Asianet Suvarna News Asianet Suvarna News

ಮಳೆ ಹಾನಿ ಪರಿಹಾರಕ್ಕೆ ಸರ್ಕಾರ ನಿರ್ಲಕ್ಷ್ಯ: ಎಚ್‌.ಕೆ.ಪಾಟೀಲ್‌ ಟೀಕೆ

ಕಳೆ​ದೊಂದು ವಾರದಿಂದ ನಿರಂತರ ಸುರಿದ ಮಳೆಯಿಂದ ಹಾನಿ​ಗೊಳ​ಗಾ​ಗಿ ಸಂಕಷ್ಟಅನು​ಭ​ವಿ​ಸು​ತ್ತಿ​ರುವ ರಾಜ್ಯ​ದ ಜನ​ತೆ​ಗೆ ಪರಿಹಾರ ಕೊಡೋದಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂದು ಶಾಸಕ ಎಚ್‌.ಕೆ. ಪಾಟೀಲ್‌ ನೇರ​ವಾ​ಗಿ ಆರೋಪ ಮಾಡಿ​ದ​ರು. 

rain damaged houses in gadag not received compensation says hk patil gvd
Author
Bangalore, First Published Aug 9, 2022, 12:50 AM IST

ಗದಗ (ಆ.09): ಕಳೆ​ದೊಂದು ವಾರದಿಂದ ನಿರಂತರ ಸುರಿದ ಮಳೆಯಿಂದ ಹಾನಿ​ಗೊಳ​ಗಾ​ಗಿ ಸಂಕಷ್ಟಅನು​ಭ​ವಿ​ಸು​ತ್ತಿ​ರುವ ರಾಜ್ಯ​ದ ಜನ​ತೆ​ಗೆ ಪರಿಹಾರ ಕೊಡೋದಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂದು ಶಾಸಕ ಎಚ್‌.ಕೆ. ಪಾಟೀಲ್‌ ನೇರ​ವಾ​ಗಿ ಆರೋಪ ಮಾಡಿ​ದ​ರು. ಅವರು ಗದಗ ನಗ​ರ​ದಲ್ಲಿ ಆಯೋ​ಜಿ​ಸಿದ್ದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿ​ದರು. ಮಳೆಯಿಂದಾಗಿ ಕೃಷಿಕ ಸಮು​ದಾಯ ಮತ್ತೊಮ್ಮೆ ಭಾರೀ ತೊಂದರೆ ಅನುಭವಿಸುತ್ತಿದೆ. ಬೆಳೆದು ನಿಂತ ಬೆಳೆ ನೆಲ ಕಚ್ಚಿದೆ. ಫಸಲು ಕೈ ಸೇರುವ ಲಕ್ಷಣವಿಲ್ಲ. ಮಳೆ ನಿಲ್ಲುವ ಲಕ್ಷಣ ಕೂಡಾ ಇಲ್ಲ. ಆದ್ದ​ರಿಂದ ರೈತರು ತೀವ್ರ ಸಂಕ​ಷ್ಟ​ದ​ಲ್ಲಿ​ದ್ದಾರೆ. 

ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇ​ಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದ​ರು. ಮಳೆ​ಯಿಂದ ಬಿದ್ದ ಮನೆಗಳಿಗೆ ಪರಿಹಾರ ನೀಡಬೇ​ಕಾದ ಸರ್ಕಾರ ಗಪ್‌ ಚುಪ್‌ ಕೂತಿದೆ. ಮಳೆಯಿಂದಾಗಿ ಹಾನಿಗೊಳಗಾದ ಕುಟುಂಬ​ಸ್ಥ​ರಿಗೆ ಇನ್ನೂ ಪರಿ​ಹಾ​ರದ ಹಣ ಮುಟ್ಟಿಲ್ಲ ತಕ್ಷಣವೇ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗದಗ ನಗರ ಸೇರಿ​ದಂತೆ ಎಲ್ಲ ಕಡೆ ಮಳೆ​ಯಿಂದ ರಸ್ತೆ​ಗಳು ಹಾಳಾಗಿ ಮೊಣ​ಕಾ​ಲುದ್ದ ಗುಂಡಿ​ಗಳು ಬಿದ್ದಿವೆ. ರಸ್ತೆ ಮೇಲೆ ಸಂಚಾರ ಮಾಡು​ವುದು ದುಸ್ತ​ರ​ವಾ​ಗಿದೆ. 

