ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ
ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಅಬ್ಬರ ಜೋರಾಗಿದೆ. ಇದೇ ವೇಳೆ ಪಕ್ಷಾಂತರ ಪರ್ವ ಜೋರಾಗಿದೆ.
ರಾವಂದೂರು (ಡಿ.15): ತಾಲೂಕಿನ ಜೆಡಿಎಸ್ ಜನ ಪ್ರತಿನಿಧಿಗಳ ವರ್ತನೆಯಿಂದ ಬೇಸತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮ ಪಂ ಸದಸ್ಯ ಕುಮಾರ್ ಸೇರಿದಂತೆ ಹಲವರು ಕೈ ಸೇರಿದರು.
ಈ ವೇಖೆ ಮಾತನಾಡಿದ ಮಾಜಿ ಶಾಸಕ ಕೆ. ವೆಂಕಟೇಶ್ ಜೆಡಿಎಸ್ ಅಧಿಕಾರದಲ್ಲಿದ್ದರು ಅವರ ವರ್ತನೆ ಮತ್ತು ತೊಂದರೆಗಳಿಂದ ಬೇಸತ್ತು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿರುವುದು ಕಾಂಗ್ರೆಸ್ ಯಾವುದೇ ಕಾರ್ಯಕರ್ತರಿಗೂ ತೊಂದರೆ ಕೊಡದ ನಿಸ್ಪಕ್ಷಪಾತ ಪಕ್ಷ ಎಂದರು.
ಸದನದೊಳಗೆ ಪರಿಸ್ಥಿತಿಗೆ ತಕ್ಕಂತೆ ವರ್ತಿಸಲು ಜೆಡಿಎಸ್ ತಂತ್ರ; ದೇವೇಗೌಡರಿಂದ ಪಕ್ಕಾ ಪ್ಲ್ಯಾನ್ ..
ಸ್ಥಳೈ ಚುನಾವಣೆಯಲ್ಲಿ ಹೆಚ್ಚು ಗ್ರಾ ಪಂಗಳನ್ನು ಅಧಿಕಾರಕ್ಕೆ ತರುವಲ್ಲಿ ಯುವಕರು ಹಾಗೂ ಪಕ್ಷದ ಕಾರ್ಯಕರ್ತರು ಶ್ರಮಿಸುವಂತೆ ತಿಳಿಸಿದರು.