ನೈಋತ್ಯ ರೈಲ್ವೆಯು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸಿದೆ. ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಡಿದಾದ ಮತ್ತು ನೈಸರ್ಗಿಕ ಸೌಂದರ್ಯದ ಘಟ್ಟ ಪ್ರದೇಶದಲ್ಲಿ ಈ ಪರೀಕ್ಷಾರ್ಥ ಓಟ ನಡೆಯಲಿದ್ದು, ಯಶಸ್ವಿಯಾದರೆ ಸೇವೆಯನ್ನು ಮಡಗಾಂವ್‌ವರೆಗೆ ವಿಸ್ತರಿಸುವ ಚಿಂತನೆಯಿದೆ.

ಮಂಗಳೂರು: ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆ ಕೊನೆಗೂ ಈಡೇರುವ ಸಮಯ ಬಂದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಆ.11 ರಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸಿದೆ. 

ಕೆಲವು ವರದಿಗಳ ಪ್ರಕಾರ ಆಗಸ್ಟ್ 18 ರಿಂದ 22ರವರೆಗೆ ಪರಿಕ್ಷಾರ್ಥ ಪ್ರಯೋಗ ನಡೆಯಲಿದೆ ಎನ್ನಲಾಗಿದೆ. ಕಾರಣ ಯಡಕುಮೇರಿಯಲ್ಲಿ ಕಳೆದವಾರ ಗುಡ್ಡಕುಸಿತದ ಪರಿಣಾಮ ವಿಳಂಭವಾಗಿದೆ ಎನ್ನಲಾಗಿದೆ. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜೂನ್ ತಿಂಗಳೊಳಗೆ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಡಿದಾದ ಘಾಟ್ ಪ್ರದೇಶದಲ್ಲಿ ಕಡಿದಾದ ಇಳಿಜಾರು ಇರುವುದರಿಂದ, ಸಾಮಾನ್ಯ ರೈಲುಗಳಿಗೆ ಬ್ಯಾಂಕರ್ ಇಂಜಿನ್‌ಗಳನ್ನು ಜೋಡಿಸಬೇಕಿತ್ತು. ಆದರೆ ವಂದೇ ಭಾರತ್ ರೈಲಿನ ಸ್ವಯಂಚಾಲಿತ ವೇಗ ನಿಯಂತ್ರಣಕ್ಕಾಗಿ ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ತಂತ್ರಜ್ಞಾನ ಹೊಂದಿರುವ 20 ಕೋಚ್‌ಗಳ ವಂದೇ ಭಾರತ್ ರೇಕ್ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಆಗಮಿಸಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರ ನಿಲ್ದಾಣದಲ್ಲಿದೆ.

ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ 55 ಕಿ.ಮೀ. ಉದ್ದದ ಈ ರೈಲು ಭಾರತೀಯ ರೈಲ್ವೆಯ ತಾಂತ್ರಿಕವಾಗಿ ಹೆಚ್ಚು ಬೇಡಿಕೆಯಿರುವ ಪರ್ವತ ಆಗಿರುವುದರಿಂದ ಇದು ಒಂದು ಪ್ರಮುಖ ಪರೀಕ್ಷಾರ್ಥ ಓಟವಾಗಿದೆ. ಮಾರ್ಪಡಿಸಿದ ವಂದೇ ಭಾರತ್ ರೈಲು ಕಡಿದಾದ ಇಳಿಜಾರುಗಳು ಮತ್ತು ಸುರಂಗಗಳನ್ನು ಸುರಕ್ಷಿತವಾಗಿ ದಾಟಬಹುದೇ ಎಂದು ರೈಲ್ವೆ ಎಂಜಿನಿಯರ್‌ಗಳು ಮೌಲ್ಯಮಾಪನ ಮಾಡುತ್ತಾರೆ. ಕೆಲವು ಸೇತುವೆಗಳು ಮತ್ತು ತೀಕ್ಷ್ಣವಾದ ವಕ್ರಾಕೃತಿಗಳು ಕೂಡ ಈ ಮಾರ್ಗದಲ್ಲಿ ಇದೆ.

