ಭೂತಗಳು, ಅಗೋಚರ ಶಕ್ತಿಗಳು ಇವೆ ಎನ್ನುವ ಸ್ಥಳಕ್ಕೆ ಟಿವಿ ಚಾನೆಲ್ ನ ಪ್ರತಿನಿಧಿಗಳು ಹೋಗಿ ಅಲ್ಲೊಂದಿಷ್ಟು ರಹಸ್ಯ ಕಾರ್ಯಾಚರಣೆ ಮಾಡಿ ಅಲ್ಲಿ ಅಂಥದ್ದೇನಿಲ್ಲ ಎಂದು ನಿರೂಪಿಸುವುದು ಇದ್ದೇ ಇದೆ. ಈ ರೀತಿಯ ಕಾರ್ಯಕ್ರಮಗಳಿಗೆ ಭರಪೂರ ಟಿಆರ್ ಪಿ. ಹೀಗೆ ಚಿತ್ರದ ನಾಯಕ ಅಶು ಬೆದ್ರ ‘ಕಾರಣ’ಎನ್ನುವ ಸ್ಪೆಷಲ್ ಎಪಿಸೋಡ್ ಮಾಡಿಕೊಂಡು ಖ್ಯಾತನಾಗಿದ್ದ ವ್ಯಕ್ತಿ. 

ಕೆಂಡಪ್ರದಿ

Add Asianetnews Kannada as a Preferred SourcegooglePreferred

ಯಶಸ್ವಿ 99 ಎಪಿಸೋಡ್ ಮಾಡಿ 100 ಎಪಿಸೋಡ್‌ಗೆ ಪ್ಲಾನ್ ಮಾಡುವಾಗ ಪವನ್ ಕುಮಾರ್ ಎಂಟ್ರಿಯಾಗುತ್ತದೆ. ಅಲ್ಲಿಗೆ ಅಂದುಕೊಂಡಿದ್ದೆಲ್ಲವೂ ತಲೆಕೆಳಗು.
ಮತ್ತೊಂದು ಮಗ್ಗುಲಲ್ಲಿ ಶೀಲಂ (ಅಶು ಬೆದ್ರ) ಅಮೃತ (ಸಂಗೀತ ಭಟ್) ಪ್ರೀತಿ ಒಂದಾಗಲು ಇದೇ ‘ಕಾರಣ’ ಎಪಿಸೋಡ್ ಹೆತ್ತವರ ಕಾರಣದಿಂದ ಅಡ್ಡಿಯಾಗಿರುತ್ತದೆ. ಪ್ರೀತಿಗಾಗಿ ಎಪಿಸೋಡ್ ಅನ್ನು 100ಕ್ಕೆ ಕೊನೆ ಮಾಡಬೇಕು ಎಂದುಕೊಂಡರೂ ಅದು ಸುಲಭಕ್ಕೆ ಕೊನೆಯಾಗುವುದಿಲ್ಲ.

ಚಿತ್ರ ವಿಮರ್ಶೆ : ಐ 1

ಪವನ್ ಕುಮಾರ್ ಹಾಕಿದ ಓಪನ್ ಚಾಲೆಂಜ್ ಒಪ್ಪಿ, ಅವನು ತೋರಿದ ಮನೆಗೆ ಎಪಿಸೋಡ್ ಮಾಡಲು ಹೋದ ಅಶು ಬೆದ್ರ ಸಮಸ್ಯೆಗಳ ಸುಳಿಯಲ್ಲಿ ಬಂಧಿಯಾಗುತ್ತಾನೆ. ಇದಾದ ಮೇಲೆ ಅತುಲ್ ಕುಲಕರ್ಣಿ ಎಂಟ್ರಿ. ಅಲ್ಲಿಂದ ಚಿತ್ರ ರೋಚಕವಾಗುತ್ತಾ ಸಾಗುತ್ತದೆ. ಮುಂದೇನು ಎನ್ನುವ ಕುತೂಹಲ ನೋಡುಗನ ಮನದೊಳಗೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕರ ಶ್ರಮ ಸಾರ್ಥಕ.

ಚಿತ್ರ ವಿಮರ್ಶೆ: ಕಥಾ ಸಂಗಮ

ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಅಂಶಗಳನ್ನು ಹದವಾಗಿ ಬೆರೆಸಿ, ಅದಕ್ಕೊಂದಿಷ್ಟು ರೋಚಕತೆಯನ್ನು ಸೇರಿಸಿ ಒಳ್ಳೆಯ ಚಿತ್ರ ಮಾಡಿದೆ ಅಶು ಬೆದ್ರ ಮತ್ತು ತಂಡ. ಪ್ರಸ್ತುತ ಮಾಧ್ಯಮಗಳ ನಂಬರ್ ಹಪಾಹಪಿಯನ್ನು ವಿಡಂಬನೆ ಮಾಡುತ್ತಲೇ ಸಾಗುವ ಕತೆ ಕಡೆಗೆ ಹುಡುಕಿ ಹೊರಟ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾ ನೋಡುಗನ ಒಳಗೂ ಪ್ರಶ್ನೆಗಳನ್ನು ಮೂಡಿಸುತ್ತದೆ.