ಮೇಷ ರಾಶಿಯವರಿಗಿಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ : ಉಳಿದ ರಾಶಿ ಹೇಗಿದೆ..?
ಮೇಷ ರಾಶಿಯವರಿಗಿಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ : ಉಳಿದ ರಾಶಿ ಹೇಗಿದೆ..?
ಮೇಷ : ಸಹೋದರ ಭಾವಾಧಿಪತಿ ವ್ಯಯದಲ್ಲಿ ನೀಚನಾಗಿರುವುದರಿಂದ ಭ್ರಾತೃಗಳಲ್ಲಿ ಕಲಹ, ತಾಯಿ ಆರೋಗ್ಯದಲ್ಲೂ ಏರುಪೇರು, ಸುಬ್ರಹ್ಮಣ್ಯ ದರ್ಶನ ಮಾಡಿ
ವೃಷಭ : ರಾಶ್ಯಾಧಿಪತಿಯು ಲಾಭದಲ್ಲಿದ್ದರೂ ಕುಜ ದೃಷ್ಟಿ ಇರುವುದರಿಂದ ಅನಾರೋಗ್ಯ , ಕಷ್ಟದ ದಿವಾಗಿರಲಿದೆ, ಲಕ್ಷ್ಮೀ ನಾರಾಯಣ ದರ್ಶನ ಮಾಡಿ
ಮಿಥುನ : ಸ್ತ್ರೀಯರಿಂದ ಉದ್ಯೋಗದಲ್ಲಿ ಸಹಾಯ, ಆದರೆ ಮನೆ ಮಡಿದಿಯ ಬಳಿ ಜಗಳ, ಲಕ್ಷ್ಮೀವೆಂಕಟೇಶ್ವರರಿಗೆ ಪುರುಷಸೂಕ್ತ ಅಭಿಷೇಕ ಮಾಡಿಸಿ
ಕಟಕ : ರಾಶಿಯಲ್ಲಿರುವ ರಾಹು ಆರೋಗ್ಯ ಬಾಧೆ ಮಾಡುತ್ತಾನೆ, ಸುಖ ಸ್ಥಾನದಲ್ಲಿರುವ ಗುರು ಸೌಖ್ಯ ವೃದ್ಧಿಯನ್ನೂ ಮಾಡಿತ್ತಾನೆ, ರಾಹು ಅನುಗ್ರಹ ಮಾಡಿಕೊಳ್ಳಿ
ಸಿಂಹ : ಸಹೋದರರ ಸಹಾಯ, ಮಕ್ಕಳಿಂದ ಕಿರಿಕಿರಿ, ಸಾಮಾನ್ಯದಿನವಾಗಿರಲಿದೆ, ಶಿವನಿಗೆ ಗೋಧಿಯಿಂದ ಅಭಿಷೇಕ ಮಾಡಿಸಿ
ಕನ್ಯಾ : ಕುಟುಂಬ ಸೌಖ್ಯ, ಮಡದಿಯಿಂದ ಧನ ಪ್ರಾಪ್ತಿ, ಜೊತೆಗೆ ಸುಖ ಹಾನಿಯೂ ಇದೆ, ಮಹಾನಾರಾಯಣೋಪನಿಷತ್ತನ್ನು ಪಠಿಸಿ
ತುಲಾ : ಧನಾಧಿಪತಿ ಶನಿಯುತನಾಗಿರುವುದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ, ಹಿರಿಯರಿಂದ ಸಲಹೆ, ಅನ್ನಪೂರ್ಣೆಯ ದರ್ಶನ ಮಾಡಿ
ವೃಶ್ಚಿಕ : ವಸ್ತು ಕಳವು, ತೃತೀಯದ ಚಂದ್ರ ಕೇತುಗಳಿಂದ ಹೃದಯ ಭಾಗದಲ್ಲಿ ನೋವು, ಪರಿವಾರ ಸಹಿತ ಸುಬ್ರಹ್ಮಣ್ಯ ದರ್ಶನ ಮಾಡಿ
ಧನಸ್ಸು : ಚತುರ್ಥದಲ್ಲಿ ಶುಕ್ರನಿದ್ದು, ಅಧಿಪತಿ ಲಾಭದಲ್ಲಿದ್ದಾನೆ ಹಾಗಾಗಿ ಮನೆ, ವಾಹನ ಖರೀದಿ ಮಾಡುವ ಮನಸ್ಸು, ಗಾಣಗಾಪುರ ದರ್ಶನ ಮಾಡಿ
ಮಕರ : ರಾಶ್ಯಾಧಿಪತಿಯು ವ್ಯಯದಲ್ಲಿದ್ದಾನೆ, ಅನಾನುಕೂಲದ ದಿನ, ಶಿವನಿಗೆ ಎಳ್ಳಿನ ಅಭಿಷೇಕ ಮಾಡಿಸಿ
ಕುಂಭ : ಅಂದುಕೊಂಡ ಕಾರ್ಯಗಳು ಈಡೇರುತ್ತವೆ, ಆದರೆ ಸ್ವಲ್ಪ ದಿನ ಹಣ ಹೂಡುವ ಕಾರ್ಯ ಬೇಡ, ಶಿವಾನಂದ ಲಹರಿ ಸ್ತೋತ್ರ ಪಠಣ ಮಾಡಿ
ಮೀನ : ಸಪ್ತಮಾಧಿಪತಿ ನೀಚನಾಗಿದ್ದಾನೆ ದಾಂಪತ್ಯ ವಿರಸ, ಆದರೆ ಬಲಯುತ ಶುಕ್ರ ದೃಷ್ಟಿಯಿಂದ ಕಲಹ ಪರಿಹಾರವೂ ಆಗಲಿದೆ ಹಿರಿಯರ ಆಶೀರ್ವಾದ ಪಡೆಯಿರಿ

Last Updated 11, Apr 2018, 1:12 PM IST