Asianet Suvarna News Asianet Suvarna News

ವಿಜಯ ಬ್ಯಾಂಕ್‌ ವಿಲೀನ ಖಂಡಿಸಿ ಮಂಗಳೂರು ಬಂದ್

ಒಂದು ಕಡೆ ಭಾರತ್ ಬಂದ್ ವಿಚಾರ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಬೇರೆ ಕಾರಣಕ್ಕೆ ಮಂಗಳೂರು ಬಂದ್‌ಗೆ ಕರೆ ನೀಡಿಲಾಗಿದೆ.

Vijaya Bank merger Mangaluru Bandh on Januvari 9
Author
Bengaluru, First Published Jan 8, 2019, 8:35 PM IST

ಮಂಗಳೂರು[ಜ.08]  ಭಾರತ್ ಬಂದ್ ಬಳಿಕ ಜನವರಿ 9 ರಂದು ಮಂಗಳೂರು ಬಂದ್ ಕರೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಬಂದ್‌ಗೆ ಕರೆ ನೀಡಿದೆ.

ಜಿಲ್ಲೆಯಲ್ಲಿ ಹುಟ್ಟಿದ ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಕ್ರಮ ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ.  ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬಂದ್ ಗೆ ನಿರ್ಧಾರ ಮಾಡಲಾಗಿದೆ.

ವಿಜಯ ಬ್ಯಾಂಕ್ ವಿಲೀನಕ್ಕೆ ಕಾರಣ ಏನು?

ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಓಡಾಟ ನಡೆಸುವ ಸಾಧ್ಯತೆ ಇದೆ. ಕಾರ್ಮಿಕ ಸಂಘಟನೆ ಕರೆ ಕೊಟ್ಟಿರುವ ಬಂದ್‌ಗೆ ಬೆಂಬಲ ಇಲ್ಲವಾದರೂ ಬ್ಯಾಂಕ್ ವಿಚಾರದ ಬಂದ್‌ಗೆ ಜನ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios