Asianet Suvarna News Asianet Suvarna News

ಶುಭೋದಯ ಓದುಗರೆ : ಈ ವಾರದ ನಿಮ್ಮ ರಾಶಿ ಫಲ ಹೇಗಿದೆ..?

ಶುಭೋದಯ ಓದುಗರೆ : ಈ ವಾರದ ನಿಮ್ಮ ರಾಶಿ ಫಲ ಹೇಗಿದೆ..?

Vara Bhavishya  Feb 2018

ಮೇಷ

ಆತ್ಮೀಯರು ಕಷ್ಟಕಾಲದಲ್ಲಿ ಸಹಾಯ

ಮಾಡಲಿದ್ದಾರೆ. ಸಾಫ್ಟ್ವೇರ್ ಉದ್ಯೋಗಿಗಳಿಗೆ

ಅಲ್ಪ ಮುನ್ನಡೆ. ಅಧಿಕಾರ ಸ್ಥಾನದಲ್ಲಿರುವವರು

ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ರಾಜಕಾರಣಿಗಳಿಗೆ ಸೂಕ್ತ

ಸ್ಥಾನಮಾನ ದೊರಕಲಿದೆ. ಅಪ್ಪ ಅಮ್ಮನ ಜೊತೆಗೆ ಹೆಚ್ಚಿನ

ಸಮಯ ಕಳೆಯುವಿರಿ. ಸಂಬಂಧಿಗಳ ಆಗಮನವಾಗಲಿದೆ

 

ವೃಷಭ

ಗೆಳೆಯರೊಂದಿಗೆ ಸೇರಿ ದೂರದ ಪ್ರಯಾಣ

ಕೈಗೊಳ್ಳುವಿರಿ. ತಂದೆ-ತಾಯಿಯೊಂದಿಗೆ

ಆತ್ಮೀಯವಾಗಿ ನಡೆದುಕೊಳ್ಳಿ. ಪುಸ್ತಕ ಓದುವ

ಹವ್ಯಾಸ ಆರಂಭವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ

ಎಚ್ಚರಿಗೆ ವಹಿಸುವುದು ಅಗತ್ಯ. ಮನೆಯಲ್ಲಿ ಶೀಘ್ರದಲ್ಲಿ

ಶುಭಕಾರ್ಯಗಳು ನಡೆಯಲಿವೆ. ಆರೋಗ್ಯ ಪ್ರಾಪ್ತಿ.

 

ಮಿಥುನ 

ಸಾಹಸ ಪ್ರಿಯರಿಗೆ ಹೆಚ್ಚು ಅವಕಾಶಗಳಿವೆ.

ರಾಜಕಾರಣಿಗಳಿಗೆ ಮುನ್ನಡೆ ಸಿಗಲಿದೆ.

ಅಸಹಾಯಕರಿಗೆ ಕೈಲಾದ ಸಹಾಯ ಮಾಡಿ.

ಉದ್ಯೋಗದಲ್ಲಿ ಪ್ರಗತಿ. ಅವಿವಾಹಿತರಿಗೆ ಒಳ್ಳೆಯ

ಸಂಬಂಧಗಳು ಹುಡುಕಿ ಬರಲಿವೆ. ದೊಡ್ಡವರ ಮಾತಿಗೆ ಬೆಲೆ

ನೀಡಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.

 

 

ಕಟಕ

ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಒಳ್ಳೆಯ

ದಿನಗಳ ಪ್ರಾರಂಭ. ಹಣಕಾಸಿನ ವಿಚಾರದಲ್ಲಿ

ಒಳ್ಳೆಯದಾಗಲಿದೆ. ಆರೋಗ್ಯದಲ್ಲಿ ಚೇತರಿಕೆ

ಕಾಣಲಿದೆ. ನೂತನ ವಿಚಾರಗಳನ್ನು ತಿಳಿದುಕೊಳ್ಳುವಿರಿ.

ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗುವಿರಿ. ಹಿಂದೆ

ಮಾಡಿದ್ದ ಉಳಿತಾಯಗಳು ಸಹಾಯಕ್ಕೆ ಬರಲಿದೆ.

 

ಸಿಂಹ

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.

ಅನಾವಶ್ಯಕ ಗೊಂದಲಗಳಿಗೆ ಮಣೆ ಹಾಕುವುದು

ಬೇಡ. ಆದಾಯದಲ್ಲಿ ಏರಿಕೆ ಕಂಡುಬರಲಿದೆ.

ಸುಲಭವಾಗಿ ಯಾರನ್ನೂ ನಂಬಬೇಡಿ. ಹೊಸ ವಿಚಾರಗಳತ್ತ

ಮನಸ್ಸು ಹರಿಯಲಿದೆ. ಉದ್ಯೋಗದಲ್ಲಿ ಪ್ರಗತಿ.

ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಲಿದೆ.

 

 

ಕನ್ಯಾ

ಯಾರ ಸಹಾಯವೂ ಇಲ್ಲದೇ ಅಂದುಕೊಂಡ

ದ್ದನ್ನು ಮಾಡಿ ಮುಗಿಸುವ ಅವಕಾಶಗಳಿವೆ.

ಚಿನ್ನಾಭರಣಕೊಳ್ಳುವ ಸಾಧ್ಯತೆ ಇದೆ. ಒಂದು

ವಿಚಾರದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದ ಹೊರತು

ಪ್ರತಿಕ್ರಿಯೆ ನೀಡಬೇಡಿ. ಹತ್ತಿರದ ಬಂಧುಗಳೊಂದಿಗೆ

ಆತ್ಮೀಯವಾಗಿ ವರ್ತಿಸಿ. ಕೋಪ ಕಡಿಮೆಯಾಗುತ್ತದೆ.

