Asianet Suvarna News Asianet Suvarna News

ಇಂದಿನ ದಿನ ಆರಂಭಿಸುವ ಮುನ್ನ ನಿಮ್ಮ ರಾಶಿ ಫಲಗಳನ್ನು ನೋಡಿ ಬಿಡಿ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ವೃಷಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

July 10 th horoscope

ಮೇಷ ರಾಶಿ : ಆತ್ಮೀಯರೇ ನಿಮ್ಮ ತಾಯಿಯಿಂದ ನಿಮಗೆ ಧನ ಲಾಭವಿದೆ. ಆರೋಗ್ಯವೃದ್ಧಿಯೂ ಇದೆ. ಸಹೋದರ ಹಾಗೂ ತಂದೆಯಿಂದ ಉತ್ತಮ ಸಹಕಾರ ಸಿಗಲಿದೆ. ಒಂದು ಸಮಸ್ಯೆ ಎಂದರೆ ತಲೆಗೆ ಸ್ವಲ್ಪ ಪೆಟ್ಟು ಬೀಳುವ ಸಾಧ್ಯತೆ ಇದೆ. ಎಚ್ಚರವಾಗಿರಿ.

ದೋಷಪರಿಹಾರ : ಗಣಪತಿಗೆ ಗರಿಕೆ ಹಾಗೂ ಬೆಲ್ಲವನ್ನು ಸಮರ್ಪಣೆ ಮಾಡಿ.

ವೃಷಭ : ಆತ್ಮೀಯರೇ ಇಂದು ನಿಮ್ಮ ಮನಸ್ಸಿಗೆ ಸಮಾಧಾನದ ದಿನ, ರಾಜಕಾರಣಿಗಳಿಂದ ಅಥವಾ ಸರ್ಕಾರಿ ಕೆಲಸಗಳಲ್ಲಿ ಸಹಾಯವಾಗಲಿದೆ. ಸುಖ ಹಾನಿಯಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಕಾಲಿಗೆ ಸ್ವಲ್ಪ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.   

ದೋಷ ಪರಿಹಾರ : ಶನಿ ದೇವರಿಗೆ ಕಪ್ಪು ವಸ್ತ್ರ ದಾನ ಮಾಡಿದರೆ ಒಳಿತು.

ಮಿಥುನ : ಆತ್ಮೀಯರೇ ಇಂದು ನಿಮ್ಮ ತಂದೆ ನಿಮಗೆ ರಕ್ಷಣೆಯಾಗಿ ನಿಲ್ಲುತ್ತಾರೆ. ಸ್ತ್ರೀಯರಿಂದ ಹಣ ನಷ್ಟ ನಷ್ಟವಾಗುವ ಸಂಭವ ಇದೆ. ಮುಖ್ಯ ವಿಚಾರವೆಂದರೆ ದಾಂಪತ್ಯದಲ್ಲಿ ಸ್ವಲ್ಪ ಕಲಹ ಸಂಭವಿಸುವ ಸಾಧ್ಯತೆ ಇದೆ. ಸಣ್ಣಪುಟ್ಟ ವಿಷಯಗಳಿಗೆ ಕೋಪ ಸಂಭವಿಸುತ್ತದೆ. ಶಾಂತತೆ ಇರಲಿ. 

ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ಅಕ್ಕಿ ಅಥವಾ ಹಾಲನ್ನು ಸಮರ್ಪಿಸಿ

ಕಟಕ : ಪ್ರಿಯರೇ ಇಂದು ಜಲ ವ್ಯಾಪಾರಿಗಳಿಗೆ ಲಾಭದ ದಿನ, ಅಷ್ಟೇ ಅಲ್ಲ ರಸ ವ್ಯಾಪಾರಿಗಳಿಗೆ ಲಾಭದ ದಿನ, ಸ್ವಲ್ಪ ಧನ ನಷ್ಟವೂ ಇದೆ. ಗಂಡ-ಹೆಂಡಿರಲ್ಲಿ ಸ್ವಲ್ಪ ಸಾಮರಸ್ಯ ಸಮಸ್ಯೆ ಕಾಣುವ ಸಾಧ್ಯತೆ ಇದೆ. ಜಗಳಕ್ಕೆ ಆಸ್ಪದ ಕೊಡಬೇಡಿ.
  
ದೋಷ ಪರಿಹಾರ : ಸುಬ್ರಹ್ಮಣ್ಯ ಹಾಗೂ ಗಣಪತಿ ಆರಾಧನೆ ಮಾಡಿ

ಸಿಂಹ : ಪ್ರೀಯ ಓದುಗರೇ ನಿಮ್ಮ ರಾಶಿಯ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಲಿದೆ. ಬೆಳಗ್ಗೆ ಎದ್ದ ಕೂಡಲೇ ಒಂದು ಹಿಡಿ ಗೋಧಿಯನ್ನು ಹಿಡಿದು ಸೂರ್ಯನನ್ನು ನೋಡುತ್ತಾ ಮನೋ ಪ್ರಾರ್ಥನೆ ಸಲ್ಲಿಸಿ ಆ ಗೋಧಿಯನ್ನು ಶಿವ ದೇವಸ್ಥಾನಕ್ಕೆ ಕೊಟ್ಟು ಬನ್ನಿ. ಎಲ್ಲವೂ ಸರಿಹೋಗಲಿದೆ.

ದೋಷ ಪರಿಹಾರ : ಶಿವನ ಆರಾಧನೆ, ಬಿಲ್ವಪತ್ರೆ ಸಮರ್ಪಣೆ ಮಾಡಿ

ಕನ್ಯಾ : ಆತ್ಮೀಯರೇ ಈ ರಾಶಿಯ ಸ್ತ್ರೀಯರಿಗೆ ಇಂದು ಉತ್ತಮ ದಿನ, ನಿಮ್ಮ ಆಲೋಚನೆಗಳು ಸಾಕಾರಗೊಳ್ಳಲಿದೆ. ಸ್ವಲ್ಪ ಹಣ ನಷ್ಟವಾಗಲಿದೆ.ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಉಲ್ಬಣವಾಗಲಿದೆ. ಗಂಧರ್ವರ ಆರಾಧನೆಯಿಂದ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. 
  
ದೋಷ ಪರಿಹಾರ : ಗಂಧರ್ವ ಯಂತ್ರ ಮಾಡಿಸಿಕೊಳ್ಳಿ. 

ತುಲಾ :  ಸ್ನೇಹಿತರೇ ಇಂದು ಶತ್ರುಗಳಿಂದ ಲಾಭವಾಗುವ ಸಾಧ್ಯತೆ ಇದೆ. ಅಂದ್ರೆ ಅವರು ನಿಮ್ಮ ಮೇಲೆ ಮಾಡುವ ಯಾವುದೇ ದುಷ್ಟ ಯೋಜನೆ ನಿಮ್ಮ ಪಾಲಿಗೆ ವರವಾಗಲಿದೆ. ನೀವು ಇಂದು ಗುರು-ಸುಬ್ರಹ್ಮಣ್ಯ-ಲಕ್ಷ್ಮೀ ಈ ಮೂರೂ ದೇವರ ಅನುಗ್ರಹ ಪಡೆಯುವುದರಿಂದ ಲಾಭವಾಗಲಿದೆ 

ದೋಷ ಪರಿಹಾರ : ಮೇಲೆ ಹೇಳಿರುವ ಮೂರೂ ದೇವಸ್ಥಾನಕ್ಕೆ ಹೋಗಿಬನ್ನಿ. 

ವೃಶ್ಚಿಕ : ಇಂದು ನಿಮ್ಮ ಅಣ್ಣ ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಬಾಯಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳುತ್ತದೆ. ಹುಣ್ಣು ಈ ರೀತಿಯ ಸಮಸ್ಯೆಗಳು ಬಾಧಿಸಬಹುದು. ಸ್ತ್ರೀಯರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಾಧ್ಯತೆಯೂ ಇದೆ.

