Asianet Suvarna News Asianet Suvarna News

ಕಾಂಗ್ರೆಸ್‌ಗೆ ಹೊಸ ಅವಕಾಶ ಕಲ್ಪಿಸಿದ HDK: ಜೋಡೆತ್ತುಗಳ ನಡುವೆ ಭಾರೀ ಬಿರುಕು

ದಳಪತಿ ಎಚ್ ಡಿ ಕುಮಾರಸ್ವಾಮಿ ಇದೀಗ ಕಾಂಗ್ರೆಸ್‌ಗೆ ಹೊಸ ಅಸ್ತ್ರ ಒಂದನ್ನು ಒದಗಿಸಿಕೊಟ್ಟಿದ್ದಾರೆ. 

No Friendship Between HD Kumaraswamy DK Shivakumar snr
Author
Bengaluru, First Published Oct 16, 2020, 3:04 PM IST

ಎಂ.ಅ​ಫ್ರೋಜ್ ಖಾನ್‌
 
ರಾಮ​ನ​ಗರ (ಅ.16):
 ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಪರೋ​ಕ್ಷ​ವಾಗಿ ಟೀಕಿ​ಸುವ ಭರ​ದಲ್ಲಿ ಜೆಡಿ​ಎಸ್‌ ವರಿಷ್ಠ ಕುಮಾ​ರ​ಸ್ವಾಮಿ ನೀಡಿ​ರುವ ‘ಸ್ಲೋ ಪಾಯಿ​ಸನ್‌‘ ಹೇಳಿಕೆಯಿಂದ ನಿಟ್ಟು​ಸಿರು ಬಿಟ್ಟಿ​ರುವ ಕಾಂಗ್ರೆಸ್ಸಿಗ​ರಿಗೆ ದಳ​ಪ​ತಿ​ಗಳ ವಿರುದ್ಧ ಪ್ರತೀ​ಕಾರ ತೀರಿ​ಸಿ​ಕೊಳ್ಳಲು ಹೊಸ ಅಸ್ತ್ರ ಸಿಕ್ಕಿ​ದಂತಾ​ಗಿ​ದೆ.

ಜಿಲ್ಲೆ​ಯಲ್ಲಿ ಜೆಡಿ​ಎಸ್‌ ಮತ್ತು ಕಾಂಗ್ರೆಸ್‌ ಸಾಂಪ್ರ​ದಾ​ಯಿಕ ಎದು​ರಾಳಿ ಪಕ್ಷ​ಗಳು. ಆದರೆ, ಡಿ.ಕೆ . ​ಶಿ​ವ​ಕು​ಮಾರ್‌ ಅವರು ಕುಮಾ​ರ​ಸ್ವಾಮಿ ಅವ​ರೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿ​ದ್ದರಿಂದ ಬೆರ​ಳ​ಣಿಕೆಯಷ್ಟುನಾಯ​ಕ​ರನ್ನು ಹೊರತುಪಡಿ​ಸಿ​ ಉಭ​ಯ ಪಕ್ಷದ ನಾಯ​ಕರು ಪರ​ಸ್ಪರ ಟೀಕೆ ಮಾಡುವ ಧೈರ್ಯ ತೋರು​ತ್ತಿ​ರ​ಲಿಲ್ಲ.