ಸ್ವಾತಂತ್ರ್ಯೋತ್ಸವ ಆಚರಿಸುವ ನೈತಿಕತೆ ಬಿಜೆಪಿಗಿಲ್ಲ: ಜಿ.ಎಸ್‌. ಪಾಟೀಲ

ಆದ್ದ​ರಿಂದ ರಾಜ್ಯದ ಮುಖ್ಯ​ಮಂತ್ರಿ​ಗಳು ರಸ್ತೆ ದುರಸ್ತಿ ಮಾಡಿಸಿ ರಾಜ್ಯದ ಜನ​ತೆಗೆ ಸುಗಮ ಸಂಚಾರಕ್ಕೆ ಅನು​ಕೂಲ ಮಾಡಿ​ಕೊ​ಡ​ಬೇ​ಕೆಂದು ಮನವಿ ಮಾಡಿ​ಕೊ​ಳ್ಳು​ತ್ತೇನೆ ಎಂದ​ರು. ಗದಗ ನಗ​ರ​ದಲ್ಲೂ ರಸ್ತೆ ಪಾಟ್‌ ಹೋಲ್‌ ಸಮಸ್ಯೆ ಇದೆ. ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಸೋಮವಾರದಿಂದ ಕೆಲಸ ಆರಂಭವಾಗುತ್ತದೆ. ಸರ್ಕಾರದ ಆಡಳಿತ ಕುಸಿತ ಕಂಡಿದೆ, ಕಾರಣ ಗೊತ್ತಾಗುತ್ತಿಲ್ಲ. ಬಿಜೆಪಿ ಸರ್ಕಾ​ರದ ವಿರುದ್ಧ ಅವರ ಪಕ್ಷದ ಕಾರ್ಯ​ಕ​ರ್ತರೇ ಬಂಡಾ​ಯ​ವೆ​ದ್ದಿ​ದ್ದಾ​ರೆ. ರಾಜಕೀಯವಾಗಿ ಬಡಿದಾಡಿಕೊಳ್ಳಿ, ಜನರ ಕಷ್ಟಕಾಲದಲ್ಲಿ ಸ್ಪಂದಿಸಿ ಎಂದ​ರು.

ಜನ್ಮ​ದಿ​ನ​ ಸಿದ್ದ​ರಾ​ಮ​ಯ್ಯ​ನ​ವರೇ ಸ್ಪಷ್ಟೀ​ಕ​ರಿ​ಸಿ​ದ್ದಾ​ರೆ: ಕಾಂಗ್ರೆಸ್‌ ಹಿರಿಯ ನಾಯಕರಾದ ಸಿದ್ದ​ರಾ​ಮ​ಯ್ಯ​ನ​ವರ 75ನೇ ಜನ್ಮ​ದಿ​ನದ ಅಮೃತ ಮಹೋ​ತ್ಸ​ವ​ವನ್ನು ದಾವ​ಣ​ಗೆರæ​ಯಲ್ಲಿ ಅವರ ಅಭಿ​ಮಾ​ನಿ​ಗಳು, ಪಕ್ಷದ ಕಾರ್ಯ​ಕ​ರ್ತರು ಅತೀ ವಿಜೃಂಭ​ಣೇ​ಯಿಂದ ಆಚ​ರಿ​ಸಿ​ದರು. ಅದು ನಾಡಿನ ಜನ​ತೆಗೆ ಗೊತ್ತು. ಅವರ ಜನ್ಮ​ದಿ​ನವನ್ನು ಸಿದ್ದರಾ​ಮ​ಯ್ಯ​ನ​ವರೇ ಸ್ಪಷ್ಟೀ​ಕ​ರಿ​ಸಿ​ದ್ದಾರೆ. ವೀಕೀ​ಪಿ​ಡಿ​ಯಾ​ದಲ್ಲಿ ಅದು ಎಷ್ಟುತೋರಿ​ಸುತ್ತೇ ಅನ್ನುದು ನಮಗೆ ಗೊತ್ತಿಲ್ಲ ಎಂದು ಶಾಸಕ ಎಚ್‌.​ಕೆ. ​ಪಾ​ಟೀಲ ಹೇಳಿ​ದರು.

Gadag: ಶ್ರಾವಣ ಶನಿವಾರವೇ ಹನುಮ ಮೂರ್ತಿಯನ್ನು ಕಳ್ಳತನ ಮಾಡಿದ ಕಿಡಿಗೇಡಿಗಳು

ಅವರು ನಗ​ರ​ದಲ್ಲಿ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿ​ದರು. ಕಾಂಗ್ರೆಸ್‌ ಒಗ್ಗ​ಟನ್ನು ಸಹಿ​ಸ​ಲಾ​ರದೆ, ಮುಂದಿನ ದಿನ​ಮಾ​ನ​ಗ​ಳಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬರುತ್ತೇ ಎನ್ನುವ ಭಯ​ದಲ್ಲಿ ಮೊಸ​ರಿ​ನಲ್ಲಿ ಕಲ್ಲು ಹುಡು​ಕುವ ಕೆಲ​ಸ​ವನ್ನು ಬಿಜೆ​ಪಿ​ಗರು ಮಾಡು​ತ್ತಿ​ದ್ದಾರೆ. ಜನ್ಮ​ದಿ​ನಾಂಕ​ವನ್ನು ಅಂದಿನ ದಿನ​ಮಾ​ನ​ಗ​ಳಲ್ಲಿ ನಮ್ಮ ತಂದೆ ತಾಯಿ​ಗಳು ಬರೆ​ದಿ​ಟ್ಟಿಲ್ಲ. ಶಾಲಾ ದಾಖಾ​ಲಾತಿ ಮಾಡುವ ಸಂದ​ರ್ಭ​ದಲ್ಲಿ ಶಿಕ್ಷ​ಕರು ಬರೆ​ದಿ​ಟ್ಟಿದ್ದು, ವೀಕೀಪಿ​ಡಿಯಾ ಅದು ಸಿದ್ದ​ರಾ​ಮಯ್ಯ ಅವರ ಅಧಿ​ಕೃತ ವೆಬ್‌​ಸೈಟ್‌ ಅಲ್ಲ ಅವರ ಕುಟುಂಬ​ಸ್ಥರು, ಅವರ ಅಭಿ​ಮಾ​ನಿ​ಗಳು 75ನೇ ಜನ​ಮ​ದಿ​ನ​ವನ್ನು ಆಚ​ರಿ​ಸಿ​ದ್ದಾರೆ. ಅದ​ರಿಂದ ನಿಮ್ಮ​ದೇನು ತಕರಾ​ರು ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

Follow Us:
Download App:
  • android
  • ios