ದೋಷ ಪರಿಹಾರ : ಶನಿದೇವರ ಆರಾಧನೆ ಜೊತೆಗೆ ಸುಬ್ರಹ್ಮಣ್ಯ ದೇವರನ್ನೂ ಪೂಜಿಸಿ 

ಧನಸ್ಸು : ಇಂದು ತಂದೆ ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಿ ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ. ಅದಕ್ಕೆ ಆಸ್ಪದ ಕೊಡಬಾರದು ಎಂದರೆ ಶಿವನಿಗೆ ಭಸ್ಮಾಭಿಷೇಕ ಮಾಡಿಸಿ ಬನ್ನಿ. ಎಲ್ಲರಿಗೂ ಈ ಸಮಸ್ಯೆ ಇಲ್ಲ ಕೆಲವರಿಗೆ ಮಾತ್ರ. ಉಳಿದವರಿಗೆ ಮನೆಯಲ್ಲಿ ಬಾಧೆಯಂತೂ ಇದ್ದೇ ಇರಲಿದೆ. ಸ್ವಲ್ಪ ಸಮಾಧಾನ ಇರಲಿ. 

ದೋಷ ಪರಿಹಾರ : ಶಿವ ಧ್ಯಾನ ಮಾಡಿ

ಮಕರ :  ಸುಖ ಅಭಿವೃದ್ಧಿ, ಇಂದು ಪಾತ್ರೆ ವ್ಯಾಪಾರಿಗಳಿಗೆ ಉತ್ತಮ ದಿನ, ಗುರು ನಿಮಗೆ ಅನುಕೂಲಕರವಾಗಿರುವುದರಿಂದ ಉದ್ಯೋಗದಲ್ಲಿ ಶೇಯಸ್ಸು ಬಡ್ತಿ ಹೊಂದುವ ಸಾಧ್ಯತೆ ಇದೆ. ಸ್ವಲ್ಪ ಧನ ನಷ್ಟ ಸಂಭವ.
  
ದೋಷ ಪರಿಹಾರ : ಶನಿ ಪ್ರಾರ್ಥನೆ ಮಾಡಿ

ಕುಂಭ :  ಪ್ರಿಯ ಸ್ನೇಹಿತರೇ,  ಇಂದು ಸುಖ ಸ್ಥಾನದಲ್ಲಿರುವ ಚಂದ್ರ ಮನೋಬಲವನ್ನೂ ನಿಶ್ಚಿಂತೆಯನ್ನೂ ತರಲಿದ್ದಾನೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು, ಆದರೆ ಆತಂಕವೇನೂ ಇಲ್ಲ. ಇಂದು ಓರ್ವ ಹಿರಿಯರು ನಿಮಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ.   

ದೋಷ ಪರಿಹಾರ : ಇಂದು ನೀವು ಮಾಡಬೇಕಾದದ್ದು ಸುಬ್ರಹ್ಮಣ್ಯ ಜಪ. ಓಂ ಕಾರ್ತಿಕೇಯಾಯ ನಮ: ಮಂತ್ರವನ್ನು 18 ಬಾರಿ ಪಠಿಸಿ 
  
ಮೀನ : ಸಹೋದರಿಯರಿಂದ ಸಹಾಯದ ದಿನ, ಸರ್ಕಾರಿ ಕೆಲಸಗಳಲ್ಲಿ ಸಹಾಯವಾಗುವ ಸಾಧ್ಯತೆ ಇದೆ. ಹೆಣ್ಣು ಮಕ್ಕಳು ನಿಮಗೆ ಸಹಾಯವನ್ನು ಮಾಡುತ್ತಾರೆ.
  
ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

Follow Us:
Download App:
  • android
  • ios