57 ಸುರಂಗಗಳು, 226 ಸೇತುವೆಗಳು ಮತ್ತು 108 ಚೂಪಾದ ತಿರುವು

ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯಲ್ಲಿ ಹಲವು ಅದ್ಭುತಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಈ ಮಾರ್ಗ ಹೆಸರುವಾಸಿಯಾಗಿದೆ. ಈ ರೈಲು ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಮೂಲಕ ಚಲಿಸುತ್ತದೆ. ಈ ಹಳಿಗಳಲ್ಲಿ 50 ರಲ್ಲಿ 1 ರಷ್ಟು ಕಡಿದಾದ ಇಳಿಜಾರು, 57 ಸುರಂಗಗಳು, 226 ಸೇತುವೆಗಳು ಮತ್ತು 108 ಚೂಪಾದ ತಿರುವುಗಳು ಸೇರಿವೆ. ಈ ಪ್ರದೇಶವು ಭೂಕುಸಿತಗಳಿಗೆ ಹೆಚ್ಚು ಒಳಗಾಗುತ್ತದೆ. ಕಳೆದವಾರ ಅಂದರೆ ವಿಪರೀತ ಮಳೆಗೆ ಜುಲೈ ಅಂತ್ಯದಲ್ಲಿ ಭೂಕುಸಿತವಾಗಿ ರೈಲು ಸಂಚಾರ 3 ದಿನಗಳ ಕಾಲ ರದ್ದಾಗಿತ್ತು.

ವರದಿ ಪ್ರಕಾರ ಮಂಗಳೂರು ಮತ್ತು ಮಡಗಾಂವ್ ನಡುವೆ ಪ್ರಸ್ತುತ ಚಾಲನೆಯಲ್ಲಿರುವ ಸೇವೆಯನ್ನು (20645/20646) ವಿಸ್ತರಿಸುವ ಮೂಲಕ ಬೆಂಗಳೂರು-ಮಂಗಳೂರು ವಂದೇ ಭಾರತ್ ಅನ್ನು ಪರಿಚಯಿಸುವ ಚಿಂತನೆ ಇದೆ. ಯೋಜನೆಗಳು ಕಾರ್ಯರೂಪಕ್ಕೆ ಬಂದರೆ, ರೈಲು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ ಮಂಗಳೂರಿಗೆ ಮತ್ತು ಸಂಜೆ ಮಡಗಾಂವ್ ತಲುಪುತ್ತದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ರೈಲು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ ಮಂಗಳೂರಿಗೆ ಮತ್ತು ಸಂಜೆ ಮಡಗಾಂವ್ ತಲುಪುತ್ತದೆ. ಮಡ್ಗಾಂವ್ ನಿಂದ ರೈಲು ಬೆಳಿಗ್ಗೆ ಹೊರಟು ಮಧ್ಯಾಹ್ನ ಮಂಗಳೂರು ಮತ್ತು ಸಂಜೆ ಬೆಂಗಳೂರು ತಲುಪಲಿದೆ. ಇದಕ್ಕಾಗಿ ಎರಡು ಪ್ರತ್ಯೇಕ ರೇಕ್‌ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಬೆಂಗಳೂರು-ಮಂಗಳೂರು ವಂದೇ ಭಾರತ್ ಪೂರ್ಣಗೊಂಡಾಗ, ಭಾರತದ ಅತ್ಯಂತ ಸುಂದರವಾದ ರೈಲು ಪ್ರಯಾಣಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

ಇದು ದಟ್ಟವಾದ ಕಾಡುಗಳು, ಮಳೆಗಾಲದಲ್ಲಿ ಜಲಪಾತಗಳು, ಮಂಜಿನಿಂದ ಆವೃತವಾದ ಕಣಿವೆಗಳು, ಆಳವಾದ ಕಂದಕಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಹಲವಾರು ಸುರಂಗಗಳ ಮೂಲಕ ಹಾದುಹೋಗುತ್ತದೆ. ಇಲ್ಲಿ ಪ್ರಯಾಣಿಸುವುದೇ ಒಂದು ಅಧ್ಭುತ ಅನುಭವ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ ಪ್ರಯಾಣವನ್ನು ದಕ್ಷಿಣ ಭಾರತದ ಅತ್ಯಂತ ಅದ್ಭುತ ರೈಲ್ವೆ ಪ್ರಯಾಣಗಳಲ್ಲಿ ಒಂದೆಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ.