Asianet Suvarna News Asianet Suvarna News

ಹಳಿಗೆ ಕುಸಿದ ಬೃಹತ್‌ ಗುಡ್ಡ: 2ನೇ ದಿನವೂ ರೈಲು ಸಂಚಾರ ಸ್ಥಗಿತ

ಸುಬ್ರಹ್ಮಣ್ಯ ರೋಡ್‌ ನೆಟ್ಟಣ ರೈಲು ನಿಲ್ದಾಣ -ಸಕಲೇಶಪುರ ನಡುನ ಸಿರಿಬಾಗಿಲು ಪರಿಸರದಲ್ಲಿ ಮತ್ತೆ ಎರಡು ಕಡೆಗಳಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿದೆ. ಇದರಿಂದಾಗಿ ಮಂಗಳೂರು- ಬೆಂಗಳೂರು ರೈಲು ಸೇವೆ ಮತ್ತೆ ರದ್ದಾಗಿದೆ. ಸುಮಾರು 50ಕ್ಕೂ ಅಧಿಕ ಕಾರ್ಮಿಕರು ಐದಕ್ಕೂ ಅಧಿಕ ಹಿಟಾಚಿ ಯಂತ್ರದ ಸಹಾಯದಿಂದ ಭಾರಿ ಮಳೆಯಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Mangalore Bangalore train canceled as landslide in Railway Track
Author
Bangalore, First Published Aug 8, 2019, 12:18 PM IST

ಮಂಗಳೂರು(ಆ.08): ಸುಬ್ರಹ್ಮಣ್ಯ ಸಕಲೇಶಪುರ ಮತ್ತು ಹಾಸನ ಭಾಗದಲ್ಲಿ ನಿರಂತರವಾಗಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಮಂಗಳೂರು-ಬೆಂಗಳೂರು ರೈಲು ಹಳಿಯ ಮೇಲೆ ಬುಧವಾರ ಗುಡ್ಡ ಕುಸಿದು ಬಿದ್ದಿದೆ.

ಸುಬ್ರಹ್ಮಣ್ಯ ರೋಡ್‌ ನೆಟ್ಟಣ ರೈಲು ನಿಲ್ದಾಣ -ಸಕಲೇಶಪುರ ನಡುನ ಸಿರಿಬಾಗಿಲು ಪರಿಸರದಲ್ಲಿ ಮತ್ತೆ ಎರಡು ಕಡೆಗಳಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿದೆ. ಇದರಿಂದಾಗಿ ಮಂಗಳೂರು- ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ.

ನೆಟ್ಟಣ ರೈಲು ನಿಲ್ದಾಣದಿಂದ ಸಕಲೇಶಪುರ ರೈಲು ನಿಲ್ದಾಣದ ನಡುವಣ ಸಿರಿಬಾಗಿಲು ರೈಲು ನಿಲ್ದಾಣದ ಸಮೀಪದ ದೂರ 90/900 ಮತ್ತು 90/00ಯಲ್ಲಿನ ಹಳಿಯ ಮೇಲೆ ಬೃಹತ್‌ ಗುಡ್ಡ ಕುಸಿದು ಬಿದ್ದಿದೆ. ಇದರಿಂದ ಬುಧವಾರ ಈ ಮಾರ್ಗದಲ್ಲಿ ಹಗಲು ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಎರಡನೇ ದಿನ ಹಗಲು ರೈಲು ಸಂಚಾರ ಸ್ಥಗಿತ:

ಮಂಗಳವಾರ ಸಂಖ್ಯೆ 86/100 ಮತ್ತು 83ರ ಆಸುಪಾಸಿನಲ್ಲಿ ಸುಮಾರು ಮೂರು ಕಡೆ ಹಳಿಯ ಮೇಲೆ ಗುಡ್ಡ ಕುಸಿದಿತ್ತು. ಇದನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗಿತ್ತು. ಆದರೆ ಈ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಮತ್ತೆ ಸಿರಿಬಾಗಿಲು ಸಮೀಪ ಎರಡು ಕಡೆ ಭಾರಿ ಪ್ರಮಾಣದ ಮಣ್ಣು ಹಳಿಯ ಮೇಲೆ ಕುಸಿತಗೊಂಡಿದೆ. ಹೀಗಾಗಿ ಸತತ ಎರಡನೇ ದಿನ ರೈಲು ಸಂಚಾರ ಸ್ಥಗಿತಗೊಂಡಿತು.