 

ತುಲಾ

ದೂರದ ಪ್ರಯಾಣದಿಂದ ಜೀವನಕ್ಕೆ ಹೊಸ

ಹುರುಪು ಬರಲಿದೆ. ನಿಮ್ಮ ಕಾರ್ಯವನ್ನು ಹೆಚ್ಚಿನ

ಸಂಖ್ಯೆಯ ಜನರು ಮೆಚ್ಚಿಕೊಳ್ಳಲಿದ್ದಾರೆ.

ಉಳಿತಾಯದ ಹಣ ಬಳಕೆಯಾಗಲಿದೆ. ಆಲೋಚಿಸಿ

ನಿರ್ಧಾರಗಳನ್ನು ತೆಗೆದುಕೊಳ್ಳಿ. ಅಧಿಕಾರದ ಸ್ಥಾನದಲ್ಲಿರು

ವವರು ಸಮಾಜಮುಖಿ ಕಾರ್ಯಗಳನ್ನು ಮಾಡುವಿರಿ.

 

ವೃಶ್ಚಿಕ

ಬ್ಯಾಂಕ್ ನೌಕರರಿಗೆ ಶುಭವಾರ್ತೆ. ಉದ್ಯೋಗ

ದಲ್ಲಿ ನಿರೀಕ್ಷಿತ ಪ್ರಗತಿ ಸಿಗಲಿದೆ. ಬಹುದಿನಗಳ

ಕನಸು ನನಸಾಗಲಿದೆ. ಕಲಾ ಚಟುವಟಿಕೆಗಳಲ್ಲಿ

ಸಕ್ರಿಯವಾಗುವಿರಿ. ಹೆಣ್ಣು ಮಕ್ಕಳಿಗೆ ಮದುವೆಯ ಭಾಗ್ಯ

ಕೂಡಿ ಬರಲಿದೆ. ಸಂಬಂಧಗಳ ಬಗ್ಗೆ ಎಚ್ಚರಿಕೆ ಇರಲಿ.

ರಾಜಕಾರಣಿಗಳ ಜೀವನದಲ್ಲಿ ದೊಡ್ಡ ತಿರುವು ಏರ್ಪಡಲಿದೆ.

 

ಧನಸ್ಸು

ಅಧಿಕ ಧನಾಗಮನವಾಗಲಿದೆ. ತಂದೆಯಿಂದ

ಹೊಸ ಉದ್ಯಮ ಸ್ಥಾಪಿಸಲು ಸಹಕಾರ. ಆಹಾರ

ಸೇವನೆಯಲ್ಲಿ ಸಂಯಮ ಇರಲಿ. ಅತಿಯಾಗಿ

ಮಾತನಾಡುವ ಅಭ್ಯಾಸವಿರುವವರು ತುಸು ಎಚ್ಚರಿಕೆ

ಯಿಂದ ಇರಬೇಕಾಗುತ್ತದೆ. ಸ್ನೇಹಿತರಿಂದ ಶುಭ ಸುದ್ದಿ.

 

ಮಕರ

ಸಣ್ಣ ಪುಟ್ಟ ಸಂಗತಿಗಳನ್ನು ಕಡೆಗಣಿಸಬೇಡಿ.

ನವೀನ ವಿಚಾರಗಳಿಂದ ಸಂತಸಗೊಳ್ಳುವಿರಿ.

ಹೊಸ ವಾಹನ ಕೊಳ್ಳುವ ಸಾಧ್ಯತೆ. ಅನಿರೀಕ್ಷಿತ

ಘಟನೆಗಳಿಂದ ಮಾನಸಿಕ ತಳಮಳ. ಧೈರ್ಯದಿಂದ

ಎಲ್ಲವನ್ನೂ ಎದುರಿಸಿ. ಆಗುವುದೆಲ್ಲಾ ಒಳ್ಳೆಯದಕ್ಕೆ.

 

ಕುಂಭ

ಹಣಕಾಸಿನ ತೊಂದರೆಯಿಂದ ಕೊಂಚ ಹೊರಗೆ

ಬರುವಿರಿ. ಖರ್ಚಿನ ಮೇಲೆ ಸಾಧ್ಯವಾದಷ್ಟು

ಹಿಡಿತ ಸಾಧಿಸಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ

ಕಾಣಲಿದೆ. ದೂರದ ಬಂಧುಗಳಿಂದ ಶುಭ ವಾರ್ತೆ ಕೇಳುವಿರಿ.

ಖ್ಯಾತನಾಮರನ್ನು ಭೇಟಿ ಮಾಡುವ ಅವಕಾಶ ಒದಗಿ

ಬರಲಿದೆ. ಕೋಪ ಕಡಿಮೆ ಮಾಡಿಕೊಳ್ಳಿ.

 

ಮೀನ

ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ಚಂದ್ರಗ್ರಹಣದ ನಂತರ ಒಳ್ಳೆಯ ದಿನಗಳು

ಪ್ರಾರಂಭವಾಗಲಿವೆ. ವಾಹನ ಚಾಲನೆ

ಮಾಡುವಾಗಿ ಜಾಗೃತೆ ಇರಲಿ. ಕಣ್ಣಿನ ಸಮಸ್ಯೆ ಹೆಚ್ಚಾಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗುವಿರಿ.

Follow Us:
Download App:
  • android
  • ios