ಆದ​ರೀಗ ಕುಮಾ​ರ​ಸ್ವಾಮಿ ಅವರೇ ಡಿ.ಕೆ. ​ಶಿ​ವ​ಕು​ಮಾರ್‌ ವಿರುದ್ಧ ‘ಸ್ಲೋ ಪಾಯಿ​ಸನ್‌‘ ಪದ ಬಳ​ಸುವ ಮೂಲಕ ಜೆಡಿ​ಎಸ್‌ ಮೇಲೆ ಮುಗಿ​ಬೀ​ಳಲು ಕಾತು​ರ​ರಾ​ಗಿದ್ದ ಕಾಂಗ್ರೆ​ಸ್ಸಿ​ಗ​ರಿಗೆ ಹೊಸ​ದೊಂದು ಅಸ್ತ್ರ ನೀಡಿ ಅವ​ಕಾಶ ಕಲ್ಪಿ​ಸಿ​ಕೊ​ಟ್ಟಂತಾ​ಗಿ​ದೆ. ಜೆಡಿ​ಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ನಂತರ ಕುಮಾ​ರ​ಸ್ವಾಮಿ ಹಾಗೂ ಡಿ.ಕೆ.​ಶಿ​ವ​ಕು​ಮಾರ್‌ ರಾಜ​ಕೀಯ ವೈಷಮ್ಯ ಮರೆತು ಒಂದಾ​ಗಿದ್ದರು. ಅಲ್ಲದೆ, ​ದೋಸ್ತಿ ಸರ್ಕಾ​ರ​ದಲ್ಲಿ ‘ಅಭಿ​ವೃ​ದ್ಧಿಯ ಜೋಡೆ​ತ್ತು​ಗ​ಳು‘ ಎಂದೇ ಕರೆ​ಯ​ಲ್ಪ​ಟ್ಟ​ರು.

ಕಗ್ಗಂಟಾದ ಶರತ್‌ ಬಚ್ಚೇಗೌಡ ರಾಜಕೀಯ : ಬಿತ್ತು ದೊಡ್ಡ ಬ್ರೇಕ್ ...

ಮೈತ್ರಿ ಸರ್ಕಾರ ಪತ​ನವಾದ ನಂತ​ರವೂ ಇಬ್ಬರು ನಾಯ​ಕರು ಒಬ್ಬ​ರ​ನ್ನೊ​ಬ್ಬರು ಟೀಕೆ ಮಾಡುವ ಗೋಜಿಗೆ ಹೋಗದೆ ಸ್ನೇಹ ಬಾಂಧ​ವ್ಯ​ವನ್ನು ಮತ್ತಷ್ಟುಬಿಗಿ ಮಾಡಿ​ಕೊ​ಂಡಿ​ದ್ದರು. ರಾಜ್ಯ​ಮ​ಟ್ಟ​ದಲ್ಲಿ ದೋಸ್ತಿ ಮುರಿದು ಬಿದ್ದರೂ ಜಿಲ್ಲೆ​ಯಲ್ಲಿ ಮಾತ್ರ ಗೆಳೆ​ತ​ನ ಮುಂದು​ವ​ರೆ​ದಿತ್ತು. ಇದರ ಪರಿ​ಣಾಮ ಕನ​ಕ​ಪುರ ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ - ಜೆಡಿ​ಎಸ್‌ ಮೈತ್ರಿ ಧರ್ಮ ಪಾಲನೆ ಮಾಡಿದ​ವು. ಆದರೆ, ಮಾಗಡಿ ಪುರ​ಸ​ಭೆ​ಯಲ್ಲಿ ಅದು ಸಾಧ್ಯ​ವಾ​ಗ​ಲಿಲ್ಲ. ಕನ​ಕ​ಪು​ರ​ದ 31 ವಾರ್ಡು​ಗಳ ಪೈಕಿ 26ರಲ್ಲಿ ಕಾಂಗ್ರೆಸ್‌ ಸ್ಪರ್ಧಿ​ಸಿ​ದ​ರೆ, ಕೇವಲ 5 ವಾರ್ಡು​ಗ​ಳನ್ನು ಮಾತ್ರ ಜೆಡಿ​ಎಸ್‌ ಗೆ ಬಿಟ್ಟು​ಕೊ​ಡ​ಲಾ​ಗಿತ್ತು. ಇಲ್ಲಿ ಜೆಡಿ​ಎಸ್‌ ನ ಆಕಾಂಕ್ಷಿ​ತರು ಸ್ಪರ್ಧೆ​ಯಿಂದ ವಂಚಿ​ತ​ರಾ​ಗಿದ್ದ​ರು.