ಹಳಿಯ ಮೇಲೆ ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿತ:

ಈ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಮತ್ತಷ್ಟುಕಡೆ ಮಣ್ಣು ಕುಸಿಯುವ ಆತಂಕವಿದೆ. ಸುಬ್ರಹ್ಮಣ್ಯ ರೋಡ್‌ ನೆಟ್ಟಣ ರೈಲು ನಿಲ್ದಾಣದಿಂದ ಮುಂದೆ ಬರುವ ಸಿರಿಬಾಗಿಲಿನ ಸಮೀಪದ ದೂರ ಸಂಖ್ಯೆ 90/900 ಮತ್ತು 90/00 ಯ ಎರಡು ಕಡೆ ಬೃಹತ್‌ ಪ್ರಮಾಣದ ಮಣ್ಣು ಬುಧವಾರ ಕುಸಿತಗೊಂಡಿದೆ. ಇದರಿಂದ ಭಾರಿ ಪ್ರಮಾಣದ ಮಣ್ಣು ಹಳಿಯ ಮೇಲೆ ಬಂದು ಬಿದ್ದಿದೆ.

ಹಾಗಾಗಿ ಹಗಲು ಬೆಂಗಳೂರು-ಮಂಗಳೂರು ರೈಲು, ಮಂಗಳೂರು- ಬೆಂಗಳೂರು ರೈಲುಗಳು ಹಾಗೂ ಎಲ್ಲ ಗೂಡ್ಸ್‌ ರೈಲುಗಳ ಪ್ರಯಾಣವನ್ನು ಈ ಹಾದಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಮಂಗಳೂರು-ಸುಬ್ರಹ್ಮಣ್ಯ ರೋಡ್‌ ನೆಟ್ಟಣದ ತನಕ ಸಂಚರಿಸುವ ಸ್ಥಳೀಯ ರೈಲು ಮಾತ್ರ ಪ್ರಯಾಣಿಸಿತ್ತು.

ಮಳೆಯಲ್ಲಿ ಕಾರ್ಯಾಚರಣೆ:

ಈ ಘಟನೆ ತಿಳಿದ ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ ಇಲಾಖೆ ತಕ್ಷಣ ತೆರವು ಕಾರ್ಯ ಆರಂಭಿಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದೆ. ಸುಮಾರು 50ಕ್ಕೂ ಅಧಿಕ ಕಾರ್ಮಿಕರು ಐದಕ್ಕೂ ಅಧಿಕ ಹಿಟಾಚಿ ಯಂತ್ರದ ಸಹಾಯದಿಂದ ಭಾರಿ ಮಳೆಯಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅವೈಜ್ಞಾನಿಕ ಕಾಮಗಾರಿ: ಕೃಷಿ ಭೂಮಿ ಜಲಾವೃತ

ಅಧಿಕ ಮಳೆ ಮತ್ತು ಆಗಾಗ ಮಣ್ಣುಗಳು ಹಳಿಯ ಮೇಲೆ ಬೀಳುತ್ತಿರುವುದು ಕಾರ್ಮಿಕರ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ತೀವ್ರ ಕಾರ್ಯಾಚರಣೆ ನಡೆಯುತ್ತಿದ್ದರೂ ಹಳಿಯ ಮೇಲೆ ಭಾರಿ ಪ್ರಮಾಣ ಮಣ್ಣು ಕುಸಿತಗೊಂಡ ನೆಲೆಯಲ್ಲಿ ಮತ್ತು ಈ ಪ್ರದೇಶದಲ್ಲಿ ಅತ್ಯಧಿಕ ಗಾಳಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಇದರಿಂದ ತೆರವು ಕಾರಾರ‍ಯಚರಣೆ ಸಂಪೂರ್ಣವಾಗದಿದ್ದರೆ ರಾತ್ರಿ ಸಂಚರಿಸುವ ಮಂಗಳೂರು- ಬೆಂಗಳೂರು ರೈಲು ಪಥ ಬದಲಾಯಿಸಿ ಚಲಿಸಲಿದೆ. ಅಲ್ಲದೆ ರಾತ್ರಿ ಬೆಂಗಳೂರಿನಿಂದ ಹೊರಡಲಿರುವ ಬೆಂಗಳೂರು-ಮಂಗಳೂರು ರೈಲು ಕೂಡಾ ಪಥ ಬದಲಿಸುವ ಸಾಧ್ಯತೆ ದಟ್ಟವಾಗಿದೆ.

ಶಿವಮೊಗ್ಗ: ಮಳೆಯಬ್ಬರಕ್ಕೆ 20ಕ್ಕೂ ಹೆಚ್ಚು ಕಟ್ಟಡಳಿಗೆ ಹಾನಿ

Follow Us:
Download App:
  • android
  • ios