ಶುಭೋದಯ ಓದುಗರೆ : ಹೇಗಿದೆ ಇಂದಿನ ರಾಶಿ ಫಲ
ಶುಭೋದಯ ಓದುಗರೆ : ಹೇಗಿದೆ ಇಂದಿನ ರಾಶಿ ಫಲ
ಮೇಷ ರಾಶಿ : ಆರೋಗ್ಯದ ದಿನ, ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಚಿಂತೆ ಇರುವುದಿಲ್ಲ . ದೀಪ ದಾನವನ್ನು ಮಾಡಿ
ವೃಷಭ :ಆರೋಗ್ಯ ವೃದ್ಧಿಗಾಗಿ ಸಂಜೀವಿನಿ ಯಂತ್ರ ಧರಿಸಿ, ಕಾರ್ಯಸಿದ್ಧಿಗಾಗಿ ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿಸಿ
ಮಿಥುನ : ವಿದ್ಯಾಭ್ಯಾಸದಲ್ಲಿ ಮುನ್ನಡೆ, ಹರಿವಂಶ ಪಾರಾಯಣ ಮಾಡಿಸಿದಲ್ಲಿ ದುರ್ಗಮ ಕಾರ್ಯ ಸಾಧನೆ
ಕಟಕ : ನಿಮ್ಮ ಕಾರ್ಯ ಸಾಧನೆಗೆ ಚಂದ್ರ ಬಿಂಬವನ್ನು ದಾನ ಮಾಡಿ, ಗುರುವಿನ ಅನುಕೂಲವಿರುವುದರಿಂದ ಉತ್ತಮ ದಿನವಾಗಿರಲಿದೆ
ಸಿಂಹ : ಶಿವ ದೇವಸ್ಥಾನದಲ್ಲಿ ಗೋಧಿ ಪಾಯಸ ಮಾಡಿಸಿ ದಾಸೋಹ ಮಾಡಿಸಿದಲ್ಲಿ ಸರ್ವ ಕಾರ್ಯದಲ್ಲೂ ಯಶಸ್ಸು ಸಿಗಲಿದೆ
ಕನ್ಯಾ : ಹೆಸರು ಬೇಳೆ ಪಾಯಸವನ್ನು ಮಾಡಿಸಿ ವಿಷ್ಣು ದೇವಾಲಯದಲ್ಲಿ ನೈವೇದ್ಯ ಮಾಡಿದರೆ ನಿಮ್ಮ ಸರ್ವ ಕಷ್ಟ ನಿವಾರಣೆಯಾಗಲಿದೆ.
ತುಲಾ : ಮಹಾಲಕ್ಷ್ಮಿ ದೇವಸ್ಥಾನದಲ್ಲಿ ತಾಯಿಗೆ ಅಲಂಕಾರ ಮಾಡಿಸಿ, ಸುವಾಸಿನಿಯರಿಗೆ ಸೀರೆ ಉಡುಗೊರೆ ಕೊಟ್ಟರೆ ಎಂಥ ಕಷ್ಟವೂ ಪರಿಹಾರವಾಗುತ್ತದೆ
ವೃಶ್ಚಿಕ : ಸುಬ್ರಹ್ಮಣ್ಯ ಸ್ವಾಮಿಗೆ ಅಪೂಪ ನೈವೇದ್ಯ ಮಾಡಿಸಿದಲ್ಲಿ ಆರೋಗ್ಯ ತೊಂದರೆ ಶಮನವಾಗುತ್ತದೆ.
ಧನಸ್ಸು : ಬ್ರಹ್ಮಜ್ಞಾನಿಗಳಿಗೆ ಊಟ ಹಾಕಿ, ಸುಂದರಕಾಂಡ ಪಾರಾಯಣ ಮಾಡಿಸಿದಲ್ಲಿ ನಿಮ್ಮ ಇಷ್ಟ ನೆರವೇರುತ್ತದೆ.
ಮಕರ : ಕಬ್ಬಿಣದಾನ ಮಾಡಿ, ಶನೈಶ್ಚರ ದರ್ಶನ ಮಾಡಿದರೆ ಸೇವಕರು ಮಾತುಕೇಳುತ್ತಾರೆ.
ಕುಂಭ : ಬಡವರಿಗೆ, ಅನಾಥರಿಗೆ ಅನ್ನಹಾಕುವುದರಿಂದ ನೀವು ಸಂಕಲ್ಪಿಸಿದ ಕಾರ್ಯ ಸಿದ್ಧಿಯಾಗುತ್ತದೆ.
ಮೀನ : ಸಂಹಿತಾ ಪಾರಾಯಣ ಮಾಡಿಸಿದಲ್ಲಿ ಎಂಥ ಕಷ್ಟಗಳೂ, ಎಂಥ ಶತ್ರು ಸಮಸ್ಯೆಗಳೂ ಪರಹಾರ.