ಕಾಂಕ್ಷಿ​ತರಲ್ಲಿ ಖುಷಿಯೋ ಖುಷಿ:

ಈಗ ಜಿಲ್ಲೆ​ಯಲ್ಲಿ ಗ್ರಾಪಂ, ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ನಗ​ರ​ಸಭೆ, ತಾಪಂ, ಜಿಪಂ ಸೇರಿ​ದಂತೆ ಸಾಲು ಸಾಲು ಚುನಾ​ವ​ಣೆ​ಗಳು ನಡೆ​ಯ​ಲಿವೆ. ರಾಜ್ಯ​ದಲ್ಲಿ ಬಿಜೆ​ಪಿ ಸರ್ಕಾರ ಅಧಿ​ಕಾ​ರ​ದ​ಲ್ಲಿ​ರುವ ಕಾರಣ ಇಲ್ಲಿಯೂ ಎಲ್ಲಿ ಕಾಂಗ್ರೆಸ್‌ - ಜೆಡಿ​ಎಸ್‌ ನಡುವೆ ಸ್ಥಾನ ಹೊಂದಾ​ಣಿಕೆ ಆಗು​ತ್ತ​ದೆಯೋ ಎಂಬ ಚಿಂತೆ ಉಭಯ ಪಕ್ಷ​ಗಳ ಆಕಾಂಕ್ಷಿ​ತ​ರನ್ನು ಕಾಡು​ತ್ತಿತ್ತು. ಅಲ್ಲದೆ, ಡಿ.ಕೆ.​ಶಿ​ವ​ಕು​ಮಾರ್‌ ಕೆಪಿ​ಸಿಸಿ ಅಧ್ಯ​ಕ್ಷ​ರಾ​ಗಿ​ರು​ವು​ದ​ರಿಂದ ಕಾಂಗ್ರೆಸ್‌ ಜತೆ​ಗಿನ ಮೈತ್ರಿ ಮುಂದು​ವ​ರೆ​ಸಿ​ದರೆ ಜೆಡಿ​ಎಸ್‌ಗೆ ದುಬಾ​ರಿ​ಯಾ​ಗುವ ಸಾಧ್ಯತೆಯೂ ಇದೆ. ಡಿಕೆಶಿ ಕೂಡ ಒಕ್ಕ​ಲಿಗ ಮತ ಬ್ಯಾಂಕ್‌ಗೆ ಕೈ ಹಾಕು​ವು​ದ​ರಿಂದ ಜೆಡಿ​ಎಸ್‌ ಗೆ ನೆಲೆ ಕಳೆ​ದು​ಕೊ​ಳ್ಳುವ ಭೀತಿ​ಯಿದೆ.

ಈಗಾ​ಗಲೇ ರಾಮ​ನ​ಗರ ತಾಪಂ, ಟಿಎ​ಪಿ​ಸಿ​ಎಂಎಸ್‌ ಚುನಾ​ವ​ಣೆ​ಯ​ಲ್ಲಿಯೂ ಡಿಕೆ ಸಹೋ​ದ​ರರ ತಂತ್ರದ ಫಲ​ವಾಗಿ ಕಾಂಗ್ರೆಸ್‌ ಅಧಿ​ಕಾರ ಹಿಡಿ​ದಿದೆ. ಜತೆ​ಗೆ ದಳ​ದ ನಿಷ್ಠಾ​ವಂತ ಒಬ್ಬೊಬ್ಬ ನಾಯ​ಕ​ರನ್ನೇ ಕೈ ತೆಕ್ಕೆಗೆ ಸೆಳೆ​ದು​ಕೊ​ಳ್ಳು​ತ್ತಿ​ದ್ದಾ​ರೆ. ಹೀಗಾಗಿ ಕಾಂಗ್ರೆಸ್‌ ವಿರುದ್ಧ ಯುದ್ಧ ಸಾರು​ವುದು ಅನಿ​ವಾರ್ಯವಾಗಿ​ರುವ ಕಾರಣ ಕುಮಾ​ರ​ಸ್ವಾಮಿ ಬಹಿ​ರಂಗ​ವಾ​ಗಿಯೇ ಡಿಕೆಶಿ ವಿರುದ್ಧ ಸಿಡಿ​ದೆ​ದ್ದಿ​ದ್ದಾರೆ.

