Asianet Suvarna News Asianet Suvarna News

ಯಾದಗಿರಿ: ಮದುವೆಗೆ ತೆರಳುತ್ತಿದ್ದ ವಾಹನ ಜಪ್ತಿ, ಎದ್ನೋ ಬಿದ್ನೋ ಅಂತ ಓಡಿ ಹೋದ ಬೀಗರು..!

* ಮದುವೆಗೆ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಸೀಜ್
* ಮದುವೆಗೆ ಕುರಿ‌ ತುಂಬಿದಂತೆ ಜನರನ್ನ ತುಂಬಿಕೊಂಡು ಹೊರಟಿದ್ದ ವಾಹನ
* ಯಾದಗಿರಿ ನಗರದಲ್ಲಿ ನಡೆದ ಘಟನೆ
 

Vehicle Siezed for Violation of Lockdown Rules in Yadgir grg
Author
Bengaluru, First Published May 24, 2021, 2:33 PM IST

ಯಾದಗಿರಿ(ಮೇ.24): ಲಾಕ್‌ಡೌನ್‌ ನಿಯಮಗಳನ್ನ ಗಾಳಿಗೆ ತೂರಿ ಮದುವೆಗೆ ತೆರಳುತ್ತಿದ್ದ ಬುಲೆರೋ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಿದ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ. 

ಜನರ ಗುಂಪು ಪ್ರಯಾಣಕ್ಕೆ ನಿಷೇಧ ಇದ್ದರೂ ತೆರೆದ ವಾಹನದಲ್ಲಿ ಕುರಿ ಹಿಂಡಿನಂತೆ ಜನರು ಮದುವೆಗೆ ಹೊರಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹಾಗೂ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ದಾಳಿ ಮಾಡಿದ್ದಾರೆ. ಮದುವೆಗೆ ಅಂತ ಬುಲೆರೋ ಪಿಕ್ ಅಪ್ ವಾಹನದಲ್ಲಿ ಕಿಕ್ಕಿರಿದು ತುಂಬಿದ್ದ ಜನರು ಯಾದಗಿರಿ ನಗರಕ್ಕೆ ಬಂದಿದ್ದ ವೇಳೆ ಈ ದಾಳಿ ಮಾಡಲಾಗಿದೆ. 

ಯಾದಗಿರಿಯ ಈ ಮದುವೆಗೆ ಕೊರೋನಾ ಭಯವಿಲ್ಲ, ಮಾಸ್ಕ್ ಕೇಳಲೇಬೇಡಿ

ಬಳಿಕ ಜನರ ಸಮೇತ ಠಾಣೆಗೆ ವಾಹನವನ್ನ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಠಾಣೆ ಬಳಿ ವಾಹನ ನಿಲ್ಲುತ್ತಿದ್ದಂತೆ ವಾಹನದಿಂದ ಜಂಪ್ ಮಾಡಿದ ಬೀಗರು ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios