೇಟಿಂಗ್‌: 3

ಇಲ್ಲಿ ಮೂವರು ನಾಯಕಿಯರು. ಒಬ್ಬಳು ಪೊಲೀಸ್‌ ಮಗಳು, ಮತ್ತೊಬ್ಬಳು ಲಾಯರ್‌ ಮಗಳು, ಇನ್ನೊಬ್ಬಳು ಡಾಕ್ಟರ್‌ ಮಗಳು. ಈ ಮೂವರ ಜತೆಗೂ ಹೀರೋ ಪ್ರೇಮದಾಟ ಆಡುತ್ತಾನೆ. ಈ ಮೂವರ ಪೈಕಿ ವೈರಮುಡಿಯನ್ನು ಕೊಲ್ಲುವುದು ಯಾರೆಂಬುದು ಚಿತ್ರದ ಕ್ಲೈಮ್ಯಾಕ್ಸ್‌.ತನ್ನ ಮಗಳಿಂದಲೇ ಪ್ರಾಣಗಂಡ ಇದೆ ಎಂದು ತಿಳಿದು ಆಕೆಯನ್ನು ಕಾಡಿಗೆ ಬಿಟ್ಟು ಬರುವ ಕತೆಯೊಂದು ರಾವಣಸುರನ ಜೀವನದಲ್ಲಿ ಇದೆ. ‘ಅಬ್ಬರ’ ಚಿತ್ರದಲ್ಲಿ ವೈರಮುಡಿಗೆ ತನ್ನ ಮಗಳಿಂದಲೇ ಪ್ರಾಣಗಂಡ ಎದುರಾಗಿದೆ. 

Gandhada Gudi Review: ಮುಗ್ಧನಂತೆ, ಸಂತನಂತೆ; ಬೆರಗಾಗಿ, ಬಯಲಾಗಿ..

ಹಾಗಂತ ಇದು ರಾಮಾಯಣದ ಕತೆಯಲ್ಲ. ರಾಮ್‌ನಾರಾಯಣ್‌ ಬರೆದಿರೋ ಅಬ್ಬರದ ಕತೆ. ರಾವಣಸುರನಂತೆ ವೈರಮುಡಿ ತನ್ನ ಮಗಳಿಂದ ಪ್ರಾಣ ರಕ್ಷಿಸಿಕೊಳ್ಳಲು ಏನೆಲ್ಲ ತಂತ್ರ-ಪ್ರತಿತಂತ್ರಗಳನ್ನು ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ತುಂಬಾ ರೋಚಕವಾಗಿಯೇ ಕಟ್ಟಿಕೊಡುತ್ತಾರೆ. ಪ್ರಜ್ವಲ್‌ ದೇವರಾಜ್‌, ವೈರಮುಡಿ ಪಾತ್ರಧಾರಿ ರವಿಶಂಕರ್‌ ಹಾಗೂ ಕೋಟೆ ಪ್ರಭಾಕರ್‌, ಅರಸು ಪಾತ್ರಗಳು ಗಮನ ಸೆಳೆಯುತ್ತವೆ. ಒಮ್ಮೆ ನೋಡಬಹುದಾದ ಹೊಸ ರೀತಿಯ ಸಿನಿಮಾ ‘ಅಬ್ಬರ’.

Follow Us:
Download App:
  • android
  • ios