ದೇವೇ​ಗೌಡ ಮತ್ತು ಕುಮಾ​ರ​ಸ್ವಾಮಿ ಕುಟುಂಬ​ದ​ವರು ಉಪ​ಕಾರ ಮಾಡಿ​ದ​ವ​ರನ್ನೇ ಟೀಕಿ​ಸುವ ಹಾಗೂ ದ್ರೋಹ ಬಗೆ​ಯುವುದು ಹೊಸ​ದೇ​ನಲ್ಲ. ಡಿಕೆ​ಶಿ ವಿಚಾ​ರ​ದ​ಲ್ಲಿಯೂ ಅದೇ ಆಗಿದೆ. ಮೈತ್ರಿ ಸರ್ಕಾರ ಉಳಿ​ಸಿ​ಕೊ​ಳ್ಳಲು ಡಿಕೆಶಿ ಮುಂಬೈಗೆ ಹೋಗಿ ಬೂಟಾ​ಟಿಕೆ ಮಾಡ​ಲಿಲ್ಲ. ಅಲ್ಲಿ ನಡು​ರ​ಸ್ತೆ​ಯಲ್ಲಿ ಪ್ರತಿ​ಭ​ಟನೆ ನಡೆಸಿ, ಕೇಸು ಹಾಕಿ​ಸಿ​ಕೊ​ಂಡರು. ಈಗ ಅವ​ರನ್ನೇ ಟೀಕಿ​ಸು​ತ್ತಿ​ರುವ ಕುಮಾ​ರ​ಸ್ವಾಮಿರವರ ​ಇ​ನ್ನೊಂದು ಮುಖ ಜನ​ರಿಗೆ ಗೊತ್ತಾ​ಗು​ತ್ತಿ​ದೆ.

- ಸಿ.ಎಂ.ಲಿಂಗಪ್ಪ, ಎಂಎಲ್‌ಸಿ
 
ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಜೆಡಿಎಸ್‌ - ಕಾಂಗ್ರೆಸ್‌ ದೋಸ್ತಿ ಸರ್ಕಾರ ಉಳಿ​ಸಲು ನಡೆ​ಸಿದ ಹೋರಾಟ, ರಾಮ​ನಗರ ಕ್ಷೇತ್ರ​ದಲ್ಲಿ ಅನಿತಾ ಅವರನ್ನು ಗೆಲ್ಲಿ​ಸಿದ್ದು ಮಾಜಿ ಸಿಎಂ ಕುಮಾ​ರ​ಸ್ವಾಮಿ ಅವ​ರಿಗೆ ಸ್ಲೋ ಪಾಯಿ​ಸನ್‌ ಘಟ​ನೆ​ಗ​ಳಂತೆ ಕಂಡಿ​ರ​ಬೇಕು. ನಮ್ಮ ನಾಯ​ಕ ಡಿಕೆ​ಶಿ ನುಡಿ​ದಂತೆ ನಡೆಯುವ, ನಡೆ​ದಂತೆ ನುಡಿ​ಯು​ವ​ವರ ಸಾಲಿಗೆ ಸೇರಿ​ದ​ವರು.

-ಇಕ್ಬಾಲ್‌ ಹುಸೇನ್‌ , ಮಾಜಿ ಅಧ್ಯ​ಕ್ಷರು, ಜಿಪಂ, ​ರಾ​ಮ​ನ​ಗರ.

Follow Us:
Download App:
  • android
  • ios