Asianet Suvarna News Asianet Suvarna News

ನೀವೇಕೆ ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸಿ ತಿನ್ನಲೇಬೇಕು...!

ಮಣ್ಣಿನ ಮಡಕೆಯಲ್ಲಿ ಆಹಾರವನ್ನು ತಯಾರಿಸಿ ಸೇವನೆ ಮಾಡುವುದು ಭಾರತದ ಪ್ರಾಚೀನವಾದ ಪದ್ಧತಿಯಾಗಿದೆ. ಇದರಿಂದ ಅನೇಕ ರೀತಿಯಾದ ಆರೋಗ್ಯಕರವಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Why you must go Back to cooking food in earthen pots

ಬೆಂಗಳೂರು : ಮಣ್ಣಿನ ಮಡಕೆಯಲ್ಲಿ ಆಹಾರವನ್ನು ತಯಾರಿಸಿ ಸೇವನೆ ಮಾಡುವುದು ಭಾರತದ ಪ್ರಾಚೀನವಾದ ಪದ್ಧತಿಯಾಗಿದೆ. ಇದರಿಂದ ಅನೇಕ ರೀತಿಯಾದ ಆರೋಗ್ಯಕರವಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಯಾವುದೇ ರೀತಿಯಾದ ರಾಸಾಯನಿಕ ಅಂಶಗಳಿಲ್ಲದ ಮಣ್ಣಿನ ಪಾತ್ರೆ ಅಡುಗೆಯು ರುಚಿಯನ್ನು ನೀಡುತ್ತದೆ. ಇದರಲ್ಲಿ ವಿವಿಧ ರೀತಿಯಾದ ನೈಸರ್ಗಿಕ ಅಂಶಗಳೂ ಕೂಡ ಅಡಕವಾಗಿರುತ್ತದೆ.

ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸುವುದರಿಂದಾಗುವ ಆರೋಗ್ಯದ ಲಾಭಗಳು

*ಹೆಚ್ಚು ನ್ಯೂಟ್ರಿಶಿಯನ್ ಅಂಶಗಳು ಆಹಾರದಲ್ಲಿಯೇ ಉಳಿಯುತ್ತದೆ. ಯಾವುದೇ ರೀತಿಯಾದ ಆಹಾರವನ್ನೂ ಕೂಡ ಮಣ್ಣಿನ ಮಡಕೆಯ ಮೂಲಕವೇ ತಯಾರಿಸಬಹುದಾಗಿದೆ.

*ಆಯುರ್ವೇದದಲ್ಲಿ ಮಣ್ಣಿನ ಮಡಕೆಯ ಅಡುಗೆಯನ್ನೇ ಸೂಚಿಸಲಾಗುತ್ತದೆ. ಇನ್ನು ಆಹಾರದ ಗುಣಮಟ್ಟವನ್ನೂ ಕೂಡ ಹೆಚ್ಚಳ ಮಾಡುತ್ತದೆ.

*ಮಾನವನ ದೇಹಕ್ಕೆ ಹೆಚ್ಚು ಅನುಕೂಲರವಾಗಿರುತ್ತದೆ ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಆಹಾರ. ಅಡುಗೆ ಮಾಡುವ ಹಂತದಲ್ಲಿ ಯಾವುದೇ ಉತ್ತಮ ಅಂಶಗಳು ನಷ್ಟವಾಗುವುದಿಲ್ಲ.

*ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸುವಾಗ ನೀವು ಎಣ್ಣೆಯನ್ನು ಬಳಸುವ ಅಗತ್ಯ ಇರುವುದಿಲ್ಲ.

*ಅದರಲ್ಲಿರುವ ನೈಸರ್ಗಿಕ ಅಂಶಗಳು ಆಹಾರವನ್ನು ಸೂಕ್ತ ಪ್ರಮಾಣದಲ್ಲಿ ಬೇಯಿಸಲು ಸಹಕಾರಿಯಾಗಿರುತ್ತದೆ.

*ಸೂಕ್ತವಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಉಪಯುಕ್ತವಾದ ಅಂಶಗಳು ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸುವುದರಿಂದ ಸೇರಲ್ಪಡುತ್ತದೆ.

*ನೀವು ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸಿ ತಿಂದಾಗ ಅದರಲ್ಲಿ ನೈಸರ್ಗಿಕವಾದ ಒಂದು ಸುವಾಸನೆ ಒಳಗೊಳ್ಳಲ್ಪಡುತ್ತದೆ.

*ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಮಣ್ಣಿನ ಪಾತ್ರೆಗಳು ದೊರೆಯುತ್ತದೆ.

Follow Us:
Download App:
  • android